ರಾಜಕೀಯ ಲೋಕದಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಪ್ರಭಾವಿ ಮಂತ್ರಿಯೊಂದರ ವಿರುದ್ಧ ಹನಿ ಟ್ರ್ಯಾಪ್ ನಡೆಸಲು ಬಂದಿದ್ದ ತಂಡವೇ ಅವರ ಬಲೆಗೆ ಬಿದ್ದಿದೆ. ಈ ಬಗ್ಗೆ ಗ್ಯಾರಂಟಿ ನ್ಯೂಸ್ಗೆ ಮಾಹಿತಿ ಸಿಕ್ಕಿದ್ದು, ಹನಿ ಟ್ರ್ಯಾಪ್ ಟೀಮ್ನ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಮಂತ್ರಿಯನ್ನ ಬಲೆಗೆ ಬೀಳಿಸಲು ಹೋದವರು ಸಿಕ್ಕಿಹಾಕಿಕೊಂಡ ಕಥೆ
ರಾಜ್ಯದ ಪ್ರಭಾವಿ ಸಚಿವನನ್ನು ಹನಿ ಟ್ರ್ಯಾಪ್ ಮಾಡುವ ಉದ್ದೇಶದಿಂದ ಒಂದು ತಂಡ ಕೆಲಸ ಮಾಡುತ್ತಿದೆ ಎಂಬ ಗುಮಾನಿ ರಾಜಕೀಯ ವಲಯದಲ್ಲಿ ಇತ್ತು. ಆದರೆ ಮಂತ್ರಿಯನ್ನು ಉರುಳಿಸಲು ಕಳಿಸಲಾಗಿದ್ದ ‘ಹನಿ ಟ್ರ್ಯಾಪ್ ಟೀಂ’ ಅವರದೇ ಬಲೆಗೆ ಬಿದ್ದು ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ.
ಆ ಮಂತ್ರಿಗೆ ಹನಿ ಟ್ರ್ಯಾಪ್ ಅಸ್ತ್ರ ಬಳಸಲು ಯತ್ನಿಸಿದ ತಂಡದ ಬಗ್ಗೆ ಹಿಂದೆ ಮಾಹಿತಿ ಇತ್ತು ಎಂದು ತಿಳಿದುಬಂದಿದೆ. ಹಾಗಾಗಿ, ಮಂತ್ರಿಯವರು ಚಾಣಾಕ್ಷತೆಯಿಂದ ತೀರ್ಮಾನ ಕೈಗೊಂಡಿದ್ದು, ಹನಿ ಟ್ರ್ಯಾಪ್ ತಂಡ ಮಂತ್ರಿಯ ಬಳಿ ತಲುಪಿದ ಕ್ಷಣ ಅವರು ನಯವಾಗಿ ಮಾತನಾಡಿ, ಸಂಪೂರ್ಣ ಮಾಹಿತಿ ತಿಳಿದುಕೊಂಡಿದ್ದಾರೆ.
ನಂತರ ಹನಿಟ್ರ್ಯಾಪ್ ಟೀಮ್ ನ್ನು ಹಿಡಿದು ಪಕ್ಕದಲ್ಲೇ ಇರುವ ಸ್ಥಳಕ್ಕೆ ಕರೆದೊಯ್ದು, ವಿಚಾರಣೆ ನಡೆಸಿದ್ದಾರೆ. ವಿಚಾರಿಸಿದ ನಂತರ ಟೀಂನ ಇಬ್ಬರಿಗೆ ಗೂಸಾ ಕೊಟ್ಟಿದ್ದಾರೆ ಎಂಬ ಸತ್ಯ ಬೆಳಕಿಗೆ ಬಂದಿದೆ.
ಹನಿ ಟೀಂ ಕಳಿಸಿದ್ದ ವ್ಯಕ್ತಿ ಯಾರು?
ರಾಜಕೀಯ ಹನಿ ಟ್ರ್ಯಾಪ್ ಕಳಿಸಿದ್ದ ವ್ಯಕ್ತಿ ಯಾರು ಎಂಬುದರ ಬಗ್ಗೆ ಈಗ ತನಿಖೆ ನಡೆಯುತ್ತಿದೆ. ಈ ಬಗ್ಗೆ ಹೈಕಮಾಂಡ್ ಕೂಡ ತಲೆಕೆಡಿಸಿಕೊಂಡಿದ್ದು, ಅಸಲಿ ಮಾಸ್ಟರ್ಮೈಂಡ್ ಯಾರು ಎಂಬುದನ್ನು ಪತ್ತೆ ಹಚ್ಚಲು ಮುಂದಾಗಿದೆ. ಸಚಿವರ ಬಳಿ ಕಳಿಸಿದ್ದ ‘ಆ ವ್ಯಕ್ತಿ’ ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದ್ದು, ಆದರೆ ಹನಿ ಟೀಮ್ ನೀಡಿದ ಮಾಹಿತಿ ಪ್ರಕಾರ, ಈ ವ್ಯಕ್ತಿ ಒಂದು ದೊಡ್ಡ ರಾಜಕೀಯ ಷಡ್ಯಂತ್ರದಲ್ಲಿ ಭಾಗಿಯಾಗಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಸಿಕ್ಕಿಬಿದ್ದ ಹನಿ ಟೀಮ್ನ ಸದಸ್ಯರಿಂದ ಆ ‘ವ್ಯಕ್ತಿ’ ಹೆಸರು ಬಹಿರಂಗ ಪಡಿಸಿದ್ದು, ನಮ್ಮನ್ನ ಕಳುಹಿಸಿದ್ದೇ ಆ ವ್ಯಕ್ತಿ.. ಎಂದು ಹನಿ ಟೀಂ ಬಾಯ್ಬಿಟ್ಟಿದ್ದಾರೆ. ಈ ಹೆಸರು ಕೇಳಿದಂತೆಯೇ ಸಚಿವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಮ್ಮನ್ನೇ ದಿಕ್ಕು ತಪ್ಪಿಸಲು ಆ ವ್ಯಕ್ತಿಯು ಈ ರೀತಿ ಕುತಂತ್ರ ನಡೆಸಿದ್ದಾನೆ ಎಂದು ಆರೋಪಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿದ ಸಚಿವರು
ನಮ್ಮ ಜೊತೆಯಲ್ಲೇ ಇದ್ದ ಆ ವ್ಯಕ್ತಿ ಈ ರೀತಿ ಮಾಡಿಸ್ತಾರಾ? ಎಂದು ಆಕ್ರೋಶಗೊಂಡ ಸಚಿವರು ತಕ್ಷಣವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಹನಿ ಟ್ರ್ಯಾಪ್ನ ಹಿಂದೆ ಯಾರು ಇದ್ದಾರೆ, ಅವರು ಯಾಕೆ ಈ ದಾಳಿಯನ್ನು ನಡೆಸಿದರು ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂಬ ಒತ್ತಾಯಿಸಿದ್ದಾರೆ. ಇವರನ್ನ ಹೀಗೆ ಬಿಟ್ಟರೆ ಆಗಲ್ಲ ಹೈಕಮಾಂಡ್ಗೆ ದೂರು ಕೊಟ್ಟು ಸಾಕ್ಷಿ ಕೊಡ್ತೀವಿ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಸಚಿವರು ಹೈಕಮಾಂಡ್ ಬಳಿ ದೂರು ನೀಡಿದ್ದು, ತಮ್ಮನ್ನೇ ಟಾರ್ಗೆಟ್ ಮಾಡಿ ಹನಿ ಟ್ರ್ಯಾಪ್ ಮಾಡಲು ಯತ್ನಿಸಿದ ವ್ಯಕ್ತಿ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಸ್ವಪಕ್ಷದವರ ವಿರುದ್ಧವೇ ಹೀಗೆ ಹನಿ ಟ್ರ್ಯಾಪ್ ಮಾಡಿಸಿದ್ರೆ ಹೇಗೆ.? “ನಾವು ನಮ್ಮದೇ ಪಕ್ಷದಲ್ಲಿ ಮಾತನಾಡುವುದೂ ತಪ್ಪಾ? ಈ ಸಮಸ್ಯೆಗೆ ಫುಲ್ ಸ್ಟಾಪ್ ಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರಿಗೆ ಈ ಕುರಿತು ದೂರು ನೀಡಲಾಗಿದೆ. ಕೆಲ ಸಚಿವರು ಆ ವ್ಯಕ್ತಿಯ ಹಿಂದಿನ ತಂತ್ರಗಳನ್ನು ಸಹಿಸಿಕೊಂಡು ಹೋಗಲು ಆಗದು ಎಂದು ಗಂಭೀರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.





