• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, April 23, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಯಾವೆಲ್ಲಾ ಹಣ್ಣು-ತರಕಾರಿಗಳಲ್ಲಿ ಕೃತಕ ಬಣ್ಣ ಇರುತ್ತೆ? ಕಂಡು ಹಿಡಿಯೋದು ಹೇಗೆ?

ಹುಷಾರ್.. ಕ್ಯಾನ್ಸರ್‌ಗೆ ಕಾರಣವಾಗುತ್ತೆ ಕೃತಕ ಬಣ್ಣ..!

ದಿಲೀಪ್ ಡಿ. ಆರ್ by ದಿಲೀಪ್ ಡಿ. ಆರ್
March 2, 2025 - 11:42 am
in Flash News, ಆರೋಗ್ಯ-ಸೌಂದರ್ಯ, ಕರ್ನಾಟಕ, ವಿಶೇಷ
0 0
0
Veg

ಕರ್ನಾಟಕ ರಾಜ್ಯ ವೈವಿಧ್ಯಮಯ ಹಣ್ಣು-ತರಕಾರಿ ಹಾಗೂ ಕೃಷಿ ಸಮೃದ್ಧತೆಗೆ ಹೆಸರಾದ ನಾಡು. ಆದರೆ, ಈ ಕೃಷಿ ಉತ್ಪನ್ನಗಳು ಮಾರುಕಟ್ಟೆಗೆ ಬಂದು ಗ್ರಾಹಕರಿಗೆ ತಲುಪುವ ಹೊತ್ತಿಗೆ ಕೆಲವೊಮ್ಮೆ ಮಾರಣಾಂತಿಕ ಆಗುತ್ತಿವೆ! ಅದರಲ್ಲೂ ಕೃತಕ ಬಣ್ಣಗಳ ಬಳಕೆ ಅತ್ಯಂತ ಗಂಭೀರ ವಿಚಾರವಾಗಿದೆ. ಕಲ್ಲಂಗಡಿ ಹಣ್ಣಿನಲ್ಲಿ ಕೃತಕ ಬಣ್ಣ ಬೆರೆಸುತ್ತಿರುವ ದಂಧೆ ಬಯಲಾದ ಬೆನ್ನಲ್ಲೇ ಜನ ಸಾಮಾನ್ಯರು ಹಣ್ಣು-ತರಕಾರಿಗಳನ್ನ ಸಂಶಯದ ಕಣ್ಣಿನಲ್ಲಿ ನೋಡುವಂತಾಗಿದೆ.

ವ್ಯಾಪಾರಿಗಳು ಹಣ್ಣು-ತರಕಾರಿಗಳಲ್ಲಿ ಕೃತಕ ಬಣ್ಣ ಬಳಸೋದು ಏಕೆ? ಈ ಕೃತಕ ಬಣ್ಣಗಳಿಂದ ಏನೆಲ್ಲಾ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ? ಯಾವೆಲ್ಲಾ ಹಣ್ಣು-ತರಕಾರಿಗಳಲ್ಲಿ ಕೃತಕ ಬಣ್ಣ ಬೆರೆಸಲಾಗುತ್ತದೆ? ಈ ಕುರಿತ ಸಮಗ್ರ ವಿವರ ಇಲ್ಲಿದೆ..

RelatedPosts

ನಾಳೆಯಿಂದ ಹಿಂದಿ ಭಾಷೆಯಲ್ಲೂ “ಕ್ಯಾಲೆಂಡರ್” ಚಿತ್ರ ಬಿಡುಗಡೆ

ಆರಾಧಿಸುವ ರೀತಿಯಲ್ಲಿಯೇ ದೇವರ ದರ್ಶನ: ಕಾಡಸಿದ್ದೇಶ್ವರ ಸ್ವಾಮೀಜಿ

MI vs CSK: ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಮುಂಬೈ

ನಾಳೆ RCB-GT ನಡುವೆ ಹೈವೋಲ್ಟೇಜ್ ಪಂದ್ಯ: ಜಯ ಯಾರಿಗೆ? ಜ್ಯೋತಿಷ್ಯ ಹೇಳುವುದೇನು?

ADVERTISEMENT
ADVERTISEMENT
ಹಣ್ಣು–ತರಕಾರಿಗಳಿಗೆ ಕೃತಕ ಬಣ್ಣ ಬಳಸೋದು ಏಕೆ?

ವ್ಯಾಪಾರಿಗಳು ಹಣ್ಣು-ತರಕಾರಿಗಳನ್ನು ಹಸಿರಾಗಿ, ಹಳದಿಯಾಗಿ ಅಥವಾ ಕೆಂಪಾಗಿ ಕಾಣಿಸಲು ಕೃತಕ ಬಣ್ಣಗಳನ್ನು ಸಿಂಪಡಿಸುತ್ತಾರೆ. ಇದರ ಹಿಂದಿನ ಮುಖ್ಯ ಕಾರಣಗಳು ಇಂತಿವೆ:

1. ನೋಡಲು ಸುಂದರವಾಗಿರಬೇಕು: ಹಣ್ಣು-ತರಕಾರಿಗಳು ನೋಡಲು ಅಂದವಾಗಿದ್ದರೆ, ಕಣ್ಣಿಗೆ ಕುಕ್ಕುವಂತಿದ್ದರೆ ಗ್ರಾಹಕರನ್ನು ಆಕರ್ಷಿಸಬಹುದು. ಉತ್ತಮ ಬಣ್ಣ ಹೊಂದಿರುವ ಹಣ್ಣು-ತರಕಾರಿಗಳನ್ನೇ ಗ್ರಾಹಕರು ಆರಿಸಿಕೊಳ್ತಾರೆ.

2. ಸಾಗಾಣಿಕೆ ಸಮಯದಲ್ಲಿ ನೈಸರ್ಗಿಕ ಬಣ್ಣ ಕಳೆದುಹೋಗುತ್ತೆ: ಇದು ಸಹಜ. ಮಾವು, ಕಿತ್ತಳೆ ಸೇರಿದಂತೆ ಹಲವು ಹಣ್ಣುಗಳು ಮಾಗುವ ಸಮಯದಲ್ಲಿ ನೈಸರ್ಗಿಕವಾಗಿ ತಮ್ಮ ಬಣ್ಣ ಬದಲಾಯಿಸುತ್ತವೆ. ಈ ಪ್ರಕ್ರಿಯೆಯನ್ನ ವೇಗ ಮಾಡಲು ಕೃತಕ ಬಣ್ಣಗಳನ್ನ ಚಿಮುಕಿಸಲಾಗುತ್ತದೆ.

3. ಲಾಭದಾಸೆ: ವ್ಯಾಪಾರಿಗಳು ಹೆಚ್ಚಿನ ಲಾಭದ ಆಸೆಗೆ ಕೆಲವು ರಾಸಾಯನಿಕ ಬಣ್ಣಗಳನ್ನ ಬಳಸುತ್ತಾರೆ. ಈ ರಾಸಾಯನಿಕ ವಸ್ತುಗಳು ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆಗೆ ಸಿಗುತ್ತವೆ. ಇವುಗಳ ಬಳಕೆಯಿಂದ ವ್ಯಾಪಾರಿಗಳು ಹೆಚ್ಚು ಲಾಭ ಗಳಿಸುತ್ತಾರೆ.

ಯಾವ ಹಣ್ಣು-ತರಕಾರಿಗಳಲ್ಲಿ ಕೃತಕ ಬಣ್ಣಗಳ ಬಳಕೆ ಹೆಚ್ಚು?

1. ಮಾವು: ಹಸಿರು ಮಾವುಗಳನ್ನು ಹಳದಿ ಅಥವಾ ಕಿತ್ತಳೆ ಬಣ್ಣಕ್ಕೆ ತರಲು ಕ್ಯಾಲ್ಶಿಯಂ ಕಾರ್ಬೈಡ್ ಮತ್ತು ಎರಿಥ್ರೋಸಿನ್ ಬಳಸಲಾಗುತ್ತದೆ.

2. ಕಿತ್ತಳೆ ಹಣ್ಣು: ಹಣ್ಣಿನ ತೊಗಟೆಗೆ ಮೆಥನಿಲ್ ಹಳದಿ (Metanil Yellow) ಸಿಂಪಡಿಸಿ ಹಳದಿ ಬಣ್ಣವನ್ನು ಹೆಚ್ಚಿಸಲಾಗುತ್ತದೆ.

3. ಕಲ್ಲಂಗಡಿ ಹಣ್ಣು: ಹಣ್ಣಿನ ಒಳಗೆ ಕೆಂಪು ಬಣ್ಣ ಹೆಚ್ಚಿಸಲು ಸುಡಾನ್ ರೆಡ್, ಕ್ರೋಮೇಟ್, ಮತ್ತು ಮೆಂಥಾಲ್ ಯೆಲ್ಲೋ ಬಳಕೆ

4. ತರಕಾರಿಗಳು:

  • ಮೆಣಸಿನಕಾಯಿ: ಹಸಿರು ಬಣ್ಣ ಹೆಚ್ಚಿಸಲು ಮೆಲಾಚೈಟ್ ಗ್ರೀನ್
  • ಕೆಂಪು ಮೆಣಸಿನ ಪುಡಿ: ಸುಡಾನ್ ರೆಡ್ (Sudan Red) ಬಣ್ಣ ಬಳಕೆ
  • ಹಲಸಿನ ಹಣ್ಣು: ಹಳದಿ ಬಣ್ಣಕ್ಕೆ ರಾಸಾಯನಿಕಗಳು.

    5. ಸ್ಟ್ರಾಬೆರಿ ಮತ್ತು ದ್ರಾಕ್ಷಿ: ಕೆಂಪು ಮತ್ತು ನೇರಳೆ ಬಣ್ಣಗಳನ್ನು ಹೆಚ್ಚಿಸಲು ಬಣ್ಣಗಳ ಬಳಕೆ

    ಕೃತಕ ಬಣ್ಣಗಳಿಂದ ಆರೋಗ್ಯದ ಮೇಲೆ ಏನೆಲ್ಲಾ ದುಷ್ಪರಿಣಾಮ ಆಗುತ್ತೆ?

    ಕೃತಕ ಬಣ್ಣಗಳಲ್ಲಿ ಹಲವು ಕ್ಯಾನ್ಸರ್-ಕಾರಕ ಮತ್ತು ವಿಷಪೂರಿತ ರಾಸಾಯನಿಕಗಳಿವೆ. ಇವುಗಳ ದೀರ್ಘಕಾಲೀನ ಬಳಕೆಯಿಂದ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.

    1. ಕ್ಯಾನ್ಸರ್: ಸುಡಾನ್ ರೆಡ್ ಮತ್ತು ಮೆಥನಿಲ್ ಹಳದಿಯು ಯಕೃತ್ತು ಮತ್ತು ಮೂತ್ರಕೋಶದ ಕ್ಯಾನ್ಸರ್‌ಗೆ ಕಾರಣವಾಗಬಹುದು.
    2. ಜೀರ್ಣಾಂಗ ವ್ಯವಸ್ಥೆಯ ತೊಂದರೆ: ವಾಂತಿ, ಹೊಟ್ಟೆ ತೊಳೆಸುವಿಕೆ, ಭೇದಿ, ಹೊಟ್ಟೆನೋವು.
    3. ಚರ್ಮದ ಅಲರ್ಜಿ: ಕೆಂಪು ದದ್ದುಗಳು, ಕೆರೆತ
    4. ನರಮಂಡಲದ ಹಾನಿ: ಕೆಲವು ರಾಸಾಯನಿಕಗಳು ನರಗಳ ಮೇಲೆ ವಿಷಪೂರಿತ ಪರಿಣಾಮ ಬೀರುತ್ತವೆ.
    5. ಮಕ್ಕಳ ಬೆಳವಣಿಗೆಗೆ ಅಡ್ಡಿ: ಸೀಸ (Lead) ಮತ್ತು ಕ್ಯಾಡ್ಮಿಯಂ (Cadmium) ಸೇರಿದ ಬಣ್ಣಗಳು ಮಕ್ಕಳ ಮಾನಸಿಕ ಬೆಳವಣಿಗೆಯನ್ನು ನಿಧಾನಗೊಳಿಸುತ್ತವೆ.
    ಕೃತಕ ಬಣ್ಣಕ್ಕೆ ಕಡಿವಾಣ ಹೇಗೆ?
    1. ಆಹಾರ ಸುರಕ್ಷತೆ ಮತ್ತು ಮಾನದಂಡ ಪ್ರಾಧಿಕಾರ (FSSAI) ಕೃತಕ ಬಣ್ಣಗಳ ಬಳಕೆಯನ್ನು ನಿಷೇಧಿಸಿದೆ. ಸುಡಾನ್ ರೆಡ್, ಮೆಲಾಚೈಟ್ ಗ್ರೀನ್, ಮೆಥನಿಲ್ ಹಳದಿಯಂತಹ ರಾಸಾಯನಿಕಗಳು ಕಾನೂನುಬಾಹಿರ.
    2. ಸಾರ್ವಜನಿಕ ಜಾಗೃತಿ: ಹಣ್ಣು-ತರಕಾರಿಗಳನ್ನು ನೀರಿನಲ್ಲಿ ನೆನೆಸಿ ಅಥವಾ ಹಸಿ ಹುರುಳಿಯಿಂದ ತಿಕ್ಕಿ ಪರೀಕ್ಷಿಸಬೇಕು. ಬಣ್ಣ ಕಳೆದು ಹೋದರೆ, ಅದು ಕೃತಕವೆಂದು ಗುರುತಿಸಬಹುದು.
    3. ಸಾವಯವ ಕೃಷಿಗೆ ಪ್ರೋತ್ಸಾಹ: ರಾಸಾಯನಿಕ-ಮುಕ್ತ ಉತ್ಪನ್ನಗಳನ್ನು ಖರೀದಿಸಲು ಗ್ರಾಹಕರು ಮುಂದಾಗಬೇಕು.

    ಸರ್ಕಾರ ಮತ್ತು ನಿಯಂತ್ರಕ ಸಂಸ್ಥೆಗಳು ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕನೂ ಜಾಗೃತರಾಗಿ, ಸ್ಥಳೀಯ ರೈತರಿಂದ ನೇರವಾಗಿ ಹಣ್ಣು-ತರಕಾರಿಗಳನ್ನು ಖರೀದಿಸಬೇಕು. ಕೃಷಿ ಉತ್ಪನ್ನ ಮಾರುಕಟ್ಟೆಗಳಿಗೆ ಆದ್ಯತೆ ನೀಡಬೇಕು. “ಆರೋಗ್ಯವೇ ಭಾಗ್ಯ ” ಎಂಬ ನಾಣ್ಣುಡಿಯನ್ನ ಮರೆಯಬಾರದು.

    ಇದನ್ನೂ ಓದಿ: ಕುಣಿಗಲ್ ಕಲ್ಲಂಗಡಿ ಹಣ್ಣಲ್ಲ, ವಿಷದ ಗುಳಿಗೆ: ಕೃತಕ ಬಣ್ಣ ಪತ್ತೆ!

    ShareSendShareTweetShare
    ದಿಲೀಪ್ ಡಿ. ಆರ್

    ದಿಲೀಪ್ ಡಿ. ಆರ್

    ಗ್ಯಾರಂಟಿ ನ್ಯೂಸ್ ಸಂಸ್ಥೆಯ ಡಿಜಿಟಲ್ ವಿಭಾಗದ ಸಂಪಾದಕರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಡಿಜಿಟಲ್ ಪತ್ರಕರ್ತನಾಗಿ 5 ವರ್ಷ ಹಾಗೂ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 15 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಕಾಡು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.

    Please login to join discussion

    ತಾಜಾ ಸುದ್ದಿ

    Untitled design 2026 04 23T201620.913

    ನಾಳೆಯಿಂದ ಹಿಂದಿ ಭಾಷೆಯಲ್ಲೂ “ಕ್ಯಾಲೆಂಡರ್” ಚಿತ್ರ ಬಿಡುಗಡೆ

    by ಶಾಲಿನಿ ಕೆ. ಡಿ
    April 23, 2026 - 8:19 pm
    0

    Untitled design 2026 04 23T195402.040

    ಆರಾಧಿಸುವ ರೀತಿಯಲ್ಲಿಯೇ ದೇವರ ದರ್ಶನ: ಕಾಡಸಿದ್ದೇಶ್ವರ ಸ್ವಾಮೀಜಿ

    by ಶಾಲಿನಿ ಕೆ. ಡಿ
    April 23, 2026 - 7:59 pm
    0

    Untitled design 2026 04 23T193554.822

    MI vs CSK: ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಮುಂಬೈ

    by ಶಾಲಿನಿ ಕೆ. ಡಿ
    April 23, 2026 - 7:39 pm
    0

    Untitled design 2026 04 23T183749.273

    ನಾಳೆ RCB-GT ನಡುವೆ ಹೈವೋಲ್ಟೇಜ್ ಪಂದ್ಯ: ಜಯ ಯಾರಿಗೆ? ಜ್ಯೋತಿಷ್ಯ ಹೇಳುವುದೇನು?

    by ಶಾಲಿನಿ ಕೆ. ಡಿ
    April 23, 2026 - 6:41 pm
    0

    ಸಂಬಂಧಿಸಿದ ಪೋಸ್ಟ್‌ಗಳು

    • Untitled design 2026 04 23T201620.913
      ನಾಳೆಯಿಂದ ಹಿಂದಿ ಭಾಷೆಯಲ್ಲೂ “ಕ್ಯಾಲೆಂಡರ್” ಚಿತ್ರ ಬಿಡುಗಡೆ
      April 23, 2026 | 0
    • Untitled design 2026 04 23T195402.040
      ಆರಾಧಿಸುವ ರೀತಿಯಲ್ಲಿಯೇ ದೇವರ ದರ್ಶನ: ಕಾಡಸಿದ್ದೇಶ್ವರ ಸ್ವಾಮೀಜಿ
      April 23, 2026 | 0
    • Untitled design 2026 04 23T193554.822
      MI vs CSK: ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಮುಂಬೈ
      April 23, 2026 | 0
    • Untitled design 2026 04 23T183749.273
      ನಾಳೆ RCB-GT ನಡುವೆ ಹೈವೋಲ್ಟೇಜ್ ಪಂದ್ಯ: ಜಯ ಯಾರಿಗೆ? ಜ್ಯೋತಿಷ್ಯ ಹೇಳುವುದೇನು?
      April 23, 2026 | 0
    • Untitled design 2026 04 23T181655.016
      ಪತಿಯ ಹುಟ್ಟುಹಬ್ಬದಂದು ಯುವ ಜೊತೆಗಿನ ಫೋಟೋ ಹಂಚಿಕೊಂಡು ಮಹಿಳೆಯರಿಗೆ ಸಲಹೆ ನೀಡಿದ ಶ್ರೀದೇವಿ
      April 23, 2026 | 0
    ADVERTISEMENT
    Guarantee News

    © 2024 - 2025 Guarantee News. All Rights Reserved.

    Navigate Site

    • About Us
    • Privacy Policy
    • Terms & Conditions
    • Disclaimer
    • Advertise With Us
    • Contact Us

    Follow Us

    Welcome Back!

    Login to your account below

    Forgotten Password?

    Retrieve your password

    Please enter your username or email address to reset your password.

    Log In

    Add New Playlist

    No Result
    View All Result
    • ಕರ್ನಾಟಕ
    • ದೇಶ
    • ವಿದೇಶ
    • ಜಿಲ್ಲಾ ಸುದ್ದಿಗಳು
      • ಬಾಗಲಕೋಟೆ
      • ಬಳ್ಳಾರಿ
      • ಬೆಳಗಾವಿ
      • ಬೆಂ. ಗ್ರಾಮಾಂತರ
      • ಬೆಂ. ನಗರ
      • ಬೀದರ್
      • ಚಾಮರಾಜನಗರ
      • ಚಿಕ್ಕಬಳ್ಳಾಪುರ
      • ಚಿಕ್ಕಮಗಳೂರು
      • ಚಿತ್ರದುರ್ಗ
      • ದಕ್ಷಿಣ ಕನ್ನಡ
      • ದಾವಣಗೆರೆ
      • ಧಾರವಾಡ
      • ಗದಗ
      • ಹಾಸನ
      • ಹಾವೇರಿ
      • ಕಲಬುರಗಿ
      • ಕೊಡಗು
      • ಕೋಲಾರ
      • ಮೈಸೂರು
      • ರಾಯಚೂರು
      • ರಾಮನಗರ
      • ಶಿವಮೊಗ್ಗ
      • ತುಮಕೂರು
      • ಉಡುಪಿ
      • ಉತ್ತರ ಕನ್ನಡ
      • ವಿಜಯಪುರ
      • ಯಾದಗಿರಿ
      • ಮಂಡ್ಯ
      • ಕೊಪ್ಪಳ
      • ವಿಜಯನಗರ
    • ಸಿನಿಮಾ
      • ಸ್ಯಾಂಡಲ್ ವುಡ್
      • ಕಿರುತೆರೆ
      • ಬಾಲಿವುಡ್
      • ಸೌತ್ ಸಿನಿಮಾಸ್
      • ಸಂದರ್ಶನ
      • ಸಿನಿಮಾ ವಿಮರ್ಶೆ
      • ಗಾಸಿಪ್
    • ಬಿಗ್ ಬಾಸ್
    • ಕ್ರೀಡೆ
    • ವಾಣಿಜ್ಯ
    • ಶಿಕ್ಷಣ
      • ಉದ್ಯೋಗ
    • ಎಲೆಕ್ಷನ್
    • ಆರೋಗ್ಯ-ಸೌಂದರ್ಯ
    • ತಂತ್ರಜ್ಞಾನ
    • ಆಧ್ಯಾತ್ಮ- ಜ್ಯೋತಿಷ್ಯ
    • ವೈರಲ್
    • ಆಟೋಮೊಬೈಲ್
    • ವೆಬ್ ಸ್ಟೋರೀಸ್

    © 2024 - 2025 Guarantee News. All Rights Reserved.

    Go to mobile version