ಭಾರತೀಯ ಚಿತ್ರರಂಗದಲ್ಲಿ ನಮ್ಮ ಕನ್ನಡದ ಚೆಲುವೆಯರಿಗೆ ಕನ್ನಡದಲ್ಲಿ ಬಿಟ್ಟು ಬೇರೆ ಎಲ್ಲಾ ಭಾಷೆಗಳಲ್ಲಿ ಎಲ್ಲಿಲ್ಲದ ಡಿಮ್ಯಾಂಡ್. ಹೌದು.. ಈಗಾಗ್ಲೇ ಐಶ್ವರ್ಯಾ ರೈ, ಶಿಲ್ಪಾ ಶೆಟ್ಟಿ, ದೀಪಿಕಾ, ಅನುಷ್ಕಾ, ಪೂಜಾ ಹೆಗ್ಡೆ, ಶ್ರೀಲೀಲಾ, ನಿತ್ಯಾ ಮೆನನ್, ನಯನತಾರಾ, ನಭಾ, ರಶ್ಮಿಕಾ ಹೀಗೆ ಸಾಕಷ್ಟು ಮಂದಿ ತಾರೆಯರು ಪರಭಾಷೆಗಳಲ್ಲಿ ಮಿಂಚುತ್ತಿದ್ದಾರೆ. ಅವ್ರ ಸಾಲಿಗೆ ಮತ್ತೊಬ್ಬ ಬ್ಯೂಟಿ ಸೇರಿಕೊಂಡಿದ್ದಾರೆ. ಅವ್ರೇ ಆಶಿಕಾ ರಂಗನಾಥ್.
- ರಶ್ಮಿಕಾ ರೀತಿ ಸ್ಯಾಂಡಲ್ವುಡ್ಗೆ ಚೆಲುವೆ ಆಶಿಕಾ ಗುಡ್ ಬೈ..?
- ತೆಲುಗು-ತಮಿಳಲ್ಲಿ ಚುಟು ಚುಟು ಬೆಡಗಿಗೆ ಫುಲ್ ಡಿಮ್ಯಾಂಡ್
- ಬಿಗ್ ಸ್ಟಾರ್ಸ್ ಕಾಂಬೋ.. ಒಳ್ಳೆ ಸಂಭಾವನೆ.. ಸಿಕ್ಕಾಪಟ್ಟೆ ರೆಸ್ಪೆಕ್ಟ್
- ರವಿತೇಜಾ, ಚಿರಂಜೀವಿ, ಕಾರ್ತಿ ಜೊತೆ ಕನ್ನಡತಿ ಸಖತ್ ಬ್ಯುಸಿ
ಆಶಿಕಾ ರಂಗನಾಥ್.. ಕನ್ನಡದ ಈ ಚೆಂದುಳ್ಳಿ ಚೆಲುವೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಹತ್ತು ವರ್ಷಗಳಾಯ್ತು. ಆರಂಭದಲ್ಲೇ ದೊಡ್ಡ ದೊಡ್ಡ ಸ್ಟಾರ್ಗಳ ಜೊತೆ ಮಿಂಚಿದ ಈಕೆಗೆ, ತನ್ನ ಅಂದ ಚೆಂದದ ಜೊತೆಗೆ ಅದೃಷ್ಠ ಕೂಡ ಕೈ ಹಿಡಿಯಿತು. ಹಾಗಾಗಿಯೇ ಬಹುಬೇಗ ಪರಭಾಷಿಗರ ಕಣ್ಣಿಗೆ ಬಿದ್ದರು. ಪತ್ತು ಅರಸನ್ ಹಾಗೂ ಮಿಸ್ ಯೂ ಅನ್ನೋ ಸಿನಿಮಾಗಳ ಮೂಲಕ ತಮಿಳು, ಅಮಿಗೋಸ್, ನಾ ಸಾಮಿ ರಂಗ ಅನ್ನೋ ಚಿತ್ರಗಳಿಂದ ತೆಲುಗು ಇಂಡಸ್ಟ್ರಿಗೆ ಕಾಲಿಟ್ಟರು.
ಇಂಟರೆಸ್ಟಿಂಗ್ ಅಂದ್ರೆ ಆಶಿಕಾ ಕನ್ನಡದ ರೀತಿ ಟಾಲಿವುಡ್ ಹಾಗೂ ಕಾಲಿವುಡ್ ಅಂಗಳದಲ್ಲಿ ಕೂಡ ಸ್ಟಾರ್ಗಳ ಜೊತೆ ಸ್ಟಾರ್ ಡೈರೆಕ್ಟರ್ಸ್ ಹಾಗೂ ಟೆಕ್ನಿಷಿಯನ್ಸ್ ದಿಲ್ ದೋಚಿದ್ದಾರೆ. ಮಿಗಿಲಾಗಿ ಅಲ್ಲಿ ಕೂಡ ಅಸಂಖ್ಯಾತ ಅಭಿಮಾನಿಗಳನ್ನ ಸಂಪಾದಿಸಿಕೊಂಡಿದ್ದಾರೆ. ಸದ್ಯ ಭರ್ತ ಮಹಾಶಯಲಕು ವಿಜ್ಞಪ್ತಿ ಅನ್ನೋ ಮತ್ತೊಂದು ಇಂಟರೆಸ್ಟಿಂಗ್ ಸಿನಿಮಾದಲ್ಲಿ ರವಿತೇಜಾ ಜೊತೆ ಬಣ್ಣ ಹಚ್ಚಿರೋ ಆಶಿಕಾ, ಟೀಸರ್ ಹಾಗೂ ಸಾಂಗ್ಸ್ನಿಂದ ಎಲ್ಲರ ಹುಬ್ಬೇರಿಸಿದ್ದಾರೆ.
ಬೋಲ್ಡ್ ಡ್ರೆಸ್ಗಳಿಂದ ಪರಭಾಷಾ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ. ರವಿತೇಜಾ ಜೊತೆಗಿನ ಈ ಡಿಫರೆಂಟ್ ಟೈಟಲ್ನ ಫ್ಯಾಮಿಲಿ ಎಂಟರ್ಟೈನರ್ 2026ರ ಸಂಕ್ರಾಂತಿಗೆ ತೆರೆಗೆ ಬರ್ತಿದೆ. ಇದರ ನಡುವೆ ಮತ್ತೆರಡು ಬಿಗ್ ಪ್ರಾಜೆಕ್ಟ್ಗಳಲ್ಲಿ ಬ್ಯುಸಿ ಆಗಿದ್ದಾರೆ. ಒಂದು ಮೆಗಾಸ್ಟಾರ್ ಚಿರಂಜೀವಿ ಜೊತೆಗಿನ ವಿಶ್ವಂಭರ ಮತ್ತೊಂದು ಕಾರ್ತಿ ನಟನೆಯ ಸರ್ದಾರ್-2 ಸಿನಿಮಾಗಳಲ್ಲಿ ಅನ್ನೋದು ಇಂಪ್ರೆಸ್ಸೀವ್.
ಇವೆಲ್ಲವನ್ನ ನೋಡ್ತಿದ್ರೆ ಆಶಿಕಾ ನಮ್ಮ ರಶ್ಮಿಕಾ ಮಂದಣ್ಣ ರೀತಿ ಕನ್ನಡ ಚಿತ್ರರಂಗ ತೊರೆಯುವ ಸೂಚನೆ ನೀಡಿದ್ದಾರೆ. ಅಲ್ಲಿಯೇ ಫುಡ್ಡು, ಬೆಡ್ಡು ಕಂಡುಕೊಳ್ತಿರೋ ಆಶಿಕಾ, ಹೈದ್ರಾಬಾದ್ನಲ್ಲೇ ಸೆಟಲ್ ಆಗ್ತಾರಾ ಅನ್ನೋ ಅನುಮಾನಗಳು ಕೂಡ ಶುರುವಾಗಿವೆ. ಇತ್ತೀಚೆಗೆ ಗತ ವೈಭವ ಸಿನಿಮಾ ಮಾಡಿದ್ದ ಆಶಿಕಾ, ಅದನ್ನ ತೆಲುಗಿನಲ್ಲಿ ಕೂಡ ರಿಲೀಸ್ ಮಾಡಿದ್ರು. ನಾಗಾರ್ಜುನ್ ಅಂತಹ ಬಿಗ್ ಸೂಪರ್ ಸ್ಟಾರ್ ಬಂದು ಅದಕ್ಕೆ ಸಾಥ್ ನೀಡಿದ್ರು.
ಸೋ.. ಗತ ವೈಭವವೇ ಆಶಿಕಾ ಪಾಲಿಗೆ ಕಟ್ಟ ಕಡೆಯ ಕನ್ನಡ ಸಿನಿಮಾ ಆಗಲಿದೆ ಅಂತಿದ್ದಾರೆ ಕೆಲ ಸಿನಿಪಂಡಿತರು. ಅದೇನೇ ಇರಲಿ, ಎಲ್ಲೇ ಹೋದರೂ, ಎಷ್ಟೇ ಬೆಳೆದರೂ ಸಹ ಕನ್ನಡವನ್ನ ಮರೆಯದಿದ್ರೆ ಅಷ್ಟೇ ಸಾಕು. ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗು ನೀ ಕನ್ನಡವಾಗಿರು ಅಂತಷ್ಟೇ ಹಾರೈಸೋಣ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





