ವರದಿ: ಮೂರ್ತಿ ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್ ನೆಲಮಂಗಲ
ಬೆಂಗಳೂರಿನ ಚಿಕ್ಕಬಿದರಕಲ್ಲು ಗ್ರಾಮದ ಚಿಕ್ಕಚನ್ನಪ್ಪ ಪತ್ನಿಯ ತಮ್ಮ ಮನೆಗೆ ಬಂದಿದ್ದು ಮನೆಯವರ ಗಮನ ಬೇರೆಡೆಗೆ ಸೆಳೆದು ನಂತರ, ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಬೆಲೆಯ ಚಿನ್ನಾಭರಣಗಳು ಕಳವಾಗಿರುವ ಘಟನೆ ನಡೆದಿದೆ. ಈ ಸಂಬಂಧ ಚಿಕ್ಕಚನ್ನಪ್ಪ ಎಂಬುವವರು ಪೀಣ್ಯಾ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ದೂರಿನ ಪ್ರಕಾರ ಚಿಕ್ಕಚನ್ನಪ್ಪ ಮತ್ತು ಅವರ ಪತ್ನಿ ಕೆಲಸಕ್ಕೆ ತೆರಳುತ್ತಿದ್ದಾಗ, ಮನೆಯಲ್ಲಿದ್ದ ಪತ್ನಿಯ ಚಿಕ್ಕಪ್ಪನ ಮಗ ನಾಗೇಶ್ ಎಂಬಾತನಿಗೆ ಬೀಗದ ಕೀ ನೀಡಲಾಗಿತ್ತು. ಮನೆಗೆ ಬೀಗ ಹಾಕಿ, ಕೀಯನ್ನು ಶೂ ರ್ಯಾಕ್ನಲ್ಲಿ ಇಡುವಂತೆ ತಿಳಿಸಲಾಗಿತ್ತು. ನಾಗೇಶ್ ಸಹ ಬೀಗ ಹಾಕಿ ಕೀಯನ್ನು ಉಲ್ಲೇಖಿತ ಸ್ಥಳದಲ್ಲಿ ಇಟ್ಟುಹೋಗಿದ್ದನು.
ಸಂಜೆ ದಂಪತಿ ಮನೆಗೆ ಬಂದು ನೋಡಿದಾಗ, ಬೀರುವಿನಲ್ಲಿ ಇರಿಸಿದ್ದ ಚಿನ್ನಾಭರಣಗಳು ಕಾಣೆಯಾಗಿದ್ದವು.
ಕಳವಾದ ಆಭರಣಗಳ ವಿವರ ಹೀಗಿದೆ:
5 ಗ್ರಾಂ ಚಿನ್ನದ ಉಂಗುರ, 6 ಗ್ರಾಂ ಮುತ್ತಿನ ಓಲೆ, 4 ಗ್ರಾಂ ಮಾಟಿ, 16 ಗ್ರಾಂ ಚಿನ್ನದ ಬ್ರಾಸ್ಲೆಟ್, 14 ಗ್ರಾಂ ಓಲೆ, 20 ಗ್ರಾಂ ಚಿನ್ನದ ಚೈನ್ ಒಟ್ಟು ಆಭರಣಗಳ ಮೌಲ್ಯ ಸುಮಾರು 3ಲಕ್ಷ ಎಂದು ಅಂದಾಜಿಸಿದ್ದಾರೆ.
ಈ ಕುರಿತು ವಿಚಾರಣೆ ಮಾಡಿದಾಗ, ನಾಗೇಶ್ ತನಗೆ ತಿಳಿದಿಲ್ಲವೆಂದು ತಿಳಿಸಿದ್ದಾರೆ. ಆದರೆ, ಕಳವು ನಡೆದ ಸಮಯದಲ್ಲಿ ಮನೆಗೆ ಬಂದು ಹೋದವರ ಪೈಕಿ ನಾಗೇಶ್ ಒಬ್ಬನೇ ಆಗಿರುವ ಕಾರಣ,ಆತನ ಮೇಲೆಯೇ ಶಂಕೆ ವ್ಯಕ್ತಪಡಿಸಲಾಗಿದೆ.
ಪೀಣ್ಯಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಮನೆಯವರ ಶಂಕೆಯಂತೆ ಯಾವುದೇ ವ್ಯಕ್ತಿ ತಪ್ಪಿತಸ್ಥನಾಗಿದ್ದರೆ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಮೂಲಕ ಇತರರು ಕೂಡ ತಮ್ಮ ಮನೆಗೆ ಬರುವ ಅತಿಥಿಗಳ ಬಗ್ಗೆ ಎಚ್ಚರಿಕೆಯಿಂದಿರಲು ಹಾಗೂ ವಸ್ತುಗಳನ್ನು ಸುರಕ್ಷಿತವಾಗಿ ಇರಿಸಿಕೊಳ್ಳಲು ಪೀಣ್ಯಾ ಪೊಲೀಸರು ಮನವಿ ಮಾಡಲಾಗಿದೆ.
ವರದಿ: ಮೂರ್ತಿ ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್ ನೆಲಮಂಗಲ
| Reported by: ಮೂರ್ತಿ ಬೀರಯ್ಯನಪಾಳ್ಯ ಗ್ಯಾರಂಟಿ ನ್ಯೂಸ್ ನೆಲಮಂಗಲ





