ಹೈದರಾಬಾದ್: “ದಯವಿಟ್ಟು ಅವಳು ಬೇಗ ಸಾಯುವಂತೆ ನೋಡಿಕೊಳ್ಳಿ.” ಆಂಧ್ರಪ್ರದೇಶದ ದೇವಾಲಯವೊಂದರಲ್ಲಿ ಇಂತಹ ವಿಚಿತ್ರ ವಿನಂತಿಯನ್ನಿಟ್ಟ 20 ರೂಪಾಯಿ ನೋಟು ಗಮನ ಸೆಳೆದಿದ್ದು, ಭಕ್ತರು ಮತ್ತು ಸಿಬ್ಬಂದಿ ದಿಗ್ಧಮೆಗೊಂಡಿದ್ದಾರೆ.
ಅನಂತಪುರ ದೇವಸ್ಥಾನದಲ್ಲಿ ಕಂಡುಬಂದ ಸಂದೇಶ
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಸುಬ್ರಹ್ಮಣೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಈ ವಿಚಿತ್ರ ಸಂದೇಶ ಕಂಡುಬಂದಿದ್ದು, ಅಲ್ಲಿ ಅದನ್ನು ಇತರ ಕಾಣಿಕೆಗಳೊಂದಿಗೆ ಕಾಣಿಕೆ ಪೆಟ್ಟಿಗೆಗೆ ಹಾಕಲಾಗಿತ್ತು. ಪ್ರಾಥಮಿಕ ಮಾಹಿತಿಯ ಪ್ರಕಾರ, ಅಧಿಕಾರಿಗಳು ದೇವಾಲಯದ ಕಾಣಿಕೆ ಪೆಟ್ಟಿಗೆಯಿಂದ ಕಾಣಿಕೆಗಳನ್ನು ಎಣಿಸುತ್ತಿದ್ದಾಗ ಈ ನೋಟು ಅವರ ಕಣ್ಣಿಗೆ ಬಿತ್ತು. ದೇಣಿಗೆಗಳಲ್ಲಿ ಸಾಮಾನ್ಯವಾಗಿ ಶುಭಾಶಯಗಳು ಅಥವಾ ಆಶೀರ್ವಾದದ ಮಾತುಗಳು ಇರುತ್ತವೆ. ಆದರೆ ಇಲ್ಲಿ ಕೈಬರಹದ ಮೂಲಕ ಬರೆಯಲಾದ ಈ ಸಂದೇಶವು ಎಲ್ಲರ ಗಮನ ಸೆಳೆಯಿತು.
ನೋಟಿನಲ್ಲಿದ್ದ ಸಂದೇಶ ಏನು?
“ಸ್ವಾಮಿ, ನನ್ನ ಚಿಕ್ಕಮ್ಮನಿಂದ ನನಗೆ ಇನ್ನು ಕಿರುಕುಳ ಸಹಿಸಲು ಸಾಧ್ಯವಿಲ್ಲ. ದಯವಿಟ್ಟು ಅವಳು ಬೇಗ ಸಾಯುವಂತೆ ನೋಡಿಕೊಳ್ಳಿ” ಎಂದು 20 ರೂಪಾಯಿ ನೋಟಿನಲ್ಲಿ ಕನ್ನಡದಲ್ಲಿ ಬರೆಯಲಾಗಿತ್ತು. ಈ ಟಿಪ್ಪಣಿಯು ದೇವಾಲಯದ ಸಿಬ್ಬಂದಿ ಮತ್ತು ಭಕ್ತರನ್ನು ದಿಗ್ಧಮೆಗೊಳಿಸಿತು.. ಆದರೆ ಯಾರೋ ಒಬ್ಬ ವ್ಯಕ್ತಿಯ ಮರಣಕ್ಕಾಗಿ ಪ್ರಾರ್ಥಿಸುವುದು ಅತ್ಯಂತ ವಿಚಿತ್ರ ಮತ್ತು ಆಘಾತಕಾರಿ ವಿಷಯವಾಗಿದೆ.
ಪೂಜಾರಿಗಳ ಅನುಮಾನ ಮತ್ತು ಪ್ರತಿಕ್ರಿಯೆ
ದೇವಾಲಯದ ಮುಖ್ಯ ಅರ್ಚಕರು ಮತ್ತು ಸಿಬ್ಬಂದಿಗೆ ಈ ಸಂದೇಶ ತೀವ್ರ ಅಚ್ಚರಿ ಮೂಡಿಸಿದೆ. ಅವರು ಯಾರು ಈ ನೋಟನ್ನು ಕಾಣಿಕೆಯಾಗಿ ಇರಿಸಿದ್ದಾರೆಂದು ತಿಳಿಯಲು ಪ್ರಯತ್ನಿಸುತ್ತಿದ್ದಾರೆ.
ಹರಕೆಯ ಹಿಂದಿನ ಕಿರುಕುಳದ ಕಥೆ
ಈ ಸಂದೇಶದಿಂದ ಅದನ್ನು ಬರೆದ ವ್ಯಕ್ತಿಯು ತಮ್ಮ ಚಿಕ್ಕಮ್ಮನಿಂದ ತೀವ್ರ ಕಿರುಕುಳವನ್ನು ಅನುಭವಿಸುತ್ತಿರುವ ಸಾಧ್ಯತೆಯಿದೆ. ಅವರು ಎಷ್ಟು ಹತಾಶರಾಗಿದ್ದರೆಂದರೆ, ದೇವರ ಬಳಿಯೇ ತಮ್ಮ ಆಪ್ತರೊಬ್ಬರ ಸಾವಿಗೆ ಪ್ರಾರ್ಥಿಸುವಷ್ಟು ಮನಸ್ಥಿತಿ ತಲುಪಿದ್ದಾರೆ.





