ಮನುಷ್ಯ ಎತ್ತರಕ್ಕೆ ಬೆಳೆದಂತೆ ಆತನ ವ್ಯಕ್ತಿತ್ವ ಕೂಡ ದೊಡ್ಡದಾಗುತ್ತಾ ಹೋಗಬೇಕು. ಇಲ್ಲವಾದಲ್ಲಿ ಆತ ಗಳಿಸಿದ್ದೆಲ್ಲಾ ಶೂನ್ಯಕ್ಕೆ ಸಮವಾಗುತ್ತೆ. ಹೌದು, ಇಂಟರ್ ನ್ಯಾಷನಲ್ ಲೆವೆಲ್ನಲ್ಲಿ ಸದ್ದು ಮಾಡ್ತಿರೋ ನಮ್ಮ ಹೆಮ್ಮೆಯ ಕನ್ನಡಿಗ ಯಶ್, ಸದ್ಯ ಬಾಲಿವುಡ್ ನಟಿ ಕಿಯಾರಾ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರದಿಂದ ಮತ್ತೊಮ್ಮೆ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಇಡೀ ಮುಂಬೈ ಸಲಾಂ ರಾಕಿಭಾಯ್ ಅಂತಿದೆ.
- ಕಿಯಾರಾಗಾಗಿ ಶೂಟಿಂಗ್ ಶಿಫ್ಟ್.. ಯಶ್ಗೆ ಮುಂಬೈ ಸಲಾಂ
- ಪ್ರೆಗ್ನೆಂಟ್ ಅಂದಾಕ್ಷಣ ಮನಸ್ಸು ಬದಲಿಸಿದ್ಯಾಕೆ ರಾಕಿಭಾಯ್ ?
- ಮಾದರಿ ಹೆಜ್ಜೆಯಿಟ್ಟ ಯಶ್.. ಬೆಂಗಳೂರು to ಮುಂಬೈಗೆ ಶಿಫ್ಟ್
- ನಮ್ಮ ಹೆಮ್ಮೆಯ ಕನ್ನಡಿಗನ ಗತ್ತು.. ಇಡೀ ಭಾರತ ದೇಶಕ್ಕೆ ಗೊತ್ತು
ಸಲಾಂ ರಾಕಿಭಾಯ್ ಅನ್ನೋ ಸಾಂಗ್ನ ಸುಮ್ ಸುಮ್ನೆ ಬರೆದಿರೋದಲ್ಲ. ಅದು ಸಿನಿಮಾಗಾಗಲಿ ಅಥ್ವಾ ರಿಯಲ್ ಲೈಫ್ಗಾಗಲಿ ಯಶ್ ವಿಚಾರದಲ್ಲಿ ಅವ್ರ ವ್ಯಕ್ತಿತ್ವ, ಸ್ಟೈಲು- ಮ್ಯಾನರಿಸಂನ ನೋಡಿಯೇ ಬರೆದಂತಿದೆ. ಸಾವಿರಾರು ಕೋಟಿ ಗಳಿಸಿದ ಕೆಜಿಎಫ್ ಸಿನಿಮಾದಲ್ಲಿನ ಈ ಹಾಡು, ಕನ್ನಡದ ಕೀರ್ತಿ ಪತಾಕೆಯನ್ನ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿರುವ ಯಶ್ಗೆ ಹೇಳಲೇಬೇಕು.
ಇದೀಗ ಸಿನಿಮಾಗಾಗಿ ರಿಯಲ್ ಲೈಫ್ನಲ್ಲಿ ಯಶ್ ತಗೆದುಕೊಂಡಿರೋ ನಿರ್ಧಾರ, ಯಶ್ ಮಾಡಿದ ಆ ಕಾರ್ಯಕ್ಕಾಗಿ ಮತ್ತೊಮ್ಮೆ ಇಡೀ ಬಾಲಿವುಡ್ ಸಲಾಂ ರಾಕಿಭಾಯ್ ಅಂತಿದೆ. ಅಂದಹಾಗೆ ಯಶ್ ನಟಿಸಿ, ಸಹ ನಿರ್ಮಾಣ ಮಾಡ್ತಿರೋ ಟಾಕ್ಸಿಕ್ ಸಿನಿಮಾದ ನಾಯಕಿ ಕಿಯಾರಾ ಅಡ್ವಾಣಿ. ಕಿಯಾರಾ ಬಾಲಿವುಡ್ ಬ್ಯೂಟಿ ಆದ್ರೂ ಸಹ, ತೆಲುಗು ಸಿನಿಮಾಗಳಿಂದಾಗಿ ಸೌತ್ಗೂ ಚಿರಪರಿಚಿತ ಚೆಲುವೆ.
ಕಿಯಾರಾ ನಟ ಸಿದ್ದಾರ್ಥ್ ಮಲ್ಹೋತ್ರಾರನ್ನ ಮದ್ವೆ ಆಗಿ ಗರ್ಭ ಧರಿಸಿದ್ದಾರೆ. ಆಕೆ ಟಾಕ್ಸಿಕ್ ಚಿತ್ರದಲ್ಲಿ ಬಣ್ಣ ಹಚ್ಚಿದ ಬಳಿಕ ಪ್ರೆಗ್ನೆಂಟ್ ಅನ್ನೋದು ದೃಢಪಟ್ಟಿದೆ. ಈ ವಿಷಯ ಯಶ್ ಕಿವಿಗೆ ಬೀಳ್ತಿದ್ದಂತೆ, ಕಂಪ್ಲೀಟ್ ಟಾಕ್ಸಿಕ್ ಸಿನಿಮಾ ಶೂಟಿಂಗ್ ಲೊಕೇಷನ್ನ ಬೆಂಗಳೂರಿನಿಂದ ಮುಂಬೈಗೆ ಶಿಫ್ಟ್ ಮಾಡಿಸಿದ್ದಾರೆ. ನಿರ್ದೇಶಕಿ ಗೀತು ಮೋಹನ್ದಾಸ್, ನಿರ್ಮಾಪಕ ವೆಂಕಟ್ ಕೆ ನಾರಾಯಣ್ ಇಬ್ಬರಿಗೂ ಹೇಳಿ ಕೂಡಲೇ ಮುಂಬೈಗೆ ಸ್ಥಳಾಂತರಗೊಳಿಸಿದ್ದಾರೆ.
ಸಾಮಾನ್ಯವಾಗಿ ತನ್ನ ಚಿತ್ರದ ನಾಯಕನಟಿ ಪ್ರೆಗ್ನೆಂಟ್ ಅಂತ ತಿಳಿದ ತಕ್ಷಣ, ಆಕೆಯನ್ನ ಆ ಸಿನಿಮಾದಿಂದ ಕೈ ಬಿಡಲಾಗುತ್ತೆ. ಕಂಟಿನ್ಯೂಟಿ ಮಿಸ್ ಹೊಡೆಯಲಿದೆ ಅಂತೆಲ್ಲಾ ಯೋಚಿಸ್ತಾರೆ. ಆದ್ರೆ ಇಲ್ಲಿ ಯಶ್ ಅದನ್ನ ಯೋಚಿಸಿದ ವಿಧಾನವೇ ಬೇರೆಯದ್ದಾಗಿದೆ. ಯಶ್ ತೆಗೆದುಕೊಂಡ ಈ ನಿರ್ಧಾರಕ್ಕೆ ಇಡೀ ಬಾಲಿವುಡ್ ಅವರನ್ನ ಹಾಡಿ ಹೊಗಳುತ್ತಿದೆ. ಇದಲ್ಲವೇ ಮಾನವೀಯತೆ..? ಇದಲ್ಲವೇ ಸಹ ಕಲಾವಿದರ ಬಗ್ಗೆ ಇರಬೇಕಾದ ಪರಸ್ಪರ ಗೌರವ, ಸ್ನೇಹ, ಪ್ರೀತಿ, ವಿಶ್ವಾಸ ಅಂತೆಲ್ಲಾ ರಾಕಿಭಾಯ್ಗೆ ಪ್ರಶಂಸೆಗಳ ಸುರಿಮಳೆ ಆಗ್ತಿದೆ.
ಈ ವಿಷಯ ಎಕ್ಸ್ ಖಾತೆಯಲ್ಲಿ ಟ್ರೆಂಡ್ ಕೂಡ ಆಗ್ತಿದೆ. ಸಾಮಾನ್ಯವಾಗಿ ಕಮರ್ಷಿಯಲ್ ಆ್ಯಂಗಲ್ನಲ್ಲಿ ಕಲಾವಿದರು ಅಥ್ವಾ ನಿರ್ಮಾಪಕರುಗಳು ಯೋಚಿಸ್ತಾರೆ. ಆದ್ರೆ ಇಲ್ಲಿ ಯಶ್ ಒಬ್ಬ ಮನುಷ್ಯನಾಗಿ ತನ್ನ ಕರ್ತವ್ಯ ಮೆರೆದಿದ್ದಾರೆ. ಅದೇ ಕಾರಣಕ್ಕೆ ಅವರಿಗೆ ಎಲ್ಲರೂ ಗುಡ್ ಹ್ಯೂಮನ್ ಬೀಯಿಂಗ್ ಅಂತ ಪ್ರಶಂಸಿಸಿ, ಪ್ರತಿಕ್ರಿಯಿಸುತ್ತಿದ್ದಾರೆ.
ಅಂದಹಾಗೆ ಇದೇ ಕಾರಣಕ್ಕೆ ಇರಬಹುದು ಟಾಕ್ಸಿಕ್ ಸಿನಿಮಾಗೆ ಸಣ್ಣದೊಂದು ಬ್ರೇಕ್ ನೀಡಿರುವ ಯಶ್, ರಾಮಾಯಣ ಸಿನಿಮಾನ ಕೈಗೆತ್ತಿಕೊಂಡಿದ್ದಾರೆ. ಹೌದು, ಸದ್ಯ ನಿತೀಶ್ ತಿವಾರಿ ನಿರ್ದೇಶನದ, ತನ್ನದೇ ನಿರ್ಮಾಣದ ರಾಮಾಯಣ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಯಶ್. ರಾಮನಾಗಿ ರಣ್ಬೀರ್, ಸೀತೆ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದು, ರಾವಣನಾಗಿ ಆರ್ಭಟಿಸಲಿದ್ದಾರೆ ರಾಕಿಭಾಯ್. ಇದೆಲ್ಲವನ್ನ ನೋಡ್ತಿದ್ಮೇಲೆ ರಾಕಿಭಾಯ್ ನಮ್ಮ ಸ್ಯಾಂಡಲ್ವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅನಿಸಿಕೊಳ್ಳೋದ್ರಲ್ಲಿ ಯಾವುದೇ ಸಂದೇಹವಿಲ್ಲ.