ಡಿಬಾಸ್ ದರ್ಶನ್ಗೆ ಬ್ರಹ್ಮ ಒಂದು ಹಣೆಬರಹ ಬರೆದ್ರೆ, ಅವ್ರ ಸೆಲೆಬ್ರಿಟಿಗಳು ಅದನ್ನು ಬದಲಿಸಿ ಬರೆದಿದ್ದಾರೆ. ಈ ಮೂಲಕ ನಿಜವಾದ ಅಭಿಮಾನ ಎಂಥದ್ದು ಅನ್ನೋದಕ್ಕೆ ಸಾಕ್ಷಿ ಆಗಿದ್ದಾರೆ. ಡಿಬಾಸ್ ಡೈ ಹಾರ್ಡ್ ಫ್ಯಾನ್ಸ್ ಜೊತೆ ಫಸ್ಟ್ ಡೇ ಫಸ್ಟ್ ಶೋ ನೋಡಿದ ವಿಜಯಲಕ್ಷ್ಮೀ ದರ್ಶನ್ ಹೇಳಿದ್ದೇನು..? ಸೆಲೆಬ್ರೇಷನ್ ಯಾವ್ಯಾವ ಡಿಸ್ಟ್ರಿಕ್ಟ್ನಲ್ಲಿ ಹೇಗಿದೆ ಅನ್ನೋದರ ಫುಲ್ ಡಿಟೈಲ್ಸ್ ಇಲ್ಲಿದೆ.
- ಬ್ರಹ್ಮ ಬರೆಯದ ಹಣೆಬರಹ.. ಫ್ಯಾನ್ಸ್ ಬರೆದರಲ್ಲಾ ಬಾಸ್..?
- ಸೆಲೆಬ್ರಿಟಿಗಳ ಜೊತೆ ಡೆವಿಲ್ ಕಣ್ತುಂಬಿಕೊಂಡ ವಿಜಿ ದರ್ಶನ್
- ಬುಕ್ಮೈ ಶೋ ರಿವ್ಯೂ ಕೊಡುವಂತಿಲ್ಲ.. ಕೋರ್ಟ್ ಆರ್ಡರ್
- ಓ ಮೈ ಗಾಡ್.. ದರ್ಶನ್ ಬರೀ ಹೆಸರಲ್ಲ.. ಇಟ್ಸ್ ಎ ಬ್ರ್ಯಾಂಡ್
ಸದ್ಯ ʻದಿ ಡೆವಿಲ್ʼ ಸಿನಿಮಾ ಇಂದು ಬೆಂಗಳೂರಿನ ಹಲವು ಕಡೆ ಅದ್ದೂರಿ ಪ್ರದರ್ಶನ ಕಾಣ್ತಿದ್ದು ಮುಂಜಾನೆ 6:30ಕ್ಕೆ ಶುರುವಾಗಿದ್ದರೂ ಕೂಡ, ನಿನ್ನೆ ರಾತ್ರಿಯಿಂದಲೇ ಥಿಯೇಟರ್ಗಳ ಮುಂದೆ ದರ್ಶನ್ ಸೆಲೆಬ್ರಿಟೀಸ್ ʻದಿ ಡೆವಿಲ್ʼ ಹಬ್ಬ ಶುರು ಮಾಡಿದ್ದರು. ದರ್ಶನ್ ಅವರನ್ನ ತೆರೆ ಮೇಲೆ ನೋಡಿದ್ದೇ ತಡ, ಹಬ್ಬದ ರೀತಿ ಥಿಯೇಟರ್ಗಳಲ್ಲಿ ಫ್ಯಾನ್ಸ್ ತಮ್ಮ ಬಾಸ್ನ ಸೆಲೆಬ್ರೇಟ್ ಮಾಡ್ತಿದ್ದಾರೆ.
ಥೀಯೇಟರ್ ಎದುರು ದರ್ಶನ್ ಕಟೌಟ್ ಗಳಿಗೆ ಹೂವಿನ ಮಳೆಗರೆದು ಸಂಭ್ರಮಿಸಿದರೆ, ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಭಾರೀ ಸಂಖ್ಯೆಯ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿ ಚಿತ್ರ ವೀಕ್ಷಿಸಿದರು. ಮಹಿಳೆಯರೂ ಮಕ್ಕಳೂ ಚಿತ್ರ ಮಂದಿರಕ್ಕೆ ಆಗಮಿಸಿ ಚಿತ್ರ ವೀಕ್ಷಿಸಿ ಸಂಭ್ರಮಿಸಿದರು.
ಇನ್ನು ನರ್ತಕಿ ಥೀಯೇಟರ್ ಗೆ ಆಗಮಿಸಿದ ವಿಜಯಲಕ್ಷ್ಮಿ, ವಿನೀಶ್, ರಚನಾ ರೈ ಹಾಗು ಧನ್ವಿರ್ ಫ್ಯಾನ್ಸ್ ಗಳ ಮಧ್ಯೆ ಕೂತು ಟಿಕೆಟ್ ಖರೀದಿಸಿ ಸಿನಿಮಾ ವೀಕ್ಷಿಸಿದ್ದಾರೆ. ವಿಜಯಲಕ್ಷ್ಮಿ ಅಂತೂ ದರ್ಶನ್ ಎಂಟ್ರಿ ಗೆ ಸ್ಮೈಲ್ ಮಾಡುತ್ತ ಸಕತ್ ಎಂಜಾಯ್ ಮಾಡ್ತಿದ್ರು. ಇನ್ನು ಪುತ್ರ ವಿನೀಶ್ ಅಪ್ಪನ ಪ್ರತಿ ಡೈಲಾಗ್ ಎಂಜಾಯ್ ಮಾಡುತ್ತ ಸಂಭ್ರಮಿಸುತಿದ್ರು. ಬಿಗ್ ಸ್ಕ್ರೀನ್ ಮೇಲೆ ನಟಿ ರಚನಾ ರೈ ತಮ್ಮ ಅಭಿನಯ ಹಾಗು ಫ್ಯಾನ್ಸ್ ಕ್ರೌಡ್ ನೋಡಿ ಥ್ರಿಲ್ ಆಗಿದ್ರು. ಧನ್ವಿರ್ ಅಂತೂ ದರ್ಶನ್ ಪ್ರತಿ ಸೀನ್ ಗೂ exite ಆಗ್ತಿದ್ರು.
ಅಂದಹಾಗೆ ಫಸ್ಟ್ ಡೇ ಫಸ್ಟ್ ಶೋ ನೋಡಿದ ದಿನಕರ್ ತೂಗುದೀಪ ದರ್ಶನ್ ಅಭಿನಯಕ್ಕೆ ಫಿದಾ ಆಗಿದ್ದಾರೆ. ನರ್ತಕಿ ಚಿತ್ರಮಂದಿರದಲ್ಲಿ ಫ್ಯಾನ್ಸ್ ಜೊತೆ ಸಿನಿಮಾ ವೀಕ್ಷಿಸಿದ ದಿನಕರ್ ದರ್ಶನ್ ಡೆವಿಲ್ ಲುಕ್ ಗೆ ಮಾರುಹೋಗಿದ್ದಾರೆ. ಪೊಲಿಟಿಕಲ್ ಡ್ರಾಮಾ ಬೇಸ್ ಇರೋ ಡೆವಿಲ್ ಸಿನಿಮಾ ದರ್ಶನ್ ವೈಯಕ್ತಿಕ ಜೀವನಕ್ಕೆ ಬಹಳ ಹತ್ತಿರವಾಗಿದೆ, ದರ್ಶನ್ ವಿಲನ್ ರೋಲ್ ಸಕತ್ ಇಷ್ಟ ಆಗಿದೆ ಅವನ ಅಭಿನಯಕ್ಕೆ 10/10 ರೇಟಿಂಗ್ ಕೊಡ್ತೀನಿ ಎಂದಿದ್ದಾರೆ ದಿನಕರ್.
ಸಿನಿಮಾದಲ್ಲಿ ಸಿಎಂ ಕುರ್ಚಿಗೆ ಆಸೆ ಪಡುವ ದರ್ಶನ್ ಪಾತ್ರ ನಿಜಜೀವನಕ್ಕೆ ಎಷ್ಟು ಕನೆಕ್ಟ್ ಆಗುತ್ತೆ..? ರಾಜಕೀಯಕ್ಕೆ ದರ್ಶನ್ ಬರ್ತಾರಾ ಎನ್ನುವ ಪ್ರಶ್ನೆಗೆ ದಿನಕರ್ ಏನು ಹೇಳಿದ್ರು..? ಇನ್ನು ದರ್ಶನ್ ಮುಂದಿನ ಸಿನಿಮಾಗಳ ಕಥೆ ಏನು..?ಈಗಾಗಲೇ ಕಥೆ ಕೇಳಿ ನಿರ್ಮಾಪಕರಿಂದ ಅಡ್ವಾನ್ಸ್ ತಗೊಂಡಿದ್ ದರ್ಶನ್ ದಿನಕರ್ ಬಳಿ ಏನು ಹೇಳಿದ್ದಾರೆ..? ದರ್ಶನ್ ಮುಂದಿನ ಸಿನಿಮಾಗಳ ಬಗ್ಗೆ ದಿನಕರ್ ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ.
ಅಡ್ವಾನ್ಸ್ ಬುಕಿಂಗ್ನಿಂದಲೇ ಬರೋಬ್ಬರಿ 7 ಕೋಟಿ ಗಳಿಕೆ ಮಾಡಿರುವ ಡೆವಿಲ್ ಮೊದಲ ದಿನ 15 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುವ ನಿರೀಕ್ಷೆಯಿದ್ದು, ದರ್ಶನ್ ಸಿನಿ ಜರ್ನಿಯ ಅತಿದೊಡ್ಡ ಓಪನಿಂಗ್ ಇದಾಗಿದೆ. ಇನ್ನು ಡೆವಿಲ್ ಚಿತ್ರದ ಬಗ್ಗೆ ಮೊದಲ ಪ್ರದರ್ಶನ ಆರಂಭವಾಗುತ್ತಿದ್ದಂತೆಯೇ ವಿಮರ್ಶೆಗಳು ಆರಂಭವಾಗಿವೆ. ಚಿತ್ರ ಮುಗಿಯುತ್ತಿದ್ದಂತೆ ಚಿತ್ರಮಂದಿರದಿಂದಲೇ ಅಭಿಮಾನಿಗಳು ಚಿತ್ರ ಸೂಪರ್ ಎಂದು ಟ್ವೀಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ.
ಆದರೆ ಬುಕ್ಮೈಶೋ ಹಾಗೂ ಇತರೆ ಟಿಕೆಟ್ ಬುಕಿಂಗ್ ಅಪ್ಲಿಕೇಶನ್ಗಳಲ್ಲಿ ಮಾತ್ರ ಚಿತ್ರದ ವಿಮರ್ಶೆ ಮಾಡಲು ಯಾರಿಗೂ ಸಹ ಅವಕಾಶವನ್ನು ನೀಡಿಲ್ಲ. ಬುಕ್ಮೈಶೋನಲ್ಲಿ ಚಿತ್ರಕ್ಕೆ ಎಷ್ಟು ರೇಟಿಂಗ್ ಬಂದಿದೆ ಎಂಬುದನ್ನು ನೋಡಿ ಅದೆಷ್ಟೋ ಸಿನಿ ರಸಿಕರು ಚಿತ್ರವೊಂದನ್ನು ನೋಡುವುದಾ ಅಥವಾ ಬಿಡುವುದಾ ಎಂಬುದನ್ನು ನಿರ್ಧರಿಸುವುದುಂಟು. ಹೀಗೆ ಬುಕಿಂಗ್ ಅಪ್ಲಿಕೇಶನ್ಗಳ ವಿಮರ್ಶೆಗಳು ಚಿತ್ರವೊಂದಕ್ಕೆ ಮುಖ್ಯದ್ದಾಗಿದೆ. ಆದರೆ ಡೆವಿಲ್ ಚಿತ್ರದ ವಿಷಯದಲ್ಲಿ ಹಾಗಿಲ್ಲ. ಚಿತ್ರ ಹೇಗಿದೆ ಎಂದು ಬುಕ್ಮೈಶೋನಲ್ಲಿ ರೇಟಿಂಗ್ ಹುಡುಕಿದರೆ ಅಲ್ಲಿ ರೇಟಿಂಗ್ ಬದಲಿಗೆ ‘ನ್ಯಾಯಾಲಯದ ಆದೇಶದ ಪ್ರಕಾರ ರಿವ್ಯೂ ಹಾಗೂ ರೇಟಿಂಗ್ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ’ ಎಂದು ಬರೆದಿದ್ದಾರೆ. ಸದ್ಯ ಈ ಗೊಂದಲಗಳಿಗೆ ದಿನಕರ್ ಸ್ಪಷ್ಟನೆ ನೀಡಿದ್ದಾರೆ.
ಮನ್ಸೂನ್ ರಾಗ.. Yours sincerely ರಾಮ್, ಮುಫ್ತಿ, ಮದಗಜ, ಇನ್ಸ್ಪೆಕ್ಟರ್ ವಿಕ್ರಂ ಸೇರಿದಂತೆ ಡೆವಿಲ್ ಸಿನಿಮಾದ ಎಡಿಟಿಂಗ್ ಅನ್ನು ಹರೀಶ್ ಮಾಡಿದ್ದಾರೆ. ಸಿನಿಮಾದ ಎಡಿಟಿಂಗ್ ಎಷ್ಟು ಚಾಲೆಂಜಿಂಗ್ ಆಗಿತ್ತು ದರ್ಶನ್ ಏನು ಹೇಳಿದ್ರು ಅನ್ನೋದನ್ನ ಹರೀಶ್ ಕೊಮ್ಮೆ ಹಂಚಿಕೊಂಡಿದ್ದಾರೆ.
ಸದ್ಯ ಡೆವಿಲ್ ಸಿನಿಮಾಗೆ ಫ್ಯಾನ್ಸ್ ಮಾತ್ರವಲ್ಲದೆ ನಟಿ ರಚಿತಾ ರಾಮ್, ಶಿವರಾಜ್ ಕುಮಾರ್ ಹಾಗು ರಿಷಬ್ ಶೆಟ್ಟಿ ಕೂಡ ಶುಭರೈಸಿದ್ದಾರೆ.
ಅಂದಹಾಗೆ ಡೆವಿಲ್ ಆರ್ಭಟ ಶುರುವಾಗಿದ್ದು.. ವೀಕೆಂಡ್ ನಲ್ಲಿ ಯಾವ ರೀತಿ ಅಬ್ಬರಿಸಿ ಬೊಬ್ಬೆರೆಯುತ್ತೆ ಕಾದು ನೋಡೋಣ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್.
| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್





