ಥಿಯೇಟರ್ನಲ್ಲಿ ಡಿಬಾಸ್ ಡೆವಿಲ್ ಅಬ್ಬರ, ಆರ್ಭಟ ಸಖತ್ ಜೋರಿದೆ. ತೆರೆಮೇಲೆ ಡಬಲ್ ರೋಲ್ನಲ್ಲಿ ಪ್ರೇಕ್ಷಕರಿಗೆ ದಾಸ ಡಬಲ್ ಡೋಸ್ ಕೊಡ್ತಿದ್ದಾರೆ. ಈ ಮಧ್ಯೆ ಜೈಲಿಂದ ಬರ್ತಿದ್ದಂತೆ ಪಾಲಿಟಿಕ್ಸ್ಗೆ ಎಂಟ್ರಿ ಕೊಡ್ತಾರೆ ದಚ್ಚು ಎನ್ನಲಾಗ್ತಿದೆ. ಇಷ್ಟಕ್ಕೂ ದರ್ಶನ್ ರಾಜಕೀಯಕ್ಕೆ ಬರ್ತಾರಾ..? ಫಸ್ಟ್ ಡೇ ಡೆವಿಲ್ ದೋಚಿದ್ದೆಷ್ಟು ಕೋಟಿ..? ಗಜಪಡೆಯೇ ಇಲ್ಲದೆ ಸೆಲೆಬ್ರಿಟಿ ಶೋ ನಡೆದಿದ್ಯಾಕೆ ಅನ್ನೋದ್ರ ಕಂಪ್ಲೀಟ್ ಕಹಾನಿ ಇಲ್ಲಿದೆ.
- ಬಾಕ್ಸಾಫೀಸ್ ಸುಲ್ತಾನ ಹವಾ.. ಫಸ್ಟ್ ಡೇ 16ಕೋಟಿ ಗಳಿಕೆ ?
- ಡೆವಿಲ್ ಸೆಲೆಬ್ರಿಟಿ ಶೋ.. ‘ಗಜಪಡೆ’ಯೇ ಗೈರು ಹಾಜರು..!!
- ಹತ್ತಾರು ಥಿಯೇಟರ್ಗಳಲ್ಲಿ ಫಸ್ಟ್ ಡೇ ಶೇರ್ 20 ಲಕ್ಷ ರೂ
- ಕಮರ್ಷಿಯಲಿ ಹಿಟ್.. ಫ್ಯಾನ್ಸ್ಗೆ ಡೆವಿಲ್ ಹಬ್ಬವೋ ಹಬ್ಬ..!
ದಿ ಡೆವಿಲ್.. ಒಂದಷ್ಟು ದಿನಗಳ ಕಾಯುವಿಕೆ ನಂತರ ಕೊನೆಗೂ ನಿನ್ನೆ ಅದ್ಧೂರಿಯಾಗಿ ಸಿನಿಮಾ ತೆರೆಗಪ್ಪಳಿಸಿದೆ. ಮುಂಜಾನೆ 6.30ರಿಂದಲೇ ಶೋಗಳು ಕಮೆನ್ಸ್ ಆಗಿದ್ದು, ಎಲ್ಲೆಡೆ ಹೌಸ್ಫುಲ್ ಪ್ರದರ್ಶನ ಕಂಡಿವೆ. ಈ ಮೂಲಕ ಬಾಕ್ಸ್ ಆಫೀಸ್ ಸುಲ್ತಾನ ಈಸ್ ಬ್ಯಾಕ್ ಎನ್ನುವಂತಾಗಿದೆ. ಅಂದ್ರೆ ಡೆವಿಲ್ ಫಸ್ಟ್ ಡೇ ಟೋಟಲ್ ಕಲೆಕ್ಷನ್ ಬರೋಬ್ಬರಿ 16 ಕೋಟಿ ರೂಪಾಯಿಗಳ ಗಡಿ ದಾಟಿದೆ ಎನ್ನಲಾಗ್ತಿದೆ.
ದರ್ಶನ್ ಎಲ್ಲಿದ್ರೆ ಏನಂತೆ.. ಅವರ ಸಿನಿಮಾಗಿರೋ ತಾಕತ್ತು ಅಂಥದ್ದು. ಜೈಲಲ್ಲೇ ಇರಬಹುದು. ಆದ್ರೆ ಆ ನೇಮ್ಗಿರೋ ಶಕ್ತಿಯಿಂದ ಸಿನಿಮಾ ಇಂದು ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿ, ಆರ್ಭಟಿಸುತ್ತಿದೆ. ಕೋಟ್ಯಂತರ ರೂಪಾಯಿ ಹಣ ಹೂಡಿಕೆ ಮಾಡಿದ್ದ ಡೈರೆಕ್ಟರ್ ಪ್ರಕಾಶ್ ವೀರ್ ಕೂಡ ಇದ್ರಿಂದ ನಿರಾಳಗೊಂಡಿದ್ದಾರೆ. ಸುಮಾರು 500ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಡೆವಿಲ್ ಆಟ ಶುರುವಾಗಿತ್ತು. ಆ ಪೈಕಿ ಹತ್ತಾರು ಥಿಯೇಟರ್ಗಳಲ್ಲಿ ಫಸ್ಟ್ ಡೇ ಶೇರ್ 20 ಲಕ್ಷ ರೂಪಾಯಿ ದಾಟಿರೋದು ಖುಷಿಯ ವಿಚಾರ.
ಸಿನಿಮಾ ಕಮರ್ಷಿಯಲಿ ವರ್ಕೌಟ್ ಆಗ್ತಿದ್ದು, ಫ್ಯಾನ್ಸ್ ಮತ್ತೆ ಮತ್ತೆ ಡೆವಿಲ್ನ ಕಣ್ತುಂಬಿಕೊಳ್ತಿದ್ದಾರೆ. ಇನ್ನು ಪಿವಿಆರ್-ಐನಾಕ್ಸ್ ಹಾಗೂ ಡಿಸ್ಟ್ರಿಬ್ಯೂಟರ್ ಮಧ್ಯೆ ಇದ್ದಂತಹ ಪರ್ಸೆಂಟೇಜ್ ವ್ಯವಹಾರ ಕೊನೆ ಗಳಿಗೆಯಲ್ಲಿ ಓಕೆ ಆಗಿದ್ದು, ಮಲ್ಟಿಪ್ಲೆಕ್ಸ್ಗಳಲ್ಲಿ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಕೊಂಚ ಎಡವಟ್ ಆಗಿತ್ತು. ಅಲ್ಲಿಗೂ ಒಂದು ಟಿಕೆಟ್ 500 ರೂಗಳಿಂದ ಸಾವಿರ ರೂಪಾಯಿವರೆಗೆ ದರದ ರೀತಿಯಲ್ಲಿ ದೊಡ್ಡ ಮಟ್ಟದಲ್ಲೇ ಕಮಾಯಿ ಮಾಡಿದೆ.
ಇನ್ನು ಡೆವಿಲ್ ರಿಲೀಸ್ ದಿನವೇ ಚಿತ್ರತಂಡ ಸೆಲೆಬ್ರಿಟಿ ಶೋ ನಡೆಸಿದ್ದು ವಿಶೇಷವಾಗಿತ್ತು. ಬೇಸರದ ವಿಷಯ ಅಂದ್ರೆ ಅಲ್ಲಿ ಗಜಪಡೆಯಲ್ಲಿ ಗುರ್ತಿಸಿಕೊಂಡಿದ್ದ ಸ್ಟಾರ್ಗಳು ಯಾರೂ ಸಿನಿಮಾ ನೋಡೋಕೆ ಬಂದಿರಲಿಲ್ಲ. ವಿನೋದ್ ಪ್ರಭಾಕರ್, ಚಿಕ್ಕಣ್ಣ, ಅಭಿಷೇಕ್ ಅಂಬರೀಶ್, ಪ್ರಜ್ವಲ್ ದೇವರಾಜ್, ಅಯೋಗ್ಯ ಫೇಮ್ ಮಹೇಶ್, ಸೂರಜ್, ಯಶಸ್ ಸೂರ್ಯ, ಧರ್ಮ ಕೀರ್ತಿ ರಾಜ್, ತರುಣ್ ಸುಧೀರ್.. ಸೇರಿದಂತೆ ದರ್ಶನ್ ಆಪ್ತವಲಯದವರು ಯಾರೂ ಇಲ್ಲಿ ಕಾಣಲಿಲ್ಲ.
ಈ ಪೈಕಿ ಧನ್ವೀರ್ ಬೆಳಗ್ಗೆ ವಿಜಯಲಕ್ಷ್ಮೀ ಹಾಗೂ ರಚನಾ ರೈ ಜೊತೆಗೇ ಸಿನಿಮಾ ನೋಡಿದ್ರು. ಇನ್ನು ಉತ್ತರ ಕರ್ನಾಟಕ ಭಾಗದಲ್ಲಿ ಕಲ್ಟ್ ಪ್ರಮೋಷನ್ಸ್ ನಡೆಸ್ತಿರೋ ಝೈದ್ ಖಾನ್ ಅಲ್ಲೇ ಸಿನಿಮಾ ನೋಡಿದ್ರು.
- ಪಾಲಿಟಿಕ್ಸ್ಗೆ ಡಿಬಾಸ್..? ದಿನಕರ್ ತೂಗುದೀಪ್ ಟಾಕ್
- ಒಡೆಯ ಚಿತ್ರದಲ್ಲಿ ಹಿಂಟ್.. ಡೆವಿಲ್ನಲ್ಲಿ ಡಬಲ್ ಹಿಂಟ್!
- ಕರ್ನಾಟಕದ CM ಆಗ್ತಾರಾ ಚಾಲೆಂಜಿಂಗ್ ಸ್ಟಾರ್ ದರ್ಶನ್?
- ಬೇರೆಯವರಿಗೆ ಪ್ರಚಾರ ಮಾಡ್ತಿದ್ದ ದಾಸ ಡೈರೆಕ್ಟ್ ಅಖಾಡಕ್ಕೆ..?
ಈ ಹಿಂದೆ ಒಡೆಯ ಚಿತ್ರದಲ್ಲಿ ದರ್ಶನ್ ಪಾಲಿಟಿಕ್ಸ್ಗೆ ಬರೋದ್ರ ಹಿಂಟ್ ನೀಡಿದ್ರು. ಅಧಿಕಾರವೇ ಆಸೆ ಪಟ್ಟು ನನ್ನನ್ನು ಇಲ್ಲಿಗೆ ಕರೆಸಿಕೊಂಡಿದೆ ಅಂತ ದಾಸ ದರ್ಶನ್ ಡೈಲಾಗ್ ಹೊಡೆದಿದ್ರು. ಆಗಲೇ ತಾನು ಪಾಲಿಟಿಕ್ಸ್ಗೆ ಬರೋ ಮುನ್ಸೂಚನೆ ನೀಡಿದ್ರು ಚಾಲೆಂಜಿಂಗ್ ಸ್ಟಾರ್ ದರ್ಶನ್. ಆದ್ರೀಗ ಡೆವಿಲ್ ಚಿತ್ರದ ಮೂಲಕ ಆ ಅನುಮಾನ ಮತ್ತಷ್ಟು ಹೆಚ್ಚಾಗುವಂತೆ ಮಾಡಿದ್ದಾರೆ.
ಯೆಸ್.. ಡೆವಿಲ್ ಚಿತ್ರದಲ್ಲಿ ದರ್ಶನ್ ಎರಡೆರಡು ಪಾತ್ರಗಳನ್ನ ನಿಭಾಯಿಸಿದ್ದು, ಆ ಪೈಕಿ ಸಿಎಂ ಧನುಷ್ ರಾಜಶೇಖರ್ ಕೂಡ ಒಂದು. ಇಲ್ಲಿ ದರ್ಶನ್ ಪಾತ್ರ ಒಳ್ಳೆಯದು ಹಾಗೂ ಕೆಟ್ಟದ್ದು ಎರಡನ್ನೂ ತೋರಿಸಿದೆ. ಹಾಗಾಗಿ ಜೈಲಿಂದ ಹೊರಗೆ ಬಂದ ಬಳಿಕ ದಚ್ಚು ನೇರವಾಗಿ ಪಾಲಿಟಿಕ್ಸ್ಗೆ ಇಳೀತಾರಾ ಅನ್ನೋ ಕ್ಯೂರಿಯಾಸಿಟಿ ಹೆಚ್ಚಿದೆ. ಈ ಬಗ್ಗೆ ದರ್ಶನ್ ಸಹೋದರ ದಿನಕರ್ ಕೂಡ ರಿಯಾಕ್ಟ್ ಮಾಡಿದ್ದಾರೆ.
ಇಲ್ಲಿಯವರೆಗೆ ದರ್ಶನ್ ಯಾಱರಿಗೋ ಹೋಗಿ ಎಲೆಕ್ಷನ್ ಕ್ಯಾಂಪೇನ್ ಮಾಡಿದ್ದಾರೆ. ಈಗ ಅವರು ಮನಸ್ಸು ಮಾಡಿದ್ರೆ ಅವರಿಗಾಗಿ ಫ್ಯಾನ್ಸ್ ನಿಲ್ತಾರೆ. ಹಾಗಾಗಿ ಮುಂದೆ ರೀಲ್ ಪಾಲಿಟಿಕ್ಸ್ ಅಲ್ಲದೆ, ರಿಯಲ್ ಪಾಲಿಟಿಕ್ಸ್ಗೂ ದರ್ಶನ್ ದರ್ಶನ ಕೊಡ್ತಾರಾ ಅನ್ನೋದನ್ನ ನಿರೀಕ್ಷಿಸಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





