ಡಾಲಿ ರೇಜ್ ಬರೀ ಟಗರು ಸಿನಿಮಾಗೆ ಎಂಡ್ ಆಗಿಲ್ಲ. ಸದ್ಯ ಜೆಸಿ ಮೂಲಕ ಹುಡುಗರಿಗಾಗಿ ಒಬ್ಬ ಮಾಸ್ ಹೀರೋನ ಕೊಟ್ಟಿದ್ದಾರೆ ಧನಂಜಯ. ಯೆಸ್.. ಡಾಲಿ ಯೂನಿವರ್ಸಿಟಿಯಲ್ಲಿ ಪಳಗಿದ ಪ್ರಖ್ಯಾತ್ ಫಸ್ಟ್ ಱಂಕ್ನಲ್ಲಿ ಪಾಸ್ ಆಗಿ, ಅಚ್ಚರಿ ಮೂಡಿಸಿದ್ದಾರೆ. ಅದಕ್ಕೆ ಡಾಲಿ ಕೂಡ ಇಲ್ಲಿಂದ ನಿನ್ನ ಟೈಮ್ ಚೆನ್ನಾಗಿರಲಿದೆ ಅಂತ ತನ್ನ ಕೈಯಲ್ಲಿದ್ದ ವಾಚ್ ತೆಗೆದು ಪ್ರಖ್ಯಾತ್ ಕೈಗೆ ಕಟ್ಟಿ, ಬೆನ್ನು ತಟ್ಟಿದ್ದಾರೆ.
ಇದು ಡಾಲಿ ಧನಂಜಯ ತಮ್ಮ ಹೋಮ್ ಬ್ಯಾನರ್ನಡಿ ನಿರ್ಮಿಸಿರೋ ಜೆಸಿ ದಿ ಯೂನಿವರ್ಸಿಟಿ ಚಿತ್ರದ ಪ್ರೀಮಿಯರ್ ಶೋನ ಝಲಕ್. ಶೋ ಮುಗಿಯುತ್ತಿದ್ದಂತೆ ಸಿಕ್ಕಾಪಟ್ಟೆ ಭಾವುಕರಾಗಿದ್ದ ಡಾಲಿ, ನಾಯಕನಟ ಸೂರ್ಯ ಪ್ರಖ್ಯಾತ್ರನ್ನ ಸ್ಕ್ರೀನ್ಮುಂದೆ ಕರೆದು, ತಮ್ಮ ಕೈಯಲ್ಲಿದ್ದ ದುಬಾರಿ ವಾಚ್ವೊಂದನ್ನ ಹೀರೋ ಕೈಗೆ ಕಟ್ಟಿದ್ರು. ಅಷ್ಟೇ ಅಲ್ಲ, ಇನ್ಮೇಲೆ ನಿನ್ನ ಟೈಮ್ ಚೆನ್ನಾಗಿದೆ. ಶುಭವಾಗಲಿ ಅಂತ ತುಂಬು ಹೃದಯದಿಂದ ಹಾರೈಸಿದ್ರು.

ಪ್ರಖ್ಯಾತ್ ಫಸ್ಟ್ ರ್ಯಾಂಕ್.. ಡಾಲಿ ಯೂನಿವರ್ಸಿಟಿಯಿಂದ ಗಿಫ್ಟ್
ಭೂಗತಲೋಕದಲ್ಲೊಂದು ಭಾವನಾತ್ಮಕ ಜರ್ನಿ ಈ JC ಫಿಲ್ಮ್..!

ಪ್ರಖ್ಯಾತ್ ನಟನೆ, ಥ್ರಿಲ್ಲರ್ ಮಂಜು ಕಂಬ್ಯಾಕ್, ರಾಕ ಖಳನಾಯಕನ ಅಭಿನಯ, ಮಾಸ್ತಿ ಸಂಭಾಷಣೆ ಹಾಗೂ ಚೇತನ್ ಜಯರಾಮ್ ನಿರ್ದೇಶನವನ್ನು ಶ್ಲಾಘಿಸಿದ ನಟರಕ್ಷಕ ಡಾಲಿ, ಕನ್ನಡ ಚಿತ್ರರಂಗಕ್ಕೆ ಮಾಸ್ ಹೀರೋನ ಕೊಡ್ತಿದ್ದೀನಿ ಎಂದರು. ಡಾಲಿ ಪಾತ್ರ ಬಳಿಕ ನನ್ನ ಎಲ್ಲರೂ ಕೇಳ್ತಿದ್ರು.. ಅಂತಹ ಪಾತ್ರ ಮತ್ತೆ ಯಾವಾಗ ಮಾಡ್ತೀರಿ ಅಂತ. ಆದ್ರೀಗ ಹುಡುಗರಿಗಾಗಿಯೇ ಈ ಸಿನಿಮಾನ ಕೊಟ್ಟಿದ್ದೀನಿ.. ಅದೂ ಪ್ರಖ್ಯಾತ್ ಮೂಲಕ ಎಂದರು.

ಇಂಡಸ್ಟ್ರಿಗೆ ಮಾಸ್ ಹೀರೋನ ಕೊಟ್ಟ ಡಾಲಿ ಭರವಸೆಯ ಮಾತು
ಕೈಗೆ ವಾಚ್ ಕಟ್ಟಿ.. ನಿನ್ನ ಟೈಮ್ ಚೆನ್ನಾಗಿರಲಿದೆ ಅಂದರೇಕೆ ಧನು..?
ಇದೆಲ್ಲಾ ಓಕೆ ಗುರು..ಸಿನಿಮಾ ಹೇಗಿದೆ ಅಂತ ಗೊಣಗಿಕೊಳ್ಳಬೇಡಿ. ಈಗ ಅದನ್ನೇ ಹೇಳಲು ಹೊರಟಿದ್ದೀವಿ. ಜೆಸಿ ಅಂದ್ರೆ ಜುಡಿಷಿಯಲ್ ಕಸ್ಟಡಿ. ಅರ್ಥಾತ್ ಪರಪ್ಪನ ಅಗ್ರಹಾರ ಸೇರಿದಂತೆ ಜೈಲುಗಳ ಚಿತ್ರಣ. ಜೈಲಲ್ಲಿ ಇರೋರೆಲ್ಲಾ ಅಪರಾಧಿಗಳಾ..? ಅಥ್ವಾ ಬರೀ ಆರೋಪಿಗಳಾ..? ನಿಜಕ್ಕೂ ಮುಗ್ಧರು ಕೂಡ ಆ ಬಲೆಗೆ ಸಿಲುಕೋದು ಹೇಗೆ..? ಅದ್ರಲ್ಲೂ ಕಾಲೇಜ್ ಹುಡುಗರು ಬದುಕು ಕಟ್ಟಿಕೊಳ್ಳೋ ಸಮಯದಲ್ಲಿ ಅಚಾನಕ್ಕಾಗಿ ಮಚ್ಚು, ಲಾಂಗ್, ಕತ್ತಿ, ಚಾಕು ಹಿಡಿದ್ರೆ ಏನಾಗುತ್ತೆ ಅನ್ನೋದ್ರ ಹೂರಣವಾಗಿದೆ. ಇಲ್ಲಿಯವೆಗೆ ಸಾಕಷ್ಟು ಅಂಡರ್ವರ್ಲ್ಡ್ ಕಥೆಗಳು ಸಿನಿಮಾಗಳಾಗಿವೆ. ಆದ್ರೆ ಇವೆಲ್ಲದರ ನಡುವೆ ಇದು ಬಹಳ ವಿಭಿನ್ನವಾಗಿ ನಿಲ್ಲಲಿದೆ.

ನವಿರಾದ ಪ್ರೇಮಕಥೆಯೊಂದಿಗೆ ಸಾಗುವ ಚಿತ್ರದಲ್ಲಿ ತಂದೆ-ಮಗನ ಭಾವನಾತ್ಮಕ ಜರ್ನಿ ಅದ್ಭುತ ಅಮೋಘ. ರಂಗಾಯಣ ರಘು ಅವರು ಮ್ಯಾಡಿ ಅಲಿಯಾಸ್ ಮಧುಸೂಧನ ಪಾತ್ರಧಾರಿ ಸೂರ್ಯ ಪ್ರಖ್ಯಾತ್ ಡ್ಯಾಡಿಯಾಗಿ ನೋಡುಗರ ಕಣ್ಣಲ್ಲಿ ನೀರು ತರಿಸುತ್ತಾರೆ. ಜೈಲಲ್ಲಿ ನಾಯಕನಟ ತನ್ನ ತಂದೆಗೆ ಕ್ಷಮಿಸಿಬಿಡು ಅಪ್ಪ, ತಪ್ಪು ಮಾಡಿಬಿಟ್ಟೆ ಅನ್ನೋ ಡೈಲಾಗ್ ನಂತ್ರ ಹೇಳುವ ‘ಇವತ್ತು ನಾನು ಅವನನ್ನ ಸಾಯಿಸಲಿಲ್ಲ ಅಂದಿದ್ರೆ ನನ್ನ ಸಾಯಿಸಿಬಿಡ್ತಿದ್ದ ಅಪ್ಪ’ ಅನ್ನೋ ಮಾತು ಅದೆಷ್ಟು ಅರ್ಥಗರ್ಭಿತವಾಗಿದೆ ಅನ್ನೋದನ್ನ ಸಿನಿಮಾ ನೋಡಿದವರಿಗೆ ಮಾತ್ರ ಗೊತ್ತಾಗಲಿದೆ.
ಲವ್, ಸೆಂಟಿಮೆಂಟ್, ಆಕ್ಷನ್, ಎಮೋಷನ್, ಡ್ಯಾನ್ಸ್, ಗ್ಲಾಮರ್.. ಹೀಗೆ ಎಲ್ಲವನ್ನೂ ಸಮರ್ಪಕವಾಗಿ ಬ್ಲೆಂಡ್ ಮಾಡಿ ಈ ಜೆಸಿ ಸಿನಿಮಾನ ಕಟ್ಟಿದ್ದಾರೆ ಡೈರೆಕ್ಟರ್ ಚೇತನ್ ಜಯರಾಮ್. ಅದ್ಯಾರೋ ಅಂತಿದ್ರು ದುನಿಯಾ ಸೂರಿ ನಾಪತ್ತೆ ಆಗ್ಬಿಟ್ರು ಅಂತ. ಈ ಚಿತ್ರ ನೋಡಿದ್ರೆ ದುನಿಯಾ ಸೂರಿ ಸದ್ಯ ಜೆಸಿ ಡೈರೆಕ್ಟರ್ ಅಂತಹ ಪ್ರತಿಭಾನ್ವಿತ ನಿರ್ದೇಶಕರಲ್ಲಿ ಜೀವಂತವಾಗಿದ್ದಾರೆ ಅನ್ನೋದು ಸ್ಪಷ್ಟವಾಗಲಿದೆ. ಇವ್ರನ್ನ ಜೂನಿಯರ್ ಸುಕ್ಕಾ ಸೂರಿ ಅಂದ್ರೂ ತಪ್ಪಾಗಲ್ಲ.

ದ್ವಿತಿಯಾರ್ಧ ಕೊಂಚ ಲ್ಯಾಗ್ ಅನಿಸಿದ್ರೂ, ರಂಗಾಯಣ ರಘು-ಪ್ರಖ್ಯಾತ್ ಎಮೋಷನಲ್ ಸೀನ್ಸ್ ಎಂಗೇಜಿಂಗ್ ಆಗಿ ಸಿನಿಮಾನ ಸೀಟ್ ಎಡ್ಜ್ನಲ್ಲಿ ಕೂತು ನೋಡುವಂತೆ ಮಾಡುತ್ತೆ. ಬದಲಾವಣೆಗಾಗಿ ತಪ್ಪು ಮಾಡಿದವ್ರು ಜೈಲಿಗೆ ಹೋಗ್ತಾರೆ. ಆದ್ರೆ ಅದು ಪರಿವರ್ತನಾ ಸ್ಥಳವಾಗಿಯೇ ಉಳಿದಿದೆಯಾ..? ಪರಿವರ್ತಿಸಬೇಕಾದವ್ರು ಯಾರು..? ಆ ಜವಾಬ್ದಾರಿ ಹೊತ್ತುಕೊಳ್ಳಬೇಕಿರೋದು ಯಾರು ಅನ್ನೋದಕ್ಕೆ ಈ ಚಿತ್ರ ಉತ್ತರ ಆಗಲಿದೆ. ಮಾಸ್ತಿ ಅವರು ತಮ್ಮ ಇಡೀ ಕರಿಯರ್ನಲ್ಲೇ ಈ ಸಿನಿಮಾಗೆ ಬರೆದ ಸಂಭಾಷಣೆ ದಿ ಬೆಸ್ಟ್ ಅನಿಸಲಿದೆ. ಕಥೆಗೆ ಪೂರಕವಾದ ಪಂಚ್ಗಳ ಮೂಲಕ ಮಾಸ್ತಿ ತಮ್ಮ ಪೆನ್ನಿನ ಕರಾಮತ್ತು ತೋರಿಸಿದ್ದಾರೆ.
ಸೂರ್ಯ ಪ್ರಖ್ಯಾತ್.. ಆ ಸೂರ್ಯನಂತೆ ಪ್ರಜ್ವಲಿಸುತ್ತಾ, ಪ್ರಕಾಶಮಾನವಾಗಿ ಬೆಳಕು ಚೆಲ್ಲಲಿ. ಖ್ಯಾತಿ, ಪ್ರಖ್ಯಾತಿ ಪಡೆಯಲಿ ಅನ್ನೋದು ನಮ್ಮ ಆಶಯ. ನಡುವೆ ಅಂತರವಿರಲಿ ನಂತ್ರ ಪ್ರಖ್ಯಾತ್ ಹೀರೋಗಳ ಕೊರತೆ ಇರೋ ಸ್ಯಾಂಡಲ್ವುಡ್ಗೆ ನಾನು ಬರ್ತಿದೀನಿ ಅನ್ನೋ ಭರವಸೆ ನೀಡಿದ್ದಾರೆ. ಥ್ಯಾಂಕ್ಸ್ ಟು ಡಾಲಿ.





