ಬೆಂಗಳೂರು: ವಿಷ ಸೇವಿಸಿ ಬಾಲಕಿ ಮೃತಪಟ್ಟಿರುವ ದಾರುಣ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 9ನೇ ತರಗತಿ ವಿದ್ಯಾರ್ಥಿನಿಯಾಗಿದ್ದ 14 ವರ್ಷದ ನಿಧಿ ಕೃಷ್ಣ ದುರ್ದೈವಿ ಬಾಲಕಿ ಎಂದು ಗುರುತಿಸಲಾಗಿದೆ. ಈ ದುರಂತವು ಮಾರ್ಚ್ 14 ರಂದು ನಡೆದಿದೆ, ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಾರ್ಚ್ 31 ರಂದು ಬಾಲಕಿ ಸಾವನ್ನಪ್ಪಿದ್ದಾರೆ.
ನಿಧಿ ಕೃಷ್ಣ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯಿಂದ ಇದ್ದ ಹುಡುಗಿ. ದಿನನಿತ್ಯ ಆಲೋ ವೆರಾ ಜ್ಯೂಸ್ ಕುಡಿಯುವ ಅಭ್ಯಾಸ ಹೊಂದಿದ್ದ ಈಕೆ, ಆ ದಿನವೂ ಮನೆಯಲ್ಲಿದ್ದ ಒಂದು ಬಾಟಲಿಯಿಂದ ಜ್ಯೂಸ್ ಕುಡಿದಿದ್ದಾಳೆ. ಆದರೆ ಆ ಡಬ್ಬಿಯಲ್ಲಿ ಗಜ್ಯೂಸ್ ಬದಲಾಗಿ ವಿಷಕಾರಿ ಹರ್ಬಿಸೈಡ್ ಔಷಧ ತುಂಬಿಡಲಾಗಿತ್ತು.
ಜ್ಯೂಸ್ ಕುಡಿದ ಕೆಲ ನಿಮಿಷಗಳಲ್ಲೇ ನಿಧಿ ತೀವ್ರ ನರಳಾಡಲು ಆರಂಭಿಸಿದಳು. ತಕ್ಷಣ ಕುಟುಂಬಸ್ಥರು ಆಕೆಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದರು. ವೈದ್ಯರು ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಾರ್ಚ್ 31 ರಂದು ನಿಧಿ ನಿಧನ ಹೊಂದಿದ್ದಾಳೆ. ಈ ಘಟನೆಗೆ ಕುಟುಂಬಸ್ಥರ ನಿರ್ಲಕ್ಷ್ಯವೇ ಕಾರಣ ಎಂದು ಹೇಳಬಹುದು. ಆಲೋ ವೆರಾ ಜ್ಯೂಸ್ ಡಬ್ಬಿನಲ್ಲಿ ವಿಷಕಾರಿ ಹರ್ಬಿಸೈಡ್ ತುಂಬಿಟ್ಟಿದ್ದ ಕುಟುಂಬಸ್ಥರು ಸ್ವಲ್ಪ ಜಾಗೃತರಾಗಿದ್ದರೆ ಈ ದುರಂತ ತಪ್ಪಿಸಬಹುದಾಗಿತ್ತು. ಕುಟುಂಬ ಸದಸ್ಯರ ನಿರ್ಲಕ್ಷ್ಯ ಮತ್ತು ಅಜಾಗರೂಕತೆ ಈ ಹುಡುಗಿಯ ಜೀವವನ್ನು ಬಲಿ ತೆಗೆದುಕೊಂಡಿದೆ.





