ಹಿಸ್ಟರಿ ವಾಸ್ ವ್ರಾಂಗ್.. ಪ್ರಕಾಶ್ ರೈ ಹೇಳುವ ಕೆಜಿಎಫ್ನ ಈ ಡೈಲಾಗ್ ಅಕ್ಷರಶಃ ಸತ್ಯ. ಯಾಕಂದ್ರೆ ರಾಕಿಭಾಯ್ ಕ್ಲೈಮ್ಯಾಕ್ಸ್ನಲ್ಲಿ ಸತ್ತಿಲ್ಲ. ಮತ್ತೊಂದು ಮಹಾ ವಿಪ್ಲವಕ್ಕೆ ನಾಂದಿ ಹಾಡಲು ಸಜ್ಜಾಗಿದ್ದಾರೆ. ಅದೇ ಕಾರಣದಿಂದ ಇದೀಗ ಟಾಕ್ಸಿಕ್ ಹಾಗೂ ರಾಮಾಯಣ ಚಿತ್ರಗಳ ಜೊತೆ ಕೆಜಿಎಫ್ ಚಾಪ್ಟರ್-3 ಕೂಡ ಮುನ್ನೆಲೆಗೆ ಬಂದಿದೆ. ಈ ಕುರಿತ ಎಕ್ಸ್ಕ್ಲೂಸಿವ್ ಖಬರ್ ಇಲ್ಲಿದೆ ನೋಡಿ.
- KGF ಚಾಪ್ಟರ್-3 ಮುನ್ನೆಲೆಗೆ.. ಯಶ್ Exclusive ಟಾಕ್
- ಪ್ರಶಾಂತ್ ನೀಲ್ ಜೊತೆ ಟಚ್ನಲ್ಲಿದ್ದಾರಂತೆ ರಾಕಿಭಾಯ್
- ಹಿಸ್ಟರಿ ವಾಸ್ ವ್ರಾಂಗ್.. ರೈ ಮಾತು ಸತ್ಯ.. ರಾಕಿ ಅಲೈವ್..!
- ಟಾಕ್ಸಿಕ್, ರಾಮಾಯಣ ನಡುವೆ ಕೆಜಿಎಫ್-3 ಸೆನ್ಸೇಷನ್..!
ಟಾಕ್ಸಿಕ್ ಮತ್ತು ರಾಮಾಯಣ.. ಸದ್ಯ ನಮ್ಮ ರಾಕಿಂಗ್ ಸ್ಟಾರ್ ಯಶ್ ಮುಂದಿರೋ ಎರಡು ಬಿಗ್ಗೆಸ್ಟ್ ಟಾಸ್ಕ್ಗಳು. ಬಿಗ್ ಬಜೆಟ್, ಬಿಗ್ ಸ್ಕೇಲ್ ಹಾಗೂ ಮೆಗಾ ಕಾಂಬಿನೇಷನ್ ಮೂವಿಗಳು. ನ್ಯಾಷನಲ್ ಲೆವೆಲ್ ಸ್ಟಾರ್ ಆಗಿದ್ದ ಯಶ್, ಗ್ಲೋಬಲ್ ಸ್ಟಾರ್ ಆಗೋ ನಿಟ್ಟಿನಲ್ಲಿ ಈ ಚಿತ್ರಗಳನ್ನ ವಿಶ್ವದ ಮೂಲೆ ಮೂಲೆಗೆ ತಲುಪಿಸುವ, ಪ್ರತಿಯೊಬ್ಬರಿಗೂ ಉಣಬಡಿಸೋ ಮಹದಾಸೆ ಹೊಂದಿದ್ದಾರೆ.
ವಿಶ್ವ ಸಿನಿದುನಿಯಾದಲ್ಲಿ ಸದ್ಯ ಟಾಕ್ ಆಫ್ ದಿ ಟೌನ್ ಆಗಿರೋ ಇಂಡಿಯನ್ ಸಿನಿಮಾಗಳಲ್ಲಿ ನಮ್ಮ ಯಶ್ರ ಟಾಕ್ಸಿಕ್ ಹಾಗೂ ರಾಮಾಯಣ ಎರಡೂ ಟಾಪ್ನಲ್ಲಿವೆ. ಅವುಗಳ ಸಾಲಿಗೆ ಕೆಜಿಎಫ್ ಚಾಪ್ಟರ್-3 ಕೂಡ ಸೇರಿಕೊಂಡಿದೆ. ಹೌದು.. ಸಡನ್ ಆಗಿ ಕೆಜಿಎಫ್ ಫ್ರಾಂಚೈಸ್ನ 3ನೇ ಸಿನಿಮಾ ಇದೀಗ ಮುನ್ನೆಲೆಗೆ ಬಂದಿದ್ದು, ಟಾಕ್ ಆಫ್ ದಿ ಟೌನ್ ಆಗಿದೆ. ಅದಕ್ಕೆ ಕಾರಣ ಯಶ್ ಸಿನಿಮಾಕಾನ್ ಗ್ಲೋಬಲ್ ವೇದಿಕೆ.
ಹಿಸ್ಟರಿ ವಾಸ್ ವ್ರಾಂಗ್.. ಹೀಗಂತ ಪ್ರಕಾಶ್ ರೈ ಕೆಜಿಎಫ್ ಚಾಪ್ಟರ್-2ನಲ್ಲಿ ಒಂದು ಡೈಲಾಗ್ ಹೇಳ್ತಾರೆ. ಅದು ಅಕ್ಷರಶಃ ಸತ್ಯವೂ ಹೌದು. ಇತಿಹಾಸವೇ ತಪ್ಪಾಗಿದೆ. ಯಾಕಂದ್ರೆ ಕೆಜಿಎಫ್-2 ಕ್ಲೈಮ್ಯಾಕ್ಸ್ನಲ್ಲಿ ರಾಕಿಭಾಯ್ ಯಶ್ ಸತ್ತಿಲ್ಲ. ಪ್ರಧಾನಿ ರಮಿಕಾ ಸೇನ್ ಅಟ್ಯಾಕ್ ಮಾಡಲು ಹೇಳೋದು ಸತ್ಯ. ಅಟ್ಯಾಕ್ ಆಗೋದು ಕೂಡ ಸತ್ಯ. ಆದ್ರೆ ಗೋಲ್ಡ್ ಬಿಸ್ಕೆಟ್ಸ್ ಜೊತೆ ರಾಕಿಭಾಯ್ ನೀರುಪಾಲಾದಾಗ ಎಸ್ಕೇಪ್ ಆಗ್ತಾರೆ.
ಸಬ್ ಮರೈನ್ನಲ್ಲಿ ಕಥಾನಾಯಕ ರಾಕಿಭಾಯ್ ತಪ್ಪಿಸಿಕೊಳ್ತಾರೆ. ಆತನನ್ನ ಹಾಗೂ ಆತ ಕೊಂಡೊಯ್ಯುತ್ತಿದ್ದ ಅಪಾರ ಗೋಲ್ಡ್ನ ಮತ್ತೊಬ್ಬ ಬಂದು ಕಾಪಾಡ್ತಾನೆ. ಅದ್ಹೇಗೆ ಎಸ್ಕೇಪ್ ಆಗ್ತಾರೆ..? ಯಾರು ಎಸ್ಕೇಪ್ ಮಾಡಿಸ್ತಾರೆ..? ನಂತ್ರ ಸೇಡು ತೀರಿಸಿಕೊಳ್ಳಲು ರಾಕಿಭಾಯ್ ನಡೆ ಏನಾಗಿರುತ್ತೆ ಅನ್ನೋದೇ ಕೆಜಿಎಫ್ ಚಾಪ್ಟರ್-3 ಕಥಾವಸ್ತು ಆಗಿರಲಿದೆ ಎನ್ನಲಾಗ್ತಿದೆ. ಅದಕ್ಕಾಗಿ ಯಶ್ ಕೂಡ ಮಾನ್ಸ್ಟರ್ ಡೈರೆಕ್ಟರ್ ನೀಲ್ ಜೊತೆ ಟಚ್ನಲ್ಲಿ ಇದ್ದಾರಂತೆ. ಒನ್ಸ್ ಕಥೆ ಓಕೆ ಆದ್ರೆ ಟಾಕ್ಸಿಕ್ ಹಾಗೂ ರಾಮಾಯಣ ಮುಗಿಸಿ ಶೂಟಿಂಗ್ಗೆ ರೆಡಿ ಅಂತಿದ್ದಾರೆ ಯಶ್.
ಯಶ್ ತಮ್ಮ ಇಡೀ ಜೀವಮಾನದ ಜೀವನಾನುಭವಗಳು ಹಾಗೂ ಕ್ರಿಯಾತ್ಮಕ ವಿಷಯಗಳನ್ನ ಕೆಜಿಎಫ್ ಸರಣಿ ಚಿತ್ರಗಳಲ್ಲಿ ಪ್ರಯೋಗ ಮಾಡಿ ಆಗಿದೆ. ಆದ್ರೆ ಚಾಪ್ಟರ್-3ನಲ್ಲಿ ಏನೆಲ್ಲಾ ಮಾಡ್ತಾರೆ ಅನ್ನೋ ಕೌತುಕತೆ ಜನಕ್ಕಿದೆ. ಆ ಭರವಸೆಯನ್ನ ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಜೊತೆಗೂಡಿ ಯಶ್ ನೆರವೇರಿಸ್ತಾರೆ ಅನ್ನೋ ಭರವಸೆ ಇದೆ. ಸೋ.. ಟಾಕ್ಸಿಕ್ ಬಳಿಕ ಒನ್ಸ್ ಅಗೈನ್ ಸ್ಟೈಲಿಶ್ ಲುಕ್ನಲ್ಲಿ ಕಿಕ್ ಕೊಡ್ತಾರೆ ಹೆಮ್ಮೆಯ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





