• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, February 20, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಜಿಲ್ಲಾ ಸುದ್ದಿಗಳು

ಹುಬ್ಬಳ್ಳಿಯಲ್ಲಿ ಮಹಾದೇವ V ಕರ್ಮಾರಿ & VSV ಪ್ರಸಾದ್‌ ಅವರಿಗೆ ಭವ್ಯ ಸನ್ಮಾನ

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
January 18, 2026 - 2:19 pm
in ಜಿಲ್ಲಾ ಸುದ್ದಿಗಳು, ಧಾರವಾಡ
0 0
0
BeFunky collage 2026 01 18T140724.949

ಉದ್ಯಮಿ, ದಾನಿ ಹಾಗೂ ಸಮಾಜಸೇವಕ ಶ್ರೀ ಮಹಾದೇವ ವಿ. ಕರ್ಮಾರಿ ಅವರ ಸಾಧನೆಗಳನ್ನು ಸ್ಮರಿಸಿ, ಸ್ನೇಹಿತರು ಮತ್ತು ಅಭಿಮಾನಿಗಳ ವತಿಯಿಂದ ಇತ್ತೀಚೆಗೆ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು. 200ಕ್ಕೂ ಹೆಚ್ಚು ಕೈಗಾರಿಕೋದ್ಯಮಿಗಳು, ಸಾಮಾಜಿಕ ನಾಯಕರು, ರೋಟೇರಿಯನ್‌ಗಳು, ಶಿಕ್ಷಣತಜ್ಞರು ಮತ್ತು ಅಭಿಮಾನಿ ಬಳಗದ ಸದಸ್ಯರು ಭಾಗವಹಿಸಿ ಸಮಾರಂಭಕ್ಕೆ ವಿಶೇಷ ಛಾಪು ಮೂಡಿಸಿದರು.

ಕಾರ್ಯಕ್ರಮವನ್ನು ವಿಭವ ಗ್ರೂಪ್‌ನ ಸಿಇಒ ಶ್ರೀ ಎಚ್. ಎನ್. ನಂದಕುಮಾರ್ ಅವರು ಪರಿಚಯಿಸಿ ಮಾತನಾಡಿದರು. ಶ್ರೀ ಕರ್ಮಾರಿ ಅವರು ಸಾಮಾನ್ಯ ವ್ಯಕ್ತಿಯಾಗಿ ತಮ್ಮ ವೃತ್ತಿ ಜೀವನ ಆರಂಭಿಸಿ ಹೇಗೆ ಈ ಪ್ರದೇಶದ  ಉತ್ಪಾದನಾ ಕ್ಷೇತ್ರದಲ್ಲಿ ಪ್ರವರ್ತಕರಾದರು ಎಂಬುದನ್ನು ವಿವರಿಸಿದರು. 1962ರಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿ, 1991ರಲ್ಲಿ ಭಾರತದ ಆರ್ಥಿಕ ಉದಾರೀಕರಣದ ಸಮಯದಲ್ಲಿ ಕರ್ನಾಟಕ ಕನ್ವೇಯರ್ಸ್ & ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಸ್ಥಾಪಿಸಿದ್ದನ್ನು ನೆನಪಿಸಿಕೊಂಡರು.

RelatedPosts

ಬಾಗಲಕೋಟೆಯಲ್ಲಿ ಶಿವಾಜಿ ಮೆರವಣಿಗೆ ವೇಳೆ ಕಲ್ಲು ತೂರಾಟ: ಎಸ್ಪಿ ಸಿದ್ಧಾರ್ಥ್ ಗೋಯಲ್ ಸ್ಪೋಟಕ ಮಾಹಿತಿ

ಬಾಗಲಕೋಟೆಯಲ್ಲಿ ಉದ್ವಿಗ್ನ: ಶಿವಾಜಿ ಮೆರವಣಿಗೆ ವೇಳೆ ಮೇಲೆ ಕಲ್ಲು-ಚಪ್ಪಲಿ ತೂರಾಟ

ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ: ಬಾಗಲಕೋಟೆ ಎಸ್ಪಿಗೆ ಗಾಯ

ಬೆಂಗಳೂರಿಗರ ಗಮನಕ್ಕೆ: ಫೆ. 20-21ರಂದು ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ADVERTISEMENT
ADVERTISEMENT

ಶ್ರೀ ಕರ್ಮಾರಿ ಅವರಿಗೆ ಲಭಿಸಿರುವ ಪ್ರಮುಖ ಪ್ರಶಸ್ತಿಗಳು:

  • 1997ರಲ್ಲಿ ಅತ್ಯುತ್ತಮ ಸಣ್ಣ ಉದ್ಯಮಿ ಪ್ರಶಸ್ತಿ
  • 2013ರಲ್ಲಿ ಟೈ-ಕಾನ್‌ನಿಂದ ಶ್ರೀ ರತನ್ ಟಾಟಾ ಅವರು ನೀಡಿದ ಬೆಸ್ಟ್ ಎಂಟರ್‌ಪ್ರೆನ್ಯೂರ್ ಅವಾರ್ಡ್
  • 1993ರಲ್ಲಿ ಧಾರವಾಡ ಜಿಲ್ಲೆಯ ಅತ್ಯುತ್ತಮ ಉದ್ಯಮ ಪ್ರಶಸ್ತಿ
  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತು ವಾಣಿಜ್ಯ ರತ್ನ ಪ್ರಶಸ್ತಿ
ಸ್ವರ್ಣ ಗ್ರೂಪ್‌ನ ವಿ.ಎಸ್.ವಿ. ಪ್ರಸಾದ್‌ ಅವರಿಗೂ ಸನ್ಮಾನ

ಸ್ವರ್ಣ ಗ್ರೂಪ್‌ನ ಎಂಡಿ ಶ್ರೀ ಚಿಗುರುಪತಿ ವಿ.ಎಸ್.ವಿ. ಪ್ರಸಾದ್ ಅವರಿಗೂ ಇದೇ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲಾಯ್ತು. ಪ್ರಸಾದ್ ಅವರ 60 ವರ್ಷಗಳ ಸಮಾಜ ಸೇವೆಯನ್ನು ಸ್ಮರಿಸಿ ಅವರನ್ನು ಗೌರವಿಸಲಾಯ್ತು. ಈ ವೇಳೆ ಮಾತನಾಡಿದ ವಿ. ಎಸ್. ವಿ ಪ್ರಸಾದ್, ಶ್ರೀಯುತ ಕರ್ಮಾರಿ ಅವರ ಸಾಧನೆಗಳನ್ನು ಸ್ಮರಿಸಿದರು. ಕರ್ಮಾರಿ ಅವರ ನಮ್ರತೆಯನ್ನು ಕೊಂಡಾಡಿದ ಪ್ರಸಾದ್, ಕರ್ಮಾರಿ ಅವರು ದೀರ್ಘಾಯುಷ್ಯ ಹೊಂದಲಿ ಹಾಗೂ ಸಮಾಜ ಸೇವೆಯಲ್ಲಿ ಸಕ್ರಿಯವಾಗಿರಲಿ ಎಂದು ಹಾರೈಸಿದರು.

ಪದ್ಮಶ್ರೀ ಡಾ. ವಿಜಯ್ ಸಂಕೇಶ್ವರ್ ಮತ್ತು ಶ್ರೀಮತಿ ಲಲಿತಾ ಸಂಕೇಶ್ವರ್ ಅವರು ಶ್ರೀ ಮಹಾದೇವ ವಿ. ಕರ್ಮಾರಿ ಮತ್ತು ಶ್ರೀಮತಿ ಸವಿತಾ ಕರ್ಮಾರಿ ಅವರನ್ನು ಸನ್ಮಾನಿಸಿ ಮಾತನಾಡಿದರು. 82 ವರ್ಷ ವಯಸ್ಸಿನಲ್ಲೂ ಶಕ್ತಿಯುತರಾಗಿ, ದೂರದೃಷ್ಟಿಯುಳ್ಳವರಾಗಿ ಉತ್ತರ ಕರ್ನಾಟಕದ ಕೈಗಾರಿಕಾ ಪರಿಸರವನ್ನು ಬಲಪಡಿಸುತ್ತಿರುವುದನ್ನು ಶ್ಲಾಘಿಸಿದರು.

ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ ಶ್ರೀ ಜಗದೀಶ್ ಶೆಟ್ಟರ್ ಅವರು ವಿಶೇಷ ಹೂಡಿಕೆ ಪ್ರದೇಶ ಕಾಯ್ದೆ ರೂಪಿಸುವಲ್ಲಿ ಶ್ರೀ ಕರ್ಮಾರಿ ಅವರ ಪ್ರಮುಖ ಪಾತ್ರವನ್ನು ಉಲ್ಲೇಖಿಸಿ, ರಾಜ್ಯದ ಉದ್ಯಮ ಸುಧಾರಣೆಗಳ ಮೇಲೆ ಅವರ ಪ್ರಯತ್ನಗಳು ದೊಡ್ಡ ಪ್ರಭಾವ ಬೀರಿವೆ ಎಂದರು.

ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಪ್ರೊ-ಚಾನ್ಸೆಲರ್ ಡಾ. ಅಶೋಕ್ ಶೆಟ್ಟರ್ ಅವರು ಬಿವಿಬಿ ಅಲ್ಯುಮ್ನಿ ಅಸೋಸಿಯೇಷನ್‌ ಅಧ್ಯಕ್ಷರಾಗಿ ನೀಡಿದ ನಾಯಕತ್ವವನ್ನು ಸ್ಮರಿಸಿದರು. ಶಾಸಕ ಶ್ರೀ ಮಹೇಶ್ ತೆಂಗಿನಕಾಯಿ ಅವರು ಶ್ರೀ ಕರ್ಮಾರಿ ಅವರ ಲೋಕೋಪಕಾರಿ ಕಾರ್ಯಗಳನ್ನು “ಅನುಕರಣೀಯ” ಎಂದು ಕರೆದರು.

ಕಾರ್ಯಕ್ರಮವನ್ನು ಸಿಎ ಶೇಷಗಿರಿ ಕುಲಕರ್ಣಿ ಅವರು ನಿರೂಪಿಸಿದರು. ಶ್ರೀ ಕರ್ಮಾರಿ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ, ವಿದ್ಯಾರ್ಥಿವೇತನಗಳು ಮತ್ತು ರೋಟರಿ ಸೇವೆಯಲ್ಲಿ “ಸರ್ವಿಸ್ ಅಬೊವೆ ಸೆಲ್ಫ್” ಜೀವನಶೈಲಿಯನ್ನು ಎತ್ತಿ ತೋರಿಸಿದರು. 82ರಲ್ಲೂ ಜೆನ್ ಝೀನಷ್ಟು ಉತ್ಸಾಹ ಹೊಂದಿರುವುದನ್ನು ವಿಶೇಷವಾಗಿ ಗಮನಿಸಿದರು.

ಮೇವಿನ್ ಗ್ರೂಪ್‌ನ ಶ್ರೀ ವಿಕ್ರಮ್ ಶಿರೂರ್, ಎಲ್‌ವಿಟಿ ಗ್ರೂಪ್‌ನ ಶ್ರೀ ಮಹೇಂದ್ರ ಠಕ್ಕರ್, ಏಬಲ್ ಡಿಸೈನ್ ಇಂಜಿನಿಯರಿಂಗ್‌ನ ಶ್ರೀ ಜಗದೀಶ್ ಹಿರೇಮಠ್, ಅಲ್ಯೂ ಪ್ರಿಂಟ್ಸ್‌ನ ಶ್ರೀ ಜಯಪ್ರಕಾಶ್ ತೆಂಗಿನಕಾಯಿ ಮತ್ತು ಸಿಎ ಎನ್.ಎ. ಚರತಿಮಠ್ ಅವರು ಶ್ರೀ ಕರ್ಮಾರಿ ಅವರೊಂದಿಗಿನ ಒಡನಾಟ ಮತ್ತು ಮಾರ್ಗದರ್ಶನವನ್ನು ಹಂಚಿಕೊಂಡು ಪ್ರಾಮಾಣಿಕತೆಯನ್ನು ಶ್ಲಾಘಿಸಿದರು.

ಕಾರ್ಯಕ್ರಮವನ್ನು ಶ್ರೀ ಧ್ರುವ ಎಚ್.ಎನ್. ಅವರು ಧನ್ಯವಾದಗಳೊಂದಿಗೆ ಮುಕ್ತಾಯಗೊಳಿಸಿದರು. ಎಲ್ಲಾ ಗಣ್ಯರ ಉಪಸ್ಥಿತಿ ಮತ್ತು ಹೃದಯಸ್ಪರ್ಶಿ ಸನ್ಮಾನಗಳಿಂದಾಗಿ ಈ ಸಮಾರಂಭ ಶ್ರೀ ಮಹಾದೇವ ವಿ. ಕರ್ಮಾರಿ ಅವರ ಜೀವನ ಮತ್ತು ಕೊಡುಗೆಯನ್ನು ಸ್ಮರಿಸುವ ಅವಿಸ್ಮರಣೀಯ ಕ್ಷಣವಾಯಿತು.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

BeFunky collage 2026 02 20T084906.767

ಭಾರತ-ಪಾಕ್ ಸಂಘರ್ಷ ನಿಲ್ಲಿಸಿದ್ದೇನೆ ಎಂಬ ಅಮೆರಿಕ ಅಧ್ಯಕ್ಷ ಹೇಳಿಕೆಗೆ ಹೊಸ ಟ್ವಿಸ್ಟ್: ಟ್ರಂಪ್ ಹೇಳಿದ್ದೇನು?

by ಶ್ರೀದೇವಿ ಬಿ. ವೈ
February 20, 2026 - 8:49 am
0

BeFunky collage 2026 02 20T082111.135

ಬಾಗಲಕೋಟೆಯಲ್ಲಿ ಶಿವಾಜಿ ಮೆರವಣಿಗೆ ವೇಳೆ ಕಲ್ಲು ತೂರಾಟ: ಎಸ್ಪಿ ಸಿದ್ಧಾರ್ಥ್ ಗೋಯಲ್ ಸ್ಪೋಟಕ ಮಾಹಿತಿ

by ಶ್ರೀದೇವಿ ಬಿ. ವೈ
February 20, 2026 - 8:14 am
0

BeFunky collage 2026 02 20T073400.873

ಬಾಗಲಕೋಟೆಯಲ್ಲಿ ಉದ್ವಿಗ್ನ: ಶಿವಾಜಿ ಮೆರವಣಿಗೆ ವೇಳೆ ಮೇಲೆ ಕಲ್ಲು-ಚಪ್ಪಲಿ ತೂರಾಟ

by ಶ್ರೀದೇವಿ ಬಿ. ವೈ
February 20, 2026 - 7:41 am
0

BeFunky collage 2026 02 20T072738.835

ಕರ್ನಾಟಕದಲ್ಲಿ ಇಂದಿನ ಹವಾಮಾನ ಅಪ್‌ಡೇಟ್: ಬೇಸಿಗೆ ಬಿಸಿಲು ಬರಲು ಸಿದ್ಧ, ಮಳೆಯ ಸಾಧ್ಯತೆ ಶೂನ್ಯ!

by ಶ್ರೀದೇವಿ ಬಿ. ವೈ
February 20, 2026 - 7:28 am
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage 2026 02 20T082111.135
    ಬಾಗಲಕೋಟೆಯಲ್ಲಿ ಶಿವಾಜಿ ಮೆರವಣಿಗೆ ವೇಳೆ ಕಲ್ಲು ತೂರಾಟ: ಎಸ್ಪಿ ಸಿದ್ಧಾರ್ಥ್ ಗೋಯಲ್ ಸ್ಪೋಟಕ ಮಾಹಿತಿ
    February 20, 2026 | 0
  • BeFunky collage 2026 02 20T073400.873
    ಬಾಗಲಕೋಟೆಯಲ್ಲಿ ಉದ್ವಿಗ್ನ: ಶಿವಾಜಿ ಮೆರವಣಿಗೆ ವೇಳೆ ಮೇಲೆ ಕಲ್ಲು-ಚಪ್ಪಲಿ ತೂರಾಟ
    February 20, 2026 | 0
  • Untitled design 2026 02 19T232815.911
    ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ: ಬಾಗಲಕೋಟೆ ಎಸ್ಪಿಗೆ ಗಾಯ
    February 19, 2026 | 0
  • Untitled design 2026 02 19T231351.989
    ಬೆಂಗಳೂರಿಗರ ಗಮನಕ್ಕೆ: ಫೆ. 20-21ರಂದು ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
    February 19, 2026 | 0
  • Untitled design 2026 02 19T225904.190
    ನಂದಿನಿ ಹಾಲಿನ ಉತ್ಪನ್ನಗಳ ಬಗ್ಗೆ ಅಪಪ್ರಚಾರ ಆರೋಪ: ಡಾ. ಶರಣ್ಯ ವಿರುದ್ಧ ಎಫ್‌ಐಆರ್
    February 19, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version