ಬೆಳಗಾವಿಯಲ್ಲಿ ಪದೇ ಪದೇ ಭಾಷಾ ಸಾಮರಸ್ಯ ಕದಡಿದ ಆರೋಪದ ಮೇಲೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಾಯಕ ಶುಭಂ ಶೆಳ್ಕೆಯನ್ನು ಮಾಳಮಾರುತಿ ಪೊಲೀಸರು ಬಂಧನೆ ಮಾಡಿದ್ದಾರೆ. ಇತ್ತೀಚೆಗೆ ಬೆಳಗಾವಿಯ ಬಸ್ ನಿರ್ವಾಹಕರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮರ್ಧಿಸಿಕೊಂಡಿದ್ದ, ಕನ್ನಡ ಸಂಘಟನೆಗಳು “ನಾಲಾಯಕ್” ಹೇಳಿಕೆಗಳು ಈ ಬಂಧನಕ್ಕೆ ಕಾರಣವಾಗಿವೆ.
ಮರಾಠಿ ಭಾಷೆಯನ್ನು ಒತ್ತಾಯಪೂರ್ವಕವಾಗಿ ಮಾತನಾಡುವಂತೆ ಪಿಡಿಒಗೆ ಬೆದರಿಕೆ ಹಾಕಿದ್ದ ಪುಂಡನಿಗೆ ಸನ್ಮಾನ ಮಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ. ಇದೇ ಹಿನ್ನೆಲೆಯಲ್ಲಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
ಶುಭಂ ಶೆಳ್ಕೆಯ ಬಂಧನದಿಂದ ಮರಾಠಿ ಪುಂಡರ ಅನಗತ್ಯ ಕಿರಿಕ್ಗಳಿಗೆ ಮುಂದಿನ ದಿನಗಳಲ್ಲಿ ತಡೆ ಬಿಳುವ ಸಾಧ್ಯತೆ ಇದಿಯಾ ಎಂಬುದು ಕಾದು ನೋಡಬೇಕಿದೆ.