ಸ್ಯಾಂಪಲ್ಸ್ನಿಂದಲೇ ನೋಡುಗರ ನಾಡಿಮಿಡಿತ ಹೆಚ್ಚಿಸಿರೋ ಯೂತ್ಫುಲ್ ಕಲ್ಟ್ ಮೂವಿಯ ಟ್ರೈಲರ್ ಲಾಂಚ್ ಅಗಿದೆ. ರಚ್ಚು-ಮಲೈಕಾ ಡಬಲ್ ಡಾಲ್ಸ್ ಜೊತೆ ಝೈದ್ ಖಾನ್ ಕಲ್ಟ್ ಲವ್ ಸ್ಟೋರಿಯ ಝಲಕ್ ಜೊತೆ ಬಾಡಿ ಶೇಮಿಂಗ್ ಬಗ್ಗೆ ಗರಂ ಆದ ರಚಿತಾ ಹಾಗೂ ಶಿಡ್ಲಘಟ್ಟ ಬ್ಯಾನರ್ ಬಡಿದಾಟದ ಬಗ್ಗೆ ಜಮೀರ್ ಮಗ ಹೇಳಿದ್ದೇನು ಅನ್ನೋದಕ್ಕೆ ಈ ಸ್ಟೋರಿ ಒಮ್ಮೆ ನೋಡಿ.
ರಚಿತಾ ರಾಮ್ಗೆ ಜನವರಿ 23 ಡಬಲ್ ಧಮಾಕ. ಒಂದ್ಕಡೆ ಲ್ಯಾಂಡ್ಲಾರ್ಡ್ ಮತ್ತೊಂದ್ಕಡೆ ಕಲ್ಟ್..ಒಂದೇ ದಿನ ಎರಡೆರಡು ಚಿತ್ರಗಳು ರಿಲೀಸ್ ಆಗ್ತಿವೆ. ಕಿರುತೆರೆ, ಸಿನಿಮಾ, ಪರಭಾಷಾ ಚಿತ್ರಗಳು..ಹೀಗೆ ಸಿಕ್ಕಾಪಟ್ಟೆ ಬ್ಯುಸಿ ಇರೋ ಲೇಡಿ ಸೂಪರ್ ಸ್ಟಾರ್ ರಚಿತಾ ರಾಮ್, ಬಿಡುವು ಮಾಡಿಕೊಂಡು ಸಿನಿಮಾಗಳ ಪ್ರಮೋಷನ್ಸ್ನಲ್ಲೂ ಭಾಗಿ ಆಗ್ತಿರೋದು ಇಂಟರೆಸ್ಟಿಂಗ್.

ಬಾಡಿ ಶೇಮಿಂಗ್ಗೆ ರಚ್ಚು ಗರಂ..ಶಿಡ್ಲಘಟ್ಟ ಕೇಸ್ಗೆ ಝೈದ್ ಕ್ಷಮೆ
ಡಬಲ್ ಡಾಲ್ಸ್ ಜೊತೆ ಝೈದ್..ಬ್ಯುಸಿ ಶೆಡ್ಯೂಲ್ ನಡುವೆ ರಚ್ಚು..!

ಕಲ್ಟ್ ಚಿತ್ರದ ಟ್ರೈಲರ್ ಲಾಂಚ್ ಇವೆಂಟ್ ಪ್ರಯುಕ್ತ ಖಾಸಗಿ ಹೋಟೆಲ್ಗೆ ಆಗಮಿಸಿದ್ದ ರಚಿತಾ ಬಾಡಿ ಶೇಮಿಂಗ್ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಗರಂ ಆಗಿದ್ದಾರೆ. ಡೋಂಟ್ ಗೀವ್ ಎ ಡ್ಯಾಮ್ನ್ ಅಂತ ಹೇಳಿ ಬ್ಯಾಡ್ ವರ್ಡ್ ಬಳಕೆ ಮಾಡಿದ್ದಾರೆ ಅನ್ನೋದು ಸದ್ಯ ಸಂಚಲನ ಮೂಡಿಸೋ ಸುದ್ದಿಯಾಗ್ತಿದೆ. ಅಷ್ಟೇ ಅಲ್ಲ ನಮ್ಮ ದೇಹವನ್ನ ನಾವು ಪೂಜಿಸ್ತೀವಿ. ಏನು ತಿನ್ನಬೇಕು..? ಎಷ್ಟು ವರ್ಕೌಟ್ ಮಾಡ್ಬೇಕು ಅನ್ನೋದು ನನಗೆ ಗೊತ್ತು. ಬೇರೆಯವರಿಗೆ ಇಷ್ಟದಂತೆ ನನ್ನ ದೇಹವನ್ನ ಇಡೋಕೆ ಆಗಲ್ಲ. ಆತ್ಮಹತ್ಯೆ ಮಾಡ್ಕೊಳ್ಳೋರು ಮುಠಾಳರು ಅಂತ ಖಾರವಾಗಿಯೇ ಮಾತನಾಡಿದ್ದಾರೆ.

ಇನ್ನೂ ಕಲ್ಟ್ ಚಿತ್ರದ ನಾಯಕನಟ ಝೈದ್ ಖಾನ್, ಇತ್ತೀಚೆಗೆ ಶಿಡ್ಲಘಟ್ಟದಲ್ಲಿ ನಡೆದ ಇವೆಂಟ್ ದಿನ ಬ್ಯಾನರ್ ಬಡಿದಾಟದ ವಿಚಾರವಾಗಿ ಮೊದಲ ಬಾರಿಗೆ ರಿಯಾಕ್ಟ್ ಮಾಡಿದ್ದಾರೆ. ತನ್ನ ಅಭಿಮಾನಿಗಳ ಪರವಾಗಿ ಆ ಬ್ಯಾನರ್ ಬಡಿದಾಟ ವಿಷಯಕ್ಕೆ ಕ್ಷಮೆ ಯಾಚಿಸುವ ಮೂಲಕ ದೊಡ್ಡತನ ತೋರಿಸಿದ್ದಾರೆ ಜಮೀರ್ ಪುತ್ರ.
ಪಕ್ಕಾ ಯೂತ್ಫುಲ್ ಕಂಟೆಂಟ್.. 100% ಕಲ್ಟ್ ಟ್ರೈಲರ್
ಪ್ರೀತಿ, ಫಜೀತಿ.. ಭಗ್ನ ಪ್ರೇಮಿ ಜೊತೆ ಪೋಷಕರ ನರಳಾಟ
ಇದು ಮೋಸ್ಟ್ ಎಕ್ಸ್ಪೆಕ್ಟೆಡ್ ಕಲ್ಟ್ ಮೂವಿಯ ಟ್ರೈಲರ್ ಝಲಕ್. ಟೀಸರ್ ಹಾಗೂ ಸಾಂಗ್ಸ್ಗಿಂತ ಸಿಕ್ಕಾಪಟ್ಟೆ ರಾ & ರಗಡ್ ಆಗಿರೋ ಕಲ್ಟ್ ಟ್ರೈಲರ್ ದೃಶ್ಯಗುಚ್ಚ ಹುಬ್ಬೇರಿಸುವಂತಿದೆ. ಅನಿಲ್ ಕುಮಾರ್ ನಿರ್ದೇಶಿಸಿ, ಲೋಕಿ ನಿರ್ಮಿಸಿರೋ ಕಲ್ಟ್ ಔಟ್ ಅಂಡ್ ಔಟ್ ಯೂತ್ಫುಲ್ ಎಂಟರ್ಟೈನರ್ ಆಗಿದ್ದು, ಹದಿ ಹರೆಯದ ಮನಸ್ಸುಗಳಿಗೆ ಮುಟ್ಟುವ ಕಥಾನಕ ಹೊಂದಿರಲಿದೆ.

ಝೈದ್ ಖಾನ್ ಇಲ್ಲಿ ಇಬ್ಬರಲ್ಲ ಇಬ್ಬಿಬ್ಬರ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ. ಮಲೈಕಾ ಮತ್ತು ರಚಿತಾ ರಾಮ್ ಇಬ್ಬರಲ್ಲಿ ಯಅರು ಕೈ ಕೊಡ್ತಾರೆ..? ಯಾರು ಕೈ ಹಿಡೀತಾರೆ ಅನ್ನೋದೇ ಸಸ್ಪೆನ್ಸ್. ಗೀತಾ ಕ್ಯಾರೆಕ್ಟರ್ ಯಾರು ಮಾಡಿದ್ದಾರೆ ಅನ್ನೋದು ಮತ್ತೊಂದು ಪ್ರಶ್ನೆ. ಒಟ್ನಲ್ಲಿ ಝೈದ್ ನಟನೆಯಲ್ಲಿ ಸಿಕ್ಕಾಪಟ್ಟೆ ಪಳಗಿದಂತೆ ಕಾಣ್ತಿದ್ದು, ಇಂಟೆನ್ಸ್ ಲವ್, ಬ್ರೇಕಪ್, ಎಮೋಷನ್ಸ್ನಿಂದ ವ್ಹಾವ್ ಫೀಲ್ ತರಿಸಿದೆ.
ಎರಡೆರಡು ಶೇಡ್ಗಳಲ್ಲಿ ಝೈದ್ ಕಾಣಿಸಿಕೊಂಡಿದ್ದು, ಮೊದಲ ಇನ್ನೋಸೆಂಟ್ ಲುಕ್ಗೆ ಮಲೈಕಾ ಜೋಡಿಯಾಗಿದ್ದು, ಎರಡನೇ ಮಾಸ್ ಲುಕ್ಗೆ ರಚಿತಾ ಸಾಥ್ ನೀಡಿದಂತಿದೆ. ಪ್ರೀತಿ ಕಳೆದುಕೊಂಡ ಹೆಸರಲ್ಲಿ ಕುಡಿಯೋದು ಮಕ್ಕಳಾದ್ರೂ, ಕರುಳು ಸುಟ್ಟೋಗೋದು ಹೆತ್ತವರದು ಕಣೋ ಅನ್ನೋ ಅಚ್ಯುತ್ ಡೈಲಾಗ್ ಪ್ರತಿಯೊಬ್ಬರ ಹೃದಯಕ್ಕೆ ತಟ್ಟಲಿದೆ. ರಂಗಾಯಣ ರಘು ಕೂಡ ಚಿತ್ರದಲ್ಲಿ ನಟಿಸಿದ್ದು, ಯೂತ್ಗೆ ಬಹುದೊಡ್ಡ ಮೆಸೇಜ್ ಕೊಡಲಿದೆ ಇದು.

ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ನಿಂದ ಕೆ ವೆಂಕಟ್ ನಾರಾಯಣ್ ಈ ಕಲ್ಟ್ ಚಿತ್ರವನ್ನ ಡಿಸ್ಟ್ರಿಬ್ಯೂಟ್ ಮಾಡ್ತಿದ್ದು, ಜನ ನಾಯಗನ್ ರಿಲೀಸ್ ಪೋಸ್ಟ್ಪೋನ್ ಬೇಸರದ ನಡುವೆಯೂ ಈ ಕನ್ನಡಿಗರ ಸಿನಿಮಾಗೆ ಸಾಥ್ ನೀಡ್ತಿರೋದು ವಿಶೇಷ. ಜಗದೀಶ್ ವಾಲಿ ಕ್ಯಾಮೆರಾ ವರ್ಕ್, ಕೆ ಎಂ ಪ್ರಕಾಶ್ ಎಡಿಟಿಂಗ್ ಹಾಗೂ ರವಿವರ್ಮಾ ಸ್ಟಂಟ್ಸ್ ಈ ಚಿತ್ರಕ್ಕಿರಲಿದೆ. ಟ್ರೈಲರ್ ಇಂಪ್ರೆಸ್ಸೀವ್ ಹಾಗು ಇಂಟರೆಸ್ಟಿಂಗ್ ಆಗಿದ್ದು, ಝೈದ್ ಖಾನ್ ಭವಿಷ್ಯದ ಸ್ಟಾರ್ ಆಗಿ ನಿಲ್ಲೋ ಲಕ್ಷಣ ತೋರಿದ್ದಾರೆ.





