ಪ್ರಜಾಕೀಯ ಪ್ರಜಾಕೀಯ ಅಂತಿದ್ದ ರಿಯಲ್ ಸ್ಟಾರ್ ಉಪೇಂದ್ರ ಇದೀಗ TRP ಜೊತೆ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಟಿಆರ್ಪಿ ಅಂದ್ರೆ ದಿ ರಿಯಲ್ ಪ್ರಜಾಕೀಯ. ಇನ್ಫ್ಯಾಕ್ಟ್ ಇದು ಪ್ರಜಾಕೀಯ 2.O ವರ್ಷನ್ ಅನ್ನಬಹುದು. ಈ ಬಾರಿ ಸಾಕಷ್ಟು ಸಮಯ, ಹಣ ವ್ಯಯಿಸಿ, ಸಮಾಜಕ್ಕಾಗಿ ಹಾಗೂ ಬದಲಾವಣೆಗಾಗಿ ಸಖತ್ ವರ್ಕ್ ಮಾಡಿಕೊಂಡೇ ಕಾಲಿಟ್ಟಿದ್ದಾರೆ ಟ್ರೆಂಡ್ ಸೆಟ್ಟರ್ ಉಪ್ಪಿ. ಮೂರ್ಖರ ದಿನದಂದೇ ಬುದ್ಧಿವಂತರ ದಿನ ಆಚರಿಸೋಣ ಅಂದಿದ್ಯಾಕೆ ಬುದ್ಧಿವಂತ..? ಏನಿದೆ ಈ TRPನಲ್ಲಿ ಅನ್ನೋದ್ರ ಸ್ಟೋರಿ ಇಲ್ಲಿದೆ ನೋಡಿ…
- GBA ಎಲೆಕ್ಷನ್ಸ್ಗೆ ಉಪ್ಪಿ ಮಾಸ್ಟರ್ಪ್ಲ್ಯಾನ್.. ಸ್ಪರ್ಧಿಸೋದು ಫಿಕ್ಸ್?
- ಪ್ರಜಾಕೀಯ ನ್ಯೂ ವರ್ಷನ್ ‘ದಿ ರಿಯಲ್ ಪ್ರಜಾಕೀಯ’..!
- ಪ್ರಾಂಕ್ ಮಾಡೋ ಫೂಲ್ಸ್ ಡೇ ದಿನ ಉಪ್ಪಿ ಫ್ರ್ಯಾಂಕ್ ಎಂಟ್ರಿ
- ಸಮಸ್ಯೆ ಜೊತೆ ಸಲ್ಯೂಷನ್ ಹೊತ್ತು ಆ್ಯಪ್ ಸಮೇತ ಬಂದ್ರು
ಉಪೇಂದ್ರ ಸಿನಿಮಾಗಳು ಕಡ್ಡಾಯವಾಗಿ ಬುದ್ಧಿವಂತರಿಗೆ ಮಾತ್ರ ಎನ್ನಲಾಗ್ತಿತ್ತು. ಅದೇ ರೀತಿ ಅದೇ ಉಪೇಂದ್ರ ಅವರು ರಾಜಕೀಯಕ್ಕೆ ಪರ್ಯಾಯವಾಗಿ ಹುಟ್ಟಿಹಾಕಿರೋ ಪ್ರಜಾಕೀಯ ಕಾನ್ಸೆಪ್ಟ್ ಇದೀಗ ಕಡ್ಡಾಯವಾಗಿ ಸ್ವಂತಂತ್ರರಿಗೆ ಮಾತ್ರ ಎನ್ನಲಾಗ್ತಿದೆ. ಅರೇ ಪ್ರಜಾಕೀಯ ಇನ್ನೂ ಚಾಲ್ತಿ ಅಲ್ಲಿ ಇದೆಯಾ..? ಉಪೇಂದ್ರ ಇತ್ತೀಚೆಗೆ ಸೈಲೆಂಟ್ ಆಗಿಬಿಟ್ರಲ್ಲಾ ಅಂತ ಹುಬ್ಬೇರಿಸೋರು ಈ ಸ್ಟೋರಿಯನ್ನ ಕೂಲಂಕುಶವಾಗಿ ಅವಲೋಕಿಸಬೇಕಿದೆ.
ಉಪೇಂದ್ರ ಎಲ್ಲೂ ಹೋಗಿಲ್ಲ. ಹಾಗಂತ ಪ್ರಜಾಕೀಯವನ್ನ ಕೂಡ ಬಿಟ್ಟಿಲ್ಲ. ಅದರದ್ದೇ ನ್ಯೂ ವರ್ಷನ್ ದಿ ರಿಯಲ್ ಪ್ರಜಾಕೀಯ ಕಾನ್ಸೆಪ್ಟ್ನ ಹೊತ್ತು ಮತ್ತೆ ಬಂದಿದ್ದಾರೆ. ಇಷ್ಟು ದಿನ ಸೈಲೆಂಟ್ ಆಗಿ ಇದ್ದಿದ್ರ ಹಿಂದಿನ ಅಸಲಿ ಕಾರಣ ಇದಕ್ಕೇ ಅನ್ನೋದನ್ನ ಸ್ಪಷ್ಟ ಪಡಿಸಿದ್ದಾರೆ. ಹೌದು.. ಟಿಆರ್ಪಿ ಅಂದ್ರೆ ದಿ ರಿಯಲ್ ಪ್ರಜಾಕೀಯದ ಮೂಲಕ ಪ್ರಜಾಕೀಯ 2.ಓ ವರ್ಷನ್ನ ರೀ ಲಾಂಚ್ ಮಾಡಿದ್ದಾರೆ.
ಏಪ್ರಿಲ್ 1 ಅಂದ್ರೆ ಫೂಲ್ಸ್ ಡೇ ಅಂತ ಅರ್ಥ. ಆದ್ರೆ ಅದೇ ಪ್ರಾಂಕ್ ಮಾಡೋ ದಿನ ಫ್ರ್ಯಾಂಕ್ ಆಗಿ ದಿ ರಿಯಲ್ ಪ್ರಜಾಕೀಯದ ಕನಸು ಹೊತ್ತು ಸಮಾಜಕ್ಕಾಗಿ, ಜನಕ್ಕಾಗಿ ಮತ್ತೆ ಬಂದಿದ್ದಾರೆ. ಸದ್ಯ ಜಿಬಿಎ ಎಲೆಕ್ಷನ್ಸ್ ಬರ್ತಿದ್ದು, ಅದಕ್ಕೆ ಅಂತಲೇ ಒಂದೊಳ್ಳೆ ಆ್ಯಪ್ ಡೆವಲಪ್ ಮಾಡಿಕೊಂಡು ಜನಕ್ಕಾಗಿ ಜನರ ಮುಂದೆ ಬಂದಿದ್ದಾರೆ. ಅದನ್ನ ಮಾಧ್ಯಮಗಳ ಮೂಲಕ ಪ್ರೆಸ್ಕ್ಲಬ್ನಲ್ಲಿ ಇಂದು ಪ್ರೆಸೆಂಟೇಷನ್ ನೀಡಿ, ಇಂಚಿಂಚೂ ಮಾಹಿತಿ ನೀಡಿದ್ರು ರಿಯಲ್ ಬುದ್ಧಿವಂತ ಉಪೇಂದ್ರ.
ಸಮಸ್ಯೆಗಳನ್ನ ಎಲ್ಲರೂ ಹೇಳಿಕೊಳ್ತಾರೆ. ಆದ್ರೆ ಆ ಸಮಸ್ಯೆಗಳಿಗೆ ಸಲ್ಯೂಷನ್ ಕೊಡೋರು ಯಾರೂ ಇರಲ್ಲ. ಉಪ್ಪಿ ಮಾಡಿರೋ ಈ ದಿ ರಿಯಲ್ ಪ್ರಜಾಕೀಯದ ಆ್ಯಪ್ ನಿಜಕ್ಕೂ ಅದ್ಭುತವಾಗಿದೆ. ಬರೀ ಜಿಬಿಎ ಎಲೆಕ್ಷನ್ಗಾಗಿ ಅಷ್ಟೇ ಅಲ್ಲ, ಯಾವುದೇ ಎಲೆಕ್ಷನ್ಗೆ ಇದನ್ನ ಬಳಸಿಕೊಳ್ಳಬಹುದು. ಇದು ಚುನಾವಣೆಗೆ ನಿಲ್ಲುವ ಮಹಾತ್ವಾಕಾಂಕ್ಷಿ ಹಾಗೂ ಮತದಾರರ ನಡುವಿನ ಸೇತುವೆ ಆಗಲಿದೆ. ಇದನ್ನ ಜನ ಸುಲಭವಾಗಿ ಲಾಗಿನ್ ಆಗಬಹುದು. ಅಲ್ಲಿ ಅಭ್ಯರ್ಥಿ ಆಯ್ಕೆಯಿಂದ ಹಿಡಿದು, ಸಮಸ್ಯೆ, ಅದಕ್ಕೆ ಪರಿಹಾರ ಅಥ್ವಾ ಆ ಅಭ್ಯರ್ಥಿಯ ಭೇಟಿ, ಮೀಟಿಂಗ್ ಹೀಗೆ ಎಲ್ಲವೂ ಆ್ಯಪ್ ಮೂಲಕ ಡಿಟೈಲ್ಡ್ ಆಗಿ ಎಳೆ ಎಲೆಯಾಗಿ ಹೇಳಿದ್ದಾರೆ ಉಪ್ಪಿ.
ನಾವುಗಳು ಸದಾ ಮತ್ತೊಬ್ಬರ ಮೇಲೆ ಡಿಪೆಂಡ್ ಆಗಿಯೇ ಇದ್ದೇವೆ. ಆ ಡಿಪೆಂಡೆನ್ಸಿ ಬೇಡ. ಸ್ವತಂತ್ರರಾಗಬೇಕು. ಆಳುವವರೂ ಪ್ರಜೆಗಳೇ ಆಗಬೇಕು ಅನ್ನೋದು ಇದರ ತಾತ್ಪರ್ಯವಾಗಿದೆ. ಯಾರೋ ಒಬ್ಬ ನಾಯಕ ಬರ್ತಾನೆ ನಮ್ಮನ್ನ ಉದ್ದಾರ ಮಾಡ್ತಾನೆ ಅನ್ನೋ ಭರವಸೆ ಅಥ್ವಾ ಹತಾಶೆಯಲ್ಲಿ ಬದುಕೋದನ್ನ ಬಿಡಿ ಅಂತ ನೇರವಾಗಿಯೇ ತಲೆಮೇಲೆ ಹೊಡೆದಂತೆ ಹೇಳಿದ್ದಾರೆ ಉಪೇಂದ್ರ.
ಇನ್ನೂ ಉಪ್ಪಿಯ ಈ ಮಾಡೆಲ್ ಅದ್ಭುತ.. ಅದಕ್ಕಿಂತ ಅವರ ಆಶಯ ಅತ್ಯದ್ಭುತ. ಆದ್ರೆ ಉಪೇಂದ್ರ ಅವರು ಮಾತ್ರ ಎಲೆಕ್ಷನ್ಗೆ ನಿಲ್ಲಲ್ಲ ಅಂದ್ರೆ ಹೇಗೆ. ಅವರು ಒಮ್ಮೆ ನಿಂತು ಪ್ರೂವ್ ಮಾಡಿ ತೋರಿಸಿದ್ರೆ ಅವ್ರ ಈ ಮಾಡೆಲ್ನ ಉದ್ದೇಶ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ. ಹೀಗೆಂದು ಪ್ರಶ್ನೆ ಮಾಡಿದ ಪತ್ರಕರ್ತರಿಗೆ ಯಾರಿಗೆ ಗೊತ್ತು..? ನಾನು ಜಿಬಿಎ ಎಲೆಕ್ಷನ್ಗೆ ಕತ್ರಿಗುಪ್ಪೆ ವಾರ್ಡ್ನಿಂದಲೇ ನಿಂತರೂ ಅಚ್ಚರಿಯಿಲ್ಲ ಅಂತ ಪರೋಕ್ಷವಾಗಿ ತಮ್ಮ ಚುನಾವಣಾ ಎಂಟ್ರಿ ಬಗ್ಗೆ ಸಣ್ಣ ಸುಳಿವು ನೀಡಿದ್ರು ಉಪ್ಪಿ.
ನಮ್ಮ ಪ್ರಜಾಕೀಯ ಪಕ್ಷ ಕೋಮಾದಲ್ಲಿ ಇಲ್ಲ. ಆ ರೀತಿ ನೋಡುವವರು ಕೋಮಾದಲ್ಲಿ ಇರ್ತಾರೆ ಅಷ್ಟೇ ಎಂದ ಉಪೇಂದ್ರ ನಾನಂತೂ ಸಾಯೋ ತನಕ ನನ್ನ ಪ್ರಯತ್ನ ಮಾಡ್ತಾನೇ ಇರ್ತೀನಿ ಎಂದರು. ರೈಟ್ ಟು ರೀಕಾಲ್ ತರೋ ತನಕ ಮಾತ್ರ ನಮ್ಮ ಹೋರಾಟ. ಸಂವಿಧಾನ ತಿದ್ದುಪಡಿಗಾಗಿ ನಮ್ಮ ಹೋರಾಟ ಅಷ್ಟೇ ಎಂದ ಉಪೇಂದ್ರ, ನೋಟಾಗೆ ವೋಟ್ ಮಾಡೋದ್ರಿಂದ ಯಾರಿಗೆ ಲಾಸ್..? ಅಂತ ನೋಟಾ ಬಗ್ಗೆಯೂ ಅರಿವು ಮೂಡಿಸಿದ್ರು.
ಒಟ್ಟಾರೆ ಸದಾ ಸಿನಿಮಾ, ಡಬ್ಬಿಂಗ್, ನಿರ್ದೇಶನ, ಬರವಣಿಗೆ, ಫ್ಯಾಮಿಲಿ, ವೈಯಕ್ತಿಕ ಕೆಲಸ ಕಾರ್ಯಗಳಲ್ಲಿ ಬ್ಯುಸಿ ಇರೋ ಅಂತಹ ಒಬ್ಬ ದೊಡ್ಡ ಸೂಪರ್ ಸ್ಟಾರ್, ಅದರ ಹೊರತಾಗಿ ದೊಡ್ಡ ಮೊತ್ತದ ಹಣ, ಸಮಯ ವ್ಯಯಿಸಿದ್ದಾರೆ. ಅದಕ್ಕಾಗಿ ಹಗಲಿರುಳು ಕಷ್ಟ ಪಟ್ಟು ಈ ಆ್ಯಪ್ನ ಡೆವಲಪ್ ಮಾಡಿಸಿದ್ದಾರೆ. ಜನರಿಂದ ಜನರಿಗಾಗಿ ಜನರೇ ನಡೆಸುವ ಸರ್ಕಾರ ಅನ್ನೋ ಪ್ರಜಾಪ್ರಭುತ್ವದ ಆಶಯಕ್ಕೆ ಅನುಗುಣವಾಗಿ ಹೊಸ ಬದಲಾವಣೆ ತರಲು ಬಯಸಿದ್ದಾರೆ. ಜನ ಈಗಲಾದ್ರೂ ಎಚ್ಚೆತ್ತುಕೊಳ್ಳಲಿಲ್ಲ ಅಂದ್ರೆ ಕಷ್ಟವಾಗಲಿದೆ.
ಉಪೇಂದ್ರ ಚುನಾವಣೆಗೆ ನಿಂತು ಪ್ರಜಾಕೀಯದ ಅಸಲಿ ಗತ್ತು, ಗಮ್ಮತ್ತು ಏನು ಅನ್ನೋದನ್ನ ತೋರುವ ಅನಿವಾರ್ಯತೆ ತುರ್ತಾಗಿ ಆಗಬೇಕಿದೆ. ಅವರೇ ಆ ಮಾಡೆಲ್ಗೆ ರೋಲ್ ಮಾಡೆಲ್ ಆಗಿ ಮುಂದಾಳತ್ವ ವಹಿಸಿದ್ರೆ ಬಹುಶಃ ಆದಷ್ಟು ಬೇಗ ಆ ಮಾಡೆಲ್ನ ಇಡೀ ರಾಜ್ಯ, ದೇಶ ಕೂಡ ಅವಳಡಿಸಿಕೊಳ್ಳುತ್ತೆ ಅನ್ನೋದ್ರಲ್ಲಿ ಡೌಟೇ ಇಲ್ಲ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





