ಸದ್ಯ ಡಿಬಾಸ್ ದರ್ಶನ್ ಸ್ಥಿತಿ ಬಿಗಾಡಿಯಿಸಿದೆ. ಜೈಲು ಹಕ್ಕಿಯಾಗಿರೋ ದಾಸ ಯಾವಾಗ ಹೊರಬರ್ತಾರೋ ಗೊತ್ತಿಲ್ಲ. ಆದ್ರೆ ರೇಣುಕಾಸ್ವಾಮಿ ತರಹನೇ ದಚ್ಚು ಮ್ಯಾನೇಜರ್ ಮಲ್ಲಿ ಕೂಡ ಯಾವುದೋ ಮೋರಿ ಸೇರಿರಬಹುದಾ ಅಂದುಕೊಂಡಿದ್ರು ಜನ. ಅದಕ್ಕೀಗ ಕ್ಲ್ಯಾರಿಟಿ ಸಿಕ್ಕಿದೆ. ದರ್ಶನ್ ಮ್ಯಾನೇಜರ್ ಮಲ್ಲಿಕಾರ್ಜುನ್ ಮರಳಿ ಬಂದಿದ್ದಾರೆ. ಆ ಕುರಿತ ಸೂಪರ್ ಎಕ್ಸ್ಕ್ಲೂಸಿವ್ ಸ್ಟೋರಿ ಇಲ್ಲಿದೆ.
- ಮರಳಿ ಬಂದ ಡಿಬಾಸ್ ಮ್ಯಾನೇಜರ್ ಮಲ್ಲಿ..
- ಇಷ್ಟು ದಿನ ಇದ್ದಿದ್ದೆಲ್ಲಿ..?
- ರೇಣುಕಾಸ್ವಾಮಿ ರೀತಿ ಮೋರಿ ಸೇರಿಲ್ಲ ಮಲ್ಲಿಕಾರ್ಜುನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಲಗೈ ಭಂಟನಂತಿದ್ದ ಅವರ ಆಪ್ತಮಿತ್ರ ಕಮ್ ಮ್ಯಾನೇಜರ್ ಮಲ್ಲಿಕಾರ್ಜುನ ಸಂಕನಗೌಡರ್ ಕಳೆದ ಏಳೆಂಟು ವರ್ಷಗಳಿಂದ ನಾಪತ್ತೆ ಆಗಿಬಿಟ್ಟಿದ್ದರು. ರೇಣುಕಾಸ್ವಾಮಿ ಮರ್ಡರ್ ಕೇಸ್ ಬಳಿಕ ಖಾಕಿ ಪಡೆ ದಚ್ಚು ಮ್ಯಾನೇಜರ್ ಮಲ್ಲಿ ನಾಪತ್ತೆಯನ್ನ ದರ್ಶನ್ ನ ಪ್ರಶ್ನಿಸಿದ್ರು. ಮಲ್ಲಿ ಸತ್ತು ಹೋಗಿರಬಹುದು. ನಟ ದರ್ಶನ್ ಆತನನ್ನ ಮುಗಿಸಿ ತೋಟದ ಮನೆಯಲ್ಲಿ ಹೂತು ಹಾಕಿರಬಹುದು ಅನ್ನೋ ಗಂಭೀರ ಆರೋಪಗಳು ಸಾರ್ವಜನಿಕ ವಲಯದಲ್ಲಿ ಹರಿದಾಡಿದ್ದವು.
ಈ ಬಗ್ಗೆ ದಾಸ ದರ್ಶನ್ ಮಾತ್ರ ಅವನು ಎಲ್ಲೂ ಹೋಗಿಲ್ಲ. ಇದ್ದಾನೆ ಅಷ್ಟೇ. ಅವನ ಬಗ್ಗೆ ಜಾಸ್ತಿ ಪ್ರಶ್ನೆ ಮಾಡಬೇಡಿ ಅಂತ ಮಾರ್ಮಿಕವಾಗಿಯೇ ಉತ್ತರಿಸುತ್ತಾ ಮಲ್ಲಿ ನಾಪತ್ತೆ ವಿಷಯವನ್ನ ಬಹಳ ರಹಸ್ಯವಾಗಿ ಇಟ್ಟಿದ್ದರು. ಅಂದಹಾಗೆ ಮಲ್ಲಿ 7 ವರ್ಷಗಳ ಹಿಂದೆ ಮನೆ ಮಠ, ಊರು ಬಿಟ್ಟು ಪಲಾಯನ ಆಗೋದಕ್ಕೆ ಕಾರಣ ಕೈ ಸಾಲಗಳು. ತೂಗುದೀಪ ವಿತರಣಾ ಸಂಸ್ಥೆಯ ಜವಾಬ್ದಾರಿ ಹೊತ್ತಿದ್ದ ಮಲ್ಲಿ, ಅರ್ಜುನ್ ಸರ್ಜಾರ ಪ್ರೇಮಬರಹ ಸಿನಿಮಾದ ಡಿಸ್ಟ್ರಿಬ್ಯೂಷನ್ ಮಾಡಿ, ಅವ್ರಿಗೆ ಯಾವುದೇ ಲೆಕ್ಕ ಕೊಡದೆ, ಕೋಟಿ ರೂಪಾಯಿ ಹೊತ್ತು ದಿಢೀರ್ ಅಂತ ಗಾಯಬ್ ಆಗಿದ್ರು.
- ಕೋಟಿ ಕೋಟಿ ಸಾಲ.. ಸಾಲಕ್ಕೆ ಹೆದರಿ ಊರಿಂದ ಎಸ್ಕೇಪ್
- ದರ್ಶನ್ಗೆ ಗೊತ್ತಿತ್ತು ಮಲ್ಲಿ ಅಜ್ಞಾತವಾಸದ ಅಸಲಿಯತ್ತು..!
ಕೋರ್ಟ್, ಕಟ್ಟಳೆ ಅಂತ ಅರ್ಜುನ್ ಸರ್ಜಾ ಅಲೆದು ಅಲೆದು ಸುಮ್ಮನಾದ್ರು. ದರ್ಶನ್ ಹೆಸರಲ್ಲಿ ಕೂಡ ಇಂಡಸ್ಟ್ರಿಯಲ್ಲಿ ನಟ ದರ್ಶನ್ಗೇ ಗೊತ್ತಾಗದಂತೆ ಹಣ ಪೀಕುವ ಕೆಲಸ ಕೂಡ ಮಾಡಿದ್ರಂತೆ ಮಲ್ಲಿ. ನಂತ್ರ ಆ ಸಾಲಗಳ ಬೆಟ್ಟ ದೊಡ್ಡದಾಗ್ತಾ ಆಗ್ತಾ ಊರು ಕೇರಿ ಬಿಟ್ಟು ತಲೆ ಮರೆಸಿಕೊಳ್ಳುವ ಪ್ರಮೇಯ ಎದುರಾಗುತ್ತೆ. ನಿರ್ದೇಶಕ ಚಿಂತನ್ ಹಾಗೂ ದರ್ಶನ್ ಸಹೋದರ ದಿನಕರ್ ತೂಗುದೀಪ ಅವರು ಮಲ್ಲಿಕಾರ್ಜುನ ಅವ್ರ ಉತ್ತರ ಕರ್ನಾಟಕದಲ್ಲಿದ್ದ ಮನೆಗೂ ತೆರಳಿ ವಿಚಾರಿಸ್ತಾರೆ. ಆದ್ರೆ ಮಲ್ಲಿ ಕುಟುಂಬದ ಪರಿಸ್ಥಿತಿ ನೋಡಿ, ಕಾನೂನಿನಾತ್ಮಕ ಹೋರಾಟ ಮಾಡೋಕೆ ಮನಸಾಗದೆ ವಾಪಸ್ ಆಗ್ತಾರೆ.

ಆದ್ರೆ ಡಿಬಾಸ್ ದರ್ಶನ್ ಮಾತ್ರ ಮಲ್ಲಿ ವಿಚಾರ ಜಾಸ್ತಿ ತಲೆ ಕೆಡಿಸಿಕೊಂಡಿರಲಿಲ್ಲ. ಯಾಕಂದ್ರೆ ಮಲ್ಲಿ ಎಲ್ಲಿದ್ದಾನೆ ಏನು ಮಾಡ್ತಿದ್ದಾನೆ ಅನ್ನೋದು ಅವರಿಗೆ ಅರಿವಿತ್ತು. ಹಾಗಾಗಿಯೇ ತಲಾಶ್ ಮಾಡುವ ಕೆಲಸಕ್ಕೆ ಕಥ ಹಾಕಲೇ ಇಲ್ಲ ಚಾಲೆಂಜಿಂಗ್ ಸ್ಟಾರ್ ದರ್ಶನ್. ಆದ್ರೀಗ ಮಲ್ಲಿ ನಾಪತ್ತೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಅದೇನಪ್ಪಾ ಅಂದ್ರೆ ತನ್ನ ಒಡೆಯ ದಾಸ ದರ್ಶನ್ ಸಂಕಷ್ಟದಲ್ಲಿರೋದು ಗೊತ್ತಾಗಿ ದಿಢೀರ್ ಅಂತ ಪ್ರತ್ಯಕ್ಷವಾಗಿದ್ದಾರೆ ಮಲ್ಲಿಕಾರ್ಜುನ ಸಂಕನಗೌಡರ್. ಹೌದು.. ಸಿನಿಬಜ್ ಅರುಣ್ ಕುಮಾರ್ ವರದಿ ಪ್ರಕಾರ ಮಲ್ಲಿ ಇತ್ತೀಚೆಗೆ ಕನಕಪುರ ರಸ್ತೆಯಲ್ಲಿರೋ ರವಿಶಂಕರ್ ಗುರೂಜಿಯ ಆರ್ಟ್ ಆಫ್ ಲಿವಿಂಗ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲಿ ಪಾಪಗಳ ಪ್ರಾಯಶ್ಚಿತ್ತ ಮಾಡಿಕೊಂಡಿದ್ದಾರಂತೆ.
ದರ್ಶನ್ ಡೇಟ್ಸ್, ರೆಮ್ಯುನರೇಷನ್, ಹೋಮ್ ಬ್ಯಾನರ್ ಪ್ರೊಡಕ್ಷನ್ ಪ್ಲ್ಯಾನಿಂಗ್ಸ್, ಡಿಸ್ಟ್ರಿಬ್ಯೂಷನ್, ಬ್ಯುಸಿನೆಸ್.. ಹೀಗೆ ಇಡೀ ದಾಸನ ಲೇವಾದೇವಿಗಳ ಲೆಕ್ಕಾಧಿಕಾರಿ ಆಗಿದ್ದ ಮಲ್ಲಿಕಾರ್ಜುನ ಇದೀಗ ವಾಪಸ್ ಆಗಿರೋದು ಹತ್ತು ಹಲವು ಅನುಮಾನಗಳಿಗೆ ಕಾರಣವಾಗಿದೆ. ಆದ್ರೆ ಮಲ್ಲಿ ತಮ್ಮ ಮುಖವಾಡ ಕಳಚಿ ಪ್ರಸ್ತುತ ಸಮಾಜಕ್ಕೆ ಬರ್ತಾರಾ..? ಬಂದು ಧೈರ್ಯವಾಗಿ ಮಾಡಿರೋ ಸಾಲಗಳನ್ನ ತೀರಿಸೋಕೆ ಅಂತ ಕಷ್ಟಪಟ್ಟು ದುಡಿಯುತ್ತಾರಾ..? ಮಕ್ಕಳು, ಹೆಂಡ್ತಿ ಸೇರಿದಂತೆ ಕುಟುಂಬಸ್ಥರು ಹಾಗೂ ಹಿತೈಷಿಗಳ ಜೊತೆ ಬೆರೆಯುತ್ತಾರಾ ಅಥ್ವಾ ಮತ್ತೆ ಅಜ್ಞಾತವಾಸಕ್ಕೆ ಹೋಗ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ. ಒಟ್ಟಾರೆ ಮಲ್ಲಿ ಎಲ್ಲಿ ಎಲ್ಲಿ ಅಂತಿದ್ದೋರಿಗೆ ಆತ ಇಲ್ಲೇ ಇದ್ದಾನೆ. ಸತ್ತಿಲ್ಲ.. ಜೀವಂತವಾಗಿದ್ದಾನೆ ಅನ್ನೋದಂತೂ ಪಕ್ಕಾ ಆಗಿದೆ.





