ಬೆಂಗಳೂರು: ಕರ್ನಾಟಕ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಇಂದು ಮುಂಜಾನೆ ಮತ್ತು ಸಂಜೆಯ ವೇಳೆಗೆ ಭಾರಿ ಚಳಿ ಅನುಭವವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಉತ್ತರ ಕರ್ನಾಟಕದ ಒಳನಾಡು ಜಿಲ್ಲೆಗಳಲ್ಲಿ ಧೂಳು-ಮಂಜು ಸ್ವಲ್ಪ ಕಾಣಿಸಿಕೊಂಡರೆ, ದಕ್ಷಿಣ ಒಳನಾಡು ಹಾಗೂ ಮಲೆನಾಡು ಭಾಗದಲ್ಲಿ ಬೆಳಗ್ಗೆ ತಂಪಾದ ಗಾಳಿ ಬೀಸಲಿದೆ. ರಾಜ್ಯದ ಕೆಲವೆಡೆ ಸಾಧಾರಣ ಮಳೆ ಅಥವಾ ತುಂತುರು ಮಳೆಯ ಸಾಧ್ಯತೆಯೂ ಇದೆ. ಮುಂದಿನ 24 ಗಂಟೆಗಳಲ್ಲಿ ತಾಪಮಾನದಲ್ಲಿ ದೊಡ್ಡ ಬದಲಾವಣೆ ಇರುವುದಿಲ್ಲ, ಆದರೆ ರಾತ್ರಿ-ಬೆಳಗ್ಗೆ ಚಳಿ ಇನ್ನಷ್ಟು ಜಾಸ್ತಿಯಾಗುವ ನಿರೀಕ್ಷೆ ಇದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27° ಸೆ., ಕನಿಷ್ಠ 15° ಸೆ. ಆಕಾಶ ಸಾಮಾನ್ಯವಾಗಿ ಮೋಡ ಕವಿದಿರುತ್ತದೆ. ಬೆಳಗ್ಗೆ ಸ್ವಲ್ಪ ಮಂಜು-ಧೂಳು ಸಾಧ್ಯ. ಸಂಜೆ ತಂಪಾದ ಗಾಳಿ ಬೀಸಲಿದೆ. ಚಳಿ ಹೆಚ್ಚಾಗುವ ಸಾಧ್ಯತೆ ಇದೆ. ಇದಕ್ಕೆ ಸಂಬಂಧಿಸಿದ ಜಾಕೆಟ್ ಅಥವಾ ಶಾಲು ಒಂದನ್ನು ನಿಮ್ಮೊಟ್ಟಿಗೆ ಇಟ್ಟುಕೊಂಡಿರಿ.
ಮಲೆನಾಡು ಪ್ರದೇಶ (ಮಡಿಕೇರಿ, ಚಿಕ್ಕಮಗಳೂರು) ತುಂಬಾ ತಂಪಾಗಿರಲಿದೆ. ಮಡಿಕೇರಿಯಲ್ಲಿ ಗರಿಷ್ಠ 26° ಸೆ., ಕನಿಷ್ಠ 15° ಸೆ. ಮಾತ್ರವಲ್ಲ, ಚಿಕ್ಕಮಗಳೂರಿನಲ್ಲಿ ಕನಿಷ್ಠ 14° ಸೆ. ತಲುಪುವ ಸಾಧ್ಯತೆ. ಬೆಳಗ್ಗೆ ದಟ್ಟ ಮಂಜು ಕಾಣಿಸಿಕೊಳ್ಳಬಹುದು.
ಕರಾವಳಿ ಭಾಗ (ಮಂಗಳೂರು, ಉಡುಪಿ, ಕಾರವಾರ) ತುಂಬಾ ಬೆಚ್ಚಗೆ ಇರಲಿದೆ. ಗರಿಷ್ಠ ತಾಪಮಾನ 31–32° ಸೆ., ಆರ್ದ್ರತೆ ಹೆಚ್ಚಿರುವುದರಿಂದ ಆಯಾಸ ಅನುಭವವಾಗಬಹುದು.
ಇಂದಿನ ಪ್ರಮುಖ ನಗರಗಳ ಹವಾಮಾನ ವಿವರ
- ಬೆಂಗಳೂರು 27° 27 / 15
- ಮಂಗಳೂರು 31 / 23
- ಉಡುಪಿ 32 / 22
- ಕಾರವಾರ 31 / 24
- ಮೈಸೂರು 28 / 16
- ಮಡಿಕೇರಿ 26 / 15
- ಚಿಕ್ಕಮಗಳೂರು 25 / 14
- ಶಿವಮೊಗ್ಗ 29 / 17
- ಹಾಸನ 27 / 16
- ಮಂಡ್ಯ 29 / 16
- ತುಮಕೂರು 27 / 15
- ಚಾಮರಾಜನಗರ 28 / 16
- ಬೆಳಗಾವಿ 28 / 16
- ಹುಬ್ಬಳ್ಳಿ 29 / 16
- ದಾವಣಗೆರೆ 30 / 17
- ಚಿತ್ರದುರ್ಗ 28 / 16
- ಬಳ್ಳಾರಿ 28 / 16
- ವಿಜಯಪುರ 28 / 15
- ಕಲಬುರಗಿ 29 / 15
- ರಾಯಚೂರು 29 / 16
- ಬೀದರ್ 27 / 14
- ಚಿಕ್ಕಬಳ್ಳಾಪುರ 26 / 14
ವಿಶೇಷ ಸೂಚನೆ
- ಬೆಂಗಳೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳಲ್ಲಿ ಬೆಳಗ್ಗೆ 6ರಿಂದ 9 ಗಂಟೆಯವರೆಗೆ ಸ್ವಲ್ಪ ಧೂಳು-ಮಂಜು ಕಾಣಿಸಿಕೊಳ್ಳಬಹುದು.
- ಮಲೆನಾಡಿನಲ್ಲಿ ವಾಹನ ಚಾಲಕರು ಎಚ್ಚರಿಕೆಯಿಂದ ಓಡಾಡಿ.
- ಉತ್ತರ ಕರ್ನಾಟಕದಲ್ಲಿ ರಾತ್ರಿ ತಾಪಮಾನ 14–16° ಸೆ.ವರೆಗೆ ಇಳಿದು ಚಳಿ ಹೆಚ್ಚಾಗುವ ಸಾಧ್ಯತೆ ಇದೆ ಹಿಗಾಗಿ ಜನರು ಎಚ್ಚರದಿಂದ ಇರಿ.
- ರಾಜ್ಯದ ಕೆಲವೆಡೆ ಸಂಜೆಯ ವೇಳೆಗೆ ಒಂದೆಡೆ ತುಂತುರು ಮಳೆಯ ಸಾಧ್ಯತೆ ಇದೆ.
ಚಳಿಯಿಂದ ಉಸಿರಾಟದ ಸಮಸ್ಯೆ ಇರುವವರು, ಮಕ್ಕಳು ಹಾಗೂ ಹಿರಿಯರು ಬೆಚ್ಚಗಿನ ಬಟ್ಟೆ ಧರಿಸಿ, ಬೆಳಗ್ಗೆ-ಸಂಜೆ ಮನೆಯಿಂದ ಒಳಗೆ ಇರಲು ಪ್ರಯತ್ನಿಸಿ. ಎಲ್ಲರಿಗೂ ಆರೋಗ್ಯಕರ ಮತ್ತು ಆಹ್ಲಾದಕರ ದಿನ ಆಗಲಿ!





