ವಿಜಯಪುರ: ಭೀಮಾತೀರದಲ್ಲಿ ನಡೆಯಿತು ಮತ್ತೊಂದು ಅಮಾನವೀಯ ಘಟನೆ. ಹೆತ್ತ ಮಗ ತನ್ನಂತೆ ರೂಪ ಹೊಂದಿಲ್ಲವೆಂದು ನದಿಗೆ ತಳ್ಳಿ ಕೊಂದ ತಾನು ಹೆತ್ತ ಮಗನನ್ನೇ ಸಾಯಿಸಿದ್ದಾನೆ.
ಸ್ವಂತ ಮಗನನ್ನೇ ಕೊಲ್ಲುವಷ್ಟು ಕ್ರೂರತೆ ತೋರಿರುವ ಘಟನೆ ವಿಜಯಪುರ ಜಿಲ್ಲೆಯ ನಾಗಠಾಣ ಗ್ರಾಮದಲ್ಲಿ ನಡೆದಿದೆ. ತನ್ನ ಮಗ ಸಿದ್ದಾರ್ಥ ನೋಡಲು ತನ್ನಂತೆ ಇಲ್ಲ ಎಂದು ಗ್ರಾಮಸ್ಥರು ಛೇಡಿಸುತ್ತಿದ್ದಕ್ಕೆ ರೋಸಿ ಹೋದ ತಂದೆ ಮಲ್ಲಿಕಾರ್ಜುನ ಅರಕೇರಿ ಮಗನನ್ನು ಕೃಷ್ಣಾ ನದಿಗೆ ತಳ್ಳಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಅಮಾನವೀಯ ಘಟನೆ ಸ್ಥಳೀಯರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. https://youtu.be/gXZWp9M5q-I
ತಂದೆ ಮಲ್ಲಿಕಾರ್ಜುನ ಅರಕೇರಿ ಮಗನನ್ನು “ಶಾಲೆಗೆ ಸೇರಿಸುವುದಾಗಿ” ಹೇಳಿ ಹೊಸ ಬಟ್ಟೆ ಹಾಕಿಸಿ ಕರೆದೊಯ್ದು, ಮಹಾರಾಷ್ಟ್ರದ ಕರಾಡ್ ತಾಲೂಕಿನ ವಡೋಲಿ ಭೀಕೇಶ್ವರ ಬಳಿ ಕೃಷ್ಣಾ ನದಿ ದಂಡೆಗೆ ಕರೆದುಕೊಂಡು ಹೋಗಿ ನದಿಗೆ ತಳ್ಳಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದಿದೆ.
ಅಪ್ಪನೇ ಮಗನನ್ನು ಫಿನಿಶ್ ಮಾಡಲು ಕಾರಣಗಳು:
- ಗ್ರಾಮದ ಕೆಲವರು ಮಲ್ಲಿಕಾರ್ಜುನನನ್ನು “ನಿನ್ನ ಮಗ ನೋಡಲು ನಿನ್ನಂತೆ ಇಲ್ಲ” ಎಂದು ನಿರಂತರವಾಗಿ ಛೇಡಿಸುತ್ತಿದ್ದರು.
- ಈ ಛೇಡಿಗೆ ರೋಸಿ ಹೋದ ಮಲ್ಲಿಕಾರ್ಜುನ ಮಗನನ್ನು ಕೊಲ್ಲುವ ನಿರ್ಧಾರಕ್ಕೆ ಬಂದಿದ್ದಾನೆ.
- ಮಾರ್ಚ್ 16ರಂದು ಮಗನನ್ನು ಶಾಲೆಗೆ ಸೇರಿಸುವುದಾಗಿ ಹೇಳಿ ಮನೆಯಿಂದ ಕರೆದೊಯ್ದು, ಮಹಾರಾಷ್ಟ್ರದ ವಡೋಲಿ ಬಳಿ ಕೃಷ್ಣಾ ನದಿಗೆ ತಳ್ಳಿ ಹತ್ಯೆ ಮಾಡಿದ್ದಾನೆ.
- ಕೊಲೆಯ ನಂತರ ಮಗನನ್ನು ಸಿಂದಗಿ ಬಳಿ ಶಾಲೆಗೆ ಸೇರಿಸಿ ಹಾಸ್ಟೆಲ್ನಲ್ಲಿ ಇಟ್ಟಿದ್ದೇನೆ ಎಂದು ಮನೆಯವರಿಗೆ ಸುಳ್ಳು ಹೇಳಿದ್ದಾನೆ.
- ಏಪ್ರಿಲ್ 1ರಂದು ಮಗನ ಜನ್ಮದಿನಕ್ಕೆ ಕರೆತರುವಂತೆ ತಾಯಿ ಭಾಗ್ಯಶ್ರೀ ಪಟ್ಟುಹಿಡಿದಾಗ, ಮಗ ಎಲ್ಲಿದ್ದಾನೆ ಎಂದು ಕೇಳಿದ್ದಕ್ಕೆ ಮಲ್ಲಿಕಾರ್ಜುನ ಮನೆಯಿಂದ ನಾಪತ್ತೆಯಾಗಿದ್ದಾನೆ.
- ತಾಯಿ ಭಾಗ್ಯಶ್ರೀ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದ್ದಾರೆ.
- ಪೊಲೀಸ್ ವಿಚಾರಣೆ ವೇಳೆ ಮಲ್ಲಿಕಾರ್ಜುನ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.
ಪೊಲೀಸರು ಆರೋಪಿ ಮಲ್ಲಿಕಾರ್ಜುನ ಅರಕೇರಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮೃತದೇಹವು ಮಾರ್ಚ್ 18ರಂದು ಕರ್ನಾಟಕ-ಮಹಾರಾಷ್ಟ್ರ ಗಡಿ ಪ್ರದೇಶದ ಕೃಷ್ಣಾ ನದಿ ದಂಡೆಯಲ್ಲಿ ಪತ್ತೆಯಾಗಿತ್ತು.
ಗ್ರಾಮಸ್ಥರ ಛೇಡಿ ಮತ್ತು ಅಪಪ್ರಚಾರಗಳು ಒಂದು ಕುಟುಂಬವನ್ನು ಎಷ್ಟು ದುರಂತಕ್ಕೆ ತಳ್ಳಬಲ್ಲವು ಎಂಬುದನ್ನು ಈ ಘಟನೆ ತೋರಿಸುತ್ತಿದೆ. ಪೊಲೀಸರು ಮುಂದಿನ ತನಿಖೆಯನ್ನು ನಡೆಸುತ್ತಿದ್ದಾರೆ.





