• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, August 16, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕರ್ನಾಟಕ

ಮಲ್ಟಿಪ್ಲೆಕ್ಸ್‌ಗೆ ಮೂಗುದಾರ.. ಫಿಕ್ಸ್ ಆಯ್ತು 200 ಟಿಕೆಟ್ ದರ

ಸರ್ಕಾರದ ಆದೇಶ ಆಗಿದೆ.. 15ದಿನದಲ್ಲಿ ರಾಜ್ಯಪತ್ರ ಪ್ರಕಟಣೆ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 16, 2025 - 2:32 pm
in ಕರ್ನಾಟಕ, ಸಿನಿಮಾ, ಸ್ಯಾಂಡಲ್ ವುಡ್
0 0
0
0 (1)

ಆಂಧ್ರ, ತಮಿಳುನಾಡು ಹಾಗೂ ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲೂ ಏಕರೂಪ ಟಿಕೆಟ್ ದರ ನೀತಿ ಜಾರಿಗೆ ತರುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳಲ್ಲಿ ಇನ್ಮೇಲೆ 200 ರೂಪಾಯಿ ಟೆಕೆಟ್ ದರ ಮೀರುವಂತಿಲ್ಲ. ಇದು ಯಾವಾಗಿಂದ ಅಧಿಕೃತವಾಗಿ ಜಾರಿ ಆಗಲಿದೆ? ಪರಭಾಷಾ ಸಿನಿಮಾಗಳ ಹಾವಳಿ ಜೊತೆ ಮಲ್ಟಿಪ್ಲೆಕ್ಸ್‌‌‌ಗಳಿಗೂ ಮೂಗುದಾರ ಹಾಕ್ತಿರೋ ಈ ಮಹತ್ವದ ಬೆಳವಣಿಗೆ ಚಿತ್ರರಂಗಕ್ಕೆ ವರವಚೋ ಶಾಪವೋ ಅನ್ನೋದ್ರ ಡಿಟೈಲ್ಡ್ ರಿಪೋರ್ಟ್‌ ಇಲ್ಲಿದೆ ನೋಡಿ.

  • ಮಲ್ಟಿಪ್ಲೆಕ್ಸ್‌ಗೆ ಮೂಗುದಾರ.. ಫಿಕ್ಸ್ ಆಯ್ತು 200 ಟಿಕೆಟ್ ದರ
  • ಸರ್ಕಾರದ ಆದೇಶ ಆಗಿದೆ.. 15ದಿನದಲ್ಲಿ ರಾಜ್ಯಪತ್ರ ಪ್ರಕಟಣೆ
  • ಸಿನಿಮಾ ಟೆಕೆಟ್ ದರ ಟ್ಯಾಕ್ಸ್ ಸೇರಿ 200 ರೂ ಮೀರುವಂತಿಲ್ಲ
  • ಬಜೆಟ್‌‌ನಲ್ಲಿ ಸಿಎಂ ಸಿದ್ದು ಮಾತು.. ನುಡಿದಂತೆ GO ಪಾಸ್ !

ಚಿತ್ರಮಂದಿರಗಳಿಗೆ ಜನ ಬರ್ತಿಲ್ಲ. ಸಿನಿಮಾಗಳ ಬಾಕ್ಸ್ ಆಫೀಸ್ ಕಲೆಕ್ಷನ್ ಆಗ್ತಿಲ್ಲ. ನಿರ್ಮಾಪಕರಿಗೆ ಹಾಕಿರೋ ಬಂಡವಾಳ ಬರ್ತಿಲ್ಲ ಅನ್ನೋ ಆರೋಪಗಳಿಗೆಲ್ಲಾ ಶಾಶ್ವತ ಪರಿಹಾರ ದೊರಕಿದೆ. ಆಂಧ್ರ, ತಮಿಳುನಾಡು, ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲೂ ಏಕರೂಪ ಟಿಕೆಟ್ ದರ ನೀತಿ ಜಾರಿ ಆಗಿದೆ. ಇನ್ಮೇಲೆ ಮಲ್ಟಿಪ್ಲೆಕ್ಸ್‌‌ಗಳು ಸೇರಿದಂತೆ ಚಿತ್ರಮಂದಿರಗಳಲ್ಲಿ 200 ರೂಪಾಯಿ ಟಿಕೆಟ್ ದರ ಮೀರುವಂತಿಲ್ಲ.

RelatedPosts

ಯೂಟರ್ನ್ ಶ್ರದ್ಧಾ ಶ್ರೀನಾಥ್‌‌ಗೆ ಬೇಕಿದೆ ಟರ್ನಿಂಗ್ ಪಾಯಿಂಟ್

ನದಿಗೆ ಬಿದ್ದ ಕಾರು: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ದಂಪತಿ

ನ್ಯೂ ಟೈಟಲ್..ಭಾರತಕ್ಕಿಂತ ಮೊದಲೇ ಚೀನಾದಲ್ಲಿ ರಾಮಾಯಣ ದರ್ಶನ

ಸ್ವಾತಂತ್ರ್ಯ ದಿನದಂದು ನೋಡಲೇಬೇಕಾದ 8 ಕನ್ನಡ ದೇಶಭಕ್ತಿ ಸಿನಿಮಾಗಳು

ADVERTISEMENT
ADVERTISEMENT

ಹೌದು, ಇತ್ತೀಚೆಗೆ ನಡೆದ ಸ್ಟೇಟ್ ಬಜೆಟ್‌‌ನಲ್ಲಿ ಸಿಎಂ ಸಿದ್ದರಾಮಯ್ಯನವರು ಏಕರೂಪ ಟಿಕೆಟ್ ದರ ನೀತಿಯನ್ನ ನೆರೆ ರಾಜ್ಯಗಳಂತೆ ಇಲ್ಲಿಯೂ ಜಾರಿಗೊಳಿಸಲಾಗುವುದು ಅಂತ ಹೇಳಿದ್ದರು. ಇದೀಗ ನುಡಿದಂತೆ ನಡೆದಿದ್ದಾರೆ ಸಿಎಂ ಸಿದ್ದರಾಮಯ್ಯ. ಕ್ಯಾಬಿನೆಟ್‌‌‌ನಲ್ಲಿ ಒಮ್ಮತದ ನಿರ್ಧಾರದೊಂದಿಗೆ ಸರ್ಕಾರ ಅಧಿಕೃತ ಆದೇಶ ಮಾಡಿ ಆಗಿದೆ. ಇದು ಮುಂದಿನ 15 ದಿನದಲ್ಲಿ ರಾಜ್ಯಪತ್ರದಲ್ಲಿ ಪ್ರಕಟಣೆ ಆಗಬೇಕಿದೆ. ಸಿಎಂ ಮುಖ್ಯ ಕಾರ್ಯದರ್ಶಿ ಸಹಿ ಹಾಕಿ, ಅದನ್ನ ರಾಜ್ಯಪಾಲರ ಅನುಮೋದನೆಗೆ ಕಳುಹಿಸುತ್ತಾರೆ. ಅಲ್ಲಿ ರಾಜ್ಯಪಾಲರ ಒಪ್ಪಿಗೆ ಮೇರೆಗೆ ರಾಜ್ಯಪತ್ರ ಹೊರಡಿಸಲಾಗುತ್ತೆ. ಅಲ್ಲಿಗೆ ಅದು ಅಧಿಕೃತ ಆಗಲಿದೆ.

ಎಲ್ಲಾ ಅಂದುಕೊಂಡಂತೆ ಆದ್ರೆ ಇದೇ ಆಗಸ್ಟ್ ಮೊದಲ ವಾರದಿಂದ ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್‌‌‌ ಹಾಗೂ ಚಿತ್ರಮಂದಿರಗಳಲ್ಲಿ ಟ್ಯಾಕ್ಸ್ ಸೇರಿ 200ರೂ ಟಿಕೆಟ್ ದರ ಕಡ್ಡಾಯಗೊಳ್ಳಲಿದೆ. ಇದರಿಂದ ಲಂಗು ಲಗಾಮು ಇಲ್ಲದೆ ಟಿಕೆಟ್ ಪ್ರೈಸ್ ಇಡ್ತಿದ್ದ ಪಿವಿಆರ್, ಐನಾಕ್ಸ್ ಅಂತಹ ಮುಂಬೈ ಬೇಸ್ಡ್ ಮಲ್ಟಿಪ್ಲೆಕ್ಸ್‌‌‌ಗಳ ಮೇಲೆ ಹಿಡಿತ ಸಾಧಿಸಿದಂತಾಗಲಿದೆ. ಅದರಲ್ಲೂ ಇದು ಕನ್ನಡ ಸಿನಿಮಾಗಳ ಮೇಲೆ ಹೆಚ್ಚು ಪ್ರಭಾವ ಬೀರಲ್ಲ. ಬದಲಿಗೆ ಪರಭಾಷಾ ಸೂಪರ್ ಸ್ಟಾರ್‌‌ಗಳ ಸಿನಿಮಾಗಳ ಬಾಕ್ಸ್ ಆಫೀಸ್ ಕಲೆಕ್ಷನ್‌ಗೆ ನೇರವಾಗಿ ಹೊಡೆತ ಕೊಡಲಿದೆ.

  • ಕರ್ನಾಟಕದಲ್ಲಿ ಹಗಲು ದರೋಡೆ ಮಾಡ್ತಿದ್ದ PVR, INOX
  • ಇನ್ಮೇಲೆ ಮನಸೋ ಇಚ್ಚೆ ಫಿಲ್ಮ್ ಟಿಕೆಟ್ ಪ್ರೈಸ್ ಇಡುವಂತಿಲ್ಲ
  • DCM ಬಚಾವ್.. ತಲೈವಾ, ಹೃತಿಕ್,  NTRಗೆ ಬಿಗ್ ಲಾಸ್
  • ಫ್ಯಾಮಿಲಿ ಸಮೇತ ಸಿನಿಮಾ ನೋಡಿ.. ಮನರಂಜನೆ ಈಗ ಅಗ್ಗ

ಆಂಧ್ರ, ಕೇರಳ ಹಾಗೂ ತಮಿಳುನಾಡಿನಲ್ಲಿ ಕುಟುಂಬ ಸಮೇತ ಥಿಯೇಟರ್‌ಗಳಿಗೆ ಹೋಗಿ ಸಿನಿಮಾಗಳನ್ನ ನೋಡ್ತಾರೆ. ವಾರವಿಡೀ ಕೆಲಸ ಕಾರ್ಯಗಳನ್ನ ಮಾಡುವ ಜನ ವಾರಾಂತ್ಯದಲ್ಲಿ ಮನರಂಜನೆಗಾಗಿ ಥಿಯೇಟರ್‌ಗೆ ಹೋಗ್ತಾರೆ. ಅಲ್ಲಿ ಟಿಕೆಟ್ ದರ ಕಮ್ಮಿ ಇರೋದ್ರಿಂದ ಎಲ್ಲರೂ ಒಟ್ಟಿಗೆ ಚಿತ್ರಗಳನ್ನು ವೀಕ್ಷಿಸ್ತಾರೆ. ಆದ್ರೆ ನಮ್ಮ ಕರ್ನಾಟಕದಲ್ಲಿ ಪರಭಾಷಾ ಸ್ಟಾರ್‌ಗಳ ಚಿತ್ರಗಳು ಬಂದ್ರೆ ಸಾಲು ಒಂದ್ಕಡೆ ಡಿಸ್ಟ್ರಿಬ್ಯೂಟರ್‌ಗಳು, ಮತ್ತೊಂದ್ಕಡೆ ಮಲ್ಟಿಪ್ಲೆಕ್ಸ್‌‌ಗಳು.. ಹೇಳೋರಿಲ್ಲ ಕೇಳೋರಿಲ್ಲ. ಇಷ್ಟ ಬಂದಷ್ಟು ಟಿಕೆಟ್ ದರ ಫಿಕ್ಸ್ ಮಾಡ್ತಿದ್ರು. ಆದ್ರೀಗ ಅದಕ್ಕೆಲ್ಲಾ ಬ್ರೇಕ್ ಬೀಳಲಿದೆ.

ಯಾವ್ಯಾವ ರಾಜ್ಯದಲ್ಲಿ ಎಷ್ಟಿದೆ ಟಿಕೆಟ್ ದರ..?

ರಾಜ್ಯ

ಟಿಕೆಟ್ ದರ (ರೂಪಾಯಿ)

ಆಂಧ್ರಪ್ರದೇಶ

195

ತಮಿಳುನಾಡು

196

ಕೇರಳ

190

ತೆಲಂಗಾಣ

190

ಕರ್ನಾಟಕ

200

ಅಂದಹಾಗೆ ಬಾಲಿವುಡ್ ಸೇರಿದಂತೆ ಸೌತ್ ಸಿನಿದುನಿಯಾದ ನೆರೆ ಚಿತ್ರರಂಗಗಳಿಗೆ ಬಿಗ್ ಮಾರ್ಕೆಟ್ ಕರ್ನಾಟಕ ಆಗಿತ್ತು. ಕಾರಣ ಇಲ್ಲಿ ಏಕರೂಪ ಟಿಕೆಟ್ ದರ ನೀತಿ ಇಲ್ಲದಿರೋದು. ಈಗ 200 ರೂಪಾಯಿಗೆ ಸೀಮಿತಗೊಳಿಸಿರೋದ್ರಿಂದ ಇದು ಮುಂಬರುವ ಪರಭಾಷಾ ಬಿಗ್ ಸ್ಟಾರ್ಸ್‌ ಬಿಗ್ ಮೂವೀಸ್ ಮೇಲೆ ನೇರವಾಗಿ ಪರಿಣಾಮ ಬೀಳಲಿದೆ. ಇದೇ ಜುಲೈ 24ಕ್ಕೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ನಟನೆಯ ಹರಿಹರವೀರ ಮಲ್ಲು ಸಿನಿಮಾ ಬರ್ತಿದೆ. ಜುಲೈ 31ಕ್ಕೆ ವಿಜಯ್ ದೇವರಕೊಂಡ ಕಿಂಗ್‌ಡಮ್ ಚಿತ್ರವೂ ತೆರೆಗೆ ಬರ್ತಿದೆ. ಬಹುಶಃ ಇವುಗಳ ಕಲೆಕ್ಷನ್‌ಗೆ ಹೊಡೆತ ಬೀಳಲ್ಲ. ಅಲ್ಲಿಗೆ ಇವರುಗಳು ಬಚಾವ್.

ಆದ್ರೆ ಆಗಸ್ಟ್‌ 14ಕ್ಕೆ ರಿಲೀಸ್ ಆಗ್ತಿರೋ ತಲೈವಾ ರಜನೀಕಾಂತ್‌ರ ಕೂಲಿ ಸಿನಿಮಾ ಹಾಗೂ ಹೃತಿಕ್-ಜೂನಿಯರ್ ಎನ್‌ಟಿಆರ್ ಕಾಂಬೋನ ವಾರ್-2 ಸಿನಿಮಾಗಳ ಬಾಕ್ಸ್ ಆಫೀಸ್‌‌ಗೆ ಕರ್ನಾಟಕದಲ್ಲಿ ಬಿಗ್ ಲಾಸ್ ಆಗಲಿದೆ. ಅದೇನೇ ಇರಲಿ, ಟಿಕೆಟ್ ದರ ಕಡಿಮೆ ಆದಲ್ಲಿ ನೋಡುಗರ ಸಂಖ್ಯೆ ಗಣನೀಯವಾಗಿ ಹೆಚ್ಚಲಿದೆ. ಇದ್ರಿಂದ ಚಿತ್ರರಂಗಕ್ಕೂ ಪ್ಲಸ್ ಆಗಲಿದೆ. ಸಿದ್ದು ಸರ್ಕಾರದ ಈ ನಿರ್ಧಾರದಿಂದ ಚಿತ್ರಪ್ರೇಮಿಗಳಂತೂ ದಿಲ್‌ಖುಷ್ ಆಗಿದ್ದಾರೆ. ಇದಕ್ಕೆ ಹದಿನೈದು ದಿನದಲ್ಲಿ ಯಾರಾದ್ರೂ ಆಕ್ಷೇಪಣೆ ವ್ಯಕ್ತಪಡಿಸ್ತಾರಾ, ಸಲಹೆಗಳನ್ನ ನೀಡ್ತಾರಾ ಅಥ್ವಾ ಸಮ್ಮತಿ ಸೂಚಿಸಿ, ರಾಜ್ಯಪತ್ರ ಹೊರಡಿಸೋಕೆ ಜೈ ಅಂತಾರಾ ಅನ್ನೋದನ್ನ ನಿರೀಕ್ಷಿಸಬೇಕಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಖರ್ಗೆ (8)

ಯೂಟರ್ನ್ ಶ್ರದ್ಧಾ ಶ್ರೀನಾಥ್‌‌ಗೆ ಬೇಕಿದೆ ಟರ್ನಿಂಗ್ ಪಾಯಿಂಟ್

by ಶಾಲಿನಿ ಕೆ. ಡಿ
August 15, 2026 - 6:35 pm
0

ಖರ್ಗೆ (7)

ನದಿಗೆ ಬಿದ್ದ ಕಾರು: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ದಂಪತಿ

by ಶಾಲಿನಿ ಕೆ. ಡಿ
August 15, 2026 - 6:13 pm
0

ಖರ್ಗೆ (6)

ನ್ಯೂ ಟೈಟಲ್..ಭಾರತಕ್ಕಿಂತ ಮೊದಲೇ ಚೀನಾದಲ್ಲಿ ರಾಮಾಯಣ ದರ್ಶನ

by ಶಾಲಿನಿ ಕೆ. ಡಿ
August 15, 2026 - 5:55 pm
0

ಖರ್ಗೆ (5)

ಸ್ವಾತಂತ್ರ್ಯೋತ್ಸವದಂದು ‘ವಂದೇ ಮಾತರಂ’ ಹಾಡಿಗೆ ಸೋನಿಯಾ ಗಾಂಧಿ ಆಕ್ಷೇಪ? ವಿಡಿಯೋ ವೈರಲ್

by ಶಾಲಿನಿ ಕೆ. ಡಿ
August 15, 2026 - 5:09 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಖರ್ಗೆ (7)
    ನದಿಗೆ ಬಿದ್ದ ಕಾರು: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ದಂಪತಿ
    August 15, 2026 | 0
  • ಖರ್ಗೆ (1)
    ವಿಧಾನಸೌಧದ ಮುಂದೆ ಇಂದು ‘ಫ್ರೀಡಂ ಹಬ್ಬ’: ಖ್ಯಾತ ಗಾಯಕರ ಸಂಗೀತ ರಸದೌತಣ!
    August 15, 2026 | 0
  • Untitled design 2026 08 15T131007.326
    ನವೀನ ಪಾರ್ಕ್ ರಾಜ್ಯದ ಮಾದರಿ ಬಡಾವಣೆಯನ್ನಾಗಿಸಲು ಸಂಕಲ್ಪ: ಡಾ. ವಿ.ಎಸ್.ವಿ. ಪ್ರಸಾದ್
    August 15, 2026 | 0
  • Untitled design 2026 08 15T130413.875
    72,000 ಸರ್ಕಾರಿ ಹುದ್ದೆಗಳ ಭರ್ತಿಗೆ 6 ತಿಂಗಳಲ್ಲಿ ಅಧಿಸೂಚನೆ; ಸಿಎಂ ಡಿಕೆಶಿ ಘೋಷಣೆ
    August 15, 2026 | 0
  • ಕೆಂಪುಕೋಟೆಯಲ್ಲಿ (4)
    ಚಾಮರಾಜನಗರದ ದಟ್ಟ ಕಾಡಿನಲ್ಲಿ ಗುಂಡಿನ ಚಕಮಕಿ; ಮೂವರು ಬೇಟೆಗಾರರು ಬಲಿ
    August 15, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version