ಕಾಂತಾರ ಚಿತ್ರದಂತೆ ಕಾಂತಾರ ಪ್ರೀಕ್ವೆಲ್ ಕೂಡ ದೈವಿಕ ಅಂಶಗಳಿಂದ ಪ್ರೇಕ್ಷಕರನ್ನ ಮಂತ್ರಮುಗ್ಧಗೊಳಿಸೋ ಮುನ್ಸೂಚನೆ ನೀಡಿದೆ. ಅಂದು ವರಾಹ ರೂಪಂ ಗೀತೆ ಎಷ್ಟು ಗುಂಗು ಹಿಡಿಸಿತ್ತೋ, ಈಗ ಬ್ರಹ್ಮಕಳಶ ಸಾಂಗ್ ಅದೇ ರೀತಿ ಡಿವೈನ್ ವೈಬ್ರೇಷನ್ ಕೊಡ್ತಿದೆ. ಅದನ್ನ ನಾವು ಹೇಳೋದಕ್ಕಿಂತ ನೀವೇ ಒಮ್ಮೆ ಕಣ್ತುಂಬಿಕೊಳ್ಳಿ.
ವರಾಹ ರೂಪಂ ಅನ್ನೋ ಗೀತೆ ಕಾಂತಾರ ಸಿನಿಮಾ ಬಂದಾಗ ಅದಕ್ಕೆ ಟ್ರಂಪ್ ಕಾರ್ಡ್ ಆಗಿತ್ತು. ಯಾಕಂದ್ರೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಯ ಗುಳಿಗ ದೈವದ ಪರಿಕಲ್ಪನೆಗೆ ಅಸಲಿ ಡಿವೈನ್ ವೈಬ್ರೇಷನ್ ನೀಡಿದ್ದೇ ಈ ಗೀತೆ. ಇದು ಮಲಯಾಳಿಗರಿಂದ ಕಾಪಿ ಮಾಡಿದಂತಹ ಗೀತೆ ಅನ್ನೋ ಕಾರಣಕ್ಕೆ ಕೋರ್ಟ್ ಮೆಟ್ಟಿಲೇರಿತ್ತು. ನಂತ್ರ ಕೃತಿಚೌರ್ಯ ಆಗಿಲ್ಲ ಅನ್ನೋದು ಕೋರ್ಟ್ನಲ್ಲೇ ಪ್ರೂವ್ ಆಯ್ತು.

ರಿಷಬ್ ಶೆಟ್ರ ಜೊತೆ ಅಜನೀಶ್ ಡಿವೈನ್ ವೈಬ್ರೇಷನ್
ಇದು ಬರೀ ಸಿನಿಮಾ ಅಲ್ಲ..ಕರಾವಳಿ ಸಂಸ್ಕೃತಿ ತೇರು
ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದ ಕಾಂತಾರ ಸಿನಿಮಾದ ವರಾಹ ರೂಪಂ ಗೀತೆ ಯೂಟ್ಯೂಬ್ನಲ್ಲಿ ಬರೋಬ್ಬರಿ 9 ಕೋಟಿಗೂ ಅಧಿಕ ವೀವ್ಸ್ ಪಡೆದಿದೆ. ಇಂದಿಗೂ ಈ ಹಾಡು ನೋಡುಗರಿಗೆ ಸಿಕ್ಕಾಪಟ್ಟೆ ವೈಬ್ರೇಷನ್ ನೀಡುತ್ತೆ. ಸದ್ಯ ಅಂಥದ್ದೇ ಕಾಂತಾರ ಪ್ರೀಕ್ವೆಲ್ನಲ್ಲೂ ಒಂದು ಹಾಡನ್ನ ಪ್ರಯೋಗ ಮಾಡಿಸಿದ್ದಾರೆ ರಿಷಬ್ ಶೆಟ್ಟಿ. ಒನ್ಸ್ ಅಗೈನ್ ಅಜನೀಶ್ ಅವರೇ ಕಂಪೋಸ್ ಮಾಡಿರೋ ಬ್ರಹ್ಮ ಕಳಶ ಗೀತೆ ಕಾಂತಾರ-1 ಜೋಶ್ ಹೆಚ್ಚಿಸಿದೆ.

ದೈವಿಕ ಅಂಶಗಳ ಅಕ್ಷಯಪಾತ್ರೆ ಕಾಂತಾರ ಪ್ರೀಕ್ವೆಲ್..!!
ಅಂದು ವರಾಹ ರೂಪಂ..ಇಂದು ಬ್ರಹ್ಮ ಕಳಶ ಸಾಂಗ್

ಶಶಿರಾಜ್ ಕಪೂರ್ ಸಾಹಿತ್ಯ ಪೋಣಿಸಿರೋ ಈ ಬ್ರಹ್ಮ ಕಳಶ ಗೀತೆಗೆ ಅಬ್ಬಿ ವಿ ಗಾಯನವಿದೆ. ಗಾಯಕನ ಕಂಠಕ್ಕಿಂತ ಪ್ರೋಗ್ರಾಮಿಂಗ್ ನೆಕ್ಸ್ಟ್ ಲೆವೆಲ್ಗೆ ಆಗಿದೆ. ಕ್ಲಾಸಿಕಲ್ ಟಚ್ ಇರೋ ಈ ಹಾಡು, ಪಾಸಿಟಿವಿಟಿಗೆ ಕೇರ್ ಆಫ್ ಅಡ್ರೆಸ್ ಆಗಿದೆ. ನಿಜಕ್ಕೂ ನಮ್ಮ ದೈವದ ನಂಬಿಕೆ, ಆಚಾರಗಳನ್ನ ಈ ರೀತಿಯ ಗೀತೆಗಳ ಮೂಲಕ ಬೆಳ್ಳಿತೆರೆಯಿಂದ ವಿಶ್ವಕ್ಕೆ ಸಾರುವ ಕಾರ್ಯ ಬಹುದೊಡ್ಡದು. ಆ ನಿಟ್ಟಿನಲ್ಲಿ ರಿಷಬ್ ಶೆಟ್ಟಿಯ ಕನಸುಗಳಿಗೆ ನೀರೆರೆದು ನನಸು ಮಾಡ್ತಿರೋ ಹೊಂಬಾಳೆ ಫಿಲಂಸ್ನ ಮೆಚ್ಚಲೇಬೇಕು. ನಮ್ಮ ಕರಾವಳಿಯ ಸಾಂಸ್ಕೃತಿಕ ತೇರಾಗಿ ಕಾಂತಾರ-1 ಕೂಡ ಕಾಂತಾರದಂತೆ ನೋಡುಗರಿಗೆ ರೋಮಾಂಚನ ನೀಡಲಿದೆ.





