ನಟ ರಾಕ್ಷಸ ಡಾಲಿ ಧನಂಜಯ, ವಿದ್ಯಾಪತಿ ಬಳಿಕ ಜೆಸಿ ಸಿನಿಮಾನ ಪ್ರೊಡ್ಯೂಸರ್ ಮಾಡೋ ಮೂಲಕ ಮತ್ತೊಮ್ಮೆ ನಟರಕ್ಷಕ ಅನಿಸಿಕೊಂಡಿದ್ದಾರೆ. ಇತ್ತೀಚೆಗೆ ಬಾಡೂಟ ಸವಿದು ಟಾಕ್ ಆಫ್ ದಿ ಟೌನ್ ಆಗಿರೋ ಡಾಲಿ, ಆ ವಿವಾದದ ಕುರಿತು ಖಾರದ ಮಾತುಗಳನ್ನಾಡಿದ್ದಾರೆ. ಅಷ್ಟೇ ಅಲ್ಲ, ಫಾದರ್ ಆಗಿ ಪ್ರಮೋಷನ್ ಆಗ್ತಿರೋ ಖುಷಿ ಕೂಡ ಹಂಚಿಕೊಂಡಿದ್ದಾರೆ.
ಡಾಲಿಗೆ ಫಾದರ್ ಪ್ರಮೋಷನ್.. ಮೇಗೆ ಡಾಕ್ಟರ್ ಡೆಲಿವರಿ
ತಂದೆ ಜವಾಬ್ದಾರಿಯೂ ಹೌದು.. ಮಿಗಿಲಾಗಿ ಎಮೋಷನ್
ಡಾಕ್ಟರ್ನ ಮದ್ವೆ ಆಗೋ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಆ್ಯಕ್ಟರ್ ಡಾಲಿ ಧನಂಜಯ. ಮದ್ವೆ ಆಗಿ ಒಂದು ವರ್ಷ ಕೂಡ ಆಗಿಲ್ಲ. ಆಗ್ಲೇ ಗುಡ್ ನ್ಯೂಸ್ ನೀಡಿದ್ದಾರೆ. ಯೆಸ್.. 2025ರ ಫೆಬ್ರವರಿ 16ರಂದು ಮೈಸೂರಿನ ಎಕ್ಸಿಬಿಷನ್ ಗ್ರೌಂಡ್ಸ್ನಲ್ಲಿ ಡಾ. ಧನ್ಯತಾರ ಕೈ ಹಿಡಿದಿದ್ರು ಡಾಲಿ. ಇದೀಗ ತಂದೆಯಾಗಿ ಪ್ರಮೋಷನ್ ಪಡೆಯುತ್ತಿರೋ ಬಗ್ಗೆ ಖುಷಿಯಿಂದ ಮಾಹಿತಿ ಹಂಚಿಕೊಂಡಿದ್ದಾರೆ.
ಯೆಸ್.. ಇದೇ 2026ರ ಮೇ ತಿಂಗಳಲ್ಲಿ ಡಾ. ಧನ್ಯತಾಗೆ ಡೆಲಿವರಿ ಡೇಟ್ ಕೂಡ ನೀಡಿದ್ದು, ಮೂಲತಹ ಗೈನೋಕಾಲಜಿಸ್ಟ್ ಆಗಿರೋ ಧನ್ಯತಾ ಈಗ ತಾಯಿ ಆಗ್ತಿರೋದು ಇಂಟರೆಸ್ಟಿಂಗ್. ಅಂದಹಾಗೆ ಡಾಲಿ-ಧನ್ಯತಾ ಮದ್ವೆ ಆಗೋಕೆ ಮುನ್ನ ಸಾಕಷ್ಟು ಸುದ್ದಿಯಲ್ಲಿದ್ರು. ಅವ್ರ ಮದ್ವೆಗೆ ಫ್ಯಾನ್ಸ್ ಜೊತೆ ಚಿತ್ರರಂಗ ಹಾಗೂ ರಾಜಕಾರಣಿಗಳು ಸಹ ಸಾಕ್ಷಿ ಆಗಿದ್ರು. ಇದೀಗ ಡಾಲಿ ಮಕ್ಕಳ ವಿಡಿಯೋಸ್ ಜಾಸ್ತಿ ನೋಡ್ತಿದ್ದು, ಪತ್ನಿ ಜೊತೆ ಜಾಸ್ತಿ ಸಮಯ ಕಳೆಯುತ್ತಿದ್ದಾರಂತೆ.
ಮೀಟ್ ಮ್ಯಾಟರ್ ಸೆನ್ಸೇಷನ್.. ಧನಂಜಯ ಖಾರದ ಮಾತು
ಪಾರ್ಟಿ ಬಿಯರ್, ಸ್ಮೋಕ್.. ಸೀ ಫುಡ್, ಬಿರಿಯಾನಿ ಸೀಕ್ರೆಟ್
ಸಮುದಾಯ ಹಾಗೂ ಆರ್ಟಿಸ್ಟ್ ನೇಮ್ಸ್ ಬಳಕೆಗೆ ಗರಂ..!!
ಹತ್ತರಿಂದ ಹದಿನೈದು ಬಿರಿಯಾನಿ ಸೆಂಟರ್ಗಳನ್ನ ಉದ್ಘಾಟನೆ ಮಾಡಿ, ಇಷ್ಟ ಬಂದ ಬಾಡು ಸವಿದು ಬಂದಿರೋ ಡಾಲಿ ಧನಂಜಯ, ನನ್ನ ಆಹಾರ ನನ್ನಿಷ್ಟ ಅಂತಾರೆ. ಆದ್ರೆ ಇತ್ತೀಚೆಗೆ ಅವ್ರು ಬಿರಿಯಾನಿ ಸವಿಯುತ್ತಿರೋ ವಿಡಿಯೋ ವಿಚಾರ ಇಡೀ ಲಿಂಗಾಯತ ಸುಮುದಾಯವನ್ನೇ ಎಳೆದು ತರಲಾಗಿತ್ತು. ನಾನು ಪಾರ್ಟಿ ಮಾಡ್ತೀನಿ. ಸ್ಮೋಕ್ ಮಾಡ್ತೀನಿ. ಬಿಯರ್ ಬಾಯ್. ನನಗೆ ಸೀ ಫುಡ್ ಅಂದ್ರೆ ತುಂಬಾ ಇಷ್ಟ. ತುಂಬಾ ಎಂಜಾಯ್ ಮಾಡ್ಕೊಂಡು ಊಟ ಮಾಡ್ತೀನಿ. ಆದ್ರೆ ಬೇರೆ ಆರ್ಟಿಸ್ಟ್ಗಳ ಹೆಸರು ತಂದಿದ್ದು, ಸಮುದಾಯವನ್ನ ಎಳೆದು ತಂದ ವಿಚಾರಕ್ಕೆ ಡಾಲಿ ಸಿಕ್ಕಾಪಟ್ಟೆ ಬೇಸರ ವ್ಯಕ್ತಪಡಿಸಿದ್ರು. ಮೀಟ್ ಮ್ಯಾಟರ್ ಸಖತ್ ಖಾರವಾಗಿ ಮಾತನಾಡಿದ ಡಾಲಿ, ಟಗರು ಚಿತ್ರದಲ್ಲಿ ಬಿರಿಯಾನಿ ಬಗ್ಗೆ ಒಳ್ಳೆಯ ಡೈಲಾಗ್ ಇದೆ ಅಂತಲೂ ಹೇಳಿದ್ರು.
ಬಡವ್ರ ಮಕ್ಳು ಬೆಳೀಬೇಕು.. ಕುವೆಂಪು ಹೇಳಿದ್ದನ್ನ ನೆನಪಿಸಿದ್ದೆ
ಚರ್ಚೆ ಆಗ್ಬೇಕಿರೋದು ನಾ ಇಂಡಸ್ಟ್ರಿಗಾಗಿ ಮಾಡೋ ಕೆಲಸ..!
ಡಾಲಿ ಧನಂಜಯ ನಟ, ನಿರ್ಮಾಪಕ ಅನ್ನೋದು ಗೊತ್ತೇಯಿದೆ. ವಿದ್ಯಾಪತಿ ಬಳಿಕ ಜೆಸಿ ಸಿನಿಮಾನ ನಿರ್ಮಾಣ ಮಾಡಿದ್ದು, ಇದೀಗ ಅದಕ್ಕೂ ಮುನ್ನ ಮಾಧ್ಯಮಗಳ ಮುಂದೆ ವಿವಾದಗಳೆಲ್ಲದರ ಬಗ್ಗೆ ಮಾತನಾಡಿದ್ದಾರೆ. ಬಾಡೂಟದ್ದು ಆ ತರಹ ಆದ್ರೆ, ಬಡವ್ರ ಮಕ್ಕಳು ಬೆಳೀಬೇಕು ಕಣ್ರಯ್ಯ ಡೈಲಾಗ್ ಕೂಡ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿತ್ತು. ಅದು ಕುವೆಂಪು ಅವರ ಮಾತು, ನಾನು ನೆನಪಿಸಿದೆ ಅಷ್ಟೇ. ಆದ್ರೆ ಯಾರ್ಯಾರೋ ಬೇರೆ ತರಹ ಅದನ್ನ ಅರ್ಥೈಸಿಕೊಂಡ್ರು ಅಂತ ಆ ವಿವಾದದ ಬಗ್ಗೆಯೂ ಸ್ಪಷ್ಟನೆ ನೀಡಿದ್ದಾರೆ ಧನಂಜಯ.
ಇನ್ನು ಚರ್ಚೆ ಆಗ್ಬೇಕಿರೋದೇ ಆಗ್ತಿಲ್ಲ. ನಾನು ಇಂಡಸ್ಟ್ರಿಗಾಗಿ ಏನೆಲ್ಲಾ ಮಾಡ್ತಿದ್ದೀನಿ ಅನ್ನೋದೇ ಚರ್ಚೆ ಆಗ್ತಿಲ್ಲ. ಕೋಟಿ ಕೋಟಿ ದುಡ್ಡು ಇಟ್ಕೊಂಡು ಇಂಡಸ್ಟ್ರಿಗೆ ಬಂದವನು ನಾನಲ್ಲ. ಇಲ್ಲೇ ದುಡಿದು, ಇಲ್ಲೇ ಹಾಕ್ತಿದ್ದೀನಿ ಅಂತ ಅರ್ಥಪೂರ್ಣವಾಗಿ ಮಾತನಾಡಿದ್ರು ಡಾಲಿ.
ನಿಜಕ್ಕೂ ನಟ, ನಿರ್ಮಾಪಕ ಡಾಲಿ ಮಾತಿನಲ್ಲಿ ನೋವಿದೆ. ಸಮಾಜ ಅವ್ರನ್ನ ನೋಡುವ ಪರಿ ಬದಲಾಗಬೇಕಿದೆ. ಸೋಶಿಯಲ್ ಮೀಡಿಯಾದಲ್ಲಿ ಅವ್ರನ್ನ ಬಿಂಬಿಸೋ ವಿಧಾನ ಕೂಡ ಬದಲಾಗಬೇಕಿದೆ.





