• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, August 25, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಉದ್ಯೋಗ

ಎಐ ಕ್ರಾಂತಿಗೆ 15,000 ತಜ್ಞರನ್ನು ಸಜ್ಜುಗೊಳಿಸುತ್ತಿದೆ ‘ಕಾಗ್ನಿಜೆಂಟ್’: ಏನಿದು ʼಫ್ರಾಂಟಿಯರ್‌ʼ ಪಡೆ?

ದಿಶಾ ಕೆ. ಎಸ್. by ದಿಶಾ ಕೆ. ಎಸ್.
July 10, 2026 - 2:32 pm
in ಉದ್ಯೋಗ, ವಾಣಿಜ್ಯ
0 0
0
Web Photo Editor 2026 07 10T134749.588

ಬೆಂಗಳೂರು: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಭರಾಟೆ ಇಂದು ಜಗತ್ತಿನಾದ್ಯಂತ ಜೋರಾಗಿದೆ. ಬಹುತೇಕ ಬೃಹತ್ ಕಂಪನಿಗಳು ಎಐ ಮೇಲೆ ಕೋಟ್ಯಂತರ ರೂಪಾಯಿ ಸುರಿಯುತ್ತಿವೆ. ಆದರೆ, “ಹೂಡಿಕೆ ಮಾಡಿದ ಹಣಕ್ಕೆ ತಕ್ಕ ಲಾಭ ಬರುತ್ತಿದೆಯಾ?” ಎಂದು ಕೇಳಿದರೆ ಬಹುತೇಕರ ಬಳಿ ಉತ್ತರವಿಲ್ಲ. ಇದೇ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಮುಖ ಐಟಿ ಸೇವಾ ಸಂಸ್ಥೆ ‘ಕಾಗ್ನಿಜೆಂಟ್’ ಮುಂದಾಗಿದ್ದು, ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.

ಕೇವಲ ಎಐ ತಂತ್ರಜ್ಞಾನವನ್ನು ನೀಡಿ ಸುಮ್ಮನಾಗದೆ, ಆ ತಂತ್ರಜ್ಞಾನದ ಮೂಲಕ ಗ್ರಾಹಕರಿಗೆ ನೈಜ ಹಾಗೂ ಅಳೆಯಬಹುದಾದ ಲಾಭವನ್ನು ತಂದುಕೊಡುವ ಉದ್ದೇಶದಿಂದ, ಕಾಗ್ನಿಜೆಂಟ್ ಬರೋಬ್ಬರಿ 15,000 ತಜ್ಞರ ‘ಫ್ರಾಂಟಿಯರ್’ ಪಡೆಯನ್ನು ಸೃಷ್ಟಿಸುತ್ತಿರುವುದಾಗಿ ಘೋಷಿಸಿದೆ. ಇದರಲ್ಲಿ 5,000 ಮಂದಿ ‘ಫ್ರಾಂಟಿಯರ್ ಸರ್ಟಿಫೈಡ್ ಎಂಜಿನಿಯರ್ಸ್’ ಮತ್ತು 10,000 ಮಂದಿ ‘ಫ್ರಾಂಟಿಯರ್ ಬಿಸಿನೆಸ್ ಆಪರೇಟರ್‌’ಗಳು ಇರಲಿದ್ದಾರೆ.

RelatedPosts

ಬಂಗಾರ ಖರೀದಿಸುವವರಿಗೆ ಬಿಗ್ ಶಾಕ್: ಇಂದು ಚಿನ್ನದ ಬೆಲೆ ಮತ್ತೆ ಏರಿಕೆ, ಇಲ್ಲಿದೆ ದರ ವಿವರ

ವೀಕೆಂಡ್‌‌ನಲ್ಲಿ ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ: ಇಲ್ಲಿದೆ ಇಂದಿನ ದರಪಟ್ಟಿ

ಸಕ್ಕರೆ ಬೆಲೆ ಮತ್ತೆ 30 ರೂ. ಏರಿಕೆ; ಕೆಜಿಗೆ ₹75, ಎಥೆನಾಲ್ ಕಾರಣವೇ?

ಸಕ್ಕರೆ ಬೆಲೆ ಗಗನಕ್ಕೇರಿದ್ದೇಕೆ? ಎಥೆನಾಲ್ ಆರೋಪ ತಳ್ಳಿಹಾಕಿದ ಕೇಂದ್ರ

ADVERTISEMENT
ADVERTISEMENT

ಏನಿದು 4.5 ಟ್ರಿಲಿಯನ್ ಡಾಲರ್ ಸಮಸ್ಯೆ?

ಕಂಪನಿಗಳು ಎಐ ತಂತ್ರಜ್ಞಾನದ ಮೇಲೆ ಇತಿಹಾಸದಲ್ಲೇ ಹಿಂದೆಂದೂ ಕಾಣದಷ್ಟು ಹೂಡಿಕೆ ಮಾಡಿವೆ. ಆದರೆ ಅದರ ಪೂರ್ಣ ಲಾಭ ಪಡೆಯಲು ವಿಫಲವಾಗಿವೆ. ಕಾಗ್ನಿಜೆಂಟ್ ಅಂದಾಜಿನ ಪ್ರಕಾರ ಎಐ ಸಾಮರ್ಥ್ಯ ಮತ್ತು ಉದ್ಯಮಗಳಿಗೆ ಸಿಗುತ್ತಿರುವ ಪ್ರತಿಫಲದ ನಡುವೆ ಬರೋಬ್ಬರಿ 4.5 ಟ್ರಿಲಿಯನ್ ಡಾಲರ್ ಅಂತರವಿದೆ. ಈ ಅಂತರವು ತಂತ್ರಜ್ಞಾನದ ಕೊರತೆಯಿಂದ ಸೃಷ್ಟಿಯಾಗಿದ್ದಲ್ಲ; ಬದಲಾಗಿ ನುರಿತ ಮಾನವ ಸಂಪನ್ಮೂಲ ಮತ್ತು ಸರಿಯಾದ ಕಾರ್ಯವಿಧಾನದ ಕೊರತೆಯಿಂದ ಸೃಷ್ಟಿಯಾಗಿದೆ. ಇದನ್ನು ಸರಿಪಡಿಸಲೆಂದೇ ಕಾಗ್ನಿಜೆಂಟ್ ತನ್ನ ‘ಫ್ರಾಂಟಿಯರ್’ ತಜ್ಞರನ್ನು ಗ್ರಾಹಕರ ನೆರವಿಗೆ ಕಳುಹಿಸಲಿದೆ.

ಹೇಗಿರಲಿದೆ ಈ ಹೊಸ ಪಡೆ?

ಕಾಗ್ನಿಜೆಂಟ್ ಸೃಷ್ಟಿಸುತ್ತಿರುವ ಈ ಹೊಸ ವೃತ್ತಿಪರ ಪಡೆಯನ್ನು ಪ್ರಮುಖವಾಗಿ ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ:

ಫ್ರಾಂಟಿಯರ್ ಸರ್ಟಿಫೈಡ್ ಎಂಜಿನಿಯರ್‌ಗಳು: ಇವರು ಎಐ ಸಿಸ್ಟಮ್‌ಗಳನ್ನು ನಿರ್ಮಿಸುವ, ಉಸ್ತುವಾರಿ ನೋಡಿಕೊಳ್ಳುವ ಮತ್ತು ನಿರಂತರವಾಗಿ ಅದನ್ನು ಮೇಲ್ದರ್ಜೆಗೇರಿಸುವ ತಜ್ಞರಾಗಿರಲಿದ್ದಾರೆ. ಉದ್ಯಮದ ನಿಯಮಗಳು ಮತ್ತು ವ್ಯವಹಾರದ ತರ್ಕವನ್ನು ಅರಿತು, ಎಐನಿಂದ ಏನೆಲ್ಲಾ ಮಾಡಿಸಬಹುದು ಎಂಬುದನ್ನು ಇವರು ನಿಖರವಾಗಿ ನಿರ್ಧರಿಸಲಿದ್ದಾರೆ.

ಫ್ರಾಂಟಿಯರ್ ಬಿಸಿನೆಸ್ ಆಪರೇಟರ್‌ಗಳು: ಕೃತಕ ಬುದ್ಧಿಮತ್ತೆ ಏಜೆಂಟ್‌ಗಳು ಮತ್ತು ಮನುಷ್ಯರನ್ನು ಒಟ್ಟಾಗಿ ಮುನ್ನಡೆಸುವ ಜವಾಬ್ದಾರಿ ಇವರದ್ದಾಗಿರಲಿದೆ. ಕೇವಲ ತಾಂತ್ರಿಕ ಜ್ಞಾನವಷ್ಟೇ ಅಲ್ಲದೆ, ನೈಜ ವ್ಯವಹಾರದ ಅನುಭವ ಹೊಂದಿರುವ ಇವರು ದೋಷಗಳನ್ನು ತಿದ್ದಿ ವ್ಯವಸ್ಥೆಯನ್ನು ಸರಾಗವಾಗಿ ನಡೆಸಿಕೊಂಡು ಹೋಗಲಿದ್ದಾರೆ.

ಇಬ್ಬರ ತಂಡದಿಂದ ಮೂರು ಪಟ್ಟು ಆದಾಯ!

ಈ ‘ಫ್ರಾಂಟಿಯರ್’ ಮಾದರಿಯ ಕಾರ್ಯಕ್ಷಮತೆಗೆ ಒಂದು ನೈಜ ಉದಾಹರಣೆಯೂ ಸಿಕ್ಕಿದೆ. ಇತ್ತೀಚೆಗಷ್ಟೇ ಕಾಗ್ನಿಜೆಂಟ್‌ನ ಕೇವಲ ಇಬ್ಬರು ಸದಸ್ಯರ ತಂಡವೊಂದು (ಒಬ್ಬ ಎಂಜಿನಿಯರ್, ಮತ್ತೊಬ್ಬ ಆಪರೇಟರ್) ದೊಡ್ಡ ಫುಡ್ ಸರ್ವೀಸ್ ಕಂಪನಿಯೊಂದರಲ್ಲಿ 17 ಎಐ ಏಜೆಂಟ್‌ಗಳನ್ನು ಅಭಿವೃದ್ಧಿಪಡಿಸಿತ್ತು. ಇದರ ಪರಿಣಾಮ, ಆ ಕಂಪನಿಯ ಪ್ರತಿ ಮ್ಯಾನೇಜರ್‌ನ ವಾರದ 11 ಗಂಟೆಗಳ ಕೆಲಸದ ಸಮಯ ಉಳಿತಾಯವಾಗಿತ್ತು. ಈ ಎಐ ಏಜೆಂಟ್‌ಗಳಿಂದ ಸಂಸ್ಥೆಯ ಪ್ರಕ್ರಿಯೆಗಳು ಶೇ. 60ರಷ್ಟು ವೇಗಗೊಂಡಿದ್ದಲ್ಲದೆ, ಆದಾಯ ಬರೋಬ್ಬರಿ ಮೂರು ಪಟ್ಟು ಹೆಚ್ಚಾಗಿದೆ.

ಫ್ರಾಂಟಿಯರ್‌ ಪಡೆಯ ರಚನೆಯ ಬಗ್ಗೆ ವಿವರಗಳನ್ನು ಹಂಚಿಕೊಂಡಿರುವ ಕಾಗ್ನಿಜೆಂಟ್ ಸಿಇಒ ರವಿ ಕುಮಾರ್ ಎಸ್, “ಕ್ಲೈಂಟ್‌ಗಳ ಉದ್ಯಮವನ್ನು ಆಳವಾಗಿ ಅರ್ಥಮಾಡಿಕೊಂಡು, ಎಐ ಮೂಲಕ ಸಂಪೂರ್ಣ ಹೊಣೆಗಾರಿಕೆ ಹೊತ್ತು ನಿರೀಕ್ಷಿತ ಫಲಿತಾಂಶ ನೀಡಬಲ್ಲ ತಜ್ಞರ ಅಗತ್ಯವಿದೆ. ಕೇವಲ ತಂತ್ರಜ್ಞಾನವನ್ನು ಅಳವಡಿಸಿ ಸುಮ್ಮನಾಗದೆ, ನೈಜ ಲಾಭ ತಂದುಕೊಡುವುದೇ ಈ ಫ್ರಾಂಟಿಯರ್ ಪಡೆಯ ಉದ್ದೇಶ” ಎಂದು ತಿಳಿಸಿದ್ದಾರೆ.

ಸಂಸ್ಥೆಯ ಚೀಫ್ ಪೀಪಲ್ ಆಫೀಸರ್ ಕ್ಯಾಥಿ ಡಯಾಜ್ ಪ್ರತಿಕ್ರಿಯಿಸಿ, “ಎಐನಿಂದ ಶೇ.93ರಷ್ಟು ಉದ್ಯೋಗಗಳ ಸ್ವರೂಪ ಬದಲಾಗಲಿದೆ. ನಾವು ಇಂದಿನ ಜಗತ್ತಿಗೆ ತಕ್ಕಂತೆ ಉದ್ಯೋಗಿಗಳ ಕಾರ್ಯವೈಖರಿಯನ್ನು ಮರುನಿರ್ಮಾಣ ಮಾಡುತ್ತಿದ್ದೇವೆ” ಎಂದು ವಿವರಿಸಿದ್ದಾರೆ.

“ನಾವು ಕೇವಲ ಉದ್ಯೋಗಿಗಳ ಸಂಖ್ಯೆ ಹೆಚ್ಚಿಸುತ್ತಿಲ್ಲ, ಬದಲಾಗಿ ಎಐ ಯುಗಕ್ಕೆ ತಕ್ಕಂತಹ ಹೊಸ ವೃತ್ತಿಪರರನ್ನು ಸೃಷ್ಟಿಸುತ್ತಿದ್ದೇವೆ,” ಎನ್ನುತ್ತಾರೆ ಚೀಫ್ ಲರ್ನಿಂಗ್ ಆಫೀಸರ್ ತಿರು ಆರೋಹಿ.

ಯಾವಾಗ ಲಭ್ಯ?

2026ರ ನಾಲ್ಕನೇ ತ್ರೈಮಾಸಿಕದ ವೇಳೆಗೆ ಈ ಹೊಸ ‘ಫ್ರಾಂಟಿಯರ್’ ತಜ್ಞರ ಮೊದಲ ತಂಡ ಸೇವೆಗೆ ಸಿದ್ಧವಾಗಲಿದೆ. ಇದರ ಜೊತೆಗೆ ಅಮೆರಿಕ ಸೇರಿದಂತೆ ಜಾಗತಿಕ ವಿಶ್ವವಿದ್ಯಾಲಯಗಳಿಂದ ಪ್ರತಿಭಾವಂತರನ್ನು ನೇರವಾಗಿ ನೇಮಿಸಿಕೊಳ್ಳಲು ಸಂಸ್ಥೆ ಮುಂದಾಗಿದೆ.

ಒಟ್ಟಾರೆಯಾಗಿ, ಭವಿಷ್ಯದ ಎಐ ಜಗತ್ತಿನಲ್ಲಿ ತಂತ್ರಜ್ಞಾನವಷ್ಟೇ ಅಲ್ಲ, ಅದರ ಜೊತೆಗೆ ನೈಪುಣ್ಯತೆ ಹೊಂದಿದ ‘ಮಾನವ ಸಂಪನ್ಮೂಲ’ ಮತ್ತು ‘ಹೊಣೆಗಾರಿಕೆ’ ಇದ್ದರಷ್ಟೇ ಉದ್ಯಮಗಳು ಲಾಭ ಗಳಿಸಲು ಸಾಧ್ಯ ಎಂಬುದಾಗಿ ಕಾಗ್ನಿಜೆಂಟ್‌ ಹೇಳುತ್ತಿದೆ.

ShareSendShareTweetShare
ದಿಶಾ ಕೆ. ಎಸ್.

ದಿಶಾ ಕೆ. ಎಸ್.

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ದಿಶಾ ಕೆ. ಎಸ್. ಮೂರು ವರ್ಷಗಳ ಕಾಲ ಡಿಜಿಟಲ್ ಮಾಧ್ಯಮ ವೇದಿಕೆಯಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. 2026ರಿಂದ ಗ್ಯಾರಂಟಿ ನ್ಯೂಸ್ ಡಿಜಿಟಲ್ ಡೆಸ್ಕ್ ನಲ್ಲಿ ಕಾಪಿ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ದಿಶಾ, ರಾಜ್ಯ, ರಾಷ್ಟ್ರ & ರಾಜಕೀಯ ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಸಿನಿಮಾ & ಫ್ಯಾಷನ್ ರಂಗಗಳು ಇವರ ಆಸಕ್ತಿಯ ವಿಷಯಗಳು.

Please login to join discussion

ತಾಜಾ ಸುದ್ದಿ

ಗುಟ್ಕಾ (16)

ಕಾವೇರಿ ತೀರ್ಥೋದ್ಭವಕ್ಕೆ 2 ಕೋಟಿ ಅನುದಾನ ಬಿಡುಗಡೆ ಮಾಡಿದ ಸರ್ಕಾರ!

by ಕವಿತಾ
August 24, 2026 - 11:17 pm
0

ಗುಟ್ಕಾ (15)

ಮಾಸ್ಕೋದಲ್ಲಿ ರಷ್ಯಾದ ಅಧ್ಯಕ್ಷರನ್ನು ಭೇಟಿಯಾದ ವಿದೇಶಾಂಗ ಸಚಿವ ಜೈಶಂಕರ್

by ಕವಿತಾ
August 24, 2026 - 10:38 pm
0

ಗುಟ್ಕಾ (14)

ಕೊಟ್ಟ ಭರವಸೆ ಈಡೇರಿಸಿಲ್ಲ; ಸೆ. 5ರಂದು ಕೇಂದ್ರದ ವಿರುದ್ಧ ಸಿಜೆಪಿ ಮತ್ತೆ ಬೀದಿಗಿಳಿಯಲು ಸಜ್ಜು!

by ಕವಿತಾ
August 24, 2026 - 9:51 pm
0

ಗುಟ್ಕಾ (12)

ತುಮಕೂರಿನಲ್ಲಿ ವರುಣನ ಆರ್ಭಟ: ಜನಜೀವನ ಅಸ್ತವ್ಯಸ್ತ

by ಕವಿತಾ
August 24, 2026 - 8:42 pm
0

ಸಂಬಂಧಿಸಿದ ಪೋಸ್ಟ್‌ಗಳು

  • ChatGPT Image Aug 20, 2026, 03 39 11 PM
    ರೈಲ್ವೆಯಲ್ಲಿ ಭರ್ಜರಿ ಉದ್ಯೋಗಾವಕಾಶ; 4,029 ಹುದ್ದೆಗಳಿಗೆ ನೇಮಕಾತಿ!
    August 20, 2026 | 0
  • ChatGPT Image Aug 19, 2026, 12 12 32 PM
    11ನೇ ವಯಸ್ಸಿಗೆ ತಂದೆ ಸಾವು, ₹250 ದಿನಗೂಲಿ; ಇಂದು ಲಸ್ಸಿ ಮಾರಾಟದಿಂದ ₹90 ಸಾವಿರ ಆದಾಯ!
    August 19, 2026 | 0
  • ChatGPT Image Aug 19, 2026, 11 15 31 AM
    ಕೆಲಸ ಹೋಯ್ತು ಅಂತ ಕಂಗೆಡಲಿಲ್ಲ: ಓಲಾ ಓಡಿಸಿ ತಿಂಗಳಿಗೆ ₹1.2 ಲಕ್ಷ ಗಳಿಸ್ತಿರೋ ಚಾಲಕ!
    August 19, 2026 | 0
  • Image 49a08abb
    ಮೈಸೂರಿನಲ್ಲಿ ಉದ್ಯೋಗಾವಕಾಶ: ‘ಮಾನಸಿಕ ಆರೋಗ್ಯ ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ’ ಹುದ್ದೆಗೆ ಅರ್ಜಿ
    August 18, 2026 | 0
  • Your paragraph text (32)
    ಬೆಂಗಳೂರಿನಲ್ಲಿ ಬೃಹತ್ ‘ಜಿಸಿಸಿ’ ಸ್ಥಾಪನೆ ಘೋಷಿಸಿದ ಮೆಡ್‌ಟೆಕ್‌ ದೈತ್ಯ ‘ಡಿಪ್ಯೂ ಸಿಂಥೆಸ್’
    August 7, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version