ಇದು ಸ್ಯಾಂಡಲ್ವುಡ್ನ ಆ ಕರಾಳ ಕೊಲೆ ಕೇಸ್ನ ಮತ್ತೊಂದು ದಿಗಿಲು ಹುಟ್ಟಿಸೋ ಅಪ್ಡೇಟ್. ರೇಣುಕಸ್ವಾಮಿ ಹತ್ಯೆ ಹಳೇ ಕಥೆ ಆಯ್ತು ಅನ್ಕೋಬೇಡಿ, ಯಾಕಂದ್ರೆ ಸಾಕ್ಷಿ ನಿಲ್ಲೋಕೆ ಬಂದವ್ರಿಗೆ ಬೆದರಿಕೆ ಹಾಕಿದ್ದ ‘ಡಿ-ಕಂಪನಿ’ ಅಡ್ಮಿನ್ ಇಂಟರೋಗೇಷನ್ನಲ್ಲಿ ಈಗ ಅಸಲಿ ಬಾಂಬ್ ಸಿಡಿಯೋ ಮುನ್ಸೂಚನೆ ಸಿಕ್ಕಿದೆ. ಆ ಆಘಾತಕಾರಿ ರಿಪೋರ್ಟ್ ಇಂದು ಖಾಕಿ ಕೈ ಸೇರಲಿದ್ದು, ಸ್ಯಾಂಡಲ್ವುಡ್ ಸುಲ್ತಾನನ ಆಪ್ತವಲಯಕ್ಕೆ ನಡುಕ ಶುರುವಾಗಿದೆ.
- ಸಾಕ್ಷಿ ಬೆದರಿಕೆ ಮಾಸ್ಟರ್ಮೈಂಡ್ ಲಾಕ್.. ಕೇಳಿದ್ರೆ ಶಾಕ್ ಆಗ್ತೀರಾ
- ಡಿಬಾಸ್ ಹುಡ್ಗನ ಬಳಿ ಐದೈದು ಮೊಬೈಲ್.. ಎಲ್ಲಾ FSLಗೆ ಶಿಫ್ಟ್..!
- ಡಿಲೀಟ್ ಆದ ಚಾಟ್ಸ್… ಸಿಐಡಿ ಬಿಟ್ಟ ಟೆಕ್ನಿಕಲ್ ಬಾಣ..!
- ಡಿ-ಕಂಪನಿ ಅಡ್ಮಿನ್ ಪುನೀತ್ಗೆ ಮತ್ತೆ ‘ಖಾಕಿ’ ಕಸ್ಟಡಿ ಫಿಕ್ಸ್
ಕಾನೂನಿನ ಕಣ್ಣಿಗೆ ಮಣ್ಣೆರಚಿ, ಸಾಕ್ಷಿಗಳನ್ನ ಹೆದರಿಸಿ ಉಡಾಯಿಸಿಬಿಡಬಹುದು ಅಂದುಕೊಂಡಿದ್ದ ಕೆಲವು ದರ್ಶನ್ ಫ್ಯಾನ್ಸ್ ಅಹಂಕಾರಕ್ಕೆ ಈಗ ಅಕ್ಷರಶಃ ಗ್ರಹಣ ಹಿಡಿದಿದೆ. 49ನೇ ಸಾಕ್ಷಿ ಸಂದೀಪ್ಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಈಗ ಅಂತಿಮ ಕೌಂಟ್ಡೌನ್ ಶುರುವಾಗಿದೆ. ಕಾಮಾಕ್ಷಿಪಾಳ್ಯ ಪೊಲೀಸರ ಕೈ ಸೇರಲಿರೋ ಆ ಒಂದು ‘ಮೊಬೈಲ್ ಎಕ್ಸ್ಟ್ರಾಕ್ಟ್ ರಿಪೋರ್ಟ್’ ಇಡೀ ಕೇಸ್ನ ದಿಕ್ಕನ್ನೇ ಬದಲಿಸಲಿದೆ. ಈ ಡಿ-ಫ್ಯಾನ್ಸ್ ಗೂಂಡಾಗಿರಿಯ ಹಿಂದಿರೋ ಆ ಮಾಸ್ಟರ್ ಮೈಂಡ್, ಆ ಅಸಲಿ ಮುಖ ಯಾರದ್ದು ಅನ್ನೋದು ಇವತ್ತು ಜಗಜ್ಜಾಹೀರಾಗಲಿದೆ.
ತನಿಖೆ ವೇಳೆ ಸಿಕ್ಕಿಬಿದ್ದ ಆ ಮೂವರು ಆರೋಪಿಗಳು ವಾಟ್ಸಾಪ್ ಚಾಟ್ಸ್, ಕಾಲ್ ಹಿಸ್ಟರಿ ಎಲ್ಲವನ್ನೂ ಡಿಲೀಟ್ ಮಾಡಿ ಪೊಲೀಸರನ್ನೇ ದಿಕ್ಕು ತಪ್ಪಿಸೋಕೆ ಪ್ಲ್ಯಾನ್ ಹಾಕಿದ್ರು. ಆದರೆ, ಖಾಕಿ ಪಡೆ ಸುಮ್ಮನೆ ಬಿಡುತ್ತಾ? ಮೊಬೈಲ್ಗಳನ್ನು ಸಿಐಡಿ ಟೆಕ್ನಿಕಲ್ ಸೆಲ್ಗೆ ರವಾನಿಸಿ, ಸೈಬರ್ ಎಕ್ಸ್ಪರ್ಟ್ಸ್ ಮೂಲಕ ಡೇಟಾ ರಿಟ್ರೀವ್ ಮಾಡಿಸಿದೆ. ಅಳಿಸಿ ಹಾಕಿದ್ದ ಪ್ರತಿ ಚಾಟ್, ಪ್ರತಿ ಆಡಿಯೋ ಕ್ಲಿಪ್ ಈಗ ಮತ್ತೆ ಜೀವ ಪಡೆದುಕೊಂಡಿದ್ದು, ಇಂದು ಕಾಮಾಕ್ಷಿಪಾಳ್ಯ ಪೊಲೀಸರ ಟೇಬಲ್ ಮೇಲೆ ಲೇಟೆಸ್ಟ್ ಆಯುಧವಾಗಿ ಕೂರಲಿದೆ.
ಈ ಇಡೀ ಸಾಕ್ಷಿ ಬೆದರಿಕೆ ಹೈಡ್ರಾಮಾದ ಕಿಂಗ್ಪಿನ್, ದರ್ಶನ್ ಆಪ್ತ ಹಾಗೂ ‘ಡಿ-ಕಂಪನಿ’ ಸೋಶಿಯಲ್ ಮೀಡಿಯಾ ಪೇಜ್ನ ಅಡ್ಮಿನ್ ಪುನೀತ್ ಸದ್ಯ ಪೊಲೀಸರ ಪಂಜರದಲ್ಲಿದ್ದಾನೆ. ಈತನ ಕೈವಾಡವಿಲ್ಲದೆ ಈ ಬೆದರಿಕೆ ತಂತ್ರ ನಡೆಯೋಕೆ ಸಾಧ್ಯವೇ ಇಲ್ಲ ಅನ್ನೋದು ಪಕ್ಕಾ ಆಗ್ತಿದ್ದಂತೆ, ಕೋರ್ಟ್ನಿಂದ ಐದು ದಿನಗಳ ಕಾಲ ಹೆಚ್ಚುವರಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಇಂದಿನಿಂದ ಶುರುವಾಗಲಿದೆ ಅಸಲಿ ಆಟ, ಸಿಐಡಿ ಕೊಟ್ಟ ರಿಪೋರ್ಟ್ ಮುಂಡಿಟ್ಟುಕೊಂಡು ಪೊಲೀಸರು ಇವನಿಗೆ ‘ಥರ್ಡ್ ಡಿಗ್ರಿ’ ಟ್ರೀಟ್ಮೆಂಟ್ ಸ್ಟೈಲ್ನಲ್ಲಿ ಪ್ರಶ್ನೆಗಳ ಸುರಿಮಳೆಗೈಯಲಿದ್ದಾರೆ.
ಬೆದರಿಕೆ ಹಾಕೋಕೆ ಒಬ್ಬ ವ್ಯಕ್ತಿಗೆ ಒಂದೇ ಮೊಬೈಲ್ ಸಾಕಾಗಿತ್ತು, ಆದರೆ ಈ ಡಿ-ಬಾಸ್ ಪರಮಾಪ್ತ ಪುನೀತ್ ಮೇಂಟೇನ್ ಮಾಡ್ತಿದ್ದಿದ್ದು ಬರೋಬ್ಬರಿ 5 ಮೊಬೈಲ್ ಫೋನ್ಗಳನ್ನು. ಯಾರು ಯಾರಿಗೆ ಸ್ಕೆಚ್ ಹಾಕೋಕೆ, ಯಾರನ್ನು ಹೆದರಿಸೋಕೆ ಈ ಐದು ಫೋನ್ಗಳನ್ನು ಬಳಸಲಾಗಿತ್ತು ಅನ್ನೋ ಸತ್ಯ ಕೇಳಿದ್ರೆ ನೀವೇ ಬೆಚ್ಚಿಬೀಳ್ತೀರಾ. ಸದ್ಯಕ್ಕೆ ಈ ಐದೂ ಮೊಬೈಲ್ಗಳನ್ನು ಎಫ್ಎಸ್ಎಲ್ ಲ್ಯಾಬ್ಗೆ ಶಿಫ್ಟ್ ಮಾಡಲಾಗಿದ್ದು, ಅಲ್ಲಿಂದ ಬರೋ ರಿಪೋರ್ಟ್ ಇಡೀ ಡಿ-ಗ್ಯಾಂಗ್ನ ಹೆಡೆಮುರಿ ಕಟ್ಟೋದು ಗ್ಯಾರಂಟಿ.
ಒಟ್ಟಿನಲ್ಲಿ, ಜೈಲಿನಲ್ಲಿರೋ ದರ್ಶನ್ನನ್ನು ಹೇಗಾದರೂ ಮಾಡಿ ಹೊರಗೆ ತರಬೇಕು, ಸಾಕ್ಷಿಗಳನ್ನು ಉಡಾಯಿಸಬೇಕು ಅಂತ ಪ್ಲ್ಯಾನ್ ಮಾಡಿದ್ದ ಡಿ-ಕಂಪನಿಗೆ ಈಗ ತಾವೇ ತೋಡಿದ ಹಳ್ಳಕ್ಕೆ ತಾವೇ ಬಿದ್ದಂತಾಗಿದೆ. ಇಂದು ಪೊಲೀಸರ ಕೈ ಸೇರಲಿರೋ ಆ ಸೈಬರ್ ರಿಪೋರ್ಟ್, ಈ ಬೆದರಿಕೆ ಕೇವಲ ಫ್ಯಾನ್ಸ್ ಹುಚ್ಚಾಟನಾ ಅಥವಾ ಇದರ ಹಿಂದೆ ಜೈಲಿನಲ್ಲಿರೋ ದರ್ಶನ್ ನೆರಳು ಇದೆಯಾ ಅನ್ನೋದನ್ನು ಪತ್ತೆ ಮಾಡಲಿದೆ. ದರ್ಶನ್ ಕೋಟೆಯ ಮತ್ತೊಂದು ಪ್ರಮುಖ ವಿಕೆಟ್ ಉರುಳೋ ಕಾಲ ಹತ್ತಿರ ಬಂದಿದೆ.





