ದಕ್ಷಿಣ ಭಾರತದ ಸಿನಿಪ್ರೇಮಿಗಳ ಬಹುದಿನಗಳ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ‘ಗೀತ ಗೋವಿಂದಂ’ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಪ್ರೇಮಕಥೆ ಈಗ ಮದುವೆಯ ಪವಿತ್ರ ಬಂಧಕ್ಕೆ ಕಾಲಿಡುತ್ತಿದೆ. ರಾಜಸ್ಥಾನದ ಸಾಂಸ್ಕೃತಿಕ ನಗರಿ ಉದಯಪುರದ ಐಷಾರಾಮಿ ಹೋಟೆಲ್ನಲ್ಲಿ ಈ ಅದ್ಧೂರಿ ವಿವಾಹಕ್ಕೆ ಕ್ಷಣಗಣನೆ ಶುರುವಾಗಿದೆ.
ಮೂರು ಹಂತದ ಬಿಗಿ ಭದ್ರತೆ
ಈ ಜೋಡಿಯ ಮದುವೆಯು ಅತ್ಯಂತ ಗೌಪ್ಯವಾಗಿ ನಡೆಯುತ್ತಿದ್ದು, ಭದ್ರತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಸ್ಥಳೀಯ ಪೊಲೀಸರು, ಹೈದರಾಬಾದ್ನ ವಿಶೇಷ ಸೆಕ್ಯೂರಿಟಿ ಟೀಮ್ ಹಾಗೂ ಅಂತಾರಾಷ್ಟ್ರೀಯ ಭದ್ರತಾ ಏಜೆನ್ಸಿಯನ್ನೊಳಗೊಂಡ ಮೂರು ಹಂತದ ಭದ್ರತೆಯನ್ನು ವಿವಾಹ ಸ್ಥಳದಲ್ಲಿ ನಿಯೋಜಿಸಲಾಗಿದೆ. ಅರಾವಳಿ ಬೆಟ್ಟಗಳ ನಡುವೆ ಇರುವ ಈ ಖಾಸಗಿ ಹೋಟೆಲ್ ಈಗ ಕೋಟೆಯಂತಾಗಿದ್ದು, ಅತಿಥಿಗಳ ಫೋನ್ ಬಳಕೆಯ ಮೇಲೆ ಕಟ್ಟುನಿಟ್ಟಿನ ನಿಷೇಧ ಹೇರಲಾಗಿದೆ.
ಮದುವೆ ಕಾರ್ಯಕ್ರಮಗಳ ವೇಳಾಪಟ್ಟಿ
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ವಿವಾಹದ ಸಂಭ್ರಮ ಇಂದಿನಿಂದಲೇ (ಫೆಬ್ರವರಿ 24) ಆರಂಭವಾಗಿದೆ: ಇಂದು ಮೆಹಂದಿ ಸಮಾರಂಭದೊಂದಿಗೆ ಮದುವೆ ಶಾಸ್ತ್ರಗಳಿಗೆ ಚಾಲನೆ ಸಿಕ್ಕಿದ್ದು, ಫೆಬ್ರವರಿ 25 (ಬುಧವಾರ), ಅದ್ದೂರಿ ಸಂಗೀತ ಸಂಜೆ (Sangeet Ceremony) ನಡೆಯಲಿದ್ದು, ಕುಟುಂಬಸ್ಥರು ಮತ್ತು ಆಪ್ತ ಗೆಳೆಯರು ಹೆಜ್ಜೆ ಹಾಕಲಿದ್ದಾರೆ. ಕಡೆಗೆ ಫೆಬ್ರವರಿ 26 (ಗುರುವಾರ) ದಂದು, ರಶ್ಮಿಕಾ ಮತ್ತು ವಿಜಯ್ ವಿವಾಹ ಮಹೋತ್ಸವ ಜರುಗಲಿದೆ.
ಕೇವಲ 100 ಮಂದಿಗೆ ಆಹ್ವಾನ: ವಿಶೇಷ ಖಾದ್ಯಗಳ ಮೆನು
ಆಡಂಬರಕ್ಕಿಂತ ಹೆಚ್ಚು ಆಪ್ತತೆಗೆ ಒತ್ತು ನೀಡಿರುವ ಈ ಜೋಡಿ, ಕೇವಲ 100 ಮಂದಿ ಆಪ್ತ ಅತಿಥಿಗಳನ್ನು ಮಾತ್ರ ಮದುವೆಗೆ ಆಹ್ವಾನಿಸಿದೆ. ಬಂದಿರುವ ಅತಿಥಿಗಳಿಗೆ ವಿಶೇಷ ಅನುಭವ ನೀಡಲು ಆಹಾರದ ಮೆನುವಿನಲ್ಲಿ ವೈವಿಧ್ಯಮಯ ಜಪಾನೀಸ್ ಖಾದ್ಯಗಳನ್ನು (Japanese Cuisine) ಸೇರಿಸಲಾಗಿದೆ. ರಶ್ಮಿಕಾ ಅವರ ಜಪಾನ್ ಪ್ರವಾಸದ ಮೇಲಿನ ಪ್ರೀತಿಯೇ ಈ ವಿಶೇಷ ಮೆನುವಿಗೆ ಕಾರಣ ಎನ್ನಲಾಗುತ್ತಿದೆ.
ಹೈದರಾಬಾದ್ನಲ್ಲಿ ಅದ್ದೂರಿ ಆರತಕ್ಷತೆ
ಮದುವೆಯು ಆಪ್ತರ ಸಮ್ಮುಖದಲ್ಲಿ ಉದಯಪುರದಲ್ಲಿ ನಡೆದರೂ, ಚಿತ್ರರಂಗದ ಮಿತ್ರರಿಗಾಗಿ ಮತ್ತು ಗಣ್ಯರಿಗಾಗಿ ಮಾರ್ಚ್ 4ರಂದು ಹೈದರಾಬಾದ್ನಲ್ಲಿ ಬೃಹತ್ ಆರತಕ್ಷತೆ (Reception) ಏರ್ಪಡಿಸಲಾಗಿದೆ. ಅಲ್ಲಿ ಟಾಲಿವುಡ್, ಸ್ಯಾಂಡಲ್ವುಡ್ ಸೇರಿದಂತೆ ಭಾರತೀಯ ಚಿತ್ರರಂಗದ ತಾರೆಗಳು ಭಾಗವಹಿಸಲಿದ್ದಾರೆ.
ಸದ್ಯ ಎರಡೂ ಕುಟುಂಬಗಳು ಉದಯಪುರದಲ್ಲಿ ಬೀಡುಬಿಟ್ಟಿದ್ದು, ಕೊಡಗಿನ ಬೆಡಗಿ ರಶ್ಮಿಕಾ ಮತ್ತು ಹೈದರಾಬಾದ್ ಹೈದ ವಿಜಯ್ ಮದುವೆಯ ಫೋಟೋಗಳಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.





