ಎಕ್ಕ ತಪ್ಪಲಿಲ್ಲ ಲೆಕ್ಕ. ಯೆಸ್.. ಯುವರಾಜ್ಕುಮಾರ್ ಎರಡನೇ ಸಿನಿಮಾ ಎಕ್ಕ ಸೂಪರ್ ಹಿಟ್ ಆಗಿದೆ. ಬಾಕ್ಸ್ ಆಫೀಸ್ನಲ್ಲಿ ಸಖತ್ ಸದ್ದು ಮಾಡ್ತಿರೋ ಎಕ್ಕ ಚಿತ್ರದ ಸಕ್ಸಸ್ಮೀಟ್ನಲ್ಲಿ ಇಡೀ ದೊಡ್ಮನೆ ವೇದಿಕೆ ಹಂಚಿಕೊಳ್ತು. ಅಶ್ವಿನಿಯಲ್ಲಿ ಪಾರ್ವತಮ್ಮ ರಾಜ್ಕುಮಾರ್ನ ಕಂಡ ರಾಘಣ್ಣ ದಂಪತಿ ಭಾವುಕರಾದ್ರು. ಆ ಅವಿಸ್ಮರಣೀಯ ಕ್ಷಣಗಳ ಝಲಕ್ ಇಲ್ಲಿದೆ.
- ಎಕ್ಕ ಸಕ್ಸಸ್.. ಅಶ್ವಿನಿಯಲ್ಲಿ ಪಾರ್ವತಮ್ಮನ ಕಂಡ ದೊಡ್ಮನೆ
- ನನ್ನ ಕನಸು ಈಡೇರಿಸಿದೆ ಎಂದ ರಾಘಣ್ಣ ಭಾವುಕ ಮಾತು
- ಚಿತ್ರರಂಗಕ್ಕೆ ಒಂದೊಳ್ಳೆ ‘ಮುತ್ತು’ ಕೊಟ್ಟಿದ್ದೀರಾ ಎಂದ ಶ್ರುತಿ
- ಅಣ್ಣಾವ್ರ ಕಾಲದ ಆ ದಿನಗಳು ನೆನೆದು, ಕುಣಿದ ಬಿರಾದಾರ್
ಕಳೆದ ಶುಕ್ರವಾರ ತೆರೆಕಂಡ ಯುವರಾಜ್ಕುಮಾರ್ ನಟನೆಯ ಎಕ್ಕ ಸಿನಿಮಾ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿ ಆಗಿದೆ. ಅದು ಬಾಕ್ಸ್ ಆಫೀಸ್ ಕಲೆಕ್ಷನ್ಗೂ ಪ್ಲಸ್ ಆಗಿದೆ. ರೋಹಿತ್ ಪದಕಿ ನಿರ್ದೇಶನದ ಎಕ್ಕ ಚಿತ್ರ ಲೋಕಲ್ ಫ್ಲೇವರ್ನ ಸುಕ್ಕಾ ಸಿನಿಮಾ ಆಗಿದ್ದು, ಮಕ್ಕಳಿಂದ ಮುದುಕರವರೆಗೂ ಎಲ್ಲರಿಗೂ ಕನೆಕ್ಟ್ ಆಗ್ತಿದೆ. ಅದ್ರಲ್ಲೂ ಎಮೋಷನ್ಸ್ ನೋಡುಗರನ್ನ ಹಿಡಿದಿಟ್ಟಿದೆ.
ನಾಯಕನಟಿಯರಾದ ಸಂಜನಾ ಆನಂದ್, ಸಂಪದಾ, ನಿರ್ದೇಶಕ ರೋಹಿತ್ ಪದಕಿ, ಡೆಡ್ಲಿ ಆದಿತ್ಯ ಸೇರಿದಂತೆ ಹಿರಿಯನಟಿ ಶ್ರುತಿ ಕೂಡ ಸಕ್ಸಸ್ ಖುಷಿಯಲ್ಲಿ ಭಾಗಿಯಾಗಿದ್ರು. ಇದೇ ವೇಳೆ ಮಾತನಾಡಿದ ಶ್ರುತಿ, ನನ್ನನ್ನ ಇಂಟ್ರಡ್ಯೂಸ್ ಮಾಡಿದ್ದು ಕೂಡ ದೊಡ್ಮನೆನೇ. ಪಾತ್ರ ಚಿಕ್ಕದಾ ದೊಡ್ಡದಾ ಅಂತ ನಾ ನೋಡಲ್ಲ. ಒಂದು ಮಗುಗೆ ಜೀವ ಕೊಡೋಕೆ ಕನಿಷ್ಟ 9 ತಿಂಗಳು ಬೇಕು. ಆದ್ರೆ ಇದು 7 ತಿಂಗಳಲ್ಲಿ ತಯಾರಾದ ಚಿತ್ರ ಎಂದರು. ಇನ್ನು ಕನ್ನಡ ಚಿತ್ರರಂಗಕ್ಕೆ ಒಂದೊಳ್ಳೆ ಮುತ್ತು ಕೊಟ್ಟಿದ್ದೀರ ರಾಘಣ್ಣ ಅಂತ ಯುವರಾಜನನ್ನ ಹಾಡಿ ಹೊಗಳಿದ್ರು.
ಅಣ್ಣಾವ್ರ ಕಾಲದ ದಿನಗಳನ್ನು ನೆನೆದ ಹಿರಿಯ ನಟ ಬಿರಾದಾರ್, ದೊಡ್ಮನೆಗೆ ಕೆಲಸ ಕೇಳಿಕೊಂಡು ಹೋಗಿದ್ದನ್ನ ಬಹಿರಣಗವಾಗಿ ಹೇಳಿಕೊಂಡರು. ಅಷ್ಟೇ ಅಲ್ಲ, ಯುವ ಜೊತೆ ಬ್ಯಾಂಗಲ್ ಬಂಗಾರಿ ಹಾಡಿಗೆ ಹೆಜ್ಜೆ ಕೂಡ ಹಾಕಿ, ಎಲ್ಲರನ್ನ ರಂಜಿಸಿದ್ರು.
ಸಕ್ಸಸ್ ಸಂಭ್ರಮದಲ್ಲಿ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್, ಅಪ್ಪು ಪುತ್ರಿ, ರಾಘಣ್ಣ ದಂಪತಿ ಕೂಡ ಸಾಕ್ಷಿಯಾದರು. ಇನ್ನು ಹೋಮ್ ಬ್ಯಾನರ್ನಿಂದ ಯುವಗೆ ಸಿನಿಮಾ ಮಾಡಬೇಕು ಅನ್ನೋ ಕನಸನ್ನು ನೀವು ಸಾಧ್ಯವಾಗಿಸಿದ್ರಿ ತಾಯಿ ಅಂತ ಅಶ್ವಿನಿ ಅವ್ರನ್ನ ರಾಘಣ್ಣ ಹೊಗಳುತ್ತಾ, ಪಾರ್ವತಮ್ಮ ರಾಜ್ಕುಮಾರ್ನ ನೆನೆದರು.
ಮಗನಿಗಾಗಿ ಕೆಆರ್ಜಿ ಹಾಗೂ ಜಯಣ್ಣ ಫಿಲಂಸ್ ಜೊತೆಗೂಡಿ ಸಿನಿಮಾ ಮಾಡಿರೋ ಅಶ್ವಿನಿ ಪುನೀತ್ ರಾಜ್ಕುಮಾರ್, ಒಂಥರಾ ದೊಡ್ಮನೆಯ ಘನತೆ, ಗೌರವವನ್ನು ಎತ್ತಿ ಹಿಡಿದಿದ್ದಾರೆ. ಯುವಗೆ ಸಿಕ್ಕ ಈ ಯಶಸ್ಸು ಹಾಗೂ ಉತ್ತೇಜನ ಮತ್ತಷ್ಟು ಒಳ್ಳೆಯ ಸಿನಿಮಾಗಳನ್ನ ಮಾಡೋಕೆ ಸ್ಫೂರ್ತಿ ಆಗಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





