ಸ್ಯಾಂಡಲ್ವುಡ್ನಲ್ಲಿ ಮತ್ತೊಂದು ಧೂಳೆಬ್ಬಿಸೋ ಸೀಕ್ವೆಲ್ ಬರ್ತಾ ಇದೆ. ಅದೇ ನಮ್ಮ ಮಂಡ್ಯ ಗಂಡು ಸತೀಶ್ ನೀನಾಸಂ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಕಾಂಬಿನೇಷನ್ನ ಅಯೋಗ್ಯ 2. ಈಗಾಗಲೇ ‘ಮುದ್ದು ಮುದ್ದು ಪುಟ್ಟಲಕ್ಷ್ಮಿ’ ಅಂತ ಕಿಕ್ ಕೊಟ್ಟಿದ್ದ ಈ ಜೋಡಿ, ಈಗ ‘ಅಣ್ಣ ಬಂದ್ರೆ..’ ಅಂತ ಹೊಸ ಸಾಂಗ್ ಹಿಡಿದು ಅಖಾಡಕ್ಕೆ ಇಳಿದಿದೆ. ಯಶ್ ಅಣ್ತಮ್ಮನ ರಗಡ್ ಅವತಾರ ಹೇಗಿದೆ..? ಟ್ರೋಲರ್ಸ್ಗೆ ಸತೀಶ್ ಕೊಟ್ಟ ಖಡಕ್ ವಾರ್ನಿಂಗ್ ಏನು..? ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ..
- ಬಂದ ನೋಡೋ ಅಯೋಗ್ಯ.. ‘ಯಶ್ ಅಣ್ತಮ್ಮ’ನ ಫುಲ್ ಹವಾ
- ಅಣ್ಣ ಬಂದ್ರೆ.. ಅಖಾಡಕ್ಕಿಳಿದು ಸ್ಟೆಪ್ಸ್ ಹಾಕಿದ ಮಂಡ್ಯ ಹೈಕ್ಳು..!
- ರಚಿತಾ ರಾಮ್-ಸತೀಶ್ ಜೋಡಿ ಮತ್ತೆ ಕಣಕ್ಕೆ..!
- ಆ್ಯಂಟೊನಿ ದಾಸನ್ ವಾಯ್ಸ್.. ಬಹದ್ದೂರ್ ಚೇತನ್ ಲೈನ್ಸ್ ಮ್ಯಾಜಿಕ್
- ಟ್ರೋಲರ್ಸ್ಗೆ ಅಭಿನಯ ಚತುರ ಸತೀಶ್ ವಾರ್ನಿಂಗ್..!
ಕಳೆದ 2018ರಲ್ಲಿ ಸ್ಯಾಂಡಲ್ವುಡ್ನಲ್ಲಿ ಬಿಡುಗಡೆಯಾಗಿ ನೂರು ದಿನಗಳ ಕಾಲ ಭರ್ಜರಿ ಪ್ರದರ್ಶನ ಕಂಡು, ಅಂದಿನ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದ ಅಯೋಗ್ಯ ಚಿತ್ರದ ಕ್ರೇಜ್ ಅಷ್ಟಿಷ್ಟಲ್ಲ. ಸದ್ಯ ಅದೇ ಬ್ರ್ಯಾಂಡ್ ನೇಮ್ ಹಾಗೂ ಅದೇ ಮಂಡ್ಯದ ಮಣ್ಣಿನ ಸೊಗಡಿನ ಸೀಕ್ವೆಲ್ ಆಗಿ ಅಯೋಗ್ಯ 2 ಸಿದ್ಧವಾಗಿದ್ದು, ಗಾಂಧಿನಗರದಲ್ಲಿ ದೊಡ್ಡ ಮಟ್ಟದ ಹೈಪ್ ಕ್ರಿಯೇಟ್ ಮಾಡಿದೆ. ಸ್ಯಾಂಡಲ್ವುಡ್ನ ಒನ್ ಆಫ್ ದಿ ಮೋಸ್ಟ್ ಸಕ್ಸಸ್ಫುಲ್ ಆನ್-ಸ್ಕ್ರೀನ್ ಹಿಟ್ ಪೇರ್ ಎನಿಸಿಕೊಂಡಿರೋ ನಟ ಸತೀಶ್ ನೀನಾಸಂ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಜೋಡಿ ಮತ್ತೆ ಪ್ರೇಕ್ಷಕರೆದುರು ಧೂಳೆಬ್ಬಿಸಲು ಸಜ್ಜಾಗಿದೆ.
ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಮುಂಬರುವ ಆಗಸ್ಟ್ 7 ರಂದು ಅದ್ದೂರಿಯಾಗಿ ವರ್ಲ್ಡ್ ವೈಡ್ ರಿಲೀಸ್ ಆಗ್ತಿದೆ. ನಿರ್ಮಾಪಕ ಮುನೇಗೌಡ ಅವರು ಯಾವುದೇ ರಾಜಿ ಇಲ್ಲದೆ ಅದ್ಧೂರಿ ಬಜೆಟ್ನಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಇಡೀ ಚಿತ್ರತಂಡ ಈಗಿನಿಂದಲೇ ವಿಭಿನ್ನ ಪ್ರಮೋಷನ್ ಸ್ಟ್ರ್ಯಾಟಜಿ ಮೂಲಕ ಕರ್ನಾಟಕದಾದ್ಯಂತ ಅಯೋಗ್ಯನ ಹವಾ ಕ್ರಿಯೇಟ್ ಮಾಡ್ತಿದೆ. ಈಗಾಗಲೇ ಈ ಚಿತ್ರದ ಮೊದಲ ರೊಮ್ಯಾಂಟಿಕ್ ಟ್ರ್ಯಾಕ್ ಮುದ್ದು ಮುದ್ದು ಪುಟ್ಟಲಕ್ಷ್ಮಿ ಸಾಂಗ್ ರಿಲೀಸ್ ಆಗಿ ಲಕ್ಷಾಂತರ ಪ್ರೇಕ್ಷಕರ ದಿಲ್ ಗೆದ್ದು ಯೂಟ್ಯೂಬ್ನಲ್ಲಿ ಟ್ರೆಂಡಿಂಗ್ನಲ್ಲಿತ್ತು. ಈಗ ಅದರ ಬೆನ್ನಲ್ಲೇ ಚಿತ್ರತಂಡ ಬಿಡುಗಡೆ ಮಾಡಿರೋ ಮಾಸ್ ಹಾಗೂ ಪಕ್ಕಾ ಕಮರ್ಷಿಯಲ್ ನಂಬರ್ ‘ಅಣ್ಣ ಬಂದ್ರೆ..’ ಇಡೀ ಸೋಶಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಈ ಸಾಂಗ್ ಲಾಂಚ್ ಇವೆಂಟ್ ಆಗಿದ್ದು ಲಿರಿಕಲ್ ವೀಡಿಯೋ ಸಾಂಗನ್ನು ಲಾಂಚ್ ಮಾಡಲಾಗಿದೆ. ಇಡೀ ಚಿತ್ರತಂಡ ಒಂದೇ ವೇದಿಕೆಯಲ್ಲಿ ಜಮಾಯಿಸಿ ಹಾಡು ಪ್ಲೇ ಆಗ್ತಿದ್ದಂತೆ ನಟ ಸತೀಶ್ ನೀನಾಸಂ ಜೊತೆಗೆ ಚಿತ್ರದ ಡೈರೆಕ್ಟರ್ ಮಹೇಶ್ ಕುಮಾರ್ ಹಾಗೂ ಇಡೀ ಟೀಮ್ ಸ್ಟೇಜ್ ಮೇಲೆ ಅಣ್ಣ ಬಂದ್ರೆ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಸಾಂಗಿನಲ್ಲಿ ಸತೀಶ್ ಅವರ ಡ್ಯಾನ್ಸ್ ಪರ್ಫಾರ್ಮೆನ್ಸ್ ಮತ್ತು ಅವರ ಎನರ್ಜಿ ಲೆವೆಲ್ ಹಳೇ ಅಯೋಗ್ಯನಿಗಿಂತ ದುಪ್ಪಟ್ಟಾಗಿದೆ ಅನ್ನೋದು ಲಿರಿಕಲ್ ಝಲಕ್ ನೋಡಿದ್ರೇನೇ ಗೊತ್ತಾಗ್ತಿದೆ.
ಹಾಡು ರಿಲೀಸ್ ಬೆನ್ನಲ್ಲೇ ನಟ ಸತೀಶ್ ನೀನಾಸಂ ವೇದಿಕೆ ಮೇಲೆಯೇ ಅಸಮಾಧಾನ ಹೊರಹಾಕಿದ್ದಾರೆ. ಡೈರೆಕ್ಟರ್ ಮಹೇಶ್ ಕುಮಾರ್ ಅವರನ್ನ ಟ್ರೋಲ್ ಮಾಡೋರು ಹಾಗೂ ಸೋಷಿಯಲ್ ಮೀಡಿಯಾದಲ್ಲಿ ನೆಗೆಟಿವ್ ಕಾಮೆಂಟ್ ಹಾಕೋರ ವಿರುದ್ಧ ಮಂಡ್ಯ ಸ್ಟೈಲ್ನಲ್ಲೇ ಖಡಕ್ ಕ್ಲಾಸ್ ತಗೊಂಡಿದ್ದಾರೆ.
ಈ ಮಾಸ್ ಆಂಥೆಮ್ ಇಷ್ಟೊಂದು ವೈರಲ್ ಆಗೋಕೆ ಅದಕ್ಕೆ ಕೆಲಸ ಮಾಡಿರೋ ತಾಂತ್ರಿಕ ತಂಡವೇ ಪ್ರಮುಖ ಕಾರಣ. ಸ್ಯಾಂಡಲ್ವುಡ್ನ ಹಿಟ್ ಸಾಂಗ್ಸ್ ಸರದಾರ ಹಾಗೂ ಖ್ಯಾತ ನಿರ್ದೇಶಕ ಚೇತನ್ ಬಹದ್ದೂರ್ ಈ ಹಾಡಿಗೆ ಪಕ್ಕಾ ಲೋಕಲ್, ರಾ ಹಾಗೂ ಕ್ಯಾಚಿ ಸಾಹಿತ್ಯ ಬರೆದಿದ್ದು, ಪ್ರತಿಯೊಬ್ಬ ಯೂತ್ ಕನೆಕ್ಟ್ ಆಗೋ ತರ ಲೈನ್ಸ್ ಉಲ್ಲೇಖಿಸಿದ್ದಾರೆ.
ಇನ್ನು ಈ ಹೈ-ಎನರ್ಜಿ ಹಾಡಿಗೆ ಕೊರಿಯೋಗ್ರಾಫರ್ ಸಂತೋಷ್ ಮಾಸ್ ಸ್ಟೆಪ್ಸ್ ಹೇಳಿಕೊಟ್ಟಿದ್ದು, ಅದಕ್ಕೆ ಮಸ್ತ್ ಆಗಿ ಧ್ವನಿ ನೀಡಿ ಜೀವ ತುಂಬಿರೋದು ಸೌತ್ ಇಂಡಸ್ಟ್ರಿಯ ಸೆನ್ಸೇಷನಲ್ ಸಿಂಗರ್ ಆಂಟನಿ ದಾಸನ್. ಮಂಡ್ಯದ ಮಣ್ಣಿನ ಸೊಗಡಿನ ಜೊತೆ ವೆಸ್ಟರ್ನ್ ರಿದಮ್ ಹಾಗೂ ಫೋಕ್ ಬೀಟ್ಸ್ ಮಿಕ್ಸ್ ಆಗಿರೋ ಈ ಹಾಡು ಸದ್ಯ ರೀಲ್ಸ್ ಲೋಕದಲ್ಲಿ ಹಾಗೂ ಇನ್ಸ್ಟಾಗ್ರಾಮ್ ಆಡಿಯೋ ಟ್ರೆಂಡಿಂಗ್ ಲಿಸ್ಟ್ನಲ್ಲಿ ಟಾಪ್ ಒನ್ನಲ್ಲಿ ಬಂದು ಕೂತಿದೆ.
ಮೊದಲ ಭಾಗದ ಯಶಸ್ಸಿನ ನಂತರ ಅಯೋಗ್ಯ 2 ಮೇಲಿರೋ ನಿರೀಕ್ಷೆಗಳು ಗಗನ ಮುಟ್ಟಿವೆ. ನಿರ್ದೇಶಕ ಮಹೇಶ್ ಕುಮಾರ್ ಈ ಬಾರಿ ಕಥೆಯಲ್ಲಿ ಮಂಡ್ಯದ ರಾಜಕೀಯ, ಕಾಮಿಡಿ ಮತ್ತು ಲವ್ ಸ್ಟೋರಿಯನ್ನು ಇನ್ನು ರೋಚಕವಾಗಿ ಹೆಣೆದಿದ್ದಾರೆ. ಹಳೇ ಅಯೋಗ್ಯನಿಗಿಂತ ಈ ಹೊಸ ಅಯೋಗ್ಯ ಇನ್ನು ನೂರು ಪಟ್ಟು ಗ್ಯಾರಂಟಿ ಎಂಟರ್ಟೇನ್ಮೆಂಟ್ ಕೊಡಲಿದ್ದಾನೆ ಅನ್ನೋ ಭರವಸೆಯನ್ನು ಬಿಡುಗಡೆಯಾಗಿರೋ ಪ್ರಮೋಷನಲ್ ಕಂಟೆಂಟ್ಗಳು ನೀಡುತ್ತಿವೆ. ಒಟ್ಟಿನಲ್ಲಿ ಆಗಸ್ಟ್ 7ಕ್ಕೆ ಕರ್ನಾಟಕದಾದ್ಯಂತ ಚಿತ್ರಮಂದಿರಗಳಲ್ಲಿ ‘ಯಶ್ ಅಣ್ತಮ್ಮ’ನ ಅಸಲಿ ಆರ್ಭಟ ಹಾಗೂ ಕ್ರಾಂತಿ ಶುರುವಾಗಲಿದ್ದು, ಗಾಂಧಿನಗರದ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯೋಕೆ ಅಯೋಗ್ಯ ಟೀಮ್ ಎಲ್ಲಾ ತರಹದ ಅಸ್ತ್ರಗಳೊಂದಿಗೆ ಪಕ್ಕಾ ಪ್ಲ್ಯಾನ್ ಮಾಡಿ ಅಖಾಡಕ್ಕೆ ರೆಡಿಯಾಗಿ ನಿಂತಿದೆ.





