ಟಾಕ್ಸಿಕ್ ವಂಡರ್ಗಳು ಹಾಗೂ ಮಾಡ್ತಿರೋ ಥಂಡರ್ಗಳ ಹಿಂದೆ ಅಡಗಿರೋ ಬಹುದೊಡ್ಡ ಶಕ್ತಿ ಅಂದ್ರೆ ಅದು ರಾಧಿಕಾ ಪಂಡಿತ್. ಯೆಸ್.. ಯಶ್ ಯಶಸ್ಸಿನ ಹಿಂದಿರೋ ಸ್ಯಾಂಡಲ್ವುಡ್ ಸಿಂಡ್ರೆಲಾ ರಾಧಿಕಾ, ತಾಯಿ ಪುಷ್ಪ ಹಾಗೂ ಟಾಕ್ಸಿಕ್ ಚಿತ್ರದ ಕ್ಯಾಪ್ಟನ್ ಆಫ್ ದಿ ಶಿಪ್ ಗೀತು ಮೋಹನ್ದಾಸ್ ಇದಕ್ಕಾಗಿ ಮಾಡಿದ ತ್ಯಾಗ, ಹಾಕಿದ ಶ್ರಮ ಎಂಥದ್ದು ಅನ್ನೋದನ್ನ ನೀವೇ ನೋಡಿ.
ಮೆಲ್ಲಿಸಾ ಅನ್ನೋ ಗ್ಲಾಮರ್ & ಡೆಡ್ಲಿ ಕಾಂಬೋ ರುಕ್ಮಿಣಿ
ರಾಯನ ಪರ್ಮನೆಂಟ್ ಅಂತೆ ಈ ಕನ್ನಡದ ರುಕ್ಕಮ್ಮ..!!
ಟಾಕ್ಸಿಕ್ ಲೇಡಿ ಗ್ಯಾಂಗ್ನಲ್ಲಿರೋ ಓನ್ಲಿ ಕನ್ನಡತಿ.. ಸದ್ಯ ಪ್ಯಾನ್ ಇಂಡಿಯಾ ಎಲ್ಲರ ಮನಸ್ಸು ಗೆಲ್ತಿರೋ ಮೋಸ್ಟ್ ಡಿಮ್ಯಾಂಡಿಂಗ್ ನಟಿಮಣಿ ಅಂದ್ರೆ ರುಕ್ಮಿಣಿ ವಸಂತ್. ಕಾಂತಾರ ಬಳಿಕ ಈಕೆಯ ನಸೀಬು ಬದಲಾಗಿದ್ದು, ಟಾಕ್ಸಿಕ್ನಲ್ಲಿ ಮೆಲ್ಲಿಸಾ ರೋಲ್ ಪ್ಲೇ ಮಾಡಿದ್ದಾರೆ. ಲುಕ್ಸ್ ಡೀಸೆಂಟ್ ಆಗಿದ್ರೂ, ರೋಲ್ ಮಾತ್ರ ಕೊಂಚ ವೈಲ್ಡ್ ಆಗಿಯೇ ಇದೆ. ರುಕ್ಕಮ್ಮನ ಮೆಲ್ಲಿಸಾ ಪಾತ್ರ ಸಖತ್ ಚಾಲೆಂಜಿಂಗ್ ಆಗಿದ್ದು, ಯಶ್ ಹಾಗೂ ಸಹ ಕಲಾವಿದರ ಜೊತೆಗಿನ ಸೀಕ್ವೆನ್ಸ್ಗಳಲ್ಲಿ ಒಳ್ಳೆಯ ಮಾರ್ಕ್ಗಳನ್ನೇ ಸ್ಕೋರ್ ಮಾಡಿದ್ದಾರೆ.
ಐ ಆ್ಯಮ್ ಹಿಸ್ ಪರ್ಮನೆಂಟ್ ಅನ್ನೋ ಡೈಲಾಗ್ ಹಾಗೂ ಬೆತ್ತಲಾಗಿ ನಿಂತ ರಾಯನ ಮುಂದೆ ಮೆಲ್ಲಿಸಾ ಹೊಡೆಯೋ ಡೈಲಾಗ್ ಟ್ರೈಲರ್ನ ಹೈಲೈಟ್. ಇಲ್ಲಿ ಲುಕ್ ಜೊತೆ ನಟನೆ ಕೂಡ ಕಿಕ್ ಕೊಡ್ತಿದ್ದು, ಸಿನಿಮಾದಲ್ಲಿ ನಮ್ಮ ರುಕ್ಕುಗೆ ಎಷ್ಟು ಸ್ಕೋಪ್ ಇದೆ ಅನ್ನೋದನ್ನ ಕಾದು ನೋಡಬೇಕಿದೆ.
ಕುಟ್ಟಿ ಗೀತು ಮೋಹನ್ದಾಸ್ ಕ್ಯಾಪ್ಟನ್ ಆಫ್ ದಿ ಶಿಪ್
ಒಂದು ಕಾಲದ ನಟಿ ಈಗ ಪ್ಯಾನ್ ಇಂಡಿಯಾ ಡೈರೆಕ್ಟರ್
ಕೊಚ್ಚಿಯ ಅಪ್ಪಟ ಕೇರಳ ಕುಟ್ಟಿ ಗೀತು ಮೋಹನ್ದಾಸ್ ಒಂದು ಕಾಲದ ನಟಿಮಣಿ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ಬಾಲನಟಿಯಾಗಿಯೇ ಚಿತ್ರಪ್ರೇಮಿಗಳ ದಿಲ್ ದೋಚಿದ್ದ ಈಕೆ, ನಟನೆಗಾಗಿಯೇ ಎರಡೆರಡು ಸ್ಟೇಟ್ ಫಿಲ್ಮ್ ಅವಾರ್ಡ್ಗಳನ್ನ ಪಡೆದಿದ್ದಾರೆ. ಸುಮಾರು 30ರಿಂದ 35 ಸಿನಿಮಾಗಳಲ್ಲಿ ನಟಿಸಿರೋ ಗೀತು ಮೋಹನ್ದಾಸ್ ಆ ನಂತರ ನಿರ್ದೇಶನ ಹಾಗೂ ನಿರ್ಮಾಣಕ್ಕೆ ಮರಳುತ್ತಾರೆ. ತಮ್ಮ ನಿರ್ದೇಶನದ ಸಿನಿಮಾಗೂ ಎರಡೆರಡು ನ್ಯಾಷನಲ್ ಅವಾರ್ಡ್ಗಳನ್ನ ಪಡೆದಿರೋ ಗೀತು, ಸದ್ಯ ಟಾಕ್ಸಿಕ್ ಚಿತ್ರದ ಕ್ಯಾಪ್ಟನ್ ಆಫ್ ದಿ ಶಿಪ್.
ಈಕೆ ಸಣ್ಣ ವಯಸ್ಸಿನಲ್ಲೆ ಅಸಾಧಾರಣ ಪ್ರತಿಭೆಯಿಂದ ನಿರೀಕ್ಷೆಗೂ ಮೀರಿದ ಎಕ್ಸ್ಪೆರಿಮೆಂಟ್ಸ್ಗೆ ತಮ್ಮನ್ನ ತಾವು ಒಗ್ಗಿಸಿಕೊಂಡಿದ್ದಾರೆ. ಹಾಗಾಗಿಯೇ ತಾನೊಬ್ಬ ಹೆಣ್ಣಾಗಿದ್ದುಕೊಂಡು, ಇಡೀ ವಿಶ್ವವೇ ತಿರುಗಿ ನೋಡುವಂತಹ ಪ್ಯಾನ್ ಇಂಡಿಯಾ ಅಡಲ್ಟ್ ಸಿನಿಮಾನ ಟೀಕೆ, ಟಿಪ್ಪಣಿಗಳ ಹೊರತಾಗಿಯೂ ಧೈರ್ಯದಿಂದ ಕಟ್ಟಿಕೊಟ್ಟಿದ್ದಾರೆ. ಕನ್ನಡದಲ್ಲಿ ಬರೆದುಕೊಂಡು ಬಂದು ಟ್ರೈಲರ್ ಲಾಂಚ್ ದಿನ ಕನ್ನಡದಲ್ಲೇ ಮಾತನಾಡುವ ಮೂಲಕ ತಾವೂ ಭಾವುಕರಾಗಿ, ಕನ್ನಡಿಗರ ಹೃದಯ ಗೆದ್ದ ಗಟ್ಟಿಗಿತ್ತಿ ಗೀತು ಮೋಹನ್ದಾಸ್.
ಯಶ್ ಹಿಂದಿನ ಅಸಲಿ ಶಕ್ತಿಯೇ ರಾಧಿಕಾ ಪಂಡಿತ್
ರಾಕಿಂಗ್ ಸ್ಟಾರ್ ಪ್ರತಿ ಹೆಜ್ಜೆಯಲ್ಲೂ ಸಿಂಡ್ರೆಲಾ ಪಾತ್ರ
ಸ್ಯಾಂಡಲ್ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್. ಈಕೆ ನಮ್ಮ ಹೆಮ್ಮೆಯ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ಪತ್ನಿಯಷ್ಟೇ ಅಲ್ಲ. ಆ ಯಶಸ್ವೀ ಪಯಣದ ಹಿಂದಿನ ಅಸಲಿ ಶಕ್ತಿ. ಯಶ್ ಇಂದು ಬಹುದೊಡ್ಡ ವ್ಯಕ್ತಿ, ವ್ಯಕ್ತಿತ್ವವಾಗಿ ಹೊರಹೊಮ್ಮುವುದರ ಹಿಂದೆ ಇವ್ರ ಪಾತ್ರ ದೊಡ್ಡದಿದೆ. ಹಾಗಾಗಿಯೇ ನಟ ಯಶ್ ತಮ್ಮ ಪತ್ನಿ ರಾಧಿಕಾನ ತುಂಬಾ ಪ್ರೀತಿಸ್ತಾರೆ, ಗೌರವಿಸ್ತಾರೆ.. ಅದು ಟ್ರೈಲರ್ ಲಾಂಚ್ ಇವೆಂಟ್ನಲ್ಲೂ ಪ್ರೂವ್ ಆಯ್ತು.
ಯಶ್ ಕೈ ಹಿಡಿದ ಬಳಿಕ ರಾಧಿಕಾ ಪಂಡಿತ್.. ನಟನೆಯಿಂದ ದೂರ ಉಳಿದು, ಮಕ್ಕಳು, ಸಂಸಾರದ ಜವಾಬ್ದಾರಿ ಹೊತ್ತುಕೊಳ್ತಾರೆ. ಅಲ್ಲದೆ, ಯಶ್ ಪ್ರತಿ ಹೆಜ್ಜೆಯಲ್ಲೂ ಅವ್ರ ಜೊತೆ ನಿಂತು, ನಿಮ್ಮೊಂದಿಗೆ ನಾನಿದ್ದೇನೆ ಮುನ್ನುಗ್ಗಿ ಅನ್ನೋ ಮನೋಬಲ ತುಂಬುತ್ತಾರೆ. ಅದೇ ಕಾರಣದಿಂದ ಯಶ್ ಮುಟ್ಟಿದ್ದೆಲ್ಲಾ ಚಿನ್ನವಾಗ್ತಾ ಹೋಗುತ್ತೆ. ಚಿನ್ನದ ಹುಡುಗನಾಗಿ ಹೊರಹೊಮ್ಮಲು ಕಾರಣೀಬೂತವಾಗುತ್ತೆ.
ಮಕ್ಕಳ ಲಾಲನೆ, ಪಾಲನೆ ಜೊತೆಗೆ ಯಶ್ ಅವರ ಡಯೆಟ್ ಫುಡ್, ಅವ್ರ ಕಾಸ್ಟ್ಯೂಮ್ಸ್, ಸಿನಿಮಾದ ಆಗು ಹೋಗುಗಳ ಚರ್ಚೆಗಳು, ಬರ್ತ್ ಡೇಗಳು, ಹಬ್ಬ ಹರಿದಿನಗಳು, ನಮ್ಮ ಸಂಸ್ಕೃತಿಯ ಆಚಾರ, ವಿಚಾರ.. ಹೀಗೆ ಎಲ್ಲಾ ವಿಷಯಗಳಲ್ಲಿ ರಾಧಿಕಾ ಬೆಸ್ಟ್ ಅನಿಸಿಕೊಂಡಿದ್ದಾರೆ. ಹಾಗಾಗಿ ಅವ್ರ ತ್ಯಾಗ ಸಾಕಷ್ಟಿದೆ ಅನ್ನೋದನ್ನ ಖುದ್ದು ನಯನತಾರಾ ಅವರೇ ಟ್ರೈಲರ್ ಲಾಂಚ್ ಇವೆಂಟ್ನಲ್ಲಿ ರಾಧಿಕಾರನ್ನ ಕೊಂಡಾಡಿದ್ರು. ಒಟ್ಟಾರೆ ಯಶ್ ಪಾಲಿಗೆ ರಾಧಿಕಾ ಒಂಥರಾ ಅದೃಷ್ಟ ಲಕ್ಷ್ಮೀ.
ಮದರ್ ಇಂಡಿಯಾ ಪುಷ್ಪ ಗರಡಿಯಲ್ಲಿ ಬೆಳೆದ ಯಶ್
ತಾಯಿಯೇ ಮೊದಲ ಗುರು.. ಮನೆಯೇ ಪಾಠ ಶಾಲೆ..!
ಪುಷ್ಪ ಅರುಣ್ಕುಮಾರ್.. ಇಂದು ಇವರು ಕನ್ನಡ ಚಿತ್ರರಂಗದ ನಿರ್ಮಾಪಕಿ ಕಮ್ ಚಿತ್ರ ವಿತರಕಿ ಆಗಿರಬಹುದು. ಆದ್ರೆ ಯಶ್ ಅನ್ನೋ ಮುತ್ತೊಂದನ್ನ ಕರುನಾಡಿಗೆ ನೀಡಿದ ಗರಿಮೆ ಇವರಿಗಿದೆ. ಅಪ್ಪಟ ಅಪರಂಜಿಯಾಗಿರೋ ಯಶ್, ಕನ್ನಡದ ಕೀರ್ತಿ ಪತಾಕೆಯನ್ನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸುತ್ತಿದ್ದಾರೆ ಅಂದ್ರೆ ಅಂದು ತಾಯಿ ಪುಷ್ಪ ಪಟ್ಟ ಕಷ್ಟಗಳು ಕೂಡ ಅಡಗಿವೆ. ಮನೆಯೇ ಮೊದಲ ಪಾಠ ಶಾಲೆಯಾಗಿ, ತಾಯಿಯೇ ಮೊದಲ ಗುರುವಾಗಿ, ಯಶ್ರನ್ನ ತಿದ್ದಿ ತೀಡಿದ್ದರು. ಆ ಬೇಸಿಕ್ ಫೌಂಡೇಷನ್ ಇಂದು ಯಶ್ಗೆ ರಾಕಿಂಗ್ ಸ್ಟಾರ್ ಅನ್ನೋ ಕೋಟೆ ಕಟ್ಟಲು ಸಹಕಾರಿಯಾಗಿದೆ.
ಸಾಮಾನ್ಯ ಬಸ್ ಡ್ರೈವರ್ ಆಗಿದ್ದ ಅರುಣ್ಕುಮಾರ್ ಪತ್ನಿಯಾಗಿ ಪುಷ್ಪ, ತಮ್ಮ ಮಗ ಯಶ್ ಹಾಗೂ ಮಗಳನ್ನ ಬೆಳೆಸಿರೋ ಪರಿ ವಿಶೇಷ. ಅಂದು ಅವರು ಒಳ್ಳೆಯ ಹಾದಿಯಲ್ಲಿ ಬೆಳೆಸಿದ ಪರಿಣಾಮ ಇಂದು ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಅಲ್ಲದೆ, ಗ್ಲೋಬಲ್ ಸ್ಟಾರ್ ಆಗಿ ರಾರಾಜಿಸ್ತಿದ್ದಾರೆ. ಸೋ.. ಪುಷ್ಪ ಇಲ್ಲ ಅಂದಿದ್ರೆ ಯಶ್ ಇರ್ತಾನೇ ಇರಲಿಲ್ಲ. ಹಾಗಾಗಿ ಯಶ್ ಪಾಲಿನ ಮಹಾಲಕ್ಷ್ಮೀ ಈ ಪುಷ್ಪಮ್ಮ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





