• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, May 28, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ಯುಗಾದಿ ದಿನ 5 ತಪ್ಪುಗಳನ್ನು ಮಾಡಬೇಡಿ!: ಇಲ್ಲಿ ತಿಳಿದುಕೊಳ್ಳಿ ಶುಭ ರಹಸ್ಯ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
March 19, 2026 - 8:47 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Untitled design 2026 03 19T084614.725

RelatedPosts

ತ್ಯಾಗ, ಪ್ರೀತಿ, ಸಮಾನತೆಯ ಸಂದೇಶ ಸಾರುವ ಬಕ್ರೀದ್ ಹಬ್ಬದ ಮಹತ್ವ ಏನು ಗೊತ್ತಾ?

ರಾಶಿ ಭವಿಷ್ಯ: ಈ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ, ಹೊಸ ಯೋಜನೆಗಳಿಗೆ ಶುಭ ಸಮಯ

ದಿನ ಭವಿಷ್ಯ: ಈ ರಾಶಿಯವರ ಆಸ್ತಿಗೆ ಕನ್ನ ಹಾಕುವ ಸಾಧ್ಯತೆ! ಹಣಕಾಸಿನ ವಿಚಾರದಲ್ಲಿ ಲಾಭ!

ರಾಶಿ ಭವಿಷ್ಯ: ಈ ರಾಶಿಯವರಿಗೆ ಹೊಸ ವಾಹನ ಖರೀದಿ ಯೋಗ, ವ್ಯಾಪಾರದಲ್ಲಿ ಲಾಭ

ADVERTISEMENT
ADVERTISEMENT

ಬೆಂಗಳೂರು, ಮಾರ್ಚ್ 19: ಹಿಂದೂಗಳ ಹೊಸ ವರ್ಷದ ಪ್ರಾರಂಭವೆಂದು ಪರಿಗಣಿಸುವ ಯುಗಾದಿ ಹಬ್ಬವನ್ನು 2026ರಲ್ಲಿ ಮಾರ್ಚ್ 19ರಂದು ಅಂದರೆ ಇಂದು ರಾಜ್ಯಾದ್ಯಂತ ಹಾಗೂ ದೇಶದ ಹಲವು ಭಾಗಗಳಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತಿದೆ. ವಿಶೇಷವಾಗಿ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಚಾಂದ್ರಮಾನ ಪದ್ಧತಿಯ ಪ್ರಕಾರ ಯುಗಾದಿ ಹಬ್ಬಕ್ಕೆ ಹೆಚ್ಚಿನ ಮಹತ್ವವಿದೆ. ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪತ್ ತಿಥಿಯ ಈ ಶುಭದಿನದಂದು ಹಳೆಯ ನೋವುಗಳನ್ನು ಮರೆತು ಹೊಸ ಹರ್ಷಕ್ಕೆ ಸಿದ್ಧರಾಗಬೇಕೆಂಬುದು ಹಿರಿಯರ ಆಶೀರ್ವಾದ.

ಹಬ್ಬದ ಸಿದ್ಧತೆಗಳು ಈಗಾಗಲೇ ಭರದಿಂದ ನಡೆಯುತ್ತಿದ್ದು, ಮನೆಗಳನ್ನು ಸ್ವಚ್ಛಗೊಳಿಸುವುದು, ಮಾವಿನ ಎಲೆ ಹಾಗೂ ಹೂವಿನ ತೋರಣಗಳಿಂದ ಅಲಂಕರಿಸುವುದು, ಹೊಸ ಬಟ್ಟೆಗಳನ್ನು ಖರೀದಿಸುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಜನರು ತೊಡಗಿಸಿಕೊಂಡಿದ್ದಾರೆ. ಆದರೆ ಈ ಪವಿತ್ರ ದಿನದಂದು ಕೆಲವು ಕೆಲಸಗಳನ್ನು ಮಾಡಿದ್ರೆ ಶುಭ ಫಲಗಳು ಸಿಗುತ್ತವೆ ಎಂಬ ನಂಬಿಕೆ ಇದೆ. ಹಾಗೆಯೇ ಕೆಲವು ಕೆಲಸಗಳನ್ನು ಮಾಡಬಾರದು ಎಂಬ ಸಲಹೆಯನ್ನು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗಾದ್ರೆ ಬನ್ನಿ, ಈ ಸುದಿನ ಯಾವ ಕೆಲಸ ಮಾಡಬೇಕು ಮತ್ತು ಮಾಡಬಾರದು ಎಂಬುದನ್ನು ವಿವರವಾಗಿ ತಿಳಿದುಕೊಳ್ಳೋಣ.

ಯುಗಾದಿಯಂದು ಪಾಲಿಸಬೇಕಾದ ಆಚರಣೆಗಳು 

ಯುಗಾದಿ ದಿನವನ್ನು ಅತ್ಯಂತ ಶುಭದಿನವೆಂದು ಪರಿಗಣಿಸಲಾಗುತ್ತದೆ. ಈ ದಿನದ ಆಚರಣೆಗಳು ಇಡೀ ವರ್ಷದ ಜೀವನದ ಮೇಲೆ ಪ್ರಭಾವ ಬೀರುತ್ತವೆ ಎಂಬ ನಂಬಿಕೆ ಇದೆ.

ಬ್ರಾಹ್ಮಿ ಮುಹೂರ್ತದಲ್ಲಿ ಎದ್ದೇಳಿ: ಯುಗಾದಿ ದಿನ ಬೆಳಗ್ಗೆ ಬೇಗನೆ ಎದ್ದು, ಬ್ರಾಹ್ಮಿ ಮುಹೂರ್ತದಲ್ಲಿ (ಸೂರ್ಯೋದಯಕ್ಕೆ ಮುನ್ನ) ಸ್ನಾನ ಮಾಡುವುದು ವಿಶೇಷ ಫಲದಾಯಕವಾಗಿದೆ.

ಎಣ್ಣೆ ಸ್ನಾನ ಮತ್ತು ಪೂಜೆ: ಎಳ್ಳೆಣ್ಣೆ ಹಚ್ಚಿಕೊಂಡು ಅರಿಶಿನ ನೀರಿನಿಂದ ಸ್ನಾನ ಮಾಡುವ ಸಂಪ್ರದಾಯವಿದೆ. ನಂತರ ಹೊಸ ಮತ್ತು ಶುಭ್ರ ಬಟ್ಟೆಗಳನ್ನು ಧರಿಸಿ, ಕುಂಕುಮ ಧರಿಸಿ ದೇವರ ಪೂಜೆ ಮಾಡುವುದನ್ನು ಶ್ರೇಷ್ಠವೆಂದು ಹೇಳಲಾಗುತ್ತದೆ.

ಬೇವು-ಬೆಲ್ಲ ಸೇವನೆ: ಯುಗಾದಿಯ ಪ್ರಮುಖ ಆಕರ್ಷಣೆ ಎಂದರೆ ಬೇವು-ಬೆಲ್ಲ. ಜೀವನದಲ್ಲಿ ಸುಖ-ದುಃಖ ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕೆಂಬ ಸಂದೇಶವನ್ನು ಇದು ನೀಡುತ್ತದೆ. ಕಹಿ-ಸಿಹಿಯ ಸಂಯೋಜನೆಯ ಈ ಪದಾರ್ಥವು ಹಬ್ಬದ ಪ್ರಮುಖ ಸಂಪ್ರದಾಯವಾಗಿದೆ.

ಮನೆ ಅಲಂಕಾರ: ಮನೆಗಳನ್ನು ಹೂವು ಹಾಗೂ ಮಾವಿನ ಎಲೆಗಳ ತೋರಣಗಳಿಂದ ಅಲಂಕರಿಸುವುದು ಹಬ್ಬದ ವಿಶೇಷ ಆಕರ್ಷಣೆಯಾಗಿರುತ್ತದೆ. ರಂಗೋಲಿ ಹಾಕಿ ಮನೆಯನ್ನು ಸಿಂಗರಿಸಬೇಕು.

ಯುಗಾದಿಯಂದು ತಪ್ಪಿಸಬೇಕಾದ ಕೆಲಸಗಳು 

ಹೊಸ ವರ್ಷದ ಮೊದಲ ದಿನವಾದ ಕಾರಣ, ಈ ದಿನದ ನಡೆ-ನುಡಿಗಳು ಇಡೀ ವರ್ಷದ ಮೇಲೆ ಪರಿಣಾಮ ಬೀರುತ್ತವೆ ಎಂಬ ನಂಬಿಕೆ ಇದೆ. ಹಾಗಾಗಿ ಈ ಕೆಳಗಿನ ಕೆಲಸಗಳನ್ನು ಮಾಡದಿರಲು ಜ್ಯೋತಿಷ್ಯ ಶಾಸ್ತ್ರ ಸೂಚಿಸುತ್ತದೆ.

ಜಗಳ ಮತ್ತು ವಾದ-ವಿವಾದಗಳಿಂದ ದೂರವಿರಿ: ಯುಗಾದಿಯಂದು ಜಗಳ, ವಾದ-ವಿವಾದಗಳಿಂದ ದೂರವಿರಬೇಕು. ಕೋಪ, ಅಸೂಯೆ, ದ್ವೇಷ ಮುಂತಾದ ನಕಾರಾತ್ಮಕ ಭಾವನೆಗಳನ್ನು ದೂರವಿಡಬೇಕು.

ಹಣಕಾಸು ವ್ಯವಹಾರ ಬೇಡ: ಸಾಲ ಕೊಡುವುದು ಅಥವಾ ಪಡೆಯುವುದನ್ನು ತಪ್ಪಿಸುವಂತೆ ಹಿರಿಯರು ಸಲಹೆ ನೀಡುತ್ತಾರೆ. ಹಣಕಾಸಿನ ವ್ಯವಹಾರಗಳನ್ನು ಈ ದಿನ ಮಾಡಬಾರದು.

ಮಾಂಸಾಹಾರ ಮತ್ತು ಮದ್ಯಪಾನ ವರ್ಜ್ಯ: ಮಾಂಸಾಹಾರ ಸೇವನೆ, ಮದ್ಯಪಾನ ಮತ್ತು ಧೂಮಪಾನದಿಂದ ದೂರವಿರುವುದು ಉತ್ತಮ ಎಂದು ಹೇಳಲಾಗಿದೆ. ಸಾತ್ವಿಕ ಆಹಾರ ಸೇವನೆ ಮಾಡಬೇಕು.

ಕೂದಲು, ಗಡ್ಡ, ಉಗುರು ಕತ್ತರಿಸಬೇಡಿ: ಈ ದಿನ ಕೂದಲು, ಗಡ್ಡ, ಉಗುರು ಕತ್ತರಿಸುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.

ಹರಿದ ಅಥವಾ ಅಶುದ್ಧ ಬಟ್ಟೆ ಧರಿಸಬೇಡಿ: ಹರಿದ ಅಥವಾ ಅಶುದ್ಧ ಬಟ್ಟೆಗಳನ್ನು ಧರಿಸಬಾರದು. ಹೊಸ ಬಟ್ಟೆ ಅಥವಾ ಚೆನ್ನಾಗಿ ತೊಳೆದ ಶುಚಿಯಾದ ಬಟ್ಟೆಗಳನ್ನು ಮಾತ್ರ ಧರಿಸಬೇಕು.

ಯುಗಾದಿಯನ್ನು ಪವಿತ್ರ ಹಬ್ಬವೆಂದು ಪರಿಗಣಿಸುವುದರಿಂದ ಈ ದಿನವನ್ನು ಸಂತೋಷದಿಂದ, ಶಾಂತಿಯಿಂದ ಕಳೆಯುವುದು ಮುಖ್ಯ. ಇತರರಿಗೆ ಗೌರವ ನೀಡುವುದು, ಕೆಟ್ಟ ಅಭ್ಯಾಸಗಳಿಂದ ದೂರವಿರುವುದು ಹಾಗೂ ಭಕ್ತಿ-ಭಾವದಿಂದ ಪೂಜೆ ಸಲ್ಲಿಸುವುದು ಹಬ್ಬದ ಸಾರ್ಥಕತೆಯನ್ನು ಹೆಚ್ಚಿಸುತ್ತದೆ. ಕರ್ನಾಟಕದಲ್ಲಿ ಯುಗಾದಿಯನ್ನು ಎರಡು ದಿನಗಳ ಕಾಲ ಆಚರಿಸುವ ಪದ್ಧತಿಯಿದ್ದು, ಮೊದಲ ದಿನ ಸಿಹಿ ಊಟ ಹಾಗೂ ಎರಡನೇ ದಿನ ಬಾಡೂಟವನ್ನು ಸವಿಯುವುದು ವಿಶೇಷವಾಗಿದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 05 28T130959.918

“ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್”: ಸಿಎಂ ಸಿದ್ದರಾಮಯ್ಯ ಘೋಷಣೆ

by ಶಾಲಿನಿ ಕೆ. ಡಿ
May 28, 2026 - 1:10 pm
0

Image 9f8d032f

ವಿಮಾನ, ಹೋಟೆಲ್ ಬುಕ್ಕಿಂಗ್ ಇನ್ಮುಂದೆ ಭಾರೀ ಸುಲಭ! ಪ್ರವಾಸೋದ್ಯಮದಲ್ಲಿ ಶುರುವಾಗಲಿದೆ AI ಕ್ರಾಂತಿ

by ಶಾಲಿನಿ ಕೆ. ಡಿ
May 28, 2026 - 12:49 pm
0

Untitled design 2026 05 28T123916.845

ಅಂದು, ಇಂದು, ಎಂದೆಂದು..ಒಗ್ಗಟ್ಟೇ ನಮ್ಮ ಶಕ್ತಿ!: ರಾಜ್ಯ ಕಾಂಗ್ರೆಸ್ ಪೋಸ್ಟ್‌ ವೈರಲ್‌

by ಶಾಲಿನಿ ಕೆ. ಡಿ
May 28, 2026 - 12:41 pm
0

Untitled design 2026 05 28T121631.900

ನನಗೆ ಯಾವುದೇ ನೋವಿಲ್ಲ, ಸ್ವಇಚ್ಛೆಯಿಂದ ರಾಜೀನಾಮೆ ನೀಡುತ್ತಿದ್ದೇನೆ: ಸಿಎಂ ಸಿದ್ದರಾಮಯ್ಯ

by ಶಾಲಿನಿ ಕೆ. ಡಿ
May 28, 2026 - 12:17 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 05 28T091047.115
    ತ್ಯಾಗ, ಪ್ರೀತಿ, ಸಮಾನತೆಯ ಸಂದೇಶ ಸಾರುವ ಬಕ್ರೀದ್ ಹಬ್ಬದ ಮಹತ್ವ ಏನು ಗೊತ್ತಾ?
    May 28, 2026 | 0
  • Untitled design 2026 05 28T064221.424
    ರಾಶಿ ಭವಿಷ್ಯ: ಈ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ, ಹೊಸ ಯೋಜನೆಗಳಿಗೆ ಶುಭ ಸಮಯ
    May 28, 2026 | 0
  • Untitled design 2026 05 27T064316.600
    ದಿನ ಭವಿಷ್ಯ: ಈ ರಾಶಿಯವರ ಆಸ್ತಿಗೆ ಕನ್ನ ಹಾಕುವ ಸಾಧ್ಯತೆ! ಹಣಕಾಸಿನ ವಿಚಾರದಲ್ಲಿ ಲಾಭ!
    May 27, 2026 | 0
  • Untitled design 2026 05 26T064439.193
    ರಾಶಿ ಭವಿಷ್ಯ: ಈ ರಾಶಿಯವರಿಗೆ ಹೊಸ ವಾಹನ ಖರೀದಿ ಯೋಗ, ವ್ಯಾಪಾರದಲ್ಲಿ ಲಾಭ
    May 26, 2026 | 0
  • BeFunky collage (79)
    ದಿನ ಭವಿಷ್ಯ: ಇಂದು ಸವಾಲುಗಳ ನಡುವೆಯೂ ಶುಭ ಸೂಚನೆ..!
    May 22, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version