ಯಾವೆಲ್ಲಾ ಹಣ್ಣು-ತರಕಾರಿಗಳಲ್ಲಿ ಕೃತಕ ಬಣ್ಣ ಇರುತ್ತೆ? ಕಂಡು ಹಿಡಿಯೋದು ಹೇಗೆ?

ಹುಷಾರ್.. ಕ್ಯಾನ್ಸರ್‌ಗೆ ಕಾರಣವಾಗುತ್ತೆ ಕೃತಕ ಬಣ್ಣ..!

Veg

ಕರ್ನಾಟಕ ರಾಜ್ಯ ವೈವಿಧ್ಯಮಯ ಹಣ್ಣು-ತರಕಾರಿ ಹಾಗೂ ಕೃಷಿ ಸಮೃದ್ಧತೆಗೆ ಹೆಸರಾದ ನಾಡು. ಆದರೆ, ಈ ಕೃಷಿ ಉತ್ಪನ್ನಗಳು ಮಾರುಕಟ್ಟೆಗೆ ಬಂದು ಗ್ರಾಹಕರಿಗೆ ತಲುಪುವ ಹೊತ್ತಿಗೆ ಕೆಲವೊಮ್ಮೆ ಮಾರಣಾಂತಿಕ ಆಗುತ್ತಿವೆ! ಅದರಲ್ಲೂ ಕೃತಕ ಬಣ್ಣಗಳ ಬಳಕೆ ಅತ್ಯಂತ ಗಂಭೀರ ವಿಚಾರವಾಗಿದೆ. ಕಲ್ಲಂಗಡಿ ಹಣ್ಣಿನಲ್ಲಿ ಕೃತಕ ಬಣ್ಣ ಬೆರೆಸುತ್ತಿರುವ ದಂಧೆ ಬಯಲಾದ ಬೆನ್ನಲ್ಲೇ ಜನ ಸಾಮಾನ್ಯರು ಹಣ್ಣು-ತರಕಾರಿಗಳನ್ನ ಸಂಶಯದ ಕಣ್ಣಿನಲ್ಲಿ ನೋಡುವಂತಾಗಿದೆ.

ವ್ಯಾಪಾರಿಗಳು ಹಣ್ಣು-ತರಕಾರಿಗಳಲ್ಲಿ ಕೃತಕ ಬಣ್ಣ ಬಳಸೋದು ಏಕೆ? ಈ ಕೃತಕ ಬಣ್ಣಗಳಿಂದ ಏನೆಲ್ಲಾ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ? ಯಾವೆಲ್ಲಾ ಹಣ್ಣು-ತರಕಾರಿಗಳಲ್ಲಿ ಕೃತಕ ಬಣ್ಣ ಬೆರೆಸಲಾಗುತ್ತದೆ? ಈ ಕುರಿತ ಸಮಗ್ರ ವಿವರ ಇಲ್ಲಿದೆ..

ADVERTISEMENT
ADVERTISEMENT
ಹಣ್ಣು–ತರಕಾರಿಗಳಿಗೆ ಕೃತಕ ಬಣ್ಣ ಬಳಸೋದು ಏಕೆ?

ವ್ಯಾಪಾರಿಗಳು ಹಣ್ಣು-ತರಕಾರಿಗಳನ್ನು ಹಸಿರಾಗಿ, ಹಳದಿಯಾಗಿ ಅಥವಾ ಕೆಂಪಾಗಿ ಕಾಣಿಸಲು ಕೃತಕ ಬಣ್ಣಗಳನ್ನು ಸಿಂಪಡಿಸುತ್ತಾರೆ. ಇದರ ಹಿಂದಿನ ಮುಖ್ಯ ಕಾರಣಗಳು ಇಂತಿವೆ:

1. ನೋಡಲು ಸುಂದರವಾಗಿರಬೇಕು: ಹಣ್ಣು-ತರಕಾರಿಗಳು ನೋಡಲು ಅಂದವಾಗಿದ್ದರೆ, ಕಣ್ಣಿಗೆ ಕುಕ್ಕುವಂತಿದ್ದರೆ ಗ್ರಾಹಕರನ್ನು ಆಕರ್ಷಿಸಬಹುದು. ಉತ್ತಮ ಬಣ್ಣ ಹೊಂದಿರುವ ಹಣ್ಣು-ತರಕಾರಿಗಳನ್ನೇ ಗ್ರಾಹಕರು ಆರಿಸಿಕೊಳ್ತಾರೆ.

2. ಸಾಗಾಣಿಕೆ ಸಮಯದಲ್ಲಿ ನೈಸರ್ಗಿಕ ಬಣ್ಣ ಕಳೆದುಹೋಗುತ್ತೆ: ಇದು ಸಹಜ. ಮಾವು, ಕಿತ್ತಳೆ ಸೇರಿದಂತೆ ಹಲವು ಹಣ್ಣುಗಳು ಮಾಗುವ ಸಮಯದಲ್ಲಿ ನೈಸರ್ಗಿಕವಾಗಿ ತಮ್ಮ ಬಣ್ಣ ಬದಲಾಯಿಸುತ್ತವೆ. ಈ ಪ್ರಕ್ರಿಯೆಯನ್ನ ವೇಗ ಮಾಡಲು ಕೃತಕ ಬಣ್ಣಗಳನ್ನ ಚಿಮುಕಿಸಲಾಗುತ್ತದೆ.

3. ಲಾಭದಾಸೆ: ವ್ಯಾಪಾರಿಗಳು ಹೆಚ್ಚಿನ ಲಾಭದ ಆಸೆಗೆ ಕೆಲವು ರಾಸಾಯನಿಕ ಬಣ್ಣಗಳನ್ನ ಬಳಸುತ್ತಾರೆ. ಈ ರಾಸಾಯನಿಕ ವಸ್ತುಗಳು ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆಗೆ ಸಿಗುತ್ತವೆ. ಇವುಗಳ ಬಳಕೆಯಿಂದ ವ್ಯಾಪಾರಿಗಳು ಹೆಚ್ಚು ಲಾಭ ಗಳಿಸುತ್ತಾರೆ.

ಯಾವ ಹಣ್ಣು-ತರಕಾರಿಗಳಲ್ಲಿ ಕೃತಕ ಬಣ್ಣಗಳ ಬಳಕೆ ಹೆಚ್ಚು?

1. ಮಾವು: ಹಸಿರು ಮಾವುಗಳನ್ನು ಹಳದಿ ಅಥವಾ ಕಿತ್ತಳೆ ಬಣ್ಣಕ್ಕೆ ತರಲು ಕ್ಯಾಲ್ಶಿಯಂ ಕಾರ್ಬೈಡ್ ಮತ್ತು ಎರಿಥ್ರೋಸಿನ್ ಬಳಸಲಾಗುತ್ತದೆ.

2. ಕಿತ್ತಳೆ ಹಣ್ಣು: ಹಣ್ಣಿನ ತೊಗಟೆಗೆ ಮೆಥನಿಲ್ ಹಳದಿ (Metanil Yellow) ಸಿಂಪಡಿಸಿ ಹಳದಿ ಬಣ್ಣವನ್ನು ಹೆಚ್ಚಿಸಲಾಗುತ್ತದೆ.

3. ಕಲ್ಲಂಗಡಿ ಹಣ್ಣು: ಹಣ್ಣಿನ ಒಳಗೆ ಕೆಂಪು ಬಣ್ಣ ಹೆಚ್ಚಿಸಲು ಸುಡಾನ್ ರೆಡ್, ಕ್ರೋಮೇಟ್, ಮತ್ತು ಮೆಂಥಾಲ್ ಯೆಲ್ಲೋ ಬಳಕೆ

4. ತರಕಾರಿಗಳು:

    5. ಸ್ಟ್ರಾಬೆರಿ ಮತ್ತು ದ್ರಾಕ್ಷಿ: ಕೆಂಪು ಮತ್ತು ನೇರಳೆ ಬಣ್ಣಗಳನ್ನು ಹೆಚ್ಚಿಸಲು ಬಣ್ಣಗಳ ಬಳಕೆ

    ಕೃತಕ ಬಣ್ಣಗಳಿಂದ ಆರೋಗ್ಯದ ಮೇಲೆ ಏನೆಲ್ಲಾ ದುಷ್ಪರಿಣಾಮ ಆಗುತ್ತೆ?

    ಕೃತಕ ಬಣ್ಣಗಳಲ್ಲಿ ಹಲವು ಕ್ಯಾನ್ಸರ್-ಕಾರಕ ಮತ್ತು ವಿಷಪೂರಿತ ರಾಸಾಯನಿಕಗಳಿವೆ. ಇವುಗಳ ದೀರ್ಘಕಾಲೀನ ಬಳಕೆಯಿಂದ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.

    1. ಕ್ಯಾನ್ಸರ್: ಸುಡಾನ್ ರೆಡ್ ಮತ್ತು ಮೆಥನಿಲ್ ಹಳದಿಯು ಯಕೃತ್ತು ಮತ್ತು ಮೂತ್ರಕೋಶದ ಕ್ಯಾನ್ಸರ್‌ಗೆ ಕಾರಣವಾಗಬಹುದು.
    2. ಜೀರ್ಣಾಂಗ ವ್ಯವಸ್ಥೆಯ ತೊಂದರೆ: ವಾಂತಿ, ಹೊಟ್ಟೆ ತೊಳೆಸುವಿಕೆ, ಭೇದಿ, ಹೊಟ್ಟೆನೋವು.
    3. ಚರ್ಮದ ಅಲರ್ಜಿ: ಕೆಂಪು ದದ್ದುಗಳು, ಕೆರೆತ
    4. ನರಮಂಡಲದ ಹಾನಿ: ಕೆಲವು ರಾಸಾಯನಿಕಗಳು ನರಗಳ ಮೇಲೆ ವಿಷಪೂರಿತ ಪರಿಣಾಮ ಬೀರುತ್ತವೆ.
    5. ಮಕ್ಕಳ ಬೆಳವಣಿಗೆಗೆ ಅಡ್ಡಿ: ಸೀಸ (Lead) ಮತ್ತು ಕ್ಯಾಡ್ಮಿಯಂ (Cadmium) ಸೇರಿದ ಬಣ್ಣಗಳು ಮಕ್ಕಳ ಮಾನಸಿಕ ಬೆಳವಣಿಗೆಯನ್ನು ನಿಧಾನಗೊಳಿಸುತ್ತವೆ.
    ಕೃತಕ ಬಣ್ಣಕ್ಕೆ ಕಡಿವಾಣ ಹೇಗೆ?
    1. ಆಹಾರ ಸುರಕ್ಷತೆ ಮತ್ತು ಮಾನದಂಡ ಪ್ರಾಧಿಕಾರ (FSSAI) ಕೃತಕ ಬಣ್ಣಗಳ ಬಳಕೆಯನ್ನು ನಿಷೇಧಿಸಿದೆ. ಸುಡಾನ್ ರೆಡ್, ಮೆಲಾಚೈಟ್ ಗ್ರೀನ್, ಮೆಥನಿಲ್ ಹಳದಿಯಂತಹ ರಾಸಾಯನಿಕಗಳು ಕಾನೂನುಬಾಹಿರ.
    2. ಸಾರ್ವಜನಿಕ ಜಾಗೃತಿ: ಹಣ್ಣು-ತರಕಾರಿಗಳನ್ನು ನೀರಿನಲ್ಲಿ ನೆನೆಸಿ ಅಥವಾ ಹಸಿ ಹುರುಳಿಯಿಂದ ತಿಕ್ಕಿ ಪರೀಕ್ಷಿಸಬೇಕು. ಬಣ್ಣ ಕಳೆದು ಹೋದರೆ, ಅದು ಕೃತಕವೆಂದು ಗುರುತಿಸಬಹುದು.
    3. ಸಾವಯವ ಕೃಷಿಗೆ ಪ್ರೋತ್ಸಾಹ: ರಾಸಾಯನಿಕ-ಮುಕ್ತ ಉತ್ಪನ್ನಗಳನ್ನು ಖರೀದಿಸಲು ಗ್ರಾಹಕರು ಮುಂದಾಗಬೇಕು.

    ಸರ್ಕಾರ ಮತ್ತು ನಿಯಂತ್ರಕ ಸಂಸ್ಥೆಗಳು ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕನೂ ಜಾಗೃತರಾಗಿ, ಸ್ಥಳೀಯ ರೈತರಿಂದ ನೇರವಾಗಿ ಹಣ್ಣು-ತರಕಾರಿಗಳನ್ನು ಖರೀದಿಸಬೇಕು. ಕೃಷಿ ಉತ್ಪನ್ನ ಮಾರುಕಟ್ಟೆಗಳಿಗೆ ಆದ್ಯತೆ ನೀಡಬೇಕು. “ಆರೋಗ್ಯವೇ ಭಾಗ್ಯ ” ಎಂಬ ನಾಣ್ಣುಡಿಯನ್ನ ಮರೆಯಬಾರದು.

    ಇದನ್ನೂ ಓದಿ: ಕುಣಿಗಲ್ ಕಲ್ಲಂಗಡಿ ಹಣ್ಣಲ್ಲ, ವಿಷದ ಗುಳಿಗೆ: ಕೃತಕ ಬಣ್ಣ ಪತ್ತೆ!

    Exit mobile version