ಕಳೆದ ಒಂದು ತಿಂಗಳಿಂದ ರಾಜ್ಯದಲ್ಲಿ ಡಿಕೆಶಿ ಆಡಳಿತಾತ್ಮಕ ಆಟ ಜೋರಾಗಿ ನಡೆಯುತ್ತಿದೆ. ಸಿದ್ದರಾಮಯ್ಯನಷ್ಟು ಸಲಿಸಲ್ಲ ಈ ಡಿಕೆಶಿ ಅನ್ನೋದನ್ನ ಸಣ್ಣ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ನಾಯಕರಿಗೆ ತೋರಿಸಿದ್ದಾರೆ..ಡಿಕೆಶಿ ಕೊಟ್ಟ ಚೆಕ್ಮಟ್ಗೆ ಇನ್ನೂ ಬಿಜೆಪಿ ಚೇತರಿಸಕೊಳ್ಳಲು ಆಗ್ತಿಲ್ಲ.ಈ ನಡುವೆ ಸದಾನಂದರ ಆ ಆಡಿಯೋ ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದನ್ನ ಬಯಲು ಮಾಡಿದೆ. ಜತೆಗೆ ಮನೆಯೊಂದು ಮೂರು ಬಾಗಿಲು ಅನ್ನೋದು ಪಕ್ಕಾ ಆಗಿದೆ. ಚುನಾವಣೆಗೆ ಇನ್ನೂ 1ವರ್ಷ ಹತ್ತು ತಿಂಗಳು ಇರುವಾಗ ನಡೆದ ಈ ಘಟನೆಗೆ ಬಿಜೆಪಿ ಹೈಕಮಾಂಡ್ ಗರಂ ಆಗೋದಕ್ಕೂ ಕಾರಣವಾಗಿದೆ.ಹಾಗಂತ ಒಂದು ತಿಂಗಳು ತುಂಬಿದ ಡಿಕೆಶಿ ಮಾಡಿದ್ದೇಲ್ಲವೂ ಸರಿ ಅಂತ ಅಲ್ಲ.. ಕಾಂಗ್ರೆಸ್ ಸಮಸ್ಯೆಗಳ ಹೊರತಾಗಿಲ್ಲ..
ರಾಜ್ಯ ಬಿಜೆಪಿಗೆ ಆತ್ಮಾವಲೋಕನಕ್ಕೆ ಸಕಾಲ
ಸದಾ ಓಡುವ ಕುದುರೆ ಸುಸ್ತಾಗಿ ಸುಧಾರಿಸಿಕೊಳ್ಳಲು ನಿಲ್ಲೋದು ಸಹಜ. ರಾಜ್ಯ ಬಿಜೆಪಿ ಸಹ ಹೈಕಮಾಂಡ್ ಕೃಪೆಯಿಂದ 2014ರಿಂದ ಇಲ್ಲಿಯವರೆಗೂ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗಿಂತಲೂ ಅಧಿಕ ಸ್ಥಾನಗಳನ್ನ ಗೆದ್ದು ಬೀಗಿ ದಕ್ಷಿಣದಲ್ಲಿ ಕಮಲ ಪಕ್ಷಕ್ಕೆ ಕರ್ನಾಟಕ ಹೆಬ್ಬಾಗಿಲು ಅನ್ನೋದನ್ನ ಸಾಬೀತು ಮಾಡಿದೆ. ಆದ್ರೆ ರಾಜ್ಯ ವಿಧಾನಸಭಾ ಚುನಾವಣೆಗೆ ಬಂದಾಗ ಹಲವು ಬಾರಿ ಎಡವಿರುವುದು ನಿಜ. ಕೆಲ ಬಾರಿ ಭ್ರಷ್ಟಾಚಾರ ಆರೋಪ ಹೊತ್ತು ಅಧಿಕಾರ ಕಳೆದುಕೊಂಡ್ರೆ ಕೆಲ ಬಾರಿ ಬಣ ರಾಜಕೀಯದಿಂದ ಚುನಾವಣೆಯಲ್ಲಿ ಪೆಟ್ಟು ತಿಂದು ವಿಪಕ್ಷ ಸ್ಥಾನದಲ್ಲಿ ಕೂತಿದ್ದಾರೆ. ಈಗ ವಿಧಾನಸಭೆಗೆ ಇನ್ನೂ 22 ತಿಂಗಳು ಇರುವಾಗ ಡಿಕೆ ಶಿವಕುಮಾರ್ ಮುಂದೆ ಮುಗ್ಗರಿಸಿಬಿದ್ದು ಕೇಂದ್ರ ಬಿಜೆಪಿ ನಾಯಕರ ಕೆಂಗ್ಗಣಿಗೆ ಗುರಿಯಾಗಿದ್ದಾರೆ. ಈ ನಡುವೆ ಡಿಕೆಶಿ ಚುನಾವಣಾ ತಂತ್ರಗಾರಿಕೆ ಬಗ್ಗೆ ಮಾದ್ಯಮಗಳ ಮುಂದೆ ಮಾತನಾಡಿ.ಹೈಕಮಾಂಡ್ ನಾಯಕರೊಬ್ಬರ ಜತೆ ಮಾತನಾಡುವಾಗ ವಿಜಯೇಂದ್ರ ಕಿಕ್ ಔಟ್ ಅನ್ನೋ ಸದಾನಂದರ ಮಾತು ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಅನ್ನೊದು ಗೊತ್ತಾಗಿದೆ. ಚುನಾವಣೆ ಇನ್ನೂ ದೂರು ಇರುವುದರಿಂದ ಸದಾರಿಸಿಕೊಳ್ಳಲು, ಯೋಚನೆ ಮಾಡಲು,ಪ್ರತಿಷ್ಠೆ ಬದಿಗಿಟ್ಟು ಆತ್ಮಾವಲೋಕಾನ ಮಾಡಿಕೊಂಡು ಪಕ್ಷ ಕಟ್ಟಲು ಇದು ಸಕಾಲ..
ರಾಜ್ಯ ಬಿಜೆಪಿಯ ನಿದ್ದೆಗೆಡಿಸಿದ ಡಿಕೆಶಿ..!
ದೇಶದಲ್ಲಿ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳಿಗೆ ಎಸ್ಐಆರ್ ಪ್ರಕ್ರಿಯೆ ಕಬ್ಬಿನ ಕಡೆಲೆ ಆಗಿತ್ತು. ಆದ್ರೆ ಕರ್ನಾಟಕದಲ್ಲಿ ಇದಕ್ಕೆ ಭಿನ್ನ.ರಾಜ್ಯ ಬಿಜೆಪಿ ಕಾಂಗ್ರೆಸ್ ಮಾಡ್ತಿರುವ ಎಸ್ಐಆರ್ ಆಟಕ್ಕೆ ಕಕ್ಕಾಬಿಕ್ಕಿಯಾಗಿ ರಾಜ್ಯ ಬಿಜೆಪಿ ಕೋರ್ ಕಮಿಟಿಯಲ್ಲಿ ಡಿಕೆಶಿ ಆಟದ ಬಗ್ಗೆ ಚರ್ಚೆ ಮಾಡಿದ್ದಾರೆ. ರಾಜ್ಯದಲ್ಲಿ ಆಗ್ತಿರುವ ಎಸ್ಐಆರ್ ಪ್ರಕ್ರಿಯೆ ಬ್ರೇಕ್ ಹಾಕದಿದ್ದಾರೆ ನಾವು 2028ಕ್ಕೂ ವಿಪಕ್ಷದಲ್ಲಿ ಕೂರಬೇಕಾಗುತ್ತೆ ಅಂತ ಮಾತನಾಡಿಕೊಂಡಿದ್ದಾರೆ. ಹೀಗಾಗಿ ಅಕ್ರಮ ಮತದಾರರನ್ನ ಡಿಲೀಟ್ ಮಾಡಲು ಎಸ್ಐಆರ್ ಪ್ರಕ್ರಿಯೆಯನ್ನ ನಿದ್ದೆಗೆಡಿಸಿಕೊಂಡು ಮಾಡಬೇಕು ಅಂತ ತೀರ್ಮಾನ ಮಾಡಿದ್ದಾರೆ..
ಕಳೆದ ಒಂದು ತಿಂಗಳಲ್ಲಿ ಡಿ.ಕೆ ಶಿವಕುಮಾರ್ ಸ್ಪೀಡ್ ಗೆ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ವಾತವಾರಣ ಸೃಷ್ಟಿಯಾಗಿರುವುದು ನಿಜ. ಅಂದ ಮಾತ್ರಕ್ಕೆ ಕಾಂಗ್ರೆಸ್ಲ್ಲಿ ಎಲ್ಲವೂ ಸರಿಯಿದೆ ಅಂತಲೂ ಅಲ್ಲ.ಡಿಕೆ ಶಿವಕುಮಾರ್ ಸಂಪುಟ ವಿಸ್ತರಣೆ ವಿಚಾರದಲ್ಲಿ ಮಾಡ್ತಿರುವ ಆಮೆಗತಿ ನಿರ್ಧಾರಗಳಿಗೆ ಕಾಂಗ್ರೆಸ್ ಶಾಸಕರು ಬೇಸರಗೊಂಡಿದ್ದಾರೆ. ಜತೆಗೆ ಡಿಕೆ ಶಿವಕುಮಾರ್ ಒಬ್ಬರೇ ಕೆಲ ನಿರ್ದಾರಗಳನ್ನ ತೆಗೆದುಕೊಂಡಿದ್ದಾರೆ ಅನ್ನೋ ಚರ್ಚೆಯೂ ಶುರುವಾಗಿದೆ. ಪಕ್ಷಕ್ಕೆ ದುಡಿದವರಿಗಿಂತ ಸಿದ್ದರಾಮಯ್ಯ ರೀತಿಯಲ್ಲಿ ಇವರು ಬಾಲಂಗೂಚಿಗಳಿಗೆ ಮಣೆ ಹಾಕ್ತಿದ್ದಾರೆ ಅನ್ನೋ ಗುಸುಗುಸು ಶುರುವಾಗಿದೆ. ಆರ್ಎಸ್ಎಸ್ ವಿಚಾರದಲ್ಲಿ ಬಿ ಕೆ ಹರಿಪ್ರಸಾದ್ ಹಾಗೂ ಪ್ರಿಯಾಂಕ್ ಖರ್ಗೆ ಮಾತಿಗೆ ಚಕಾರ ಎತ್ತಿದ್ದು ಕಾಂಗ್ರೆಸ್ ಸಿದ್ದಾಂತವಾದಿಗಳ ಅಸಮಾಧಾನಕ್ಕೆ ಕಾರಣವಾಗಿದೆ.ಸುದ್ದಿಘೋಷ್ಠಿ ಸಂದರ್ಭದಲ್ಲಿ ನನ್ನಿಂದ ಯಾರು ಕೂರಬೇಡಿ ಅನ್ನೋ ಮಾತು ಸಚಿವರಿಗೆ ಬೇಸರ ತರಿಸಿದೆ ಹೀಗಾಗಿ ಡಿಕೆ ಶಿವಕುಮಾರ್ ಮಾಡ್ತಿರುವುದು ಬಿಜೆಪಿಗೆ ವಿರುದ್ಧವಿದ್ರೂ ಕೈ ಪಕ್ಷದ ನಾಯಕರ ಅಸಮಾಧಾನಕ್ಕೂ ಕಾರಣವಾಗಿದೆ.
ಸಿಎಂ ಸ್ವಪಕ್ಷದವರ ಪೆಟ್ಟಿನ ಮರ್ಮ ಅರಿತ್ರೆ ಒಳಿತು
ಒಬ್ಬ ನಾಯಕ ವಿಪಕ್ಷಗಳಿಗಿಂತ ಸ್ವಪಕ್ಷದವರ ಪೆಟ್ಟನ್ನ ಅರಿಯಬೇಕು. ಒಂದು ವೇಳೆ ಎಚ್ಚೇತ್ತುಕೊಳ್ಳದಿದ್ದಾರೆ. ಮಿಂಚಿ ಹೋದ ಕಾಲಕ್ಕೆ ಚಿಂತಿಸಿದ್ರು ಫಲ ಸಿಗಲ್ಲ.ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಸಿದ್ದರಾಮಯ್ಯ ಅವರ 2018ರ ಚುನಾವಣೆ..ಡಿಕೆಶಿ ವಿಪಕ್ಷಗಳ ನಿದ್ದೆ ಗೆಡಿಸುವುದು ಸರಿ ಇದ್ರೂ ಸ್ವಪಕ್ಷದಲ್ಲಿ ತಮ್ಮ ಬಗ್ಗೆ ಏನ್ ಚರ್ಚೆ ಆಗ್ತಿದೆ ಅನ್ನೋದನ್ನ ಅರಿತುಕೊಳ್ಳಬೇಕು.ಕಾಂಗ್ರೆಸ್ ಮುಂದಿನ ಚುನಾವಣೆಗಳಿಗೂ ಸಿದ್ದರಾಮಯ್ಯ ಅನಿವಾರ್ಯ ಅನ್ನೋದನ್ನ ಕೆಲವರು ಮಾತನಾಡ್ತುತಿದ್ದಾರೆ. ಸಿನಿಯರ್ಸ್ ಇಲ್ಲದ ಕ್ಯಾಬಿನೇಟ್ ಅಪೂರ್ಣ ಅಂತಿದ್ದಾರೆ. ಕಾಂಗ್ರೆಸ್ ವೋಟ್ ಬ್ಯಾಂಕ್ ಸಮುದಾಯಗಳಿಗೆ ಅಸಮಾಧಾನಕ್ಕೂ ಮದ್ದು ಹರಿಯಬೇಕಾಗಿದೆ. ಒಂದು ತಿಂಗಳ ತುಂಬಿದ ಡಿಕೆಶಿ ನಾಯಕತ್ವವನ್ನ ಈಗಲೇ ಅಳೆಯುವುದು ಕಷ್ಟವಾದ್ರೂ ಇರೋದು ಇನ್ನೂ ಒಂದು ವರ್ಷ 10 ತಿಂಗಳ ಅವಧಿ ಆಗಿರುವುದು ಡಿಕೆಶಿ 2028ಕ್ಕೂ ನಾನೇ ಅಂತಿರುವುದರಿಂದ ಒಂದೊಂದು ದಿನವೂ ಮುಖ್ಯವಾಗಿದೆ.





