ಅವಕಾಶಗಳ ಕೊರತೆಯಿಂದ ನಟಿಮಣಿಯರು ಬಣ್ಣದಲೋಕದಿಂದ ದೂರವಾಗೋದು ಸರ್ವೇ ಸಾಮಾನ್ಯ. ಆದ್ರೆ ಟಾಲಿವುಡ್ ಅಂಗಳದಲ್ಲಿ ಉತ್ತುಂಗದಲ್ಲಿದ್ದ ನಮ್ಮ ಕನ್ನಡತಿ ನಭಾ ನಟೇಶ್, ಕಳೆದ ನಾಲ್ಕು ವರ್ಷಗಳಿಂದ ನಾಪತ್ತೆ ಆಗಿಬಿಟ್ಟಿದ್ರು. ಇದೀಗ ನಾಗಬಂಧಂ ಚಿತ್ರದ ಮೂಲಕ ಭರ್ಜರಿ ಕಂಬ್ಯಾಕ್ ಮಾಡ್ತಿದ್ದಾರೆ ಚೆಂದುಳ್ಳಿ ಚೆಲುವೆ ನಭಾ. ಇಷ್ಟಕ್ಕೂ 4 ವರ್ಷದ ಆ ಅಜ್ಞಾತವಾಸ ಏತಕ್ಕಾಗಿ..? ಆಕೆಗೆ ಏನಾಗಿತ್ತು..? ಆ ಸಂಕಷ್ಟದಿಂದ ಆಕೆ ಹೊರಬಂದಿದ್ದಾದ್ರೂ ಹೇಗೆ ಅಂತೀರಾ..?
ತವರಿಗೆ ತಿರುಗಿ ಬಂದ ಕನ್ನಡತಿ.. ನಭಾ ನಟೇಶ್ ಕಂಬ್ಯಾಕ್!
4 ವರ್ಷಗಳಿಂದ ಅಜ್ಞಾತವಾಸ.. ಎಲ್ಲಿದ್ರು? ಏನ್ ಮಾಡ್ತಿದ್ರು?
ಆ್ಯಕ್ಸಿಡೆಂಟ್ನಿಂದ ಭುಜ ಮೂಳೆ ಮುರಿತ.. ಬದುಕಿದ್ದೇ ಪವಾಡ
‘ನಾಗಬಂಧಂ’ ವೆರಿ ಪ್ರಾಮಿಸಿಂಗ್.. ಎಲ್ಲೆಡೆ ಸಖತ್ ಸೆನ್ಸೇಷನ್
ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅಭಿನಯದ ವಜ್ರಕಾಯ ಚಿತ್ರದ ಪಟಾಕ ಪಾರ್ವತಿಯಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ನಭಾ ನಟೇಶ್, ಮೊದಲ ಸಿನಿಮಾದಲ್ಲೇ ಭರ್ಜರಿ ಬ್ರೇಕ್ ಪಡೆದುಕೊಂಡರು. ಆ ನಂತರ ಟಾಲಿವುಡ್ ಅಂಗಳಕ್ಕೆ ಜಿಗಿದ ಈ ಕರಾವಳಿ ಬೆಡಗಿ, ಉಸ್ತಾದ್ ರಾಮ್ ಪೋತಿನೇನಿ ಜೊತೆ ನಟಿಸಿದ ‘ಇಸ್ಮಾರ್ಟ್ ಶಂಕರ್’ ಬ್ಲಾಕ್ಬಸ್ಟರ್ ಯಶಸ್ಸಿನ ಮೂಲಕ ಸೌತ್ ಇಂಡಸ್ಟ್ರಿಯ ಟಾಪ್ ಕ್ರಶ್ ಆಗಿ ಮಿಂಚಿದರು. ಕೆರಿಯರ್ ಪೀಕ್ನಲ್ಲಿದ್ದಾಗಲೇ ಎದುರಾದ ಆ ಒಂದು ಭೀಕರ ರೋಡ್ ಆ್ಯಕ್ಸಿಡೆಂಟ್, ಇವರ ಸಿನಿ ಪಯಣಕ್ಕೆ ಬರೊಬ್ಬರಿ 4 ವರ್ಷಗಳ ಸುದೀರ್ಘ ಬ್ರೇಕ್ ಬೀಳುವಂತೆ ಮಾಡಿತು. ಅಪಘಾತದಲ್ಲಿ ಭುಜದ ಮೂಳೆ ಮುರಿದು, ಸರಣಿ ಸರ್ಜರಿಗಳ ನೋವಿನಿಂದಾಗಿ ಚಿತ್ರರಂಗದಿಂದ ಸಂಪೂರ್ಣ ದೂರವುಳಿದಿದ್ದ ಈ ಚೆಂದುಳ್ಳಿ ಚೆಲುವೆ, ಈಗ ಇವೆಲ್ಲವನ್ನೂ ಮೆಟ್ಟಿ ನಿಂತು ಮೋಸ್ಟ್ ಅವೈಟೆಡ್ ಸೋಶಿಯೋ-ಮೈಥೋಲಾಜಿಕಲ್ ಆಕ್ಷನ್ ಅಡ್ವೆಂಚರ್ ‘ನಾಗಬಂಧಂ’ ಚಿತ್ರದ ಮೂಲಕ ರಗಡ್ ಆಗಿಯೇ ಕಂಬ್ಯಾಕ್ ಮಾಡುತ್ತಿದ್ದಾರೆ.
ಬಹು ನಿರೀಕ್ಷಿತ ನಾಗಬಂಧಂ: ದಿ ಸೀಕ್ರೆಟ್ ಟ್ರೆಷರ್ ಸಿನಿಮಾದ ಪ್ರಮೋಷನ್ ಜಬರ್ದಸ್ತ್ ಆಗಿ ಶುರುವಾಗಿದ್ದು, ಇದರ ಭಾಗವಾಗಿ ಚಿತ್ರತಂಡ ಜೂನ್ 24 ರಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಸುದ್ಧಿಗೋಷ್ಟಿಯಲ್ಲಿ ಚಿತ್ರದ ನಾಯಕ ವಿರಾಟ್ ಕರ್ಣ, ನಟಿ ನಭಾ ಮತ್ತು, ‘ಕೆಜಿಎಫ್’ ಖ್ಯಾತಿಯ ಗರುಡ ರಾಮ್ ಜೊತೆಯಾಗಿ ಮಾಧ್ಯಮಗಳ ಮುಂದೆ ಮಿಂಚಿದ್ದಾರೆ. ಇಡೀ ಟೀಮ್ ಸಿನಿಮಾ ಮೇಕಿಂಗ್, ಅದ್ದೂರಿ ಬುಡಕಟ್ಟು ಯುದ್ಧಗಳು ಮತ್ತು ಹೈ-ಲೆವೆಲ್ ಅಂಡರ್ ವಾಟರ್ ಆಕ್ಷನ್ ಸೀಕ್ವೆನ್ಸ್ಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದು, ಗಾಂಧಿನಗರದ ಸಿನಿಪ್ರೇಮಿಗಳಲ್ಲಿ ಕುತೂಹಲದ ಪೀಕ್ ತಲುಪಿಸಿದೆ. ಈ ಅದ್ಭುತ ಫ್ಯಾಂಟಸಿ ಜಗತ್ತನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾಯುತ್ತಿದ್ದು, ಚಿತ್ರವನ್ನು ಕನ್ನಡ, ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಸೇರಿದಂತೆ ಒಟ್ಟು 5 ಪ್ರಮುಖ ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅಭಿನಯದ ಸೂಪರ್ ಹಿಟ್ ವಜ್ರಕಾಯ ಚಿತ್ರ ತೆರೆಕಂಡು ಬರೋಬ್ಬರಿ 11 ವರ್ಷಗಳೇ ಕಳೆದಿವೆ. ಹೆಚ್ಚು ಕಡಿಮೆ ಕಳೆದ 10 ವರ್ಷಗಳಿಂದ ನಭಾ ಕನ್ನಡ ಮೀಡಿಯಾ ಮುಂದೆ ಕಾಣಿಸಿಕೊಂಡೇ ಇರಲಿಲ್ಲ. ಇದೀಗ ‘ನಾಗಬಂಧಂ’ ಪ್ರೆಸ್ಮೀಟ್ನಲ್ಲಿ ಪಾಲ್ಗೊಳ್ಳುವ ಮೂಲಕ, ಬರೊಬ್ಬರಿ ಒಂದು ದಶಕದ ಸುದೀರ್ಘ ಅವಧಿಯ ನಂತರ ಮೊದಲ ಬಾರಿಗೆ ಕನ್ನಡ ಮಾಧ್ಯಮಗಳ ಎದುರು ಬಂದು ನಿಂತಿದ್ದಾರೆ ನಮ್ಮ ಹೆಮ್ಮೆಯ ಕನ್ನಡತಿ. ತಮ್ಮ ತಾಯ್ನಾಡಿನ ಮಾಧ್ಯಮಗಳನ್ನು ಕಂಡ ನಭಾ ಮುಖದಲ್ಲಿ ಸಂತೋಷ ಎದ್ದು ಕಾಣುತ್ತಿತ್ತು.
ಆ ಭೀಕರ ಅಪಘಾತದ ಪ್ರಭಾವ ಎಷ್ಟಿತ್ತೆಂದರೆ, ಸರ್ಜರಿಗಳ ನಂತರ ನಭಾ ನಟೇಶ್ ಅವರ ಮುಖದ ಲಕ್ಷಣಗಳೇ ಸ್ವಲ್ಪ ಮಟ್ಟಿಗೆ ಬದಲಾಗಿವೆ. ಆದರೆ, ಆ ಇಂಜುರಿ ಮತ್ತು ನೋವುಗಳ ನಡುವೆಯೂ ಅವರ ಮುಖದ ದೈವಿಕ ಕಳೆ ಮತ್ತು ಸೌಂದರ್ಯ ಮಾತ್ರ ಕಿಂಚಿತ್ತೂ ಕಮ್ಮಿಯಾಗಿಲ್ಲ. ಪ್ರೆಸ್ಮೀಟ್ಗೆ ಬಂದಿದ್ದ ನಭಾ ಅವರ ಗ್ಲಾಮರಸ್ ಹಾಗೂ ಕಾಂಫಿಡೆಂಟ್ ಲುಕ್ ಕಂಡ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
ವಿಷ್ಣು ದೇವಾಲಯದ ನಿಗೂಢ ನಿಧಿ ಮತ್ತು ಪ್ರಾಚೀನ ದಂತಕಥೆಗಳ ಸುತ್ತ ಸಾಗುವ ಈ ಹೈ-ಬಜೆಟ್ ಸೋಶಿಯೋ-ಮೈಥೋಲಾಜಿಕಲ್ ಆಕ್ಷನ್ ಅಡ್ವೆಂಚರ್ ಚಿತ್ರದಲ್ಲಿ ನಭಾ ನಟೇಶ್ ಅವರ ಪಾತ್ರ ಅತ್ಯಂತ ವಿಶಿಷ್ಟವಾಗಿ ಮೂಡಿಬಂದಿದೆ. ‘ಕೆಜಿಎಫ್’ ಖ್ಯಾತಿಯ ಗರುಡ ರಾಮ್ ಈ ಚಿತ್ರದಲ್ಲಿ ಪವರ್ಫುಲ್ ವಿಲನ್ ಪಾತ್ರದಲ್ಲಿ ಅಬ್ಬರಿಸಲಿದ್ದು, ಅಂತರರಾಷ್ಟ್ರೀಯ ಮಟ್ಟದ VFX ಮೇಕಿಂಗ್ ಸಿನಿಮಾ ಗ್ರಾಂಡಿಯರ್ ಅನ್ನು ಹೆಚ್ಚಿಸಿದೆ. ಇಡೀ ಚಿತ್ರರಂಗವೇ ಕಣ್ಣಿಟ್ಟಿರುವ, ನಮ್ಮ ಪಟಾಕ ಪಾರ್ವತಿ ನಭಾ ನಟೇಶ್ ಅವರ ಈ ಅಲ್ಟಿಮೇಟ್ ಕಂಬ್ಯಾಕ್ ಸಿನಿಮಾ ಜುಲೈ 3, 2026 ರಂದು ವಿಶ್ವದಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗಲು ಕೌಂಟ್ಡೌನ್ ಶುರು ಮಾಡಿದೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





