ರಾಜ್ಯದಲ್ಲಿ ಇಂದು ಭೀಕರ ಚಳಿಯೊಂದಿಗೆ ಮಳೆಯಾಹುವ ಸಾಧ್ಯತೆ..! ಹವಾಮಾನ ಇಲಾಖೆ ಇಂದ ಎಚ್ಚರಿಕೆ

Untitled design 2025 12 12T071924.641

ಬೆಂಗಳೂರು: ಕರ್ನಾಟಕ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಇಂದು ಮುಂಜಾನೆ ಮತ್ತು ಸಂಜೆಯ ವೇಳೆಗೆ ಭಾರಿ ಚಳಿ ಅನುಭವವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಉತ್ತರ ಕರ್ನಾಟಕದ ಒಳನಾಡು ಜಿಲ್ಲೆಗಳಲ್ಲಿ ಧೂಳು-ಮಂಜು ಸ್ವಲ್ಪ ಕಾಣಿಸಿಕೊಂಡರೆ, ದಕ್ಷಿಣ ಒಳನಾಡು ಹಾಗೂ ಮಲೆನಾಡು ಭಾಗದಲ್ಲಿ ಬೆಳಗ್ಗೆ ತಂಪಾದ ಗಾಳಿ ಬೀಸಲಿದೆ. ರಾಜ್ಯದ ಕೆಲವೆಡೆ ಸಾಧಾರಣ ಮಳೆ ಅಥವಾ ತುಂತುರು ಮಳೆಯ ಸಾಧ್ಯತೆಯೂ ಇದೆ. ಮುಂದಿನ 24 ಗಂಟೆಗಳಲ್ಲಿ ತಾಪಮಾನದಲ್ಲಿ ದೊಡ್ಡ ಬದಲಾವಣೆ ಇರುವುದಿಲ್ಲ, ಆದರೆ ರಾತ್ರಿ-ಬೆಳಗ್ಗೆ ಚಳಿ ಇನ್ನಷ್ಟು ಜಾಸ್ತಿಯಾಗುವ ನಿರೀಕ್ಷೆ ಇದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27° ಸೆ., ಕನಿಷ್ಠ 15° ಸೆ. ಆಕಾಶ ಸಾಮಾನ್ಯವಾಗಿ ಮೋಡ ಕವಿದಿರುತ್ತದೆ. ಬೆಳಗ್ಗೆ ಸ್ವಲ್ಪ ಮಂಜು-ಧೂಳು ಸಾಧ್ಯ. ಸಂಜೆ ತಂಪಾದ ಗಾಳಿ ಬೀಸಲಿದೆ. ಚಳಿ ಹೆಚ್ಚಾಗುವ ಸಾಧ್ಯತೆ ಇದೆ. ಇದಕ್ಕೆ ಸಂಬಂಧಿಸಿದ ಜಾಕೆಟ್ ಅಥವಾ ಶಾಲು ಒಂದನ್ನು ನಿಮ್ಮೊಟ್ಟಿಗೆ ಇಟ್ಟುಕೊಂಡಿರಿ.

ಮಲೆನಾಡು ಪ್ರದೇಶ (ಮಡಿಕೇರಿ, ಚಿಕ್ಕಮಗಳೂರು) ತುಂಬಾ ತಂಪಾಗಿರಲಿದೆ. ಮಡಿಕೇರಿಯಲ್ಲಿ ಗರಿಷ್ಠ 26° ಸೆ., ಕನಿಷ್ಠ 15° ಸೆ. ಮಾತ್ರವಲ್ಲ, ಚಿಕ್ಕಮಗಳೂರಿನಲ್ಲಿ ಕನಿಷ್ಠ 14° ಸೆ. ತಲುಪುವ ಸಾಧ್ಯತೆ. ಬೆಳಗ್ಗೆ ದಟ್ಟ ಮಂಜು ಕಾಣಿಸಿಕೊಳ್ಳಬಹುದು.

ಕರಾವಳಿ ಭಾಗ (ಮಂಗಳೂರು, ಉಡುಪಿ, ಕಾರವಾರ) ತುಂಬಾ ಬೆಚ್ಚಗೆ ಇರಲಿದೆ. ಗರಿಷ್ಠ ತಾಪಮಾನ 31–32° ಸೆ., ಆರ್ದ್ರತೆ ಹೆಚ್ಚಿರುವುದರಿಂದ ಆಯಾಸ ಅನುಭವವಾಗಬಹುದು.

ಇಂದಿನ ಪ್ರಮುಖ ನಗರಗಳ ಹವಾಮಾನ ವಿವರ

ವಿಶೇಷ ಸೂಚನೆ

ಚಳಿಯಿಂದ ಉಸಿರಾಟದ ಸಮಸ್ಯೆ ಇರುವವರು, ಮಕ್ಕಳು ಹಾಗೂ ಹಿರಿಯರು ಬೆಚ್ಚಗಿನ ಬಟ್ಟೆ ಧರಿಸಿ, ಬೆಳಗ್ಗೆ-ಸಂಜೆ ಮನೆಯಿಂದ ಒಳಗೆ ಇರಲು ಪ್ರಯತ್ನಿಸಿ. ಎಲ್ಲರಿಗೂ ಆರೋಗ್ಯಕರ ಮತ್ತು ಆಹ್ಲಾದಕರ ದಿನ ಆಗಲಿ!

Exit mobile version