• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, May 26, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕರ್ನಾಟಕ

-19 ಡಿಗ್ರಿಯಲ್ಲಿ ಪರ್ವತ ಶಿಖರ ಮೌಂಟ್‌ ಎವರೆಸ್ಟ್‌ನ ಬೇಸ್ ಕ್ಯಾಂಪ್ ಏರಿದ ಬೆಂಗಳೂರಿನ ಬಾಲಕಿ

5364 ಮೀಟರ್‌ ಎತ್ತರದ ಎವರೆಸ್ಟ್‌ ಬೇಸ್ ಕ್ಯಾಂಪ್‌ ಏರಿದ ಬೆಂಗಳೂರಿನ ಬಾಲಕಿ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
April 19, 2025 - 8:14 am
in ಕರ್ನಾಟಕ, ಬೆಂ. ನಗರ
0 0
0
Untitled design 2025 04 19t080254.357

ಬೆಂಗಳೂರು, ಏಪ್ರಿಲ್ 19 : ಟಿವಿಯಲ್ಲಿ ಟಾಮ್‌ ಆ್ಯಂಡ್‌ ಜೆರ್ರಿ ನೋಡಿ, ಆಟದ ಮೈದಾನದಲ್ಲಿ ಚಿನ್ನಿದಾಂಡು ಆಡುವ ವಯಸ್ಸಿನಲ್ಲಿ, ಬೆಂಗಳೂರಿನ 9 ವರ್ಷದ ಬಾಲಕಿ ವಿಹಾನ ಆನಂದ್‌, ವಿಶ್ವದ ಎತ್ತರವಾದ ಪರ್ವತ ಶಿಖರ ಮೌಂಟ್‌ ಎವರೆಸ್ಟ್‌ನ ಬೇಸ್ ಕ್ಯಾಂಪ್‌ ಏರಿದ ಸಾಧನೆಯ ಮೂಲಕ ಎಲ್ಲರಿಗೂ ಸ್ಫೂರ್ತಿಯಾದಳು.

ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಆನಂದ್ ಎಂಬವರ ಪುತ್ರಿಯಾಗಿರುವ ವಿಹಾನ, ಈ ಸಾಹಸಯಾನವನ್ನು ಏಪ್ರಿಲ್‌ 3 ರಂದು ತನ್ನ ತಂದೆಯ ಜೊತೆ ಆರಂಭಿಸಿ, ಏಪ್ರಿಲ್‌ 12ರಂದು ಎವರೆಸ್ಟ್‌ ಬೇಸ್‌ ಕ್ಯಾಂಪ್‌ ತಲುಪಿದರು. ಸಮುದ್ರ ಮಟ್ಟದಿಂದ 5364 ಮೀಟರ್ (ಅಂದರೆ 17,598 ಅಡಿ) ಎತ್ತರದಲ್ಲಿ ನೆಲೆಸಿರುವ ಈ ಶಿಬಿರ ತಲುಪುವುದು ಸವಾಲಿನ ಕೆಲಸ. ಅಲ್ಲದೆ, ತೀವ್ರ ತಣ್ಣನೆಯ ಮೈನಸ್ 19 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶದಲ್ಲಿ ಟ್ರಕ್ಕಿಂಗ್ ಮಾಡುವುದು ವಿಹಾನಗೆ ವಿಭಿನ್ನ ಅನುಭವವಾಯಿತು.

RelatedPosts

ರಾಜ್ಯದಲ್ಲಿ ಸಿಎಂ ಬದಲಾವಣೆ ಕೇವಲ ವದಂತಿ? ರಾಜ್ಯಸಭಾ ಚುನಾವಣೆ ಬಗ್ಗೆ ಮಾತ್ರ ಹೈಕಮಾಂಡ್ ಚರ್ಚೆ..!

18 ವರ್ಷ ಪೂರೈಸಿದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಅಂಚೆ ಇಲಾಖೆಯಿಂದ ವಿಶೇಷ ಗೌರವ!

ದೆಹಲಿಯಲ್ಲಿ ಕಾಂಗ್ರೆಸ್ ಹೈವೋಲ್ಟೇಜ್ ಸಭೆ: ಸದ್ಯಕ್ಕಿಲ್ಲ ಸಿಎಂ ಬದಲಾವಣೆ? ರಾಹುಲ್‌ ಗಾಂಧಿ ಹೇಳಿದ್ದೇನು?

CCB ಪೊಲೀಸರ ಭರ್ಜರಿ ಕಾರ್ಯಾಚರಣೆ: ಸ್ನಾಕ್ಸ್ ಬಾಕ್ಸ್‌ನಲ್ಲಿದ್ದ 3 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ

ADVERTISEMENT
ADVERTISEMENT
10 ದಿನಗಳ ಸಾಹಸಯಾನ

ವಿಹಾನ ಮತ್ತು ಆನಂದ್‌, ಬೆಂಗಳೂರಿನಿಂದ ನೇಪಾಳದ ಕಠ್ಮಂಡುಗೆ ಪ್ರಯಾಣ ಮಾಡಿ, ಅಲ್ಲಿ ವಿಮಾನದಲ್ಲಿ ಲುಕ್ಲಾ ಎಂಬ ಪರ್ವತಪ್ರದೇಶ ತಲುಪಿದರು. ಲುಕ್ಲಾದಿಂದ ಫಾಕ್ಡಿಂಗ್‌, ನಮ್ಚೆ ಬಜಾರ್‌, ಡಿಂಗ್‌ಬೊಚೆ, ಲೊಬುಚೆ, ಗೋರಕ್‌ಶೆಪ್‌ ಮಾರ್ಗವಾಗಿ ಬೇಸ್ ಕ್ಯಾಂಪ್ ತಲುಪಿದ ಅವರು, ಪ್ರತಿ ದಿನ ಸರಾಸರಿ 10-12 ಕಿಲೋಮೀಟರ್ ಕಾಲ್ನಡಿಗೆ ಮಾಡಿದ್ಧರು. ಒಟ್ಟು 130 ಕಿಮೀ ದೂರದ ಟ್ರಕ್ಕಿಂಗ್‌ ಪೂರೈಸಿದ ವಿಹಾನ ಪ್ರತಿದಿನ ಸುಮಾರು 12 ಗಂಟೆಗಳ ಕಾಲ ನಡೆಯಬೇಕಾಗಿತ್ತು. ತೀವ್ರ ಶೀತದಿಂದ ರಕ್ಷಿಸಲು ಐದು ಪದರದ ಉಡುಪು ಧರಿಸಿ, ಶ್ವಾಸಕೋಶದ ಮೇಲೆ ಒತ್ತಡ ಬರುವ ತೂಕದ ಬ್ಯಾಗ್ ಹೊತ್ತು ಬೆಟ್ಟ ಹತ್ತಿದರು.

ವಿಹಾನ ಬೆಟ್ಟ ಹತ್ತುವಾಗ ತೋರಿಸಿದ ಧೈರ್ಯ, ಉತ್ಸಾಹ ಕಂಡು ಇತರ ಟ್ರಕ್ಕಿಂಗ್‌ ಸದಸ್ಯರೂ ಆಶ್ಚರ್ಯಪಟ್ಟು ಮೆಚ್ಚಿದರು. ತನ್ನ ಮಗಳ ಈ ಸಾಧನೆ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಆನಂದ್‌, “ಈ 10 ದಿನಗಳು ನನಗೂ, ಮಗಳಿಗೂ ಜೀವನದಲ್ಲಿ ಮರೆಯಲಾರದ ಕ್ಷಣಗಳಾಗಿವೆ,” ಎಂದು ಹೇಳಿಕೊಂಡದರು.

ಸಿದ್ಧತೆ ಮತ್ತು ತರಬೇತಿ

ಈ ಸಾಹಸಕ್ಕಾಗಿ ವಿಹಾನ ಮತ್ತು ಆನಂದ್‌ ಇಬ್ಬರೂ ಎರಡು ತಿಂಗಳ ಕಾಲ ಟ್ರಕ್ಕಿಂಗ್‌ ತಜ್ಞರಿಂದ ತರಬೇತಿ ಪಡೆದಿದ್ದರು. ಪ್ರತಿದಿನ 7-8 ಕಿಲೋಮೀಟರ್ ನಡಿಗೆ ಮಾಡುವುದು, ಉಸಿರಾಟದ ಸಾಮರ್ಥ್ಯ ಹೆಚ್ಚಿಸುವ ಪ್ರಯತ್ನ, ಪರ್ವತ ಪ್ರವೇಶದ ತಂತ್ರಗಳ ಅಭ್ಯಾಸ ಮಾಡಿದ್ದರು.

ಖರ್ಚು ವಿವರ

ಈ 10 ದಿನಗಳ ಯಾತ್ರೆಗೆ ಒಟ್ಟು ₹6 ಲಕ್ಷ ವೆಚ್ಚವಾಯಿತು. ಲುಕ್ಲಾದಿಂದ ಮೇಲಕ್ಕೆ ಹೋಗುತ್ತಿದ್ದಂತೆ ನೀರು, ಆಹಾರ, ಇಂಟರ್ನೆಟ್, ಮೊಬೈಲ್ ಚಾರ್ಜ್ ಮುಂತಾದ ಸೇವೆಗಳ ಬೆಲೆ ಸಹ ಗಗನಕ್ಕೇರುತ್ತದೆ. ಒಂದು ಬಾಟಲ್ ನೀರಿಗೆ ₹500, ಒಂದು ಊಟಕ್ಕೆ ₹1500, ಚಾರ್ಜ್‌ ಮಾಡಲು ₹500 ನೀಡಬೇಕಾಗುತ್ತದೆ ಎಂದು ಆನಂದ್ ವಿವರಿಸಿದ್ದಾರೆ.

ಕಿರಿಯ ಸಾಧಕರಲ್ಲಿ ವಿಹಾನ

ವಿಹಾನ ಬೆಂಗಳೂರಿನ 2ನೇ ಅತಿ ಕಿರಿಯ ಎವರೆಸ್ಟ್‌ ಬೇಸ್ ಕ್ಯಾಂಪ್‌ ಏರುವ ಬಾಲಕಿ. ಮೊದಲ ಸ್ಥಾನದಲ್ಲಿ ಆದ್ಯಾ ಬೆನ್ನೂರು ಎಂಬ ಬಾಲಕಿ 8ರ ಹರೆಯದಲ್ಲೇ ಈ ಸಾಧನೆ ಮಾಡಿದ್ದಾಳೆ. ವಿಹಾನ ಇದೀಗ ಭಾರತದಲ್ಲಿ ಟಾಪ್-10 ಕಿರಿಯ ಪರ್ವತಾರೋಹಕರಲ್ಲಿ ಸ್ಥಾನ ಪಡೆದಿದ್ದಾಳೆ.

 

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

BeFunky collage 2026 05 26T175956.626

ರಾಜ್ಯದಲ್ಲಿ ಸಿಎಂ ಬದಲಾವಣೆ ಕೇವಲ ವದಂತಿ? ರಾಜ್ಯಸಭಾ ಚುನಾವಣೆ ಬಗ್ಗೆ ಮಾತ್ರ ಹೈಕಮಾಂಡ್ ಚರ್ಚೆ..!

by ಶ್ರೀದೇವಿ ಬಿ. ವೈ
May 26, 2026 - 6:00 pm
0

BeFunky collage 2026 05 26T175224.359

18 ವರ್ಷ ಪೂರೈಸಿದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಅಂಚೆ ಇಲಾಖೆಯಿಂದ ವಿಶೇಷ ಗೌರವ!

by ಶ್ರೀದೇವಿ ಬಿ. ವೈ
May 26, 2026 - 5:53 pm
0

BeFunky collage 2026 05 26T181356.729

ದೈವವನ್ನು ಅಣಕಿಸಿದ್ದ ರಣವೀರ್ ಸಿಂಗ್ ಮೈಸೂರಿನಲ್ಲಿ ಪ್ರತ್ಯಕ್ಷ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 26, 2026 - 5:33 pm
0

BeFunky collage 2026 05 26T171429.498

ಗಂಡು ಮಗು ಬೇಕೆಂದು 6ನೇ ಬಾರಿ ಗರ್ಭಿಣಿಯಾದ 22 ವರ್ಷದ ಯುವತಿ: ವೈರಲ್ ವಿಡಿಯೋ

by ಶ್ರೀದೇವಿ ಬಿ. ವೈ
May 26, 2026 - 5:16 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage 2026 05 26T175956.626
    ರಾಜ್ಯದಲ್ಲಿ ಸಿಎಂ ಬದಲಾವಣೆ ಕೇವಲ ವದಂತಿ? ರಾಜ್ಯಸಭಾ ಚುನಾವಣೆ ಬಗ್ಗೆ ಮಾತ್ರ ಹೈಕಮಾಂಡ್ ಚರ್ಚೆ..!
    May 26, 2026 | 0
  • ನಿಶ್ಚಿತಾರ್ಥ (23)
    ದೆಹಲಿಯಲ್ಲಿ ಕಾಂಗ್ರೆಸ್ ಹೈವೋಲ್ಟೇಜ್ ಸಭೆ: ಸದ್ಯಕ್ಕಿಲ್ಲ ಸಿಎಂ ಬದಲಾವಣೆ? ರಾಹುಲ್‌ ಗಾಂಧಿ ಹೇಳಿದ್ದೇನು?
    May 26, 2026 | 0
  • ನಿಶ್ಚಿತಾರ್ಥ (20)
    CCB ಪೊಲೀಸರ ಭರ್ಜರಿ ಕಾರ್ಯಾಚರಣೆ: ಸ್ನಾಕ್ಸ್ ಬಾಕ್ಸ್‌ನಲ್ಲಿದ್ದ 3 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ
    May 26, 2026 | 0
  • ನಿಶ್ಚಿತಾರ್ಥ (15)
    ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ಘೋಷಣೆ: 7 ಸ್ಥಾನಗಳಿಗೆ ಮತದಾನ!
    May 26, 2026 | 0
  • ನಿಶ್ಚಿತಾರ್ಥ (13)
    ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಹೋಟೆಲ್ ತಿಂಡಿ, ಊಟದ ದರ ಭಾರೀ ಹೆಚ್ಚಳ
    May 26, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version