ಬಿಲ್ಲ ರಂಗ ಬಾಷ ಚಿತ್ರದ ಲೇಟೆಸ್ಟ್ ಅಪ್ಡೇಟ್ಸ್ನ ಇತ್ತೀಚೆಗೆ ಇದೇ ನಿಮ್ಮ ಗ್ಯಾರಂಟಿ ಪಿಚ್ಚರ್ನಲ್ಲಿ ನೀಡಿದ್ವಿ. ಇದೀಗ ಮತ್ತೊಂದು ಸ್ಪೆಷಲ್ ಅಪ್ಡೇಟ್ ಹೊತ್ತು ತಂದಿದ್ದೀವಿ. ಅದೇನಪ್ಪಾ ಅಂದ್ರೆ ಕಿಚ್ಚನ ಜೊತೆ ಖಡಕ್ ವಿಲನ್ ಆಗಿ ಡೈಲಾಗ್ ಕಿಂಗ್ ಸಾಯಿಕುಮಾರ್ ಬಣ್ಣ ಹಚ್ಚುತ್ತಿದ್ದಾರೆ. ಇದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.
- BRBಗೆ ವಿಲನ್ ಫಿಕ್ಸ್.. ಸಾಯಿಕುಮಾರ್ ಗ್ಯಾರಂಟಿ ಟಾಕ್
- ಒಂದೇ ಫ್ಲೈಟ್ನಲ್ಲಿ ಕಿಚ್ಚ ಸುದೀಪ್-ಸಾಯಿಕುಮಾರ್ ಜರ್ನಿ
- ರಂಗಿತರಂಗ ರೀ ರಿಲೀಸ್.. ಅನೂಪ್ ಜೊತೆ ಡೈಲಾಗ್ ಕಿಂಗ್
- ಎವಡು ಚಿತ್ರದ ಬಳಿಕ ಅಂಥದ್ದೇ ಪವರ್ಫುಲ್ ರೋಲ್..?
ಹೌದು, ಡೈಲಾಗ್ ಕಿಂಗ್ ಸಾಯಿಕುಮಾರ್ ಚಿತ್ರರಂಗಕ್ಕೆ ಕಾಲಿಟ್ಟು ಬರೋಬ್ಬರಿ 50 ವರ್ಷ. ಇನ್ನೂ ರಂಗಿತರಂಗ ಅನ್ನೋ ಮಾಸ್ಟರ್ಪೀಸ್ ಸಿನಿಮಾ ತೆರೆಕಂಡು 10 ವರ್ಷ. ಸದ್ಯ ರಂಗಿತರಂಗ ಮೂವಿ ಇದೇ ಜುಲೈ 5ಕ್ಕೆ ರೀ-ರಿಲೀಸ್ ಆಗ್ತಿದ್ದು, ಮತ್ತೊಮ್ಮೆ ಡೈರೆಕ್ಟರ್ ಅನೂಪ್ ಭಂಡಾರಿ ಜೊತೆ ಕೈ ಜೋಡಿಸ್ತಿದ್ದಾರೆ ಕಂಚಿನ ಕಂಠದ ಪ್ರತಿಭೆ ಸಾಯಿಕುಮಾರ್.
ಹೌದು, ಅನೂಪ್ ಭಂಡಾರಿ ಅಂದು ರಂಗಿತರಂಗ ಚಿತ್ರದಲ್ಲಿ ನೀಡಿದ ಪಾತ್ರದ ಬಗ್ಗೆ ಮಾತಾಡ್ತಾ, ಅದರಿಂದಲೇ ಎಷ್ಟೋ ಜನ ಇಂದಿಗೂ ಗುರ್ತಿಸ್ತಾರೆ ಅಂತ ಖುಷಿ ಹಂಚಿಕೊಂಡಿದ್ದಾರೆ ಡೈಲಾಗ್ ಕಿಂಗ್. ಅಷ್ಟೇ ಅಲ್ಲ, ಬಾಹುಬಲಿಯನ್ನ ಸೆಡ್ಡು ಹೊಡೆದು ನಿಂತಂತಹ ರಂಗಿತರಂಗ ಹಾಗೂ ಡೈರೆಕ್ಟರ್ ಅನೂಪ್ ಭಂಡಾರಿಯನ್ನ ಕೊಂಡಾಡಿದ್ರು ಸಾಯಿಕುಮಾರ್.
ಇನ್ನು ನಿನ್ನೆಯಷ್ಟೇ ಬಾದ್ಷಾ ಸುದೀಪ್ ನಟನೆಯ ಬಿಲ್ಲ ರಂಗ ಬಾಷ ಚಿತ್ರದ ಅಪ್ಡೇಟ್ಸ್ ನೀಡಿದ್ವಿ. ಇದೀಗ ಮತ್ತೊಂದು ಮೆಗಾ ಅಪ್ಡೇಟ್ ಸಿಕ್ಕಿದೆ. 50 ವರ್ಷ ಚಿತ್ರರಂಗದಲ್ಲಿ ಸುದೀರ್ಘ ಜರ್ನಿ ಮಾಡಿ, ಇಂದಿಗೂ ಅದೇ ಬೇಡಿಕೆ ಉಳಿಸಿಕೊಂಡಿರೋ ಸಾಯಿಕುಮಾರ್, ಸದ್ಯ ಬಿಆರ್ಬಿ ಖಳನಾಯಕರಂತೆ. ಹೌದು.. ಇದನ್ನ ಸ್ವತಃ ಸಾಯಕುಮಾರ್ ಅವರೇ ನಮ್ಮ ಗ್ಯಾರಂಟಿ ಪಿಚ್ಚರ್ ಟೀಂ ಜೊತೆ ಎಕ್ಸ್ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ಒಂದೇ ಫ್ಲೈಟ್ನಲ್ಲಿ ಸುದೀಪ್ ಜೊತೆ ಪ್ರಯಾಣ ಮಾಡಿದ ಡೈಲಾಗ್ ಕಿಂಗ್, ನಿಮ್ಮೊಟ್ಟಿಗೆ ಕೆಲಸ ಮಾಡ್ಬೇಕು ಅಂದಿದ್ರಂತೆ. ಸ್ಮೈಲ್ ಕೊಟ್ಟಿದ್ದ ಕಿಚ್ಚ, ಬಿಆರ್ಬಿ ಚಿತ್ರಕ್ಕೆ ಖಳನಾಯಕನನ್ನಾಗಿ ಆರಿಸಿ, ಸರ್ಪ್ರೈಸ್ ನೀಡಿದ್ದಾರೆ.
ರಂಗಿತರಂಗ ರೀ-ರಿಲೀಸ್, ಬಿಲ್ಲ ರಂಗ ಬಾಷದಲ್ಲಿ ವಿಲನ್ಗಿರಿ, ಕಿಚ್ಚ ಸುದೀಪ್ ವ್ಯಕ್ತಿತ್ವದ ಬಗ್ಗೆ ಮಾತನಾಡಿದ ನಟ ಸಾಯಿಕುಮಾರ್, ಕಮಲ್ ಹಾಸನ್ ಕನ್ನಡ ವಿರೋಧಿ ಹೇಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನನ್ನ ಮಾತೃಭಾಷೆ ತೆಲುಗು. ಆದ್ರೆ ನನ್ನ ಜೀವನದ ಭಾಷೆ ಕನ್ನಡ. ಕಮಲ್ ಹಾಸನ್ ಕ್ಷಮೆ ಕೇಳಬೇಕು. ಈ ವಿಚಾರದಲ್ಲಿ ನನಗೂ ಬೇಜಾರಿದೆ ಎಂದಿದ್ದಾರೆ.
ಒಟ್ಟಾರೆ ಎವಡು ಸಿನಿಮಾದಲ್ಲಿ ರಾಮ್ ಚರಣ್ ಎದುರು ಅಬ್ಬರಿಸಿ, ಆರ್ಭಟಿಸಿದ್ದ ಸಾಯಿಕುಮಾರ್, ಆ ಬಳಿಕ ಅಂತಹ ಪಾತ್ರ ಮಾಡಲೇ ಇಲ್ಲ. ಪೋಷಕ ಪಾತ್ರಗಳಿಗೆ ಸೀಮಿತವಾಗಿದ್ದ ನಟ ಇದೀಗ ಆಲ್ ಇಂಡಿಯಾ ಕಟೌಟ್ ಜೊತೆ ಬಿಲ್ಲ ರಂಗ ಬಾಷದಲ್ಲಿ ಸೆಣಸಾಡೋಕೆ ಸಜ್ಜಾಗಿರೋದು ಇಂಟರೆಸ್ಟಿಂಗ್. ಎವಡು ಸಿನಿಮಾದಂತೆ ಅಂಥದ್ದೇ ಪವರ್ಫುಲ್ ಪಾತ್ರ ನಿರೀಕ್ಷಿಸಬಹುದು.