ಸ್ಯಾಂಡಲ್ವುಡ್ ಉಪಾಧ್ಯಕ್ಷ ಚಿಕ್ಕಣ್ಣಗೆ ಮದ್ವೆ ಫಿಕ್ಸ್ ಆಗಿರೋದು ಎಲ್ರಿಗೂ ಗೊತ್ತೇಯಿದೆ. ಆದ್ರೆ ಡಿಬಾಸ್ ದರ್ಶನ್ ಸದ್ಯ ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ಒಳಗಿದ್ದು, ಅವ್ರು ಹೊರಗೆ ಬರೋ ತನಕ ತಾಳಿ ಕಟ್ಟಲ್ಲ ಅಂದಿದ್ದಾರಂತೆ ಚಿಕ್ಕಣ್ಣ. ಹಾಗಾದ್ರೆ ದಚ್ಚು-ಚಿಕ್ಕು ಫ್ರೆಂಡ್ಶಿಪ್ ಎಂಥದ್ದು..? ದಾಸನ ಕಂಡ್ರೆ ಚಿಕ್ಕಣ್ಣನಿಗೆ ಯಾಕೆ ಅಷ್ಟೊಂದು ಪ್ರೀತಿ, ಗೌರವ ಅನ್ನೋದ್ರ ಕಹಾನಿ ಇಲ್ಲಿದೆ ನೋಡಿ.
ಮೈಸೂರಲ್ಲಿ ನೆಲೆಸಿರೋ ಸಕ್ಕರೆ ನಾಡು ಮಹದೇವಪುರದ ಚೆಂದುಳ್ಳಿ ಚೆಲುವೆ ಪಾವನಾ ಗೌಡರನ್ನ ನಮ್ಮ ಸ್ಯಾಂಡಲ್ವುಡ್ ಉಪಾಧ್ಯಕ್ಷ ಚಿಕ್ಕಣ್ಣ ಮದುವೆ ಆಗ್ತಿರೋ ವಿಷಯ ಎಲ್ಲರಿಗೂ ಗೊತ್ತೇಯಿದೆ. ಇತ್ತೀಚೆಗೆ ಆರತಿ ಉಕ್ಕಡದಲ್ಲಿ ಪಾವನಾ ಅವ್ರ ಅಕ್ಕ ಕವನಾ ಮಗನ ಬರ್ತ್ ಡೇ ಸೆಲೆಬ್ರೇಷನ್ನಲ್ಲಿ ಭಾಗಿಯಾಗಿದ್ದ ಚಿಕ್ಕು, ತಮ್ಮ ಭಾವಿ ಪತ್ನಿ ಜೊತೆಗಿರೋ ಫೋಟೋಸ್ ಸಮೇತ ವೈರಲ್ ಆಗಿದ್ರು.
ದಚ್ಚು ಬರೋವರೆಗೂ ಇಲ್ಲ ಚಿಕ್ಕು ಮದ್ವೆ.. ಇದಪ್ಪಾ ಫ್ರೆಂಡ್ಶಿಪ್
ಡಿಬಾಸ್ ಜೈಲಿಂದ ಬಂದ್ರೆ ಮಾತ್ರ ಚಿಕ್ಕಣ್ಣನ ಜೀವನ ಪಾವನ..!

ಇಂಜಿನಿಯರ್ ಕಮ್ ಬ್ಯುಸಿನೆಸ್ ವುಮನ್ ಪಾವನಾ ಚಿಕ್ಕಣ್ಣ ಲೈಫ್ಗೆ ಎಂಟ್ರಿ ಆಗೋದು ಬಹುತೇಕ ಖಚಿತ ಆಗಿದ್ದು, ಮಹದೇವಪುರದ ಪಾವನಾ ತಂದೆ ರಾಮಚಂದ್ರಪ್ಪ ಹಾಗೂ ತಾಯಿ ಸಾವಿತ್ರಿ ಜೊತೆ ಮದುವೆ ದಿನಾಂಕ ನಿಗದಿ ಮಾಡೋದೊಂದೇ ಬಾಕಿಯಿದೆ. ಈ ವಾರದಲ್ಲೇ ನಿಶ್ಚಿತಾರ್ಥ ಡೇಟ್ ಲಾಕ್ ಮಾಡಿ, ಪರಸ್ಪರ ಉಂಗುರ ಬದಲಿಸಿಕೊಳ್ಳೋ ಮೂಲಕ ಮದುವೆಗೆ ಮೊದಲ ಮುದ್ರೆ ಒತ್ತಲಿದ್ದಾರೆ ಚಿಕ್ಕಣ್ಣ. ಆದ್ರೆ ಚಿಕ್ಕಣ್ಣ ಜೀವನ ಪಾವನ ಆಗೋಕೆ ಡಿಬಾಸ್ ಹೊರ ಬರಲೇ ಬೇಕು.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್, ಚಿಕ್ಕಣ್ಣನಿಗೆ ಸಿಕ್ಕಾಪಟ್ಟೆ ಕುಚಿಕು ದೋಸ್ತ. ಹಾಗಾಗಿಯೇ ಆ ಫ್ರೆಂಡ್ಶಿಪ್ಗೆ ಪ್ರತೀಕವಾಗಿ, ಆತ ಜೈಲಿಂದ ಹೊರಬರೋವರೆಗೂ ತಾನು ತಾಳಿ ಕಟ್ಟಲ್ಲ ಎಂದಿದ್ದಾರಂತೆ ಚಿಕ್ಕಣ್ಣ. ಈ ವಿಷಯ ಬೀಗರ ಜೊತೆಗೂ ಚರ್ಚಿಸಿರೋ ಚಿಕ್ಕು, ತಮ್ಮ ಗೆಳೆತನ ಎಂಥದ್ದು ಅನ್ನೋದನ್ನ ಸಾರಲು ಹೊರಟಂತಿದೆ. ಅಂದಹಾಗೆ ರಾಬರ್ಟ್ ಹಾಗೂ ಕಾಟೇರ ಚಿತ್ರದ ಡೈರೆಕ್ಟರ್ ತರುಣ್ ಸುಧೀರ್ ಕೂಡ ದರ್ಶನ್ ಅತ್ಯಾಪ್ತ ಗೆಳೆಯ. ಆದ್ರೆ ದರ್ಶನ್ ಈ ಹಿಂದೆ ಜೈಲಲ್ಲಿದ್ದಾಗಲೇ ಸೋನಲ್ ಜೊತೆ ಸಪ್ತಪದಿ ತುಳಿದಿದ್ರು ತರುಣ್. ಆದ್ರೀಗ ತರುಣ್ ರೀತಿ ಮಾಡದ ಚಿಕ್ಕು, ಜೀವದ ಗೆಳೆಯನಿಗಾಗಿ ಕಾಯುವ ಯೋಜನೆಯಲ್ಲಿದ್ದಾರಂತೆ.
ತರುಣ್ ಸುಧೀರ್ ರೀತಿ ಅಲ್ಲ ಚಿಕ್ಕಣ್ಣ.. ಹುಡ್ಗಿ ಮನೆಗೆ ಸಂದೇಶ?
ಎಂಗೇಜ್ಮೆಂಟ್ ಆದ್ರೂ ಶುಭವಿವಾಹಕ್ಕೆ ಇರಲೇ ಬೇಕು ದರ್ಶನ್

ಇನ್ನು ಗಜಪಡೆಯಲ್ಲಿ ದಾಸ ದರ್ಶನ್ ಹೃದಯಕ್ಕೆ ಬಹಳ ಹತ್ತಿರವಾದ ಆಪ್ತರಲ್ಲಿ ಚಿಕ್ಕಣ್ಣ ಮೊದಲಿಗರು. ದಚ್ಚು ಯಾವುದೇ ಖಾಸಗಿ, ಸಿನಿಮಾ ಅಥ್ವಾ ವೈಯಕ್ತಿಕ ಕಾರ್ಯಕ್ರಮಗಳಿರಲಿ, ಅಲ್ಲಿ ಚಿಕ್ಕಣ್ಣನ ಉಪಸ್ಥಿತಿ ಇದ್ದೇ ಇರಲಿದೆ. ಅದ್ರಲ್ಲೂ ಉಪಾಧ್ಯಕ್ಷ ಸಿನಿಮಾನ ಪೊಲೀಸ್ ಸ್ಟೇಷನ್ಗೆ ವಿಚಾರಣೆಗೆ ಬಂದಾಗಲೆಲ್ಲಾ ಪ್ರಮೋಷನ್ ಮಾಡಿಕೊಟ್ಟಿದ್ರು ದರ್ಶನ್. ಇದು ಅವರಿಬ್ಬರ ನಡುವಿನ ಸ್ನೇಹ, ಬಾಂಧವ್ಯದ ಕನ್ನಡಿ. ಚಿಕ್ಕಣ್ಣನ ಈ ಪ್ರೀತಿ, ವಿಶ್ವಾಸಕ್ಕಾದ್ರೂ ದರ್ಶನ್ಗೆ ಬೇಗ ಬಿಡುಗಡೆ ಭಾಗ್ಯ ಸಿಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.





