ಬಿಗ್ ಬಾಸ್ ಕನ್ನಡ ಸೀಸನ್ 12 ಈಗಾಗಲೇ ಭಾರೀ ಕುತೂಹಲ ಮೂಡಿಸಿದೆ. ಆದರೆ ಇಂದು ಬಂದಿರುವ ಟ್ವಿಸ್ಟ್ ಎಲ್ಲರ ತಲೆತಿರುಗಿವಂತೆ ಮಾಡಲಿದೆ. ಬಿಗ್ ಬಾಸ್ ಮನೆ ಈ ವಾರದಿಂದ “ಬಿಬಿ ಪ್ಯಾಲೇಸ್” ಆಗಿ ರೂಪಾಂತರಗೊಂಡಿದೆ. ಈ ಪ್ಯಾಲೇಸ್ನಲ್ಲಿ ಪ್ರಸ್ತುತ ಸ್ಪರ್ಧಿಗಳೆಲ್ಲರೂ ಕೇವಲ ಸಿಬ್ಬಂದಿ ಮಾತ್ರ!, ಯಾಕೆಂದರೆ ಒಂದು ದಿನ ಪೂರ್ತಿ ಆ ರಾಜಮನೆಯ ಒಡೆಯರಾಗಿ ಆಗಮಿಸುತ್ತಿರುವವರು ಮಾಜಿ ಸ್ಪರ್ಧಿಗಳು.
ಹೌದು, ಬಿಗ್ ಬಾಸ್ ಒಟ್ಟಿಗೆ ಐದು ಜನ ಮಾಜಿ ಸ್ಪರ್ಧಿಗಳನ್ನು ವೈಲ್ಡ್ ಕಾರ್ಡ್ ಅಲ್ಲ, ಬದಲಿಗೆ “ರಾಜಕೀಯ ಅತಿಥಿ”ಗಳಾಗಿ ಕರೆಸಿದೆ. ಈ ಲಿಸ್ಟ್ನಲ್ಲಿ ಹಿಂದಿನ ಸೀಸನ್ನ ಸ್ಪರ್ಧಿಗಳು ಚೈತ್ರಾ ಕುಂದಾಪುರ, ಉಗ್ರಂ ಮಂಜು, ಮೋಕ್ಷಿತಾ ಪೈ, ತ್ರಿವಿಕ್ರಮ್ ಮತ್ತು ರಜತ್ ಈ ಐವರೂ ಇದ್ದಾರೆ.
ಬಿಗ್ ಬಾಸ್ ಅಧಿಕೃತವಾಗಿ ಬಿಡುಗಡೆ ಮಾಡಿರುವ ಪ್ರೋಮೋ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಪ್ರೋಮೋದಲ್ಲಿ ಕಾಣುವಂತೆ ಪ್ಯಾಲೇಸ್ನ ರಾಜ-ರಾಣಿಯರಾಗಿ ಆಗಮಿಸುತ್ತಿರುವ ಮಾಜಿಗಳು ಸೋಫಾದಲ್ಲಿ ಕುಳಿತು ಆದೇಶ ಮಾಡುತ್ತಾರೆ. ಆದರೆ ಈಗಿನ ಸ್ಪರ್ಧಿಗಳು ಬೆಲ್ ಒತ್ತಿದ ಕೂಡಲೇ ಓಡಿಬಂದು “ಯೆಸ್ ಸರ್ / ಯೆಸ್ ಮೇಡಂ” ಎನ್ನುತ್ತಾ ಚಹಾ-ಕಾಫಿ, ಮಸಾಜ್, ಫ್ಯಾನ್ ಆನ್-ಆಫ್ ಎಲ್ಲವನ್ನೂ ಮಾಡಬೇಕು. ಒಟ್ಟಿನಲ್ಲಿ ಒಂದು ದಿನ ಪೂರ್ತಿ ಮಾಡಬೇಕು.
ಮೊದಲು ಎಂಟ್ರಿ ಕೊಟ್ಟ ರಜತ್ ಸೀದಾ ಗಿಲ್ಲಿ ಮುಂದೆ ನಿಂತು “ಕಾವ್ಯಗೆ ಕಾವು” ಎಂದು ಗಟ್ಟಿಯಾಗಿ ಹೇಳಿದ್ದಾರೆ. ಗಿಲ್ಲಿ ಒಮ್ಮೆಲೇ ಶಾಕ್ ಆಗಿ “ಅಯ್ಯೋ ಸಾರ್, ಹಾಗೆ ಹೇಳಬೇಡಿ ಸಾರ್, ನನಗೆ ನೋವಾಗುತ್ತೆ ಸಾರ್” ಎಂದು ಹೇಳಿದ್ದಾರೆ. ಆದರೆ ರಜತ್ “ನೀನೊಬ್ಬ ರೋಧನೆ ಮಾಡ್ತೀಯಾ? ನಾವು ಐದು ಜನ ಇದ್ದೀವಿ, ಅಂದ್ರೆ ಇದು ಎಕ್ಸ್ ರೋಧನೆ!” ಎಂದು ಒಂದೇ ಸೀನ್ನಲ್ಲಿ ಗಿಲ್ಲಿ ಬಾಯಿ ಮುಚ್ಚಿಸಿಬಿಟ್ಟರು. ಈ ಡೈಲಾಗ್ ಕೇಳಿ ಮನೆಯಲ್ಲಿದ್ದ ಎಲ್ಲರೂ ಒಮ್ಮೆಲೇ ನಗೆಯಿಂದ ತುಂಬಿತ್ತು.
ಅಷ್ಟರಲ್ಲಿ ಅಶ್ವಿನಿ ಗೌಡ ಏನೋ ಮಾತಾಡಬೇಕೆಂದು ಬಾಯಿ ತೆಗೆದರೆ, ರಜತ್ ಬಂದು “ಅರೆ ಅಶ್ವಿನಿ, ಇವತ್ತು ನಿನ್ನ ವಾಯ್ಸ್ ಕೇಳೋದೇ ಇಲ್ಲ. ಸೈಲೆಂಟ್ ಮೋಡ್ ಇಟ್ಟುಕೋ” ಎಂದು ಕಾಲು ಎಳೆದಿದ್ದಾರೆ. ಅಶ್ವಿನಿ ಕೂಡ ಸುಮ್ಮನಿರದೆ ತಿರುಗೇಟು ಕೊಟ್ಟಿದ್ದಾಳೆ, ಆದರೆ ರಜತ್ನ ಟೈಮಿಂಗ್ ಮುಂದೆ ಎಲ್ಲರೂ ತಲೆ ತಗ್ಗಿಸುವಂತಾಗಿದೆ.
ಚೈತ್ರಾ ಕುಂದಾಪುರ ಮನೆಗೆ ಕಾಲಿಟ್ಟ ಕೂಡಲೇ ಹನುಮಂತು ಜೊತೆಗೆ ತನ್ನ ಹಳೇ ಫೈಟ್ ಮತ್ತೆ ಶುರು ಮಾಡಿದ್ದಾಳೆ. ಉಗ್ರಂ ಮಂಜು ಡೈನಿಂಗ್ ಟೇಬಲ್ ಬಳಿ ಕುಳಿತು ಎಲ್ಲರಿಗೂ ತಾನೇ ಆದೇಶ ಮಾಡುತ್ತಿದ್ದಾರೆ. ಮೋಕ್ಷಿತಾ ಪೈ ಮತ್ತು ತ್ರಿವಿಕ್ರಮ್ ಕೂಡ ತಮ್ಮದೇ ಆದ ಸ್ಟೈಲ್ನಲ್ಲಿ ಕಾಮೆಡಿ-ಕಾಟ ಶುರು ಮಾಡುತ್ತಿದ್ದಾರೆ.
ಒಟ್ಟಾರೆಯಾಗಿ ಇಂದಿನ ಸಂಚಿಕೆ ಒಂದು ಐತಿಹಾಸಿಕ ಎಪಿಸೋಡ್ ಆಗಲಿದೆ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ. ಮಾಜಿ ಸ್ಪರ್ಧಿಗಳು ಒಂದು ದಿನ ಪೂರ್ತಿ ರಾಜರಂತೆ ವರ್ತಿಸಿ, ಪ್ರಸ್ತುತ ಸ್ಪರ್ಧಿಗಳನ್ನು ಸೇವಕರಂತೆ ಬಳಸಿಕೊಳ್ಳುವ ಈ ಕಾನ್ಸೆಪ್ಟ್ ಕನ್ನಡ ಬಿಗ್ ಬಾಸ್ನಲ್ಲಿ ಇದೇ ಮೊದಲು ಬಾರಿಗೆ. ಇದರಿಂದ ಮನೆಯ ಡೈನಾಮಿಕ್ಸ್ ಸಂಪೂರ್ಣ ಬದಲಾಗಲಿದೆ, ಹಲವು ಹಳೇ ಲೆಕ್ಕಾಚಾರಗಳು ತೆರೆದುಕೊಳ್ಳಲಿವೆ.





