ಬಿಹಾರ ವಿಧಾನಸಭೆ ಚುನಾವಣೆಗೆ 10 ತಿಂಗಳು ಬಾಕಿ ಇರುವಾಗಲೇ ಚುನಾವಣೆ ರಣಕಣ ರಂಗೇರುತ್ತಿದೆ. ಬಿಹಾರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯೋದು ಯಾರು ಎಂದು ಏಜೆನ್ಸಿಗಳು ಸಮೀಕ್ಷೆ ನಡೆಸುತ್ತಿವೆ. ಸಿ-ವೋಟರ್ ನಡೆಸಿದ ಸಮೀಕ್ಷೆ ಪ್ರಕಾರ ಹಾಲಿ ಸಿಎಂ ನಿತೀಶ್ ಕುಮಾರ್ ವರ್ಚಸ್ಸು ಕಡಿಮೆಯಾಗಿದೆ. ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಸಾರಥ್ಯಕ್ಕೆ ಹೆಚ್ಚಿನ ಮಂದಿ ಮತ ಹಾಕಿದ್ದಾರೆ. ಹಾಗಾದರೆ, ನಿತೀಶ್ ಕುಮಾರ್ ಆಡಳಿತ ಮುಗೀತಾ..? ಮುಂದೆ ಸ್ಟೋರಿ ಓದಿ
ಬಿಹಾರ ರಾಜಕೀಯನೇ ಹಾಗೆ. ಯಾವಾಗ ಕ್ಷಿಪ್ರಕ್ರಾಂತಿ ಶುರುವಾಗುತ್ತೋ..? ಯಾರು ಬಂಡಾಯ ಏಳ್ತಾರೋ..? ಯಾರು ಪಕ್ಷಾಂತರ ಪಕ್ಷಿ ಆಗುತ್ತಾರೋ ಹೇಳುವುದಕ್ಕೆ ಬರೋದಿಲ್ಲ. ಒಂದು ವಿಧಾನಸಭೆ ಅವಧಿಯಲ್ಲೇ ಹಾಲಿ ಸಿಎಂ ನಿತೀಶ್ ಕುಮಾರ್ ಮೂರು ಬಾರಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಎರಡು ಬಾರಿ ಬಿಜೆಪಿ ಮೈತ್ರಿಯಿಂದ ಮುಖ್ಯಮಂತ್ರಿ ಆದರೆ, ಒಂದು ಬಾರಿ ಮಹಾಘಟಬಂದನ್ ಮೈತ್ರಿ ಜೊತೆ ಸಿಎಂ ಆಗಿದ್ದಾರೆ. ಈ ಕಡೆಯಿಂದ ಆ ಕಡೆ, ಆ ಕಡೆಯಿಂದ ಈ ಕಡೆ ಜಂಪ್ ಮಾಡಿದ್ರೂ ನಿತೀಶ್ ಕುಮಾರ್ ಅವರೇ ಖಾಯಂ ಮುಖ್ಯಮಂತ್ರಿ ಆಗಿ ಮುಂದುವರೆಯುತ್ತಿದ್ದಾರೆ. ಯಾವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡರೂ ಬಿಹಾರ ಆಳುವುದು ನಿತೀಶ್ ಕುಮಾರ್ ಅವರ ರಾಜಕೀಯದ ಅದೃಷ್ಟ ಆಗಿದೆ.
ಇದನ್ನೂ ಓದಿ : ತೆಲಂಗಾಣದ ಎಲ್ಲಾ ಶಾಲೆಗಳಲ್ಲಿ ಮಾತೃಭಾಷೆ ಕಡ್ಡಾಯ: ಸರ್ಕಾರ ಮಹತ್ವದ ನಿರ್ಧಾರ
ಇದೇ ವರ್ಷ ಬಿಹಾರದಲ್ಲಿ ವಿಧಾನಸಭೆ ಚುಣಾವಣೆ ನಡೆಯಲಿದೆ. ನವೆಂಬರ್ ತಿಂಗಳಿನಲ್ಲಿ ಬಿಹಾರ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಅಧಿಕಾರದ ಪರ್ವ ಮುಂದುವರೆಸಲು ಸಿಎಂ ನಿತೀಶ್ ಕುಮಾರ್ ಸಾರಥ್ಯದ ಜೆಡಿಯು ಹಾಗೂ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಮೈತ್ರಿ ಒಟ್ಟಾಗಿ ಅಖಾಡಕ್ಕಿಳಿದಿವೆ. ಈ ಬಾರಿಯೂ ನಿತೀಶ್ ಕುಮಾರ್ ನಾಯಕತ್ವದಲ್ಲೇ ಚುನಾವಣೆ ಎದುರಿಸಲಿದ್ದೇವೆ ಎಂದು ಬಿಜೆಪಿ ಹೇಳಿದೆ. ಆರ್ಜೆಡಿ ನಾಯಕ ತೇಜಸ್ವಿ ಯಾದವ್, ಜನಸೂರಜ್ ಪಕ್ಷದ ಅಧ್ಯಕ್ಷ, ಚುನಾವಣೆ ಚಾಣಕ್ಯ ಪ್ರಶಾಂತ್ ಕಿಶೋರ್ ಕೂಡ ಬಿಹಾರದ ಬಾಸ್ ಆಗೋಕೆ ತಯಾರಿ ನಡೆಸುತ್ತಿದ್ದಾರೆ. ಇದರ ಮಧ್ಯೆ ಯಾರು ಅಧಿಕಾರಕ್ಕೆ ಬರಬಹುದು..? ಜನರ ಅಭಿಪ್ರಾಯ ಏನಿದೆ..? ಎಂದು ಸಿ-ವೋಟರ್ ಸಮೀಕ್ಷೆ ನಡೆಸಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಸೇವಿಸುವ ಆಹಾರ ಯಾವುದು ಗೊತ್ತಾ..?
ಸಮೀಕ್ಷೆ ಪ್ರಕಾರ, ಬಿಹಾರದ ಜನತೆ ನಿತೀಶ್ ಕುಮಾರ್ ಆಡಳಿತ ಸಾಕು ಎಂದು ಅಭಿಪ್ರಾಯ ತಿಳಿಸಿದ್ದಾರೆ. ಕೇವಲ 18% ಜನರು ಮಾತ್ರ ನಿತೀಶ್ ಕುಮಾರ್ ಅವರನ್ನ ಮುಖ್ಯಮಂತ್ರಿ ಆಗಿ ನೋಡಲು ಬಯಸಿದ್ದಾರೆ. ಇದಕ್ಕೆ ಪ್ರತಿಯಾಗಿ ಆರ್ಜೆಡಿ ನಾಯಕ ತೇಜಸ್ವಿಯಾದವ್ ಅವರಿಗೆ ಶೇಕಡ 41% ಜನ ವೋಟ್ ಹಾಕಿದ್ದಾರೆ. ಅಂದರೆ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಅವರು ಮುಖ್ಯಮಂತ್ರಿ ಆಗಬೇಕೆಂದು ತಮ್ಮಭಿಪ್ರಾಯ ತಿಳಿಸಿದ್ದಾರೆ.
ಇನ್ನು ಇದುವರೆಗೂ ರಾಜಕೀ ಯದ ತೆರೆ ಹಿಂದೆ ಜಾದು ಮಾಡುತ್ತಿದ್ದ ಚುನಾವಣೆ ಚಾಣಕ್ಯ, ಪ್ರಶಾಂತ್ ಕಿಶೋರ್ ಜನಸೂರಜ್ ಪಕ್ಷ ಕಟ್ಟಿದ್ದಾರೆ. ಶೇಕಡ 15ರಷ್ಟು ಜನ ಪ್ರಶಾಂತ್ ಕಿರೋಶ್ ಪಕ್ಷ ಅಧಿಕಾರಕ್ಕೆ ಬರಬೇಕೆಂದು ಮತ ಹಾಕಿದ್ದಾರೆ. ಬಿಜೆಪಿಯ ಸಾಮ್ರಾಟ್ ಚೌಧರಿಗೆ ಶೇಕಡ 8ರಷ್ಟು ಮಂದಿ, ಎಲ್ಜೆಪಿ ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರನ್ನ ಮುಖ್ಯಮಂತ್ರಿ ಆಗಿ ನೋಡಲು ಕೇವಲ 4 ಪರ್ಸೆಂಟ್ ಜನ ಬಯಸಿದ್ದಾರೆ.
ಬಿಜೆಪಿ ಹಾಗೂ ಜೆಡಿಯು ಮೈತ್ರಿ ಸರ್ಕಾರದ ಆಡಳಿತದ ವಿರುದ್ಧ ಶೇಕಡ 50% ರಷ್ಟು ಮಂದಿ ಅಸಮಧಾನಗೊಂಡಿದ್ದು, ಸರ್ಕಾರ ಬದಲಾಗಬೇಕು ಅಂತ ಬಯಸಿದ್ದಾರೆ. ಶೇಕಡ 22ರಷ್ಟು ಮಂದಿ ಬಿಜೆಪಿ-ಜೆಡಿಯು ಮೈತ್ರಿ ಸರ್ಕಾರವೇ ಇರಲಿ ಎಂದಿದ್ದಾರೆ. 25% ರಷ್ಟು ಮಂದಿ ಈ ಸರ್ಕಾರದ ಮೇಲೆ ಅಸಮಾಧನವೂ ಇಲ್ಲ, ಸರ್ಕಾರ ಬದಲಾಗುವ ಅವಶ್ಯಕತೆಯೂ ಬೇಕಿಲ್ಲ ಎಂದು ಉತ್ತರ ನೀಡಿದ್ದಾರೆ.