ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾ ಕರಿಯರ್ ಅತಂತ್ರದಲ್ಲಿದೆ. ಯೆಸ್.. ಪ್ಯಾನ್ ಇಂಡಿಯಾ ಹುಚ್ಚಿಗೆ ಬಿದ್ದು ಬಿಗ್ ಎಡವಟ್ ಮಾಡಿಕೊಳ್ತಿದ್ದಾರೆ ಬಹದ್ದೂರ್ ಗಂಡು. ಸದ್ಯ ಕ್ರಿಮಿನಲ್ ಸಿನಿಮಾ ನಿಂತು ಹೋಗಿದ್ದು, ದುನಿಯಾ ಸೂರಿ ಸಿನಿಮಾ ಸೆಟ್ಟೇರೋದೇ ಡೌಟು ಎನ್ನಲಾಗ್ತಿದೆ. ಅರೇ ಹೀಗ್ಯಾಕಾಯ್ತು..? ಗೋಲ್ಡ್ ಮೈನ್ಸ್ ಪ್ರೊಡಕ್ಷನ್ ಹಿಂದೆ ಹೆಜ್ಜೆ ಇಟ್ಟಿರೋದ್ಯಾಕೆ..? ಇಲ್ಲಿದೆ ಕಂಪ್ಲೀಟ್ ಇನ್ಸೈಡ್ ಸ್ಟೋರಿ.
- ಸಂಕಷ್ಟಕ್ಕೆ ಸಿಲುಕಿದ ಹ್ಯಾಟ್ರಿಕ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ
- ಕ್ರಿಮಿನಲ್ಗೆ ಬ್ರೇಕ್.. ಸೂರಿ ಸಿನಿಮಾ ಸೆಟ್ಟೇರೋದೇ ಡೌಟ್
- ಪ್ಯಾನ್ ಇಂಡಿಯಾ ಹುಚ್ಚು.. ಕರಿಯರ್ಗೇ ದೊಡ್ಡ ಪೆಟ್ಟು
- ಆರಂಭದಲ್ಲಿ ಹ್ಯಾಟ್ರಿಕ್ ಹಿಟ್.. ಈಗ ಹ್ಯಾಟ್ರಿಕ್ ಫ್ಲಾಪ್..!!
ಸಕ್ಸಸ್ ಇದ್ರೆ ಸಕಲವೂ ಚೆನ್ನಾಗಿರುತ್ತೆ. ಅದೇ ಟೈಂ ಕೊಂಚ ಎಡವಟ್ ಆದ್ರೂ ಸಂಕಷ್ಟ ಕಟ್ಟಿಟ್ಟ ಬುತ್ತಿ. ಅದು ಶ್ರೀಸಾಮಾನ್ಯನಿಗೇ ಆಗಿರಲಿ ಅಥ್ವಾ ದೊಡ್ಡ ಸ್ಟಾರ್ಗೇ ಆಗಿರಲಿ. ಸದ್ಯ ನಮ್ಮ ಸ್ಯಾಂಡಲ್ವುಡ್ನ ಹ್ಯಾಟ್ರಿಕ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬಹುದೊಡ್ಡ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಅದ್ರಿಂದ ಅವರ ಸಿನಿಮಾ ಕರಿಯರ್ಗೆ ಬಹುದೊಡ್ಡ ಹೊಡೆತ ಬೀಳುವ ಸಾಧ್ಯತೆಯಿದೆ.
ಅರೇ ಅಂಥದ್ದೇನಾಯ್ತು..? ಮೊನ್ನೆಯಷ್ಟೇ ಕೆಡಿ ಸಿನಿಮಾ ರಿಲೀಸ್ ಆಯ್ತು. ಸದ್ಯ ಕ್ರಿಮಿನಲ್ ಚಿತ್ರದ ಶೂಟಿಂಗ್ ಭರದಿಂದ ಸಾಗ್ತಿದೆ. ಅದಾದ ಬಳಿಕ ದುನಿಯಾ ಸೂರಿ ಕೂಡ ಆ್ಯಕ್ಷನ್ ಕಟ್ ಹೇಳೋಕೆ ಕಾತರದಿಂದ ಕಾಯ್ತಿದ್ದಾರೆ ಅಂತ ನೀವು ಅಂದುಕೊಳ್ಳಬಹುದು. ಆದ್ರೆ ಅಸಲಿ ಮ್ಯಾಟರ್ ಬೇರೇನೇ ಇದೆ. ಯಾಕಂದ್ರೆ ಕ್ರಿಮಿನಲ್ ಸಿನಿಮಾದ ಶೂಟಿಂಗ್ ನಿಂತು ಹೋಗಿದೆ. ಬಂಡವಾಳ ಹೂಡೋಕೆ ಸಿದ್ಧವಿದ್ದ ಗೋಲ್ಡ್ ಮೈನ್ ಪ್ರೊಡಕ್ಷನ್ ಬ್ಯಾನರ್ನ ಮನೀಶ್ ಶಾ ಈಗ ಅದ್ರಿಂದ ಒಂದು ಹೆಜ್ಜೆ ಹಿಂದೆ ಇಟ್ಟಿದ್ದಾರೆ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ.
ಯೆಸ್.. ಧ್ರುವ ಸರ್ಜಾ-ರಚಿತಾ ರಾಮ್ ನಟನೆಯ ಕ್ರಿಮಿನಲ್ ಮೂವಿ ನಿಂತು ಹೋಗಿದೆ. ಜಸ್ಟ್ ಒಂದು ಶೆಡ್ಯೂಲ್ ಕಂಪ್ಲೀಟ್ ಮಾಡಿ, ಎರಡನೇ ಶೆಡ್ಯೂಲ್ 4 ದಿನವಷ್ಟೇ ಚಿತ್ರಿಸಿರೋ ಟೀಂ, ಶೂಟಿಂಗ್ಗೆ ಹಣ ಇಲ್ಲದೆ ಜೈ ಕಟ್ಟಿ ಕೂರುವಂತಾಗಿದೆ. ಅದಕ್ಕೆ ಕಾರಣ ಧ್ರುವ ಸರ್ಜಾ ಅವ್ರ ಹ್ಯಾಟ್ರಿಕ್ ಫ್ಲಾಪ್ಸ್. ಹೌದು.. ಕರಿಯರ್ ಆರಂಭದಲ್ಲಿ ಅದ್ಧೂರಿ, ಬಹದ್ದೂರ್, ಭರ್ಜರಿ ಸಿನಿಮಾಗಳ ಬ್ಯಾಕ್ ಟು ಬ್ಯಾಕ್ ಹಿಟ್ಸ್ನಿಂದ ಹ್ಯಾಟ್ರಿಕ್ ಆ್ಯಕ್ಷನ್ ಪ್ರಿನ್ಸ್ ಪಟ್ಟಕ್ಕೇರಿದ್ರು ಧ್ರುವ.
ಆದ್ರೀಗ ಪೊಗರು, ಮಾರ್ಟಿನ್ ಹಾಗೂ ಕೆಡಿ ಸಿನಿಮಾಗಳ ಸೋಲು ಧ್ರುವ ಸರ್ಜಾಗೆ ಹ್ಯಾಟ್ರಿಕ್ ಫ್ಲಾಪ್ ಗರಿಮೆ ತಂದುಕೊಟ್ಟಿದೆ. ಕೆಡಿ ಸಿನಿಮಾದ ಸ್ಯಾಟಲೈಟ್ ಹಾಗೂ ಓಟಿಟಿ ರೈಟ್ಸ್ನ ಝೀ ಕಂಪನಿ ಬರೀ 5 ಕೋಟಿ 40 ಲಕ್ಷಕ್ಕೆ ಖರೀದಿಸಿದೆ. ಹೀಗಿರುವಾಗ ತನ್ನ ಸಿನಿಮಾಗೆ 50 ಕೋಟಿ ಬಜೆಟ್ ಹಾಕಿ, ನಾನು ಹೇಗೆ ಕೈ ಸುಟ್ಟಿಕೊಳ್ಳಲಿ ಅನ್ನೋ ಮನಸ್ಥಿತಿಯಲ್ಲಿದ್ದಾರೆ ಕ್ರಿಮಿನಲ್ ಪ್ರೊಡ್ಯೂಸರ್. ಅದೇ ಕಾರಣದಿಂದ ಪ್ರೊಡಕ್ಷನ್ ಜವಾಬ್ದಾರಿ ಕೂಡ ತಾನೇ ಹೊತ್ತಿದ್ದ ಧ್ರುವಗೆ ಪ್ರೊಡ್ಯೂಸರ್, ಪ್ರೊಡಕ್ಷನ್ ಕಾಸ್ಟ್ ಕಮ್ಮಿ ಮಾಡಲು ಮನವಿ ಮಾಡಿದ್ದಾರೆ. ಅದು ಆಗದೇ ಇರೋ ಕಾರಣ ಸದ್ಯ ಸಿನಿಮಾ ನಿಂತಿದೆ ಅನ್ನೋದು ಟಾಕ್.
ಅಂದಹಾಗೆ ಕೆಡಿ ಸಿನಿಮಾಗೆ 16 ಕೋಟಿ ಸಂಭಾವನೆ ಪಡೆದಿದ್ದ ಧ್ರುವ ಸರ್ಜಾ, ಈ ಬಾರಿ ಕ್ರಿಮಿನಲ್ ಚಿತ್ರಕ್ಕೆ ಕೇವಲ ನಾಲ್ಕೂವರೆ ಕೋಟಿ ಅಡ್ವಾನ್ಸ್ ಆಗಿ ಪಡೆದಿದ್ದಾರೆ. ಉಳಿದಿರೋದನ್ನ ರಿಲೀಸ್ ಬಳಿಕ 25% ಪ್ರಾಫಿಟ್ ಶೇರ್ ಕೇಳಿದ್ದರಂತೆ. ಮೊದಲ ಶೆಡ್ಯೂಲ್ಗೇನೇ 15 ಕೋಟಿ ತನಕ ಖರ್ಚು ಮಾಡಿರೋ ಧ್ರುವ, ಇದೀಗ ಸೆಕೆಂಡ್ ಶೆಡ್ಯೂಲ್ಗೆ ಹಣ ಬಿಡುಗಡೆ ಆಗದೆ ಸುಮ್ಮನೆ ಕೂರುವಂತಾಗಿದೆ. ಇದೆಕ್ಕೆಲ್ಲಾ ಮಾರ್ಟಿನ್, ಕೆಡಿ ಸಿನಿಮಾಗಳ ಬ್ಯುಸಿನೆಸ್ ನೇರ ಕಾರಣ ಅನ್ನೋದು ಓಪನ್ ಸೀಕ್ರೆಟ್.
ಕ್ರಿಮಿನಲ್ ಸಿನಿಮಾದೇ ಈ ಕಥೆ ಆದ್ರೆ, ಇನ್ನೂ ಕ್ರಿಮಿನಲ್ ಬೆನ್ನಲ್ಲಿ ಸೆಟ್ಟೇರೋಕೆ ಸಜ್ಜಾಗಿದ್ದ ದುನಿಯಾ ಸೂರಿ- ಧ್ರುವ ಕಾಂಬೋ ಸಿನಿಮಾದ ಕಥೆ ಏನಾಗಬೇಡ ನೀವೇ ಊಹಿಸಿ. ಕ್ರಿಮಿನಲ್ ಪ್ರೊಡ್ಯೂಸರ್ ಮನೀಶ್ ಶಾ ಅವ್ರೇ ಸೂರಿ ಸಿನಿಮಾನೂ ಪ್ರೊಡ್ಯೂಸ್ ಮಾಡೋದಾಗಿ ಹೇಳಿದ್ರು. ಆದ್ರೀಗ ಆ ಸಿನಿಮಾ ಸೆಟ್ಟೇರೋದೇ ಡೌಟು ಎನ್ನಲಾಗ್ತಿದೆ.
- ಹಣಕ್ಕಾಗಿ ಹೈದ್ರಾಬಾದ್ನಲ್ಲಿ ಬೀಡು ಬಿಟ್ಟ ಧ್ರುವ ಸರ್ಜಾ..?
- ಫಸ್ಟ್ ಸರ್ಕಲ್ ಚೆನ್ನಾಗಿರಲಿ.. ಗಟ್ಟಿ ಕಥೆಗಳ ಆಯ್ಕೆ ಆಗಲಿ..!
ತಮ್ಮ ಸೋದರ ಮಾವ ಅರ್ಜುನ್ ಸರ್ಜಾ ಮೂಲಕ ಹೈದ್ರಾಬಾದ್ ನಲ್ಲಿ ಸಾಲು ಸಾಲು ಮೀಟಿಂಗ್ಸ್ ನಡೆಸುತ್ತಿರೋ ಧ್ರುವ, ಕ್ರಿಮಿನಲ್ ಸಿನಿಮಾನ ಶತಾಯ ಗತಾಯ ಕಂಪ್ಲೀಟ್ ಮಾಡೋ ಧಾವಂತದಲ್ಲಿದ್ದಾರೆ. ಹಾಗಾಗಿ ತೆಲುಗು ಮೂಲದ ನಿರ್ಮಾಣ ಸಂಸ್ಥೆಗಳ ಮೂಲಕ ಹಣ ಹೊಂದಿಸಿಕೊಂಡು ಸಿನಿಮಾ ಮಾಡಿ ಮುಗಿಸೋದ್ರಲ್ಲಿ ಬ್ಯುಸಿ ಆಗಿದ್ದಾರೆ ಎನ್ನಲಾಗ್ತಿದೆ. ಅದೇನೇ ಆಗಲಿ, ಪ್ಯಾನ್ ಇಂಡಿಯಾ ಹುಚ್ಚಿಗೆ ಬಿದ್ದು ಸಿನಿಮಾ ಕರಿಯರ್ನ ಹಾಳು ಮಾಡಿಕೊಳ್ಳದಿದ್ರೆ ಸಾಕು ಧ್ರುವ. ಮೇಕಿಂಗ್ ಎಲ್ರೂ ಮಾಡ್ತಾರೆ. ಆದ್ರೆ ಗಟ್ಟಿ ಕಥೆಗಳ ಆಯ್ಕೆ ಅವರದಾಗಲಿ. ಫಸ್ಟ್ ಸರ್ಕಲ್ ಒಳ್ಳೆಯ ವ್ಯಕ್ತಿಗಳಿಂದ ಕೂಡಿರಲಿ. ಈ ಸಂಕಷ್ಟದಿಂದ ಧ್ರುವ ಸರ್ಜಾ ಬೇಗ ಪಾರಾಗಲಿ ಅನ್ನೋದಷ್ಟೇ ನಮ್ಮ ಆಶಯ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





