• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, September 3, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಉದ್ಯೋಗ

IT ಸೆಕ್ಟರ್ ಢಮಾರ್? TCS 12 ಸಾವಿರ ಲೇ-ಆಫ್! ಕಾರಣ ವಿವರಿಸಿದ CEO

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
July 28, 2025 - 7:32 pm
in ಉದ್ಯೋಗ
0 0
0
Untitled design 2025 07 28t192851.804

2025ರ ಮೊದಲ ಆರು ತಿಂಗಳಲ್ಲಿ ಜಾಗತಿಕ ಟೆಕ್‌ ಕಂಪನಿಗಳು ಸುಮಾರು 1 ಲಕ್ಷ ಇಂಜಿನಿಯರ್‌ಗಳ ಉದ್ಯೋಗವನ್ನು ಕಸಿದುಕೊಂಡಿವೆ. ಮೈಕ್ರೋಸಾಫ್ಟ್, ಇಂಟೆಲ್, ಮೆಟಾ ಸೇರಿದಂತೆ ದೈತ್ಯ ಕಂಪನಿಗಳು ಲಾಭ ಕಡಿಮೆಯಾಗುವುದನ್ನು ತಡೆಯಲು ಲೇ ಆಫ್‌ಗೆ ಮೊರೆ ಹೋಗಿವೆ. ಇದೀಗ ಭಾರತದ ಐಟಿ ದೈತ್ಯ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಕೂಡ 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ಘೋಷಣೆ ಮಾಡಿದೆ.

ಟಿಸಿಎಸ್‌ನ ಸಿಇಓ ಕೆ. ಕೃತಿವಾಸನ್, ಈ ಉದ್ಯೋಗ ಕಡಿತಕ್ಕೆ ಆರ್ಟಿಫಿಷಿಯಲ್ ಇಂಟಲಿಜೆನ್ಸ್ (ಎಐ) ಕಾರಣವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬದಲಿಗೆ, ಉದ್ಯೋಗಿಗಳ ಕೌಶಲ್ಯವು ಕಂಪನಿಯ ಅಗತ್ಯಕ್ಕೆ ಹೊಂದಿಕೆಯಾಗದಿರುವುದು ಮತ್ತು ಪ್ರಾಜೆಕ್ಟ್‌ಗಳಿಗೆ ನಿಯೋಜನೆಯ ಅವಕಾಶ ಕಡಿಮೆಯಾಗಿರುವುದು ಈ ನಿರ್ಧಾರದ ಹಿಂದಿನ ಕಾರಣ ಎಂದಿದ್ದಾರೆ.

RelatedPosts

ಭಾರತದ ಟೆಕ್ಕಿಗಳಿಗೆ ಬಿಗ್ ಶಾಕ್? Oracle, Microsoftನಲ್ಲಿ ಲೇ ಆಫ್ ಭೀತಿ!

ರೈಲ್ವೆಯಲ್ಲಿ ಭರ್ಜರಿ ಉದ್ಯೋಗಾವಕಾಶ; 4,029 ಹುದ್ದೆಗಳಿಗೆ ನೇಮಕಾತಿ!

11ನೇ ವಯಸ್ಸಿಗೆ ತಂದೆ ಸಾವು, ₹250 ದಿನಗೂಲಿ; ಇಂದು ಲಸ್ಸಿ ಮಾರಾಟದಿಂದ ₹90 ಸಾವಿರ ಆದಾಯ!

ಕೆಲಸ ಹೋಯ್ತು ಅಂತ ಕಂಗೆಡಲಿಲ್ಲ: ಓಲಾ ಓಡಿಸಿ ತಿಂಗಳಿಗೆ ₹1.2 ಲಕ್ಷ ಗಳಿಸ್ತಿರೋ ಚಾಲಕ!

ADVERTISEMENT
ADVERTISEMENT

ಕೃತಿವಾಸನ್ ಪ್ರಕಾರ, ವಿಶೇಷವಾಗಿ ಮಧ್ಯಮ ಮತ್ತು ಹಿರಿಯ ಮಟ್ಟದ ಉದ್ಯೋಗಿಗಳ ಕೌಶಲ್ಯವು ಕಂಪನಿಯ ಬದಲಾದ ಅಗತ್ಯಗಳಿಗೆ ತಾಳೆಯಾಗುತ್ತಿಲ್ಲ. ಟಿಸಿಎಸ್‌ನ ಜಾಗತಿಕ ಮಾನವ ಸಂಪನ್ಮೂಲದ ಶೇ.2ರಷ್ಟು, ಅಂದರೆ 6,13,000 ಉದ್ಯೋಗಿಗಳ ಪೈಕಿ 12,000 ಮಂದಿಯನ್ನು ಕೆಲಸದಿಂದ ತೆಗೆದುಹಾಕಲಾಗುತ್ತಿದೆ. ಈ ಲೇ ಆಫ್‌ ಕಂಪನಿಯ ಭವಿಷ್ಯದ ಯೋಜನೆಯ ಭಾಗವಾಗಿದ್ದು, ಎಐನಿಂದ ಉತ್ಪಾದಕತೆಯಲ್ಲಿ ಶೇ.20ರಷ್ಟು ಲಾಭ ಸಿಕ್ಕಿದರೂ, ಅದು ಈ ಕಡಿತಕ್ಕೆ ಕಾರಣವಲ್ಲ ಎಂದು ಕೃತಿವಾಸನ್ ಹೇಳಿದ್ದಾರೆ. ಆದರೆ, ಕಂಪನಿಯ ಹೊಸ ಉತ್ಪಾದನೆ-ಆಧಾರಿತ ವ್ಯವಸ್ಥೆಗೆ ಕೆಲವು ಉದ್ಯೋಗಿಗಳು ಹೊಂದಿಕೊಳ್ಳಲು ವಿಫಲರಾಗಿದ್ದಾರೆ.

ಟಿಸಿಎಸ್‌ನಲ್ಲಿ 5,50,000 ಉದ್ಯೋಗಿಗಳಿಗೆ ಎಐ ಮತ್ತು ಎಮರ್ಜಿಂಗ್ ಟೆಕ್ನಾಲಜಿಗಳ ಬಗ್ಗೆ ತರಬೇತಿ ನೀಡಲಾಗಿದೆ. ಆದರೆ, ಎಲ್ಲರೂ ಕಂಪನಿಯ ಬದಲಾಗುತ್ತಿರುವ ಕಾರ್ಯಾಚರಣೆಯ ಮಾದರಿಗೆ ಪರಿಣಾಮಕಾರಿಯಾಗಿ ಹೊಂದಿಕೊಳ್ಳುತ್ತಿಲ್ಲ. ಕೆಲವರು 35 ದಿನಗಳಿಗಿಂತ ಹೆಚ್ಚು, ಕೆಲವರು ನಾಲ್ಕು ತಿಂಗಳಿಗಿಂತಲೂ ಹೆಚ್ಚು ಕಾಲ “ಬೆಂಚ್‌”ನಲ್ಲಿ ಕುಳಿತಿದ್ದಾರೆ, ಅಂದರೆ ಯಾವುದೇ ಪ್ರಾಜೆಕ್ಟ್‌ಗೆ ನಿಯೋಜನೆಯಾಗಿಲ್ಲ. ಇದು ಲೇ ಆಫ್‌ಗೆ ಪ್ರಮುಖ ಕಾರಣವಾಗಿದೆ.

ಭಾರತದ ಐಟಿ ವಲಯವು ಕಳೆದ ಹಣಕಾಸು ವರ್ಷದಲ್ಲಿ 500 ಬಿಲಿಯನ್ ಡಾಲರ್ ಲಾಭ ಗಳಿಸಿತ್ತು. ಇದರಲ್ಲಿ 250 ಬಿಲಿಯನ್ ಡಾಲರ್ ಐಟಿ ಸೇವೆಗಳಿಂದ ಬಂದಿತ್ತು. ಆದರೆ, ಈ ವರ್ಷ ಲಾಭ ಶೇ.3ರಷ್ಟು ಕಡಿಮೆಯಾಗುವ ಸಾಧ್ಯತೆಯಿದೆ. ಇದಕ್ಕೆ ಉದ್ಯೋಗಿಗಳನ್ನು ಪ್ರಾಜೆಕ್ಟ್‌ಗಳಿಗೆ ನಿಯೋಜಿಸಲಾಗದಿರುವುದು ಒಂದು ಕಾರಣ. ಇತರ ಟೆಕ್‌ ಕಂಪನಿಗಳಾದ ಮೈಕ್ರೋಸಾಫ್ಟ್ (15,000 ಉದ್ಯೋಗ ಕಡಿತ), ಇಂಟೆಲ್ (24,000), ಮೆಟಾ (ಶೇ.5), ಮತ್ತು ಪ್ಯಾನಸೋನಿಕ್ (10,000) ಕೂಡ ಲೇ ಆಫ್‌ಗೆ ಮುಂದಾಗಿವೆ. ಮೈಕ್ರೋಸಾಫ್ಟ್‌ನ ಸಿಇಓ ಸತ್ಯಾ ನಡೆಲ್ಲಾ, ಎಐ, ಕ್ಲೌಡ್, ಮತ್ತು ಎಂಟರ್‌ಪ್ರೈಸ್ ಟೂಲ್ಸ್‌ನ ಗುರಿಗಳಿಗಾಗಿ ಈ ಕಡಿತ ಅನಿವಾರ್ಯ ಎಂದಿದ್ದಾರೆ.

ನಾಸಕಾಮ್‌ನ ಪ್ರಕಾರ, ಭಾರತದ ಐಟಿ ವಲಯದಲ್ಲಿ 54 ಲಕ್ಷ ಉದ್ಯೋಗಿಗಳಿದ್ದಾರೆ. 2030ರ ವೇಳೆಗೆ ಶೇ.80ರಷ್ಟು ಮಂದಿ ಡಿಜಿಟಲ್ ಜಗತ್ತಿಗೆ ತಮ್ಮ ಕೌಶಲ್ಯವನ್ನು ಅಪ್‌ಗ್ರೇಡ್ ಮಾಡಿಕೊಳ್ಳಬೇಕು. ಎಐ ಈಗಾಗಲೇ ಕಂಪನಿಗಳ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇದಕ್ಕೆ ಹೊಂದಿಕೊಳ್ಳದ ಉದ್ಯೋಗಿಗಳು ಲೇ ಆಫ್‌ಗೆ ಒಳಗಾಗುತ್ತಿದ್ದಾರೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Shriram Nene Madhuri Dixit

ಅಭಿನಂದನ್ ವರ್ಧಮಾನ್ ವಾಯುಪಡೆ ಸೇವೆಗೆ ವಿದಾಯ: ಕಮರ್ಷಿಯಲ್ ಪೈಲಟ್ ಆಗಿ ಹೊಸ ಪಯಣ

by ದಿಶಾ ಕೆ. ಎಸ್.
September 3, 2026 - 8:26 am
0

Shriram Nene Madhuri Dixit

ಮಂತ್ರಾಲಯದಲ್ಲಿ ರಾಯರ 355ನೇ ಆರಾಧನಾ ಮಹೋತ್ಸವಕ್ಕೆ ಅದ್ಧೂರಿ ತೆರೆ

by ದಿಶಾ ಕೆ. ಎಸ್.
September 3, 2026 - 8:08 am
0

Shriram Nene Madhuri Dixit

ಸೆ.4ರಂದು ಆಕಾಶಕ್ಕೆ ಹಾರಲಿದೆ EOS-05: ಇದರ ವಿಶೇಷತೆ ಏನು?

by ದಿಶಾ ಕೆ. ಎಸ್.
September 3, 2026 - 7:54 am
0

Untitled design 2026 09 03T071105.309

ಏಷ್ಯಾಕಪ್‌ನಲ್ಲಿ ಭಾರತಕ್ಕೆ ಇಂದು ಹಾಂಗ್ ಕಾಂಗ್ ಸವಾಲು: ಗೆದ್ದರೆ ಸೆಮಿಫೈನಲ್ ಖಚಿತ!

by ದಿಶಾ ಕೆ. ಎಸ್.
September 3, 2026 - 7:15 am
0

ಸಂಬಂಧಿಸಿದ ಪೋಸ್ಟ್‌ಗಳು

  • Image 188618c5
    ಭಾರತದ ಟೆಕ್ಕಿಗಳಿಗೆ ಬಿಗ್ ಶಾಕ್? Oracle, Microsoftನಲ್ಲಿ ಲೇ ಆಫ್ ಭೀತಿ!
    September 1, 2026 | 0
  • ChatGPT Image Aug 20, 2026, 03 39 11 PM
    ರೈಲ್ವೆಯಲ್ಲಿ ಭರ್ಜರಿ ಉದ್ಯೋಗಾವಕಾಶ; 4,029 ಹುದ್ದೆಗಳಿಗೆ ನೇಮಕಾತಿ!
    August 20, 2026 | 0
  • ChatGPT Image Aug 19, 2026, 12 12 32 PM
    11ನೇ ವಯಸ್ಸಿಗೆ ತಂದೆ ಸಾವು, ₹250 ದಿನಗೂಲಿ; ಇಂದು ಲಸ್ಸಿ ಮಾರಾಟದಿಂದ ₹90 ಸಾವಿರ ಆದಾಯ!
    August 19, 2026 | 0
  • ChatGPT Image Aug 19, 2026, 11 15 31 AM
    ಕೆಲಸ ಹೋಯ್ತು ಅಂತ ಕಂಗೆಡಲಿಲ್ಲ: ಓಲಾ ಓಡಿಸಿ ತಿಂಗಳಿಗೆ ₹1.2 ಲಕ್ಷ ಗಳಿಸ್ತಿರೋ ಚಾಲಕ!
    August 19, 2026 | 0
  • Image 49a08abb
    ಮೈಸೂರಿನಲ್ಲಿ ಉದ್ಯೋಗಾವಕಾಶ: ‘ಮಾನಸಿಕ ಆರೋಗ್ಯ ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ’ ಹುದ್ದೆಗೆ ಅರ್ಜಿ
    August 18, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version