• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, August 16, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

3 ಸಾವಿರ ಆರ್ಟಿಸ್ಟ್‌.. 25 ಎಕರೆ ಸೆಟ್.. ಕಾಂತಾರ ಗಮ್ಮತ್ತು

ಕಳರಿಪಯಟ್ಟು ಲುಕ್‌‌ನಲ್ಲಿ ರಿಷಬ್ ಅದ್ಧೂರಿ ಬೆಳಕಿನ ದರ್ಶನ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 7, 2025 - 5:25 pm
in ಸಿನಿಮಾ
0 0
0
Untitled design 2025 07 07t172235.627

ಬರ್ತ್ ಡೇ ಸಂಭ್ರಮದಲ್ಲಿರೋ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ಕಾಂತಾರ ವರ್ಲ್ಡ್‌ನಿಂದ ದೊಡ್ಡದಾಗಿಯೇ ಸಿಗ್ನಲ್ ನೀಡಿದ್ದಾರೆ. ದಂತಕಥೆಯ ಮುನ್ನುಡಿ.. ಆ ನುಡಿಗೊಂದು ಪರಿಚಯ.. ಮನದಾಳದ ಕಥೆಗೆ ಮತ್ತೊಮ್ಮೆ ಸ್ವಾಗತ ಅನ್ನೋ ಸಂದೇಶದೊಂದಿಗೆ ಕಾಂತಾರ ಪ್ರೀಕ್ವೆಲ್‌ನ ಹೊಚ್ಚ ಹೊಸ ಪೋಸ್ಟರ್ ರಿವೀಲ್ ಆಗಿದೆ. ಈ ಬಾರಿ ಕಾಂತಾರ ಗಮ್ಮತ್ತು ಅದಕ್ಕಿಂತ ಹತ್ತು ಪಟ್ಟು ಜೋರಿರಲಿದೆ.

  • 3 ಸಾವಿರ ಆರ್ಟಿಸ್ಟ್‌.. 25 ಎಕರೆ ಸೆಟ್.. ಕಾಂತಾರ ಗಮ್ಮತ್ತು
  • ಕಳರಿಪಯಟ್ಟು ಲುಕ್‌‌ನಲ್ಲಿ ರಿಷಬ್ ಅದ್ಧೂರಿ ಬೆಳಕಿನ ದರ್ಶನ
  • ಡಿವೈನ್ ಮತ್ತು ಅಡ್ವೆಂಚರ್‌ ಮಿಶ್ರಿತ ಧಮಾಕೇದಾರ್ ಮೂವಿ
  • ಅ-2ಕ್ಕೆ ಪಂಚಭಾಷೆಯಲ್ಲಿ ಕಾಂತಾರ ಪ್ರೀಕ್ವೆಲ್ ಬಿಡುಗಡೆ..!

41 ವರ್ಷ ಪೂರೈಸಿ, 42ನೇ ವಸಂತಕ್ಕೆ ಕಾಲಿಟ್ಟಿರುವ ರಿಷಬ್ ಶೆಟ್ಟಿ ಇಂದು ಬರ್ತ್ ಡೇ ಸಂಭ್ರಮದಲ್ಲಿದ್ದಾರೆ. ಭಿನ್ನ ಅಲೆಯ ಸಿನಿಮಾಗಳಿಂದಲೇ ಗುರ್ತಿಸಿಕೊಂಡಿದ್ದ ಡಿವೈನ್ ಸ್ಟಾರ್, ಕಾಂತಾರ ಬಳಿಕ ಕಾಂತಾರ ಪ್ರೀಕ್ವೆಲ್‌ಗೆ ಕೈ ಹಾಕಿದ್ರು. ಅದರ ಚಿತ್ರೀಕರಣ ಬಹುತೇಕ ಕಂಪ್ಲೀಟ್ ಆಗಿದ್ದು, ಅಂದುಕೊಂಡಂತೆ ಅಕ್ಟೋಬರ್ 2ಕ್ಕೆ ಕನ್ನಡದ ಜೊತೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಅದ್ದೂರಿಯಾಗಿ ರಿಲೀಸ್ ಮಾಡೋ ಧಾವಂತದಲ್ಲಿದ್ದಾರೆ.

RelatedPosts

ಪವಿತ್ರಾಗೌಡಗೆ ಶಾಕ್: 16 ಕೈದಿಗಳಿರುವ ಬ್ಯಾರಕ್‌ಗೆ ಶಿಫ್ಟ್, ಜೈಲಿನಲ್ಲಿ ಬಿಗಿ ಭದ್ರತೆ

ನಿಷೇಧಿತ ಪಾನ್ ಮಸಾಲಾ ಜಾಹೀರಾತು ಪ್ರಚಾರ: ಶಾರುಖ್, ದೇವಗನ್,ಟೈಗರ್ ಶ್ರಾಫ್‌ಗೆ ನೋಟಿಸ್

ಕಿರಿಯ ನಟಿ ಜೊತೆ ಓಡಾಟ: ‘ಶುಗರ್ ಡ್ಯಾಡಿ’ ಎಂದ ಪತ್ನಿಗೆ ತಿರುಗೇಟು ನೀಡಿದ ನಟ ಗೋವಿಂದ

ಯೂಟರ್ನ್ ಶ್ರದ್ಧಾ ಶ್ರೀನಾಥ್‌‌ಗೆ ಬೇಕಿದೆ ಟರ್ನಿಂಗ್ ಪಾಯಿಂಟ್

ADVERTISEMENT
ADVERTISEMENT

Snapins.ai 467181401 540632775421771 4742671770985341383 n 1080ರಿಷಬ್ ಶೆಟ್ಟಿ‌ ಬರ್ತ್‌ಡೇಗೆ ನಿರ್ಮಾಣ ಸಂಸ್ಥೆಯಿಂದ ಬಿಗ್‌ ಸರ್ಪ್ರೈಸ್‌ ಸಿಕ್ಕಿದೆ. ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಕಾಂತಾರ ಚಾಪ್ಟರ್‌ 1 ಚಿತ್ರದಿಂದ ಬಿಗ್‌ ಅಪ್ಡೇಟ್ ಸಿಕ್ಕಿದೆ. 2022ರಲ್ಲಿ ತೆರೆಕಂಡು, ನೂತನ ದಾಖಲೆ ಬರೆದಿದ್ದ ಕಾಂತಾರ ಸಿನಿಮಾ, ಇದೀಗ ಪ್ರೀಕ್ವೆಲ್‌ ಆಗುತ್ತಿದೆ. ಈ ಸಿನಿಮಾ ಇದೇ 2025ರ ಅಕ್ಟೋಬರ್‌ 2ರಂದು ಗಾಂಧಿ ಜಯಂತಿ ವಿಶೇಷ, ವಿಶ್ವದಾದ್ಯಂತ ತೆರೆಗೆ ಬರಲಿದೆ. ಶೆಟ್ರ ಜನ್ಮ ದಿನದ ಪ್ರಯುಕ್ತ ಈ ವಿಚಾರವನ್ನು ಅಧಿಕೃತವಾಗಿ ಹಂಚಿಕೊಂಡಿದೆ ಹೊಂಬಾಳೆ ಫಿಲಂಸ್.‌

2022ರಲ್ಲಿ ಬಿಡುಗಡೆಯಾದ ಕಾಂತಾರ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿತ್ತು. ಪ್ರಕೃತಿ, ಸಂಸ್ಕೃತಿ ಮತ್ತು ಆಧ್ಯಾತ್ಮದ ಹಿನ್ನೆಲೆಯಲ್ಲಿ ಮೂಡಿಬಂದ ಕಾಂತಾರ ಚಿತ್ರಕ್ಕೆ ಎಲ್ಲೆಡೆಯಿಂದ ದೊಡ್ಡ ಮಟ್ಟದ ಮೆಚ್ಚುಗೆ ಸಿಕ್ಕಿತ್ತು. ಬಾಕ್ಸ್ ಆಫೀಸ್‌ನಲ್ಲಿಯೂ 450 ಕೋಟಿ ಗಳಿಕೆಯಿಂದ ಹವಾ ಸೃಷ್ಟಿಸಿತ್ತು. ಆರಂಭದಲ್ಲಿ ಕನ್ನಡದಲ್ಲಿ ಮಾತ್ರ ತೆರೆಕಂಡಿದ್ದ ಈ ಸಿನಿಮಾ, ಪ್ಯಾನ್‌ ಇಂಡಿಯಾ ಅವತಾರ ತಾಳಿತ್ತು. ಇದೀಗ ಇದೇ ಕಾಂತಾರ ಸಿನಿಮಾದ ಪ್ರೀಕ್ವೆಲ್‌ ಆಗಮನಕ್ಕೆ ಹೆಚ್ಚು ದಿನ ಉಳಿದಿಲ್ಲ. ಶೆಟ್ರ ಬರ್ತ್ ಡೇ ವಿಶೇಷ ನ್ಯೂ ಪೋಸ್ಟರ್‌ನಿಂದ ಮೆಸೇಜ್ ನೀಡಲಾಗಿದೆ.

Snapins.ai 352969218 1426025511667653 3705331268347439917 n 1080‘ದಂತಕಥೆಯ ಮುನ್ನುಡಿ.. ಆ ನುಡಿಗೊಂದು ಪರಿಚಯ.. ಮನದಾಳದ ಕಥೆಗೆ ಮತ್ತೊಮ್ಮೆ ಸ್ವಾಗತ’ ಅನ್ನೋ ಅಡಿಬರಹದ ಮೂಲಕ ಕಾಂತಾರ-1 ನ್ಯೂ ಲುಕ್‌ ಬಿಡುಗಡೆ ಮಾಡಿದೆ ಹೊಂಬಾಳೆ ಫಿಲಂಸ್‌. ಈ ಹೊಸ ಪೋಸ್ಟರ್‌ನಲ್ಲಿ ರಿಷಬ್‌ ಶೆಟ್ಟಿ ಹಿಂದೆಂದೂ ಕಾಣದ ಲುಕ್‌ನಲ್ಲಿ ಕಂಡಿದ್ದಾರೆ. ಕಳರಿಪಯಟ್ಟು ಲುಕ್‌‌ನಲ್ಲಿ ಯುದ್ಧ ವೀರನಂತೆ ಕಾಣಸಿಕ್ಕಿದ್ದಾರೆ. ಶೂಟಿಂಗ್ ಕೂಡ ಕಂಪ್ಲೀಟ್ ಆಗಿದೆಯಂತೆ.

ಆಧ್ಯಾತ್ಮ ಹಾಗೂ ಸಾಹಸಗಾಥೆಯ ಸಮ್ಮಿಶ್ರಣದ ಕಾಂತಾರ-1 ಚಿತ್ರ ಹಲವು ವಿಶೇಷತೆಗಳಿಂದ ಕೂಡಿದೆ. ಈಗಾಗಲೇ ಬಿಡುಗಡೆ ಆಗಿರುವ ಸಿನಿಮಾಗೆ ಹೋಲಿಕೆ ಮಾಡಿದ್ರೆ, ಹಲವು ಹೊಸತನಗಳಿರುವ ಚಿತ್ರ ಇದಾಗಲಿದೆ. ಈ ಹಿಂದಿನ ಟೀಸರ್‌ನಲ್ಲಿಯೇ ಕುತೂಹಲಕ್ಕೆ ಒಗ್ಗರಣೆ ಹಾಕಿತ್ತು ಕಾಂತಾರ-1. ಇದೀಗ ಈ ಭವ್ಯಕಥೆ ತೆರೆಮೇಲೆ ಬರಲು ಸಿದ್ಧವಾಗಿದೆ.

ಬರೋಬ್ಬರಿ 25 ಎಕರೆಯ ಬಹುದೊಡ್ಡ ಭೂ ಪ್ರದೇಶದಲ್ಲಿ ಬೃಹತ್‌ ಸೆಟ್‌ ಹಾಕಿ. ಕಾಲ್ಪನಿಕ ಊರೊಂದನ್ನ ಸೃಷ್ಟಿಸಿ, ಇಡೀ ಕಾಂತಾರ ಚಾಪ್ಟರ್‌ 1 ಸಿನಿಮಾನ ಅದರಲ್ಲಿಯೇ ಸೆರೆಹಿಡಿಯಲಾಗಿದೆ. ಭಾರತವಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ತಂತ್ರಜ್ಞರು ಕೂಡ ಈ ಸಿನಿಮಾಗೆ ಕೈ ಜೋಡಿಸಿದ್ದಾರೆ. 45 ರಿಂದ 50 ದಿನಗಳ ಕಾಲ ಸುಮಾರು 500 ತರಬೇತಿದಾರರು, 3000ಕ್ಕೂ ಹೆಚ್ಚು ಜೂನಿಯರ್‌ ಆರ್ಟಿಸ್ಟ್‌‌ಗಳಿಂದ ಈ ಸಿನಿಮಾ ತಯಾರಾಗಿದೆ. ಹತ್ತು, ಹಲವು ವಿಘ್ನಗಳ ನಡುವೆಯೂ ಕಾಂತಾರ ಒಂದು ದೊಡ್ಡ ಭರವಸೆ ಮೂಡಿಸಿರೋದು ಇಂಟರೆಸ್ಟಿಂಗ್. ಈ ಬಾರಿ ದೈವ ಈ ಸಿನಿಮಾನ ಎಷ್ಟರ ಮಟ್ಟಿಗೆ ಕೊಂಡೊಯ್ಯಲಿದೆ ಅನ್ನೋದನ್ನ ಇನ್ನಷ್ಟೇ ನಿರೀಕ್ಷಿಸಬೇಕಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (69)

ವಾಹನ ಸವಾರರಿಗೆ ಶಾಕ್: ಕರ್ನಾಟಕದಲ್ಲಿ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಶುಲ್ಕ ಹೆಚ್ಚಳ!

by ಕವಿತಾ
August 16, 2026 - 6:01 pm
0

Untitled design (68)

ಹನೂರು ಎನ್‌ಕೌಂಟರ್: ಸರ್ಕಾರದ ಭರವಸೆಗೆ ಒಪ್ಪಿದ ಕುಟುಂಬ, ಮೃತದೇಹ ಹಸ್ತಾಂತರ

by ಕವಿತಾ
August 16, 2026 - 5:27 pm
0

Untitled design (66)

ನಾಳೆ ನಾಗರ ಪಂಚಮಿ: ಇದು ಶ್ರಾವಣ ಮಾಸದ ಮೊದಲ ಹಬ್ಬ

by ಕವಿತಾ
August 16, 2026 - 5:14 pm
0

Untitled design (64)

ಹನೂರು ಎನ್‌ಕೌಂಟರ್: ಸತ್ಯ ಗೊತ್ತಾದ ಬಳಿಕವೇ ಕ್ರಮ ಎಂದ ಪರಮೇಶ್ವರ್

by ಕವಿತಾ
August 16, 2026 - 4:50 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಶಿಫ್ಟ್,
    ಪವಿತ್ರಾಗೌಡಗೆ ಶಾಕ್: 16 ಕೈದಿಗಳಿರುವ ಬ್ಯಾರಕ್‌ಗೆ ಶಿಫ್ಟ್, ಜೈಲಿನಲ್ಲಿ ಬಿಗಿ ಭದ್ರತೆ
    August 16, 2026 | 0
  • ಅರ್ಷದ್ (6)
    ನಿಷೇಧಿತ ಪಾನ್ ಮಸಾಲಾ ಜಾಹೀರಾತು ಪ್ರಚಾರ: ಶಾರುಖ್, ದೇವಗನ್,ಟೈಗರ್ ಶ್ರಾಫ್‌ಗೆ ನೋಟಿಸ್
    August 16, 2026 | 0
  • ಅರ್ಷದ್ (1)
    ಕಿರಿಯ ನಟಿ ಜೊತೆ ಓಡಾಟ: ‘ಶುಗರ್ ಡ್ಯಾಡಿ’ ಎಂದ ಪತ್ನಿಗೆ ತಿರುಗೇಟು ನೀಡಿದ ನಟ ಗೋವಿಂದ
    August 16, 2026 | 0
  • ಖರ್ಗೆ (8)
    ಯೂಟರ್ನ್ ಶ್ರದ್ಧಾ ಶ್ರೀನಾಥ್‌‌ಗೆ ಬೇಕಿದೆ ಟರ್ನಿಂಗ್ ಪಾಯಿಂಟ್
    August 15, 2026 | 0
  • ಖರ್ಗೆ (6)
    ನ್ಯೂ ಟೈಟಲ್..ಭಾರತಕ್ಕಿಂತ ಮೊದಲೇ ಚೀನಾದಲ್ಲಿ ರಾಮಾಯಣ ದರ್ಶನ
    August 15, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version