ಬಿಗ್ ಬಾಸ್ ಕನ್ನಡದ ಖ್ಯಾತಿ, ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ನಿರ್ದೇಶನ ಅಭಿನಯದ ‘ಜೈ’ ಸಿನಿಮಾದ ಟ್ರೇಲರ್ ಲಾಂಚ್ ಇಂದು ಬೆಂಗಳೂರಿನಲ್ಲಿ ಅದ್ಭುತ ಸಮಾರಂಭದೊಂದಿಗೆ ನಡೆಯಿತು. ತುಳುನಾಡದ ಸ್ಥಳೀಯ ರಾಜಕಾರಣ, ಸಂಸ್ಕೃತಿ, ಮನರಂಜನೆಯನ್ನು ಮಿಶ್ರಗೊಳಿಸಿದ ಈ ಚಿತ್ರ ನವೆಂಬರ್ 14 ರಂದು ತುಳು ಮತ್ತು ಕನ್ನಡದಲ್ಲಿ ದೇಶಾದ್ಯಂತ ರಿಲೀಸ್ ಆಗಲಿದ್ದು, ಟ್ರೇಲರ್ ಭರಪೂರ ಮನರಂಜನೆಯ ಸಿನಿಮಾ ಎಂಬುದನ್ನು ಸೂಚಿಸುತ್ತದೆ. ಆಂಕರ್ ಅನುಶ್ರೀ ಟ್ರೇಲರ್ ಬಿಡುಗಡೆ ಮಾಡಿದರೆ, ಬಾಲಿವುಡ್ ಸ್ಟಾರ್ ಸುನೀಲ್ ಶೆಟ್ಟಿ, ಉಪೇಂದ್ರ ಶೆಟ್ಟಿ, ಮಧು ರಾವ್, ರಾಜ್ ದೀಪಕ್ ಶೆಟ್ಟಿ, ಉದ್ಯಮಿ ಪ್ರಕಾಶ್ ಕುಮ್ಕಳ ಸೇರಿದಂತೆ ಹಲವು ಗಣ್ಯರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಬಗ್ಗೆ ಸುನೀಲ್ ಶೆಟ್ಟಿ ಮಾತನಾಡಿ, ನಾನು ಕರ್ನಾಟಕದವನು. ಬೆಂಗಳೂರಿಗೆ ಸಾಕಷ್ಟು ಬಾರಿ ಬರುತ್ತೇನೆ. ನನ್ನ ಸಹೋದರಿ, ಸಂಬಂಧಿಕರಿಗಾಗಿ. ರಾಜ್ಕುಮಾರ್, ಪುನೀತ್ ರಾಜ್ಕುಮಾರ್, ಕಿಚ್ಚ ಸುದೀಪ್ ನನ್ನ ಆತ್ಮೀಯರು. ಮುಂಬೈ ನನ್ನ ಕರ್ಮಭೂಮಿ, ಆದರೆ ಜನ್ಮಭೂಮಿ ಮುಲ್ಕಿ. ‘ಜೈ’ ಸಿನಿಮಾ ನೋಡಲು ಎಲ್ಲರನ್ನೂ ಆಹ್ವಾನಿಸುತ್ತೇನೆ. ರೂಪೇಶ್ ಶೆಟ್ಟಿ ತುಳುನಾಡದ ಹೊಸ ಸೆನ್ಸೇಷನ್ ಅವರಂತಹ ಹೀರೋಗಳು ಬೇಕಾಗಿದ್ದಾರೆ ಎಂದು ಹೇಳಿದರು.
ಚಿತ್ರ ನಟ ರೂಪೇಶ್ ಶೆಟ್ಟಿ ಮಾತನಾಡಿ, ಇಂದು ತುಂಬಾ ಖುಷಿ. ತುಳುನಲ್ಲಿ ಸಣ್ಣದಾಗಿ ಆರಂಭಿಸಿದ ಸಿನಿಮಾ, ವಿದೇಶಗಳಲ್ಲಿ ರಿಲೀಸ್ ಆಗಿ ಒಳ್ಳೆಯ ರೆಸ್ಪಾನ್ಸ್ ಪಡೆದಿದೆ. ತುಳು ಸಿನಿಮಾ ಕನ್ನಡ-ತುಳು ಆಗಿ ಬದಲಾದ ಕಾರಣ ಸುನೀಲ್ ಅಣ್ಣ. ಅವರಿಗೆ ನಾವು ಯಾರು ಗೊತ್ತಿರಲಿಲ್ಲ. ಪ್ರೊಡ್ಯೂಸರ್ ಮೂಲಕ ಭೇಟಿ ಮಾಡಿ, ಮನವಿ ಮಾಡಿದೆವು. ಒಪ್ಪಿಕೊಂಡರು, ಪ್ರಚಾರಕ್ಕೂ ಬೆಂಬಲ ನೀಡಿದ್ದಾರೆ ಎಂದು ಸುನಿಲ್ ಶೇಟ್ಟಿ ಅವರಿನ್ನ ಶ್ಲಾಘಿಸಿದರು.
ಬಿಜೆಪಿ ನಾಯಕ ಅಶ್ವತ್ಥ್ ನಾರಾಯಣ್ ಹೂಗುಚ್ಛ ನೀಡಿ ಸ್ವಾಗತಿಸಿ, ಇಂದು ‘ಜೈ’ ಟ್ರೇಲರ್ ಲಾಂಚ್. ದೇಶಾದ್ಯಂತ ರಿಲೀಸ್ ಆಗ್ತಿದೆ. ನಾವೆಲ್ಲಾ ನೋಡುವುದಕ್ಕೆ ಕಾತರರಾಗಿದ್ದೇವೆ ಎಂದರು.ಆಂಕರ್ ಅನುಶ್ರೀ ಮಾತನಾಡಿ, ರೂಪೇಶ್ ಶೆಟ್ಟಿ ಕಲೆಯಲ್ಲಿ ಗಟ್ಟಿಯಾಗಿ ನೆಲೆಯೂರಿದ್ದಾರೆ. ಆರ್ಜೆ, ಕಿರುತೆರೆ ನಿರೂಪಕ, ಸಹ ನಟನಾಗಿದ್ದವರು ಇಂದು ನಾಯಕನಾಗಿ ಹೊಸ ಸೆನ್ಸೇಷನ್. ತುಳುನಾಡದಲ್ಲಿ ವಾಕಿಂಗ್ ಸ್ಟಾರ್’ ಚಪ್ಪಾಳೆ ಸಿಗಬೇಕು ಎಂದು ಹಾಡಿ ಹೊಗಳಿದರು. ರಾಜ್ ದೀಪಕ್ ಶೆಟ್ಟಿ ಮಾತನಾಡಿ, ರೂಪೇಶ್ ವಯಸ್ಸಿನಲ್ಲಿ ನನಗಿಂತ ಚಿಕ್ಕವರೇ ಇರಬಹುದು, ಆದರೆ ಅವರ ಆಲೋಚನೆ ದೊಡ್ಡದು. ರಿಯಲ್ ಲೈಫ್ನಲ್ಲಿ ತಿಳಿದುಕೊಂಡಿದ್ದೇನೆ. ಸಿನಿಮಾ ಮುಗಿದರೂ ವಿಲನ್ ಬಿಟ್ಟು ಬಿಡುತ್ತೇನೆ. ಸುನೀಲ್ ಅಣ್ಣ ಸಿನಿಮಾದಲ್ಲಿದ್ದಾರೆ ಎಂದು ಸಿನಿಮಾ ಬಗ್ಗೆ ಮಾತನಾಡಿದ್ದಾರೆ.
ಗುರುಕಿರಣ್ ಸುನೀಲ್ ಅಣ್ಣ ಬಂದಿರುವುದು ಖುಷಿ. ಸಂಗೀತಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಚಿತ್ರರಂಗದಲ್ಲಿ ಇರುವುದಕ್ಕೆ ಕಾರಣ ಅವರೇ. ಶೆಟ್ಟಿಗಳೆಲ್ಲಾ ಸಿಕ್ಸರ್ ಹೊಡೆಯುತ್ತಾರೆ. ರೂಪೇಶ್ ಹೇಗೆ ಹೊಡೆಯುತ್ತಾರೆ ನೋಡಿ. ನಾನು ಒಂದು ಹಾಡು ಹಾಡಿದ್ದೇನೆ ಎಂದು ತಂಡಕ್ಕೆ ಶುಭ ಹಾರೈಸಿದರು.
‘ಜೈ’ ರೂಪೇಶ್ ಶೆಟ್ಟಿ ನಿರ್ದೇಶನ-ಅಭಿನಯದ ಮೂರನೇ ಸಿನಿಮಾ. ಅಧ್ವಿತಿ ಶೆಟ್ಟಿ ಹೀರೋಯಿನ್. ಉಪೇಂದ್ರ ಶೆಟ್ಟಿ, ಡಾ. ದೇವದಾಸ್ ಕಾಪಿಕಡ್, ನವೀನ್ ಡಿ. ಪಡೀಲ್, ಅರವಿಂದ್ ಬೋಲಾರ್, ಭೋಜರಾಜ್ ವಾಮನ್ಜೂರ್, ಪ್ರಸಾನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮನಿಬೇಟ್ಟು, ಉಮೇಶ್ ಮೀಜಾರ್ ಸೇರಿದಂತೆ ತುಳುನಾಡದ ಸ್ಟಾರ್ ಕಾಸ್ಟ್. ಕಥೆ-ಡಯಲಾಗ್: ಪ್ರಸಾನ್ನ ಶೆಟ್ಟಿ ಬೈಲೂರು. ಸಿನೆಮಾಟೋಗ್ರಾಫಿ: ವಿನುತ್ ಕೆ. ಸಂಗೀತ: ಲಾಯ್ ವ್ಯಾಲೆಂಟೈನ್ ಸಾಲ್ಡಾನಾ. ಎಡಿಟಿಂಗ್: ರಾಹುಲ್ ವಸಿಷ್ಠ.
ಪ್ರೊಡಕ್ಷನ್: ಆರ್ಎಸ್ ಸಿನಿಮಾಸ್, ಶೂಲಿನ್ ಫಿಲ್ಮ್ಸ್, ಮುಗ್ರೋಡಿ ಪ್ರೊಡಕ್ಷನ್ಸ್. ಮೂರು ಷೆಡ್ಯೂಲ್ಗಳಲ್ಲಿ ತುಳುನಾಡದಲ್ಲಿ ಶೂಟಿಂಗ್. ಕಥೆ: ಸ್ಥಳೀಯ ರಾಜಕಾರಣ, ಸಂಸ್ಕೃತಿ ಮಿಶ್ರಣ. ಟ್ರೇಲರ್ನಲ್ಲಿ ನೃತ್ಯ, ಆಕ್ಷನ್, ಕಾಮಿಡಿ – ಮನರಂಜನೆಯ ಭರಾಟೆ.





