• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, June 17, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ನಾಗಪುರಕ್ಕೆ ಮೋದಿ ಆಗಮನದ ಹೊತ್ತಲ್ಲೇ ಔರಂಗಜೇಬ್ ಸಮಾಧಿಗೆ ಬೆಂಕಿ! ‘ಛಾವಾ’ ಎಫೆಕ್ಟ್?

ಇತಿಹಾಸ, ಸಿನಿಮಾ ಮತ್ತು ರಾಜಕೀಯದ ರಣಾಂಗಣವಾಯ್ತಾ ಮಹಾರಾಷ್ಟ್ರದ ನಾಗಪುರ?

ದಿಲೀಪ್ ಡಿ. ಆರ್ by ದಿಲೀಪ್ ಡಿ. ಆರ್
March 18, 2025 - 1:03 pm
in Flash News, ದೇಶ, ವಿಶೇಷ
0 0
0
Maharashtra

ಮಹಾರಾಷ್ಟ್ರ ರಾಜ್ಯದ ನಾಗಪುರದ ರಸ್ತೆಗಳಲ್ಲಿ ಸೋಮವಾರ ಮಾರ್ಚ್ 17 ರಂದು ಉದ್ವಿಗ್ನ ಸ್ಥಿತಿ.. ಕಲ್ಲು ತೂರಾಟ, ಬೆಂಕಿ, ಆಕ್ರೋಶ, ಹಾಹಾಕಾರ.. “ಔರಂಗಜೇಬ್ ಸಮಾಧಿ ಕಿತ್ತೊಗೆಯಿರಿ!” ಅನ್ನೋ ಘೋಷಣೆ..! ಈ ಹಿಂಸಾತ್ಮಕ ಸಂಘರ್ಷಕ್ಕೆ ಕಾರಣವಾಗಿದ್ದು, ಐತಿಹಾಸಿಕ ಕರಿನೆರಳು..! ಮೊಘಲ್ ಚಕ್ರವರ್ತಿ ಔರಂಗಜೇಬ್ ಮತ್ತು ಮರಾಠಾ ವೀರ ಛತ್ರಪತಿ ಸಂಭಾಜಿ ಮಹಾರಾಜರ ನಡುವಿನ 300 ವರ್ಷಗಳ ಹಿಂದಿನ ಸಂಘರ್ಷ, ಇದೀಗ ಜನಸಾಮಾನ್ಯರು ರೊಚ್ಚಿಗೇಳುವಂತೆ ಮಾಡಿದೆ.. 3 ಶತಮಾನಗಳ ಹಿಂದಿನ ವಿವಾದ ಇಂದೇಕೆ? ಇದು ಕೇವಲ ಇತಿಹಾಸದ ಕರಾಳ ನೆನಪಿನ ವಿರುದ್ಧದ ಆಕ್ರೋಶವೇ? ಅಥವಾ ಸಿನಿಮಾ, ರಾಜಕೀಯ ಮತ್ತು ಜನ ಸಮೂಹದ ಉದ್ರೇಕಕಾರಿ ಭಾವನೆಗಳ ಸಂಗಮವೇ?

ಇತಿಹಾಸ-ವರ್ತಮಾನಗಳ ನಡುವಣ ಸಂಘರ್ಷ..!

ತನ್ನ ಕರ್ಮಠ ಇಸ್ಲಾಮಿಕ್ ನೀತಿಗಳಿಂದಲೇ ಕುಖ್ಯಾತನಾದ ಔರಂಗಜೇಬ್, 17ನೇ ಶತಮಾನದಲ್ಲಿ ಜಾರಿಗೆ ತಂದಿದ್ದ ನೀತಿಗಳು, ಆತ ಎಸಗಿದ ಕ್ರೌರ್ಯಗಳು ಇಂದು ಮಾರ್ದನಿಸುತ್ತಿವೆ. ಜಿಝಿಯಾ ತೆರಿಗೆ, ದೇವಾಲಯಗಳ ಧ್ವಂಸ ಮತ್ತು ಸಂಭಾಜಿ ಮಹಾರಾಜರಿಗೆ ನೀಡಿದ್ದ ಕ್ರೂರ ಹಿಂಸಾತ್ಮಕ ಮರಣ ಇದೀಗ ಹಿಂದೂ ಸಮುದಾಯದ ಕಹಿ ನೆನಪುಗಳನ್ನು ಕೆರಳಿಸಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಖುಲ್ದಾಬಾದ್‌ನಲ್ಲಿ ಇರುವ ಔರಂಗಜೇಬನ ಮಸೀದಿಯನ್ನು ತೆರವು ಮಾಡಬೇಕು ಎಂದು ಆಗ್ರಹಿಸಿ ಹಿಂದೂ ಪರ ಸಂಘಟನೆಗಳು, ಆತನ ಸಮಾಧಿಗೆ ಬೆಂಕಿ ಇಟ್ಟ ಘಟನೆ, ದೇಶಾದ್ಯಂತ ಹೊಸ ವಿವಾದದ ಸ್ವರೂಪವನ್ನೇ ಪಡೆದುಕೊಂಡಿದೆ.

RelatedPosts

ಅಭಿಮಾನಿಯ ಮನೆಗೆ ಭೇಟಿ ನೀಡಿ, ಬಾಲಕನ ಕೊನೆ ಆಸೆ ಈಡೇರಿಸಿದ ಪವನ್ ಕಲ್ಯಾಣ್

ನೋಲನ್ ಭಾರತಕ್ಕೆ ಆಗಮನ: ‘ದಿ ಒಡಿಸ್ಸಿ’ ಪ್ರೀಮಿಯರ್‌ಗೆ ಮುಂಬೈ ಸಜ್ಜು!

ಪ್ರಕಾಶ್ ರಾಜ್‌ಗೆ ಬ್ಯಾನ್ ಭಯ..ನಿಮಗಿದು ಬೇಕಿತ್ತಾ ಸರ್?!

ಕಸ್ಟಡಿ ಕ್ರೌರ್ಯ ಆರೋಪ: ಹೈಕೋರ್ಟ್ ಆದೇಶದ ಬಳಿಕ ದಲಿತ ಯುವಕನ ಅಂತ್ಯಕ್ರಿಯೆ

ADVERTISEMENT
ADVERTISEMENT
“ಹಿಂದೂ ಸ್ವಾಭಿಮಾನ”ದ ಕಿಡಿ ಹೊತ್ತಿಸಿತಾ “ಛಾವಾ”..?

ಮರಾಠಾ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಮಗ ಛತ್ರಪತಿ ಸಂಭಾಜಿ ಮಹಾರಾಜರನ್ನು ಬಂಧಿಸಿದ್ದ ಔರಂಗಜೇಬ್, ಸಂಭಾಜಿ ಮಹಾರಾಜರಿಗೆ ಚಿತ್ರಹಿಂಸೆ ನೀಡಿ ಹತ್ಯೆಗೈದ ಸನ್ನಿವೇಶವನ್ನು “ಛಾವಾ” ಸಿನಿಮಾದಲ್ಲಿ ಚಿತ್ರಿಸಲಾಗಿದೆ. ಈ ಸಿನಿಮಾ ಯುವ ಜನರಲ್ಲಿ “ಹಿಂದೂ ಸ್ವಾಭಿಮಾನ”ದ ಕಿಡಿ ಹೊತ್ತಿಸಿದೆ. ಈ ಕಿಡಿ ಜ್ವಾಲೆಯ ರೂಪ ಪಡೆದುಕೊಂಡಿದೆ!

ಫೆಬ್ರವರಿ 2025ರಲ್ಲಿ ಬಿಡುಗಡೆಯಾದ “ಛಾವಾ” ಚಿತ್ರದಲ್ಲಿ ಔರಂಗಜೇಬ್‌ನನ್ನು “ಕ್ರೂರ ಸಾಮ್ರಾಟ”ನಾಗಿ ಬಿಂಬಿಸಲಾಗಿದೆ. ಸಂಭಾಜಿ ಅವರನ್ನು ಬಂಧಿಸಿ ಅವರ ನಾಲಿಗೆ ಕತ್ತರಿಸುವ ದೃಶ್ಯಗಳನ್ನು ನೋಡಿದ ಪ್ರೇಕ್ಷಕರಂತೂ ಸಿಡಿದೆದ್ದಿದ್ದಾರೆ. “ಇದು ನಮ್ಮ ಐತಿಹಾಸಿಕ ವೀರನಿಗೆ ಆದ ಅಪಮಾನ” ಎಂಬ ಆಕ್ರೋಶದ ನುಡಿಯಿಂದ ಹಿಡಿದು, ಹತ್ತು ಹಲವು ರೀತಿಯಲ್ಲಿ ಜನರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಔರಂಗಜೇಬ್ ಸಮಾಧಿಗೆ ಬೆಂಕಿ! “ಛಾವಾ” ಸಿನಿಮಾದ ಪರೋಕ್ಷ ಪಾತ್ರ..?
  • “ಛಾವಾ” ಸಿನಿಮಾ ನೇರವಾಗಿ ಇಂಥಾದ್ದೊಂದು ಹಿಂಸಾತ್ಮಕ ಪ್ರತಿಭಟನೆಗೆ ಪ್ರೇರಣ ನೀಡಿಲ್ಲ. ಆದರೆ ಸಾಮೂಹಿಕ ಪ್ರಜ್ಞೆ ಕೆರಳಿಸಿದೆ ಅನ್ನೋದು ಸುಳ್ಳಲ್ಲ!
  • ಯುವಕರು ಸಿನಿಮಾ ನಂತರ ತಮ್ಮೂರಿನಲ್ಲಿ ಇರುವ ಔರಂಗಜೇಬನ ಸಮಾಧಿಯ ಬಗ್ಗೆ ಪ್ರಶ್ನಿಸಲು ಪ್ರಾರಂಭಿಸಿದ್ದೇ ಈ ಘರ್ಷಣೆಯ ಮೂಲ!
  • “ಸಂಭಾಜಿ ಮಹಾರಾಜರಿಗೆ ಹಿಂಸೆ ನೀಡಿದ ವ್ಯಕ್ತಿಯ ಸ್ಮಾರಕ ಮರಾಠಾ ನೆಲದಲ್ಲಿ ಏಕೆ?” ಎಂಬ ಪ್ರಶ್ನೆಯೇ ಉದ್ವಿಗ್ನತೆಗೆ ಮೂಲ ಕಾರಣ!
ಮಾರ್ಚ್ 17.. ಆಕ್ರೋಶದ ಕಟ್ಟೆ ಒಡೆದ ದಿನ!

ವಿಶ್ವ ಹಿಂದೂ ಪರಿಷತ್ (VHP) ಮತ್ತು ಬಜರಂಗ ದಳದ ಕಾರ್ಯಕರ್ತರು ನಾಗಪುರದ ಮಹಲ್ ಪ್ರದೇಶದಲ್ಲಿ ಮೊದಲಿಗೆ ಧರಣಿ ನಡೆಸಿದರು. “ಔರಂಗಜೇಬ್ ಸಮಾಧಿ ಕಿತ್ತೊಗೆಯಿರಿ, ಇತಿಹಾಸ ಸರಿಪಡಿಸಿ!” ಎಂದು ಘೋಷಣೆ ಕೂಗಿದರು. ಈ ವೇಳೆ ಔರಂಗಜೇಬನ ಸಮಾಧಿ ಸ್ಮಾರಕ್ಕೆ ಬೆಂಕಿ ಇಟ್ಟರು. ಆದರೆ, ಸಂದರ್ಭದಲ್ಲಿ ಪವಿತ್ರ ಧರ್ಮ ಗ್ರಂಥ ಸುಡಲಾಯ್ತು ಎಂಬ ವದಂತಿ ಹರಡಿತು. ಈ ಸುಳ್ಳು ವದಂತಿ ಹರಡಿದ್ದೇ ತಡ, ಕೆಲವೇ ನಿಮಿಷಗಳಲ್ಲಿ ನಾಗಪುರ ರಣಾಂಗಣವಾಯ್ತು!

ಎಲ್ಲೆಲ್ಲೂ ಹಿಂಸಾಚಾರ.. ಆಕ್ರೋಶ.. ಏನೇನಾಯ್ತು?
  • ವಾಹನಗಳ ಮೇಲೆ ಕಲ್ಲು ತೂರಾಟ..
  • ಬಸ್ ನಿಲ್ದಾಣದಲ್ಲಿ ಬೆಂಕಿ
  • ಪೊಲೀಸರಿಂದ ಲಾಠಿ ಚಾರ್ಜ್, ಅಶ್ರುವಾಯು ಪ್ರಯೋಗ
  • 30ಕ್ಕೂ ಹೆಚ್ಚು ಜನರಿಗೆ ಗಾಯ
  • ಸೋಮವಾರ ರಾತ್ರಿಯ ಹೊತ್ತಿಗೆ ನಾಗಪುರದಾಚೆಗೂ ಹರಡಿದ ಹಿಂಸೆ
ರಾಜಕೀಯ ನಾಯಕರು ಹೇಳಿದ್ದೇನು?

“ಶಾಂತಿಯನ್ನು ಕಾಪಾಡಲು ಎಲ್ಲರೂ ಸಹಕರಿಸಿ.”: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್

– “ಸಾಮಾಜಿಕ ಸಾಮರಸ್ಯವೇ ನಮ್ಮ ಮುಖ್ಯ ಧ್ಯೇಯ.”: ಕೇಂದ್ರ ಸಚಿವ ನಿತಿನ್ ಗಡ್ಕರಿ

ಪ್ರಧಾನಿ ಮೋದಿ ಭೇಟಿಗೆ ಕೆಲವೇ ದಿನ ಮುನ್ನ ಗಲಭೆ? 

ಮಾರ್ಚ್ 30, 2025ರಂದು ಪ್ರಧಾನಿ ಮೋದಿ ನಾಗಪುರಕ್ಕೆ ಭೇಟಿ ನೀಡಲಿದ್ದಾರೆ. ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಆರ್‌ ಎಸ್ ಎಸ್ ಮುಖ್ಯ ಕಚೇರಿಗೆ ಭೇಟಿ ನೀಡುತ್ತಿದ್ದಾರೆ. ಇಂಥಾದ್ದೊಂದು ಮಹತ್ವದ ಸನ್ನಿವೇಶದಲ್ಲೇ ಈ ಗಲಭೆ ನಡೆದಿದೆ. ಆದರೆ, ಪ್ರಧಾನಿ ಭೇಟಿಗೂ ಈ ಹಿಂಸಾಚಾರಕ್ಕೂ ಯಾವುದೇ ಸಂಬಂಧವಿಲ್ಲ. ಆದಾಗ್ಯೂ ವಿಪಕ್ಷಗಳು ಮಾತ್ರ ಈ ಕುರಿತು ಬೊಟ್ಟು ಮಾಡುತ್ತಿವೆ.

ShareSendShareTweetShare
ದಿಲೀಪ್ ಡಿ. ಆರ್

ದಿಲೀಪ್ ಡಿ. ಆರ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಡಿಜಿಟಲ್ ವಿಭಾಗದ ಸಂಪಾದಕರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಡಿಜಿಟಲ್ ಪತ್ರಕರ್ತನಾಗಿ 5 ವರ್ಷ ಹಾಗೂ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 15 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಕಾಡು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 06 17T190608.901

ಗಣೇಶ್, ಮಾಧವನ್ ಮೆಥೆಡ್ ಆ್ಯಕ್ಟಿಂಗ್‌‌..ಶೀಲಂ ಮಾಡಿದ್ದೇನು?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 17, 2026 - 7:06 pm
0

Untitled design 2026 06 17T184326.621

ಅಭಿಮಾನಿಯ ಮನೆಗೆ ಭೇಟಿ ನೀಡಿ, ಬಾಲಕನ ಕೊನೆ ಆಸೆ ಈಡೇರಿಸಿದ ಪವನ್ ಕಲ್ಯಾಣ್

by ಶಾಲಿನಿ ಕೆ. ಡಿ
June 17, 2026 - 6:45 pm
0

Untitled design 2026 06 17T164329.604

ವಿಧಾನಪರಿಷತ್ ಚುನಾವಣೆಗೆ ಕ್ಷಣಗಣನೆ: ನಾಳೆ ಏಳು ಸ್ಥಾನಗಳಿಗೆ ಮತದಾನ

by ದಿಶಾ ಕೆ. ಎಸ್.
June 17, 2026 - 6:36 pm
0

Untitled design (37)

ನೋಲನ್ ಭಾರತಕ್ಕೆ ಆಗಮನ: ‘ದಿ ಒಡಿಸ್ಸಿ’ ಪ್ರೀಮಿಯರ್‌ಗೆ ಮುಂಬೈ ಸಜ್ಜು!

by ಕವಿತಾ
June 17, 2026 - 6:36 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 06 17T184326.621
    ಅಭಿಮಾನಿಯ ಮನೆಗೆ ಭೇಟಿ ನೀಡಿ, ಬಾಲಕನ ಕೊನೆ ಆಸೆ ಈಡೇರಿಸಿದ ಪವನ್ ಕಲ್ಯಾಣ್
    June 17, 2026 | 0
  • Untitled design 2026 06 17T175456.531
    ಪ್ರಕಾಶ್ ರಾಜ್‌ಗೆ ಬ್ಯಾನ್ ಭಯ..ನಿಮಗಿದು ಬೇಕಿತ್ತಾ ಸರ್?!
    June 17, 2026 | 0
  • Untitled design 2026 06 17T173847.599
    ಜಿ7 ಶೃಂಗಸಭೆಯಲ್ಲಿ ಮತ್ತೆ ‘ಮೆಲೋಡಿ’ ಮ್ಯಾಜಿಕ್: “ಇನ್ಸ್ಟಾಗ್ರಾಂನ ಮೋಸ್ಟ್ ಫೇಮಸ್ ಕಪಲ್” ಎಂದ ಮೆಲೋನಿ!
    June 17, 2026 | 0
  • Untitled design 2026 06 17T170206.674
    ಶರ್ಮಿಳಾ ಮಾಂಡ್ರೆಗೆ ಕಂಕಣಭಾಗ್ಯ..ಯಾರೀ ತಮಿಳು ಪ್ರೊಡ್ಯೂಸರ್.?
    June 17, 2026 | 0
  • Untitled design 2026 06 17T164303.099
    ಭಾರತದಲ್ಲಿ ಶುರುವಾಯ್ತು ಸರ್ವಂ AI ಅಬ್ಬರ
    June 17, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version