ಆ ಹುಡುಗ ಹುಡುಗಿ ಅಕ್ಕ ಪಕ್ಕದ ತೋಟದವ್ರು. ಇಬ್ಬರ ಮಧ್ಯೆ ಸ್ನೇಹ ಬೆಳೆದಿತ್ತು. ಸ್ನೇಹ ಪ್ರೀತಿಗೆ ತಿರುಗಿತ್ತು. ಪ್ರೀತಿಯ ಸಾಕ್ಷಿಯಾಗಿ ಅವಳು ಗರ್ಭಿಣಿ ಆಗಿದ್ಲು. ಈ ವಿಷಯ ತಿಳಿದ ಪ್ರಿಯತಮ ಎಸ್ಕೇಪ್ ಆಗಿದ್ದ.
ಪ್ರೀತಿ ಕುರುಡು ಅಂತಾರೇ, ಅದು ಯಾವಾಗ ಯಾರ ಮೇಲೆ ಹುಟ್ಟುತ್ತೋ ಆ ಪ್ರೀತಿಗೆ ಗೊತ್ತು. ಹೀಗೆ ಹುಟ್ಟಿದ ಪ್ರೀತಿ ಈಗ ಯುವತಿಯನ್ನ ಸಂಕಷ್ಟಕ್ಕೆ ತಳ್ಳಿದೆ. ಯುವಕನ ಮದುವೆ ಆಗುವೆ ಎಂಬ ಮೋಸದ ಮಾತಿನ ಬಲೆಗೆ ಸಿಕ್ಕು ಗರ್ಬಿಣಿಯಾಗಿದ್ದಾಳೆ. ಅದೇನಂದ್ರೆ, ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ಮಲ್ಲೂರಳ್ಳಿ ಗ್ರಾಮದ ಮನೋಜ್ ಅದೇ ಗ್ರಾಮದ ಜ್ಯೋತಿ ಅಕ್ಕ ಪಕ್ಕದ ತೋಟದವರು. ಆಗಾಗ ತೋಟಕ್ಕೆ ಹೋಗುತ್ತಿದ್ದ ಮನೋಜ್ ಪಕ್ಕದ ಜಮೀನಲ್ಲಿ ವಾಸವಿರೋ ಜ್ಯೋತಿ ಜೊತೆ ಸ್ನೇಹ ಬೆಳಸಿದ್ದ. ಮೂರು ವರ್ಷಗಳಲ್ಲಿ ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು.
ಇದೇ ಸಲಿಗೆಯಲ್ಲಿ ಜ್ಯೋತಿ ಮನೋಜನ ಬಣ್ಣದ ಮಾತು, ರೀಲ್ಸ್ ಅವತಾರ ಕಂಡು ಮನಸೋತು ಹೋಗಿದ್ಲು. ನಿನ್ನ ಮದುವೆ ಆಗುವೆ ಎಂಬ ಮಾತನ್ನ ಹೇಳಿ ತನ್ನ ಬಲೆಗೆ ಕೆಡವಿದ್ದ. ಇದು ಇವರಿಬ್ಬರ ನಡುವೆಯೇ ನಡೆದಿದ್ದ ಗೌಪ್ಯ ಒಪ್ಪಂದವಾಗಿತ್ತು. ಆದರೇ ಸತ್ಯವನ್ನ ಅದೆಷ್ಟೇ ಮುಚ್ಚಿಟ್ರು ಒಂದಲ್ಲಾ ಒಂದಿನ ಗೊತ್ತಾಗುತ್ತೆ ಅನ್ನೋದಕ್ಕೆ ಹೆಚ್ಚು ದಿನಗಳು ಬೇಕಿರಲಿಲ್ಲ. ಕಳೆದ ವಾರ ಜ್ಯೋತಿ ಹೊಟ್ಟೆ ನೋವು ಅಂತ ಯಾತನೆ ಅನುಭವಿಸಿ, ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದಳು. ಅಲ್ಲಿ ಆರೋಗ್ಯ ತಪಾಸಣೆ ಮಾಡಿದ ವೈದ್ಯರು ಜ್ಯೋತಿ ಪೊಷಕರಿಗೆ ನಿಮ್ಮ ಮಗಳು ಐದು ತಿಂಗಳ ಗರ್ಬಿಣಿ ಅನ್ನೋ ಸತ್ಯವನ್ನ ಹೇಳಿದ್ರು. ಆಗ ಮದುವೆ ಹೆಸರಲ್ಲಿ ಮನೋಜ್ ಮಾಡಿದ್ದ ಮೋಸದ ಗುಟ್ಟು ಬಟಾ ಬಯಲಾಗಿದೆ.
ಇನ್ನೂ ವೈದ್ಯರು ಜ್ಯೋತಿ ಗರ್ಭಿಣಿ ಆಗಿದ್ದಾಳೆ ಅನ್ನೋ ಮಾತು ಹೇಳಿದ್ದೇ ತಡ, ಮನೋಜ್ ಜ್ಯೋತಿಯ ನಡುವೆ ಪ್ರೀತಿ ಪ್ರೇಮ ಸಲ್ಲಾಪದ ಸುದ್ದಿ ಗೊತ್ತಾಗಿದೆ. ಬಳಿಕ ಮನೋಜ್ ವಿರುದ್ದ ಪೊಲೀಸ್ ಠಾಣೆಗೆ ಜ್ಯೋತಿ ಪೊಷಕರು ದೂರು ನೀಡಿದ್ದರು. ಮನೋಜ್ ಪೊಷಕರು ಇಬ್ಬರಿಗೂ ಮದುವೆ ಮಾಡುವ ಭರವಸೆ ನೀಡಿ ದೂರು ದಾಖಲಿಸದಂತೆ ಮನವಿ ಮಾಡಿದ್ರು. ಅದರಂತೆ ನಾಯಕನಟ್ಟಿ ಮಲ್ಲಪ್ಪನಾಯಕ ಸಮುದಾಯ ಭವನದಲ್ಲಿ ಮನೋಜ್ ಜ್ಯೋತಿ ಮದುವೆ ಕೂಡ ಮಾಡಿದ್ದಾರೆ.
ಇಲ್ಲೇ ನೋಡಿ ಯಡವಟ್ಟಾಗಿದ್ದು, ಪ್ರೀತಿಸಿ ಮದುವೆ ನಾಟಕವಾಡಿ ಗರ್ಭಿಣಿ ಆದ ಜ್ಯೋತಿಗೆ ತಾಳಿ ಕಟ್ಟಿ ಮನೋಜ್ ಪರಾರಿ ಆಗಿದ್ದಾನೆ. ಅವನ ಪೊಷಕರು ಜ್ಯೋತಿಯನ್ನ ಮನೆಯೊಳಗೆ ಸೇರಿಸದೆ 15 ಲಕ್ಷಕ್ಕೂ ಹೆಚ್ಚು ಹಣ ತರಲು ಡಿಮ್ಯಾಂಡ್ ಇಟ್ಟಿದ್ದಾರೆ. ಅಲ್ಲದೆ ಮನೆಗೆ ಬಂದ್ರೆ ಪೆಟ್ರೋಲ್ ಹಾಕಿ ಸುಟ್ಟು ಹಾಕ್ತೀವಿ ಅನ್ನೋ ಬೆದರಿಕೆ ಹಾಕಿದ್ದಾರೆ ಅಂತ ಜ್ಯೋತಿ ಪೋಷಕರು ಆರೋಪ ಮಾಡಿದ್ದಾರೆ. ಆದರೇ ಪ್ರೇಮ ಸಲ್ಲಾಪದ ಮೂಲಕ ತನ್ನ ಆಸೇ ಈಡೇಸಿಕೊಂಡು ಬಣ್ಣ ಬಯಾಲದ ಬಳಿಕ ತಾಳಿಕಟ್ಟಿ ಮದುವೆ ಆಗಿದ್ದ ಮನೋಜ್ ತಲೆ ಮರೆಸಿಕೊಂಡಿದ್ದಾನಂತೆ.
ಪ್ರೀತಿಯ ಹೆಸರಲ್ಲಿ ಮೂರು ವರ್ಷ ಯುವತಿಯನ್ನ ಬಳಸಿ ಬಿಟ್ಟು ಹೋದ ಮನೋಜ್ ನಡೆಗೆ ಜ್ಯೋತಿ ಬದುಕು ಕಳೆದುಕೊಂಡು ಕಂಗಾಲಾಗಿದ್ದಾಳೆ. ಇತ್ತ ತವರಲ್ಲೂ ಜಾಗವಿಲ್ಲದೆ, ಗಂಡನ ಮನೆಗೂ ಹೋಗಲು ಆಗದೆ ತಾಯಿ ಜೊತೆ ತೋಟದ ಮನೆಯಲ್ಲಿ ವಾಸವಿದ್ದಾಳೆ. ಇದನ್ನ ಖಂಡಿಸಿರುವ ಜ್ಯೋತಿ ಪೊಷಕರು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಪ್ರೀತಿಗೆ ಕಣ್ಣಿಲ್ಲ ಅನ್ನೋ ಮಾತು ಎಷ್ಟು ಸತ್ಯವೋ ಏನೋ.. ಆದ್ರೆ ಪ್ರೀತಿ ಮಾಯೆ ಹುಷಾರು ಅನ್ನೋ ಮಾತು ಮಾತ್ರ ಇಲ್ಲಿ ಕಣ್ಣಿಗೆ ಕಾಣ್ತಿದೆ.