ಒಡಿಶಾ (ಏ.28): ಒಡಿಶಾ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ನಡೆದಿರುವ ಒಂದು ಅಚ್ಚರಿಯ ಘಟನೆ ಇಡೀ ದೇಶದ ಗಮನ ಸೆಳೆದಿದೆ. ಸಹೋದರನೊಬ್ಬ ತನ್ನ ಸಹೋದರಿಯ ಬ್ಯಾಂಕ್ ಖಾತೆಯಲ್ಲಿದ್ದ ಕೇವಲ 19,300 ರೂಪಾಯಿಗಳನ್ನು ಪಡೆಯಲು ಅವಳ ಮೃತದೇಹವನ್ನೇ ಸಮಾಧಿಯಿಂದ ತೆಗೆದು ಬ್ಯಾಂಕ್ಗೆ ಹೊತ್ತುತಂದ ಘಟನೆ ದೇಶವನ್ನೇ ದಿಗ್ಭ್ರಮೆಗೊಳಿಸಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ..
ಈ ಘಟನೆಗೆ ಕಾರಣವಾದ ವ್ಯಕ್ತಿ ಜಿತು ಮುಂಡ ಎಂಬುವವರ ಸಹೋದರಿ ಕಲ್ರ ಮುಂಡ ಎರಡು ತಿಂಗಳ ಹಿಂದೆ ಮೃತಪಟ್ಟಿದ್ದರು. ಬದುಕಿರುವಾಗಲೇ ಆಕೆ ತನ್ನ ಬ್ಯಾಂಕ್ ಖಾತೆಯಲ್ಲಿ 19,300 ರೂ ಹಣವಿತ್ತು, ತನ್ನ ಸಾವಿನ ನಂತರ ಅದನ್ನು ಪಡೆದುಕೊಳ್ಳುವಂತೆ ಸಹೋದರನಿಗೆ ತಿಳಿಸಿದ್ದಳು. ಸಹೋದರಿಯ ಕೊನೆಯ ಇಚ್ಛೆಯನ್ನು ಈಡೇರಿಸಲು ಜಿತು ಬ್ಯಾಂಕ್ಗೆ ತೆರಳಿದ್ದಾನೆ.
ಆದರೆ, ಬ್ಯಾಂಕ್ ಸಿಬ್ಬಂದಿ ಅವನ ಮನವಿಯನ್ನು ತಕ್ಷಣ ಸ್ವೀಕರಿಸಲಿಲ್ಲ. ಖಾತೆಯ ಮಾಲೀಕಳು ಸ್ವತಃ ಬರಬೇಕು ಅಥವಾ ಅವಳು ಮೃತಪಟ್ಟಿದ್ದರೆ ಮರಣ ಪ್ರಮಾಣ ಪತ್ರವನ್ನು ತಂದು ಕೊಡಬೇಕು ಎಂದು ತಿಳಿಸಿದರು. ಇದು ಬ್ಯಾಂಕ್ನ ನಿಯಮವಾಗಿದ್ದು, ಜಿತು ಮುಂಡನಂತಹ ಬಡವನಿಗೆ ಮರಣ ಪ್ರಮಾಣ ಪತ್ರವನ್ನು ಪಡೆಯುವುದು ಸುಲಭದ ಕೆಲಸವಾಗಿರಲಿಲ್ಲ. ಆತನಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸುವ ಸಾಮರ್ಥ್ಯವೂ ಇರಲಿಲ್ಲ.
ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಜಿತು ತೆಗೆದುಕೊಂಡ ನಿರ್ಧಾರವೇ ಎಲ್ಲರನ್ನು ಬೆಚ್ಚಿಬೀಳಿಸಿದೆ. ತನ್ನ ಸಹೋದರಿಯ ಸಮಾಧಿಯಿಂದ, ಅವಳ ಮೃತದೇಹವನ್ನು ಹೊರತೆಗೆದು, ಪ್ಲಾಸ್ಟಿಕ್ ಚೀಲದಲ್ಲಿ ಹೊದಿಸಿ ಸುಮಾರು ಐದು ಕಿಲೋಮೀಟರ್ ದೂರದ ಬ್ಯಾಂಕ್ಗೆ ಹೊತ್ತು ತಂದಿದ್ದಾನೆ. ಈ ದೃಶ್ಯವನ್ನು ಕಂಡ ಜನರು ಆಘಾತಕ್ಕೊಳಗಾದರು. ಕೆಲವರು ಈ ಘಟನೆವನ್ನು ತಮ್ಮ ಮೊಬೈಲ್ನಲ್ಲಿ ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
A man in Odisha dug up his deceased sister’s grave and brought her skeleton to the bank Just to prove she had died.
He had been trying to withdraw ₹20,000 from her account, but bank officials kept insisting he bring the account holder in person. Despite repeatedly telling them… pic.twitter.com/hICEqwvPFu
— Woke Eminent (@WokePandemic) April 28, 2026
ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಬ್ಯಾಂಕ್ ವ್ಯವಸ್ಥೆಯ ಮಾನವೀಯತೆ ಕೊರತೆಯನ್ನು ಟೀಕಿಸಿದ್ದಾರೆ. ಕೆಲವರು ಜಿತು ಮುಂಡನ ಸ್ಥಿತಿಯನ್ನು ಅರ್ಥಮಾಡಿಕೊಂಡು ಅವನಿಗೆ ಸಹಾಯ ಮಾಡಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.
ವಿಡಿಯೊ ವೈರಲ್ ಆದ ನಂತರ ದೇಶದಾದ್ಯಂತ ಈ ಘಟನೆಯ ಬಗ್ಗೆ ಚರ್ಚೆಗಳು ಪ್ರಾರಂಭವಾಗಿವೆ. ಒಂದು ಕಡೆ, ಬ್ಯಾಂಕ್ ನಿಯಮಗಳು ಮತ್ತು ಕ್ರಮಗಳು ಪ್ರಶ್ನೆಗೆ ಒಳಗಾಗಿದ್ದರೆ, ಮತ್ತೊಂದೆಡೆ ಬಡತನದ ಕಹಿ ಸತ್ಯ ಜನರನ್ನು ಚಿಂತನೆಗೆ ದೂಡಿದೆ. ಕೇವಲ 19,300 ರೂಪಾಯಿಗಳಿಗಾಗಿ ಇಂತಹ ಕೃತ್ಯಕ್ಕೆ ಒಬ್ಬ ವ್ಯಕ್ತಿ ಮುಂದಾಗಬೇಕಾದರೆ, ಅವನ ಪರಿಸ್ಥಿತಿ ಎಷ್ಟರ ಮಟ್ಟಿಗೆ ಕಠಿಣವಾಗಿರಬಹುದು ಎಂಬುದು ಸ್ಪಷ್ಟವಾಗುತ್ತದೆ.





