ಬೆಂಗಳೂರು: ಯುಗಾದಿ ಹಬ್ಬ (Ugadi Festival) ಹತ್ತಿರ ಬರುತ್ತಿರುವಂತೆ, ಹೋಳಿಗೆ (ಒಬ್ಬಟ್ಟು) ಅಂಗಡಿಗಳಲ್ಲಿ ಭಾರೀ ಬೇಡಿಕೆ ಇದೆ. ಆದರೆ, ಇದೀಗ ಸರ್ಕಾರದಿಂದ ಈ ಮೆಚ್ಚಿನ ಸಿಹಿತಿಂಡಿಯ ಬಗ್ಗೆ ಗಂಭೀರ ಎಚ್ಚರಿಕೆ ಹೊರಡಿಸಲಾಗಿದೆ.
ರೆಡಿಮೇಡ್ ಹೋಳಿಗೆ ತಿನ್ನುವ ಮುನ್ನ ಜಾಗೃತರಾಗಿರಿ!
ಯುಗಾದಿ ಅಥವಾ ಇತರ ಹಬ್ಬಗಳಲ್ಲಿ ಕೆಲವರು ಮನೆಲಿ ಹೋಳಿಗೆ ತಯಾರಿಸುತ್ತಾರೆ, ಇನ್ನು ಹಲವು ಮಂದಿ ಸಮಯದ ಕೊರತೆಯಿಂದ ಅಂಗಡಿಗಳಲ್ಲಿ ರೆಡಿಮೇಡ್ ಹೋಳಿಗೆ ಖರೀದಿ ಮಾಡುತ್ತಾರೆ. ಆದರೆ, ಕೆಲವು ಹೋಳಿಗೆ ಅಂಗಡಿಗಳು ತಯಾರಿಕೆಯ ವೇಳೆ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಆಹಾರ ಇಲಾಖೆಯ ದಾಳಿ – ಅಂಗಡಿಗಳಿಗೆ ನೋಟಿಸ್!
ಆಹಾರ ಇಲಾಖೆ ರಾಜ್ಯದ ಹಲವೆಡೆ ದಾಳಿ ನಡೆಸಿದ್ದು, ಪ್ಲಾಸ್ಟಿಕ್ ಬಳಕೆ ಮಾಡಿರುವ ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ. ಪ್ಲಾಸ್ಟಿಕ್ ಕವರ್ ಬಳಸಿದರೆ ಅದರ ವಿಷಕಾರಿ ಅಂಶ ಹೋಳಿಗೆಗೆ ಸೇರುವ ಸಾಧ್ಯತೆ ಇದ್ದು, ಇದು ಆರೋಗ್ಯಕ್ಕೆ ಮಾರಕವಾಗಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಹೋಳಿಗೆ ಪ್ರಿಯರು ಇನ್ಮುಂದೆ ಏನು ಮಾಡಬೇಕು?
- ಮನೆಯಲ್ಲೇ ಹೋಳಿಗೆ ತಯಾರಿಸುವ ಪ್ರಯತ್ನ ಮಾಡಿ.
- ಅಂಗಡಿಗಳಿಂದ ಖರೀದಿಸುವ ಮೊದಲು ಗುಣಮಟ್ಟವನ್ನು ಪರಿಶೀಲಿಸಿ.
- ಪ್ಲಾಸ್ಟಿಕ್ ಮುಕ್ತ ಮತ್ತು ಹೈಜೀನಿಕ್ ಹೋಳಿಗೆ ಮಾರಾಟ ಮಾಡುವ ಅಂಗಡಿಗಳಿಂದ ಮಾತ್ರ ಖರೀದಿಸಿ.
- ಸರ್ಕಾರದ ನಿಯಮ ಪಾಲನೆ ಮಾಡುತ್ತಿರುವ ಸ್ಥಳೀಯ ಬ್ರಾಂಡ್ಗಳನ್ನು ಆರಿಸಿ.
ಪ್ಲಾಸ್ಟಿಕ್ ಬಳಕೆ ನಿಯಂತ್ರಣ – ಆರೋಗ್ಯ ಇಲಾಖೆಯ ಹೊಸ ನಿಯಮಗಳು
ಆಹಾರದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಸಾರ್ವಜನಿಕರು ತಮ್ಮ ಆರೋಗ್ಯದ ಬಗ್ಗೆ ಜಾಗೃತರಾಗಬೇಕು ಹಾಗೂ ಪ್ಲಾಸ್ಟಿಕ್ ಬಳಕೆ ಮಾಡುವ ಅಂಗಡಿಗಳನ್ನು ತಿಳಿಸಿ, ಸರಿಯಾದ ಕ್ರಮ ಕೈಗೊಳ್ಳಲು ಸಹಕರಿಸಬೇಕು.