• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, July 9, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಕೇಜ್ರಿವಾಲ್-ಸಿಸೋಡಿಯಾ ವಿರುದ್ಧ ರಾಜಕೀಯ ದಾಳವಾಗಿ ED & CBI ಬಳಕೆ..?

ದಿಲೀಪ್ ಡಿ. ಆರ್ by ದಿಲೀಪ್ ಡಿ. ಆರ್
February 27, 2026 - 12:17 pm
in Flash News, ದೇಶ
0 0
0

ದಿಲ್ಲಿ ಅಬಕಾರಿ ನೀತಿ ಹಗರಣದಲ್ಲಿ ಸಿಬಿಐ ದಾಖಲಿಸಿದ್ದ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಸೇರಿದಂತೆ ಎಲ್ಲ 23 ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಜಿತೇಂದ್ರ ಸಿಂಗ್ ಅವರು ಐತಿಹಾಸಿಕ ತೀರ್ಪು ನೀಡಿದ್ದಾರೆ.  ನ್ಯಾಯಾಲಯವು ಸಿಬಿಐ ಆರೋಪ ಪತ್ರಕ್ಕೆ ಸ್ವೀಕೃತಿ ನೀಡಲು ನಿರಾಕರಿಸಿದೆ. “ಕ್ರಿಮಿನಲ್ ಷಡ್ಯಂತ್ರವಿಲ್ಲ, ಪುರಾವೆಗಳಿಲ್ಲ, ಆರೋಪಗಳು ನ್ಯಾಯಾಂಗ ಪರೀಕ್ಷೆಯಲ್ಲಿ ಸಾಬೀತಾಗಿಲ್ಲ” ಎಂದು ಸ್ಪಷ್ಟವಾಗಿ ಹೇಳಿದೆ. ಇದು ದೆಹಲಿ ಭಾರೀ ರಾಜಕೀಯದಲ್ಲಿ ಭೂಕಂಪವನ್ನೇ ಸೃಷ್ಟಿಸಿದೆ.

ಏನಿದು ಹಗರಣ..?

2021-22ರಲ್ಲಿ ಆಮ್ ಆದ್ಮಿ ಪಾರ್ಟಿ (AAP) ಸರ್ಕಾರವು ಜಾರಿಗೊಳಿಸಿದ ಅಬಕಾರಿ ನೀತಿಯಲ್ಲಿ ಅಕ್ರಮಗಳ ಆರೋಪಗಳು ಹೊರಬಿದ್ದವು. ಸಿಬಿಐ ಮತ್ತು ಇಡಿ ತನಿಖೆಯ ಪ್ರಕಾರ:

RelatedPosts

ಆಸ್ಟ್ರೇಲಿಯಾದಲ್ಲಿ ಆಪರೇಷನ್ ಸಿಂಧೂರ್ ಕೊಂಡಾಡಿದ ಪ್ರಧಾನಿ ಮೋದಿ

ಖಮೇನಿ ನಿವಾಸ ಧ್ವಂಸದ ಮೊದಲ ವಿಡಿಯೋ ಬಿಡುಗಡೆ ಮಾಡಿದ ಇರಾನ್

ಶಿಕ್ಷಕಿ ಬೈದಿದ್ದಕ್ಕೆ ಮನನೊಂದು ನೇಣಿಗೆ ಶರಣಾದ 8ನೇ ತರಗತಿ ವಿದ್ಯಾರ್ಥಿನಿ

ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಿಲ್ಲಲ್ಲ: ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟನೆ

ADVERTISEMENT
ADVERTISEMENT

– ನೀತಿ ರೂಪಿಸುವಲ್ಲಿ “ದಕ್ಷಿಣ ಲಾಬಿ”ಯಿಂದ (ತೆಲಂಗಾಣದ ಬಿಸ್ಕೆಟ್ ಉದ್ಯಮಿ ಕೆ. ಕವಿತಾ ಸೇರಿದಂತೆ) ಸುಮಾರು ₹100 ಕೋಟಿ ಲಂಚ ಸ್ವೀಕರಿಸಲಾಗಿದೆ ಎಂದು ಆರೋಪ.

– ಥೀಮ್-ಬೇಸ್ಡ್ ಶಾಪ್‌ಗಳಿಗೆ ಅನುಕೂಲವಾಗುವಂತೆ ಪಾಲಿಸಿ ಬದಲಾವಣೆಗಳು ಮಾಡಲಾಗಿದೆ.

– ಗುತ್ತಿಗೆದಾರರ ನಡುವೆ ಕಾರ್ಟೆಲ್ ರಚನೆ, ಹೆಚ್ಚುವರಿ ಲಾಭದಲ್ಲಿ AAP ನಾಯಕರಿಗೆ ಪಾಲು ಎಂಬ ಆರೋಪ.

2022ರಲ್ಲಿ ನೀತಿ ರದ್ದುಗೊಳಿಸಲಾಯಿತು. 2023ರ ಫೆಬ್ರವರಿಯಲ್ಲಿ ಮನೀಶ್ ಸಿಸೋಡಿಯಾ ಬಂಧನವಾಯ್ತು, 2024ರ ಮಾರ್ಚ್‌ನಲ್ಲಿ ಕೇಜ್ರಿವಾಲ್ ಬಂಧನ. ಇದು ದೇಶದಲ್ಲಿ ದೊಡ್ಡ ರಾಜಕೀಯ ವಿವಾದವಾಗಿ ಪರಿಣಮಿಸಿತು.

ಇದೀಗ ಹೊರಬಿದ್ದಿರುವ ನ್ಯಾಯಾಲಯದ ತೀರ್ಪಿನ ಮುಖ್ಯಾಂಶಗಳೇನು..?

ನ್ಯಾಯಾಧೀಶ ಜಿತೇಂದ್ರ ಸಿಂಗ್ ಅವರು ತೀರ್ಪಿನಲ್ಲಿ ಗಮನಾರ್ಹ ಅಭಿಪ್ರಾಯಗಳನ್ನು ನೀಡಿದ್ದಾರೆ. ಅವರ ತೀರ್ಪು ಇಂತಿವೆ:

– “ಪ್ರಾಸಿಕ್ಯೂಷನ್‌ನ ಷಡ್ಯಂತ್ರ ಸಿದ್ಧಾಂತವು ಸಾಕ್ಷ್ಯಾಧಾರಗಳಿಂದ ಬೆಂಬಲಿತವಾಗಿಲ್ಲ.”

– “ಸಿಸೋಡಿಯಾ ಅವರ ವಿರುದ್ಧ ಕ್ರಿಮಿನಲ್ ಉದ್ದೇಶವನ್ನು ಸಾಬೀತುಪಡಿಸಲು ಯಾವುದೇ ಸಾಮಗ್ರಿ ಇಲ್ಲ.”

– “ಆರೋಪಗಳು ನ್ಯಾಯಾಂಗ ಪರೀಕ್ಷೆಯಲ್ಲಿ ಸಾಬೀತಾಗಿಲ್ಲ. ಪ್ರಾಥಮಿಕ ಮಟ್ಟದ ಪುರಾವೆಯೂ ಇಲ್ಲ.”

– “ಎಲ್ಲ 23 ಆರೋಪಿಗಳ ವಿರುದ್ಧ ಯಾವುದೇ ಸಾಮಗ್ರಿ ಇಲ್ಲ” ಎಂದು ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.

ಇದಕ್ಕೂ ಮುಂಚೆ ಜನವರಿ 2026ರಲ್ಲಿ ಇಡಿ ದಾಖಲಿಸಿದ್ದ ಪ್ರಕರಣಗಳಲ್ಲಿ ಕೇಜ್ರಿವಾಲ್‌ಗೆ ಖುಲಾಸೆ ಸಿಕ್ಕಿತ್ತು. ಇದೀಗ ಸಿಬಿಐ ಪ್ರಕರಣವೂ ಬಂದ್ ಆಗಿದೆ..!

 “ಬಿಜೆಪಿಯಿಂದ ರಾಜಕೀಯ ಷಡ್ಯಂತ್ರ”: ಎಎಪಿ ಆಕ್ರೋಶ

ನ್ಯಾಯಾಲಯದ ಹೊರಗೆ ಕೇಜ್ರಿವಾಲ್ ಭಾವುಕರಾಗಿ ಕಣ್ಣೀರು ಸುರಿದರು. “ನಾನು ಭ್ರಷ್ಟನಲ್ಲ ಎಂದು ಕೋರ್ಟ್ ಹೇಳಿದೆ. ಇದು ಸ್ವಾತಂತ್ರ್ಯ ಭಾರತದ ಅತಿದೊಡ್ಡ ರಾಜಕೀಯ ಷಡ್ಯಂತ್ರ. ಮೋದಿ-ಅಮಿತ್ ಶಾ ಅವರು AAPಯ ಐದು ದೊಡ್ಡ ನಾಯಕರನ್ನು ಜೈಲಿಗೆ ತಳ್ಳಿದರು. CM ಸ್ಥಾನದಲ್ಲಿದ್ದ ನನ್ನನ್ನೇ ಬಂಧಿಸಿದರು. ಚಾನಲ್‌ಗಳಲ್ಲಿ ಭ್ರಷ್ಟ ಎಂದು ಆರೋಪಿಸಿದರು. ಆದರೆ ಸತ್ಯ ಗೆದ್ದಿದೆ”ಎಂದು ಕೇಜ್ರಿವಾಲ್ ಹೇಳಿದ್ದಾರೆ.

AAP ಪ್ರಕಾರ, 2025ರ ದೆಹಲಿ ಚುನಾವಣೆಗೂ ಮುಂಚೆ ಈ ಪ್ರಕರಣವನ್ನು ಬಳಸಿಕೊಂಡು ಪಕ್ಷವನ್ನು ದುರ್ಬಲಗೊಳಿಸಲು ಪ್ರಯತ್ನಿಸಲಾಗಿದೆ. ತನಿಖೆಯಲ್ಲಿ “ಪುರಾವೆಗಳನ್ನು ತಯಾರು ಮಾಡಲಾಗಿದೆ” ಎಂಬ ಆರೋಪವನ್ನು ಎಎಪಿ ಪುನರಾವರ್ತಿಸಿದೆ.

ಬಿಜೆಪಿ ಹೇಳೋದೇನು..?

ಇದುವರೆಗೆ ಬಿಜೆಪಿ ಅಧಿಕೃತವಾಗಿ ದೊಡ್ಡ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸಾಮಾನ್ಯವಾಗಿ ಬಿಜೆಪಿ “ಕೋರ್ಟ್ ತೀರ್ಪನ್ನು ಗೌರವಿಸುತ್ತೇವೆ. ತನಿಖೆಯಲ್ಲಿ ಪುರಾವೆಗಳಿದ್ದವು. ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ” ಎಂಬ ಧೋರಣೆಗೆ ಕಟ್ಟು ಬೀಳುವ ಸಾಧ್ಯತೆ ಇದೆ. ಜೊತೆಯಲ್ಲೇ “ಭ್ರಷ್ಟಾಚಾರ ವಿರೋಧಿ ತನಿಖೆಯನ್ನು ರಾಜಕೀಕರಣಗೊಳಿಸುವುದು ತಪ್ಪು”ಎಂಬ ವಾದವನ್ನು ಮುಂದುವರಿಸುವ ನಿರೀಕ್ಷೆ ಇದೆ.

ನಿಜಕ್ಕೂ ಕೇಜ್ರಿವಾಲ್ ಮೇಲೆ ರಾಜಕೀಯ ದಾಳಿ ನಡೀತಾ..?

  1. ಪುರಾವೆಗಳ ಕೊರತೆ: ನ್ಯಾಯಾಲಯವೇ “ಪ್ರಾಥಮಿಕ ಪುರಾವೆಯೂ ಇಲ್ಲ”ಎಂದು ಹೇಳಿರುವುದು ತನಿಖಾ ಏಜೆನ್ಸಿಗಳ ಕೆಲಸದ ಗುಣಮಟ್ಟವನ್ನು ಪ್ರಶ್ನಿಸುತ್ತದೆ. ಬಂಧನಗಳು ವರ್ಷಗಳ ಕಾಲ ನಡೆದವು, ಜೈಲು ವಾಸವಾಯಿತು, ಆದರೆ ಆರೋಪ ಪತ್ರವೇ ಸಾಬೀತಾಗಿಲ್ಲ. ಇದು “ಅರೆಸ್ಟ್ ಫಸ್ಟ್, ಇನ್ವೆಸ್ಟಿಗೇಶನ್ ಲೇಟರ್”ಎಂಬ ಆರೋಪಕ್ಕೆ ಬಲ ನೀಡುತ್ತದೆ.
  1. ರಾಜಕೀಯ ಸಮಯ: ಸಿಸೋಡಿಯಾ ಬಂಧನ 2023ರಲ್ಲಿ, ಕೇಜ್ರಿವಾಲ್ ಬಂಧನ 2024ರಲ್ಲಿ – ದೆಹಲಿ ಚುನಾವಣೆಗೂ ಮುಂಚೆ. ಇದೇ ರೀತಿ ಹೇಮಂತ್ ಸೋರೆನ್, ಇತರ ವಿರೋಧ ಪಕ್ಷ ನಾಯಕರ ಮೇಲೆ ಇಡಿ-ಸಿಬಿಐ ಕೇಸುಗಳು. ಆದರೆ ಕೆಲವು ಕೇಸುಗಳಲ್ಲಿ ಶಿಕ್ಷೆಯೂ ಆಗಿದೆ (ಉದಾ: ಕೆಲವು ಕಾಂಗ್ರೆಸ್ ನಾಯಕರು). ಆದ್ದರಿಂದ ಸಾರ್ವತ್ರಿಕ ರಾಜಕೀಯ ದಾಳಿ ಎಂದು ಹೇಳಲು ಕಷ್ಟ, ಆದರೆ ನಿಯಂತ್ರಿತ ಗುರಿಯುಳ್ಳ ದಾಳಿ ಎಂಬ ಭಾವನೆ ಬಲವಾಗಿದೆ.
  1. ಸಾಂವಿಧಾನಿಕ ಪ್ರಶ್ನೆ: ಸುಪ್ರೀಂ ಕೋರ್ಟ್ ಕೆಲವು ಸಂದರ್ಭಗಳಲ್ಲಿ “ಅನುಚಿತ ಬಂಧನ”ವಿರುದ್ಧ ದನಿ ಎತ್ತಿದೆ. ಕೇಜ್ರಿವಾಲ್‌ಗೆ ಜಾಮೀನು ನೀಡಿದ್ದರೂ, ಸಿಬಿಐ ಕೇಸ್‌ನಲ್ಲಿ ಬಂಧನ ಮುಂದುವರೆದಿತ್ತು. ಇದು “ಪರ್ಸನಲ್ ಲಿಬರ್ಟಿ”ಯ ಮೇಲಿನ ದಾಳಿ ಎಂಬ ವಾದಕ್ಕೆ ಬಲ ನೀಡುತ್ತದೆ.
  1. ಸಂಸ್ಥೆಗಳ ಮೇಲಿನ ನಂಬಿಕೆ: ಇಡಿ-ಸಿಬಿಐಗಳು ಕೇಂದ್ರ ಸರ್ಕಾರದ ಅಡಿಯಲ್ಲಿವೆ. ವಿರೋಧ ಪಕ್ಷಗಳು ಇಡಿ-ಸಿಬಿಐಗಳನ್ನು “ಬಿ-ಟೀಮ್ ಆಫ್ ಬಿಜೆಪಿ”ಎಂದು ಕರೆಯುತ್ತವೆ. ಈ ತೀರ್ಪು ಆ ನಿಲುವನ್ನು ಬಲಪಡಿಸುತ್ತದೆ. ಆದರೆ ಏಜೆನ್ಸಿಗಳು ಇತರ ಭ್ರಷ್ಟಾಚಾರ ಕೇಸುಗಳಲ್ಲಿ ಯಶಸ್ಸು ಸಾಧಿಸಿವೆ ಎಂಬುದನ್ನು ನೆನಪಿಸಿಕೊಳ್ಳಬೇಕು.
  1. ರಾಜಕೀಯ ಪರಿಣಾಮ: AAPಗೆ ದೊಡ್ಡ ರಾಜಕೀಯ ಲಾಭ. “ನಾವು ಪ್ರಾಮಾಣಿಕರು”ಎಂಬ ಸಂದೇಶ ಬಲವಾಗುತ್ತದೆ. ಜೊತೆಯಲ್ಲೇ ವಿರೋಧ ಪಕ್ಷಗಳು “ಭ್ರಷ್ಟಾಚಾರ ವಿರೋಧಿ”ಚಳವಳಿಯನ್ನೇ ಪ್ರಶ್ನಿಸಲು ಶುರು ಮಾಡುವ ಹಿನ್ನೆಲೆಯಲ್ಲಿ ಬಿಜೆಪಿಗೆ ತಲೆನೋವು ಕಟ್ಟಿಟ್ಟ ಬುತ್ತಿ..!

ಒಟ್ಟಾರೆ ಹೇಳೋದಾದ್ರೆ ಕೇಜ್ರಿವಾಲ್ ಖುಲಾಸೆ ಪ್ರಕರಣ ಸಂಪೂರ್ಣ ರಾಜಕೀಯ ದಾಳಿ ಎಂದು ಸಾಬೀತಾಗುವುದಿಲ್ಲವಾದ್ರೂ ರಾಜಕೀಯ ಉದ್ದೇಶದ ತನಿಖೆಯ ಸಾಧ್ಯತೆಯನ್ನು ಬಲವಾಗಿ ಎತ್ತಿ ತೋರಿಸುತ್ತದೆ. ಈ ಹಂತದಲ್ಲಿ ನ್ಯಾಯಾಲಯವು ಸ್ವತಂತ್ರವಾಗಿ ಕಾರ್ಯನಿರ್ವಹಿಸಿದೆ ಅನ್ನೋದು ಸಂತೋಷದ ಸಂಗತಿ. ಆದರೆ ತನಿಖಾ ಏಜೆನ್ಸಿಗಳು ರಾಜಕೀಯ ಒತ್ತಡಕ್ಕೆ ಒಳಗಾಗುತ್ತವೆ ಎಂಬ ಭಾವನೆ ಇನ್ನಷ್ಟು ಹೆಚ್ಚಾದರೆ ಇಡಿ & ಸಿಬಿಐ ಮೇಲೆ ಜನತೆಯ ನಂಬಿಕೆ ಕುಸಿಯುತ್ತದೆ. ರಾಜಕೀಯವನ್ನು ತನಿಖೆಯಿಂದ ಬೇರ್ಪಡಿಸಿದರೆ ಮಾತ್ರ ಪ್ರಜಾಪ್ರಭುತ್ವ ಬಲಪಡುತ್ತದೆ.

ShareSendShareTweetShare
ದಿಲೀಪ್ ಡಿ. ಆರ್

ದಿಲೀಪ್ ಡಿ. ಆರ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಡಿಜಿಟಲ್ ವಿಭಾಗದ ಸಂಪಾದಕರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಡಿಜಿಟಲ್ ಪತ್ರಕರ್ತನಾಗಿ 5 ವರ್ಷ ಹಾಗೂ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 15 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಕಾಡು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಆಸ್ಟ್ರೇಲಿಯಾದಲ್ಲಿ

ಆಸ್ಟ್ರೇಲಿಯಾದಲ್ಲಿ ಆಪರೇಷನ್ ಸಿಂಧೂರ್ ಕೊಂಡಾಡಿದ ಪ್ರಧಾನಿ ಮೋದಿ

by ಶಾಲಿನಿ ಕೆ. ಡಿ
July 9, 2026 - 6:36 pm
0

Untitled design 2026 07 09T180417.388

ಖಮೇನಿ ನಿವಾಸ ಧ್ವಂಸದ ಮೊದಲ ವಿಡಿಯೋ ಬಿಡುಗಡೆ ಮಾಡಿದ ಇರಾನ್

by ಶಾಲಿನಿ ಕೆ. ಡಿ
July 9, 2026 - 6:04 pm
0

Untitled design 2026 07 09T173955.010

ಶಿಕ್ಷಕಿ ಬೈದಿದ್ದಕ್ಕೆ ಮನನೊಂದು ನೇಣಿಗೆ ಶರಣಾದ 8ನೇ ತರಗತಿ ವಿದ್ಯಾರ್ಥಿನಿ

by ಶಾಲಿನಿ ಕೆ. ಡಿ
July 9, 2026 - 5:43 pm
0

Untitled design 2026 07 09T171319.384

ರಚಿತಾ ರಾಮ್-ಸತೀಶ್ ಜೋಡಿ ಮತ್ತೆ ಕಣಕ್ಕೆ.!

by ಶಾಲಿನಿ ಕೆ. ಡಿ
July 9, 2026 - 5:14 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಆಸ್ಟ್ರೇಲಿಯಾದಲ್ಲಿ
    ಆಸ್ಟ್ರೇಲಿಯಾದಲ್ಲಿ ಆಪರೇಷನ್ ಸಿಂಧೂರ್ ಕೊಂಡಾಡಿದ ಪ್ರಧಾನಿ ಮೋದಿ
    July 9, 2026 | 0
  • Untitled design 2026 07 09T180417.388
    ಖಮೇನಿ ನಿವಾಸ ಧ್ವಂಸದ ಮೊದಲ ವಿಡಿಯೋ ಬಿಡುಗಡೆ ಮಾಡಿದ ಇರಾನ್
    July 9, 2026 | 0
  • Untitled design 2026 07 09T173955.010
    ಶಿಕ್ಷಕಿ ಬೈದಿದ್ದಕ್ಕೆ ಮನನೊಂದು ನೇಣಿಗೆ ಶರಣಾದ 8ನೇ ತರಗತಿ ವಿದ್ಯಾರ್ಥಿನಿ
    July 9, 2026 | 0
  • Untitled design 2026 07 09T170043.409
    ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಿಲ್ಲಲ್ಲ: ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟನೆ
    July 9, 2026 | 0
  • Untitled design 2026 07 09T160935.729
    ಪ್ರೇಯಸಿಗಾಗಿ ಪತ್ನಿ ಕೊ*ಲೆ: ಶವದ ಫೋಟೋ ಲವ್ವರ್‌ಗೆ ಕಳುಹಿಸಿ ಸಿಕ್ಕಿಬಿದ್ದ ಟೆಕ್ಕಿ
    July 9, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version