ಶ್ರೀಕೃಷ್ಣನ ವಿಗ್ರಹ ಕೈಯಲ್ಲಿ ಹಿಡಿದುಕೊಂಡೇ ಪರಮಾತ್ಮನತ್ತ ತನ್ನ ಆತ್ಮದ ಪಯಣ ಬೆಳೆಸಿದ್ದಾರೆ ಎಸ್ ಜಾನಕಿ. ಅವ್ರ ಅಗಲಿಕೆಗೆ ದಕ್ಷಿಣ ಭಾರತದ ಮಾಜಿ, ಹಾಲಿ ಮುಖ್ಯಮಂತ್ರಿಗಳಿಂದ ಹಿಡಿದು, ಪಿಎಂ ಮೋದಿ ತನಕ ಸಾಕಷ್ಟು ಗಣ್ಯರು ಸಂತಾಪ ಸೂಚಿಸಿದ್ದಾರೆ. ಒಂದಷ್ಟು ಕರ್ನಾಟಕದ ರಾಜಕಾರಣಿಗಳು, ಗಾಯಕರು ಹಾಗೂ ಚಿತ್ರರಂಗದ ಮಂದಿ ಮೈಸೂರಿಗೇ ತೆರಳಿ, ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಸಂತಾಪ ಕೋರಿದ್ದಾರೆ. ಹಾಗಾದ್ರೆ ಯಾರೆಲ್ಲಾ ದರ್ಶನ ಪಡೆದ್ರು..? ಅವ್ರ ಬಗ್ಗೆ ಏನೆಲ್ಲಾ ಹೇಳಿದ್ರು ಅಂತೀರಾ..? ಇಲ್ಲಿದೆ ನೋಡಿ.
- ಶೋಕಸಾಗರದಲ್ಲಿ ಸಂಗೀತ ಲೋಕ.. ದೇವರ ಆಟ ಬಲ್ಲವಱರು?
- ಅಮರ ಧ್ವನಿ.. ಅವಿರತ ನೆನಪುಗಳ ಗುಚ್ಚ.. ಕೇಳೋಕೆ ಪರಮಾನಂದ
ಎಸ್ ಜಾನಕಿ ನಿಧನ ಇಡೀ ಸಾರಸತ್ವ ಲೋಕವನ್ನೇ ಕತ್ತಲಿಗೆ ದೂಡಿದಂತಾಗಿದೆ. ಸಂಗೀತ ಲೋಕದ ಹಿರಿಯ ಕೊಂಡಿಯೊಂದು ಕಳಚಿ, ಅಕ್ಷರಶಃ ಬಡವಾಗಿದೆ ಸ್ವರ ಸಾಮ್ರಾಜ್ಯ. ಅವರ ಅಗಲಿಕೆಗೆ ಇಡೀ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದ್ದು, ಅದರಲ್ಲೂ ನಮ್ಮ ದಕ್ಷಿಣ ಭಾರತದ ಚಿತ್ರರಂಗಗಳ ಸೂಪರ್ ಸ್ಟಾರ್ಸ್, ಸ್ಟಾರ್ ಡೈರೆಕ್ಟರ್ಸ್, ಸ್ಟಾರ್ ಸಿಂಗರ್ಸ್ ಎಲ್ಲಾ ಜಾನಕಮ್ಮನ ಜೊತೆಗಿನ ನೆನಪುಗಳನ್ನ ಮೆಲುಕು ಹಾಕುತ್ತಾ ಪೋಸ್ಟ್ಗಳನ್ನ ಮಾಡಿದ್ದಾರೆ.
ಜಾನಕಮ್ಮನ ಧ್ವನಿ ಅಮರ.. ಅವರ ನೆನಪುಗಳು ಅವಿರತ.. ಅವುಗಳನ್ನ ನೇರವಾಗಿ ಮೈಸೂರಿಗೆ ತೆರಳಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಗಣ್ಯರ ಬಾಯಿಂದ ಕೇಳೋದೇ ಪರಮಾನಂದ. ಮಹಾರಾಜ ಕಾಲೇಜ್ ಗ್ರೌಂಡ್ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಹಿರಿಯನಟ ಶ್ರೀನಾಥ್, ತಾರಾ, ಹಂಸಲೇಖ, ವಿನೋದ್ ರಾಜ್, ಭಾರತಿ ವಿಷ್ಣುವರ್ಧನ್, ಅನಿರುದ್ದ್, ಜಯಮಾಲಾ, ಕೆ ಕಲ್ಯಾಣ್, ಶಮಿತಾ ಮಲ್ನಾಡ್, ವಾಣಿ ಹರಿಕೃಷ್ಣ, ವಿಜಯ್ ಪ್ರಕಾಶ್, ಸಾಧು ಕೋಕಿಲಾ, ಉಮಾಶ್ರೀ, ಜಿಮ್ ರವಿ, ಗಾಯಕಿ ಸುನಿತಾ, ಚಂದನ್ ಶೆಟ್ಟಿ, ಚಿತ್ರ, ರಾಜೇಶ್ ಕೃಷ್ಣನ್ ಸೇರಿದಂತೆ ಸಾಕಷ್ಟು ಮಂದಿ ಅಂತಿಮ ದರ್ಶನ ಪಡೆದರು.
- ಕಂಬನಿ ಮಿಡಿದ ಮಾಜಿ, ಹಾಲಿ CMಗಳು ಹಾಗೂ PM ಮೋದಿ
- ಕೃಷ್ಣನ ವಿಗ್ರಹ ಕೈಯಲ್ಲಿ ಹಿಡಿದೇ ಪರಮಾತ್ಮನತ್ತ ಜಾನಕಿ ಜರ್ನಿ
- ಸಕಲ ಸರ್ಕಾರಿ ಗೌರವಗಳೊಂದಿಗೆ ಜಾನಕಮ್ಮನ ಅಂತ್ಯಕ್ರಿಯೆ..!
ಹೌದು.. ಸಿಎಂ ಡಿಕೆ ಶಿವಕುಮಾರ್, ಸಿಎಂ ವಿಜಯ್, ಡಿಸಿಎಂ ಪವನ್ ಕಲ್ಯಾಣ್, ಸಿಎಂ ರೇವಂತ್ ರೆಡ್ಡಿ, ಸಿಎಂ ಚಂದ್ರಬಾಬು ನಾಯ್ಡು ಸೇರಿದಂತೆ ದಕ್ಷಿಣ ಭಾರತದ ಮಾಜಿ ಹಾಗೂ ಹಾಲಿ ಸಿಎಂಗಳೆಲ್ಲಾ ಜಾನಕಿ ನಿಧನಕ್ಕೆ ಸಂತಾಪ ಸೂಚಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳನ್ನ ಹಂಚಿಕೊಂಡಿದ್ದಾರೆ. ವಿಶೇಷ ಅಂದ್ರೆ ಪಿಎಂ ನರೇಂದ್ರ ಮೋದಿ ಕೂಡ ಜಾನಕಮ್ಮನ ನಿಧನಕ್ಕೆ ಶ್ರದ್ಧಾಂಜಲಿ ಕೋರಿ ಪೋಸ್ಟ್ ಮಾಡಿದ್ದಾರೆ.
ವಿಶೇಷ ಅಂದ್ರೆ ಕೃಷ್ಣ ಭಕ್ತೆ ಜಾನಕಮ್ಮ ಕೈಯಲ್ಲಿ ಶ್ರೀಕೃಷ್ಣನ ವಿಗ್ರಹವನ್ನು ಹಿಡಿದುಕೊಂಡೇ ಇಹಲೋಕ ತ್ಯಜಿಸಿದ್ದಾರೆ. ಆ ಪರಮಾತ್ಮನಲ್ಲಿ ಲೀನವಾಗೋ ಮೂಲಕ ತಮ್ಮ ಆತ್ಮದ ಪಯಣವನ್ನ ದೇವಲೋಕದತ್ತ ಬೆಳೆಸಿರೋದು ಅಚ್ಚರಿ. ಈ ಬಗ್ಗೆ ಕೆಆರ್ ಕ್ಷೇತ್ರದ ಶಾಸಕ ಶ್ರೀವತ್ಸ ಹಾಗೂ ನಟ ವಿನೋದ್ ರಾಜ್ ಮುಕ್ತವಾಗಿ ಮಾತನಾಡಿದ್ದಾರೆ.
ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿರೋ ಜಾನಕಮ್ಮನ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಸಚಿವ ಯತೀಂದ್ರ ಸಿದ್ದರಾಮಯ್ಯ ಮೈಸೂರಿಗೆ ತೆರಳಿದ್ರು. ಅಲ್ಲೇ ಇದ್ದು, ಜಾನಕಿ ಅವ್ರ ಅಂತ್ಯಕ್ರಿಯೆಯನ್ನ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಿಕೊಟ್ಟಿದ್ದು ವಿಶೇಷ.
ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಸಾರಾ ಮಹೇಶ್, ಜಿಟಿ ದೇವೇಗೌಡ, ಹೆಚ್ ಸಿ ಮಹದೇವಪ್ಪ, ಶ್ರೀರಾಮುಲು, ಶಾಸಕ ಶ್ರೀವತ್ಸ ಸೇರಿದಂತೆ ಸಾಕಷ್ಟು ಮಂದಿ ರಾಜಕೀಯ ಗಣ್ಯರು ಅಂತಿಮ ದರ್ಶನ ಪಡೆದು ಅಂತಿಮ ವಿದಾಯ ಹೇಳಿದ್ರು.
ಜಾನಕಮ್ಮನ ಸ್ಮಾರಕ ಮಾಡಲು ತನ್ನ ಸ್ವಂತ ಭೂಮಿಯನ್ನ ನೀಡೋದಾಗಿ ಸಾರಾ ಮಹೇಶ್ ಮುಕ್ತವಾಗಿ ಹೇಳಿದರು.
- ಗ್ಯಾರಂಟಿ ನ್ಯೂಸ್ ಜೊತೆ ಜಾನಕಿ ಸೊಸೆ ಎಕ್ಸ್ಕ್ಲೂಸಿವ್ ಮಾತು
- S ಜಾನಕಮ್ಮನ ಕುರಿತು ಸಾಕುಮಗ ನವೀನ್ ಓಪನ್ ಟಾಕ್..!!
ಅತ್ತೆ ನಿಧನದ ಸುದ್ದಿ ಕೇಳಿ ಓಡೋಡಿ ಬಂದಂತಹ ಸೊಸೆ ಉಮಾ ಮುರಳಿ, ನಮ್ಮ ಗ್ಯಾರಂಟಿ ನ್ಯೂಸ್ ಜೊತೆ ಎಕ್ಸ್ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ಸಾಕಷ್ಟು ಅಚ್ಚರಿಯ ಸಂಗತಿಗಳನ್ನ ಹಂಚಿಕೊಂಡಿದ್ದಾರೆ.
ಇನ್ನೂ ಸಾಕುಮಗ ನವೀನ್ ಕೂಡ ನಮ್ಮ ಗ್ಯಾರಂಟಿ ನ್ಯೂಸ್ ಜೊತೆ ಮಾತನಾಡಿದ್ದು, ಜಾನಕಮ್ಮನ ಕೊನೆಯ ಅರ್ಥಪೂರ್ಣ ಹಾಗೂ ಸಾರ್ಥಕ ಕ್ಷಣಗಳನ್ನ ಮೆಲುಕು ಹಾಕಿದ್ರು.
ಒಟ್ಟಾರೆ ಮೊಮ್ಮಗಳು ಅಪ್ಸರಾ ವೈದುಲಾರಿಂದ ಎಸ್ ಜಾನಕಿ ಅವ್ರ ಅಂತಿಮ ವಿಧಿ ವಿಧಾನಗಳು ನೆರವೇರಿದ್ದು, ಬ್ರಾಹ್ಮಣ ಸಂಪ್ರದಾಯದಂತೆ ಚಿತೆಗೆ ಅಗ್ನಿಸ್ಪರ್ಶ ನೀಡೋ ಮೂಲಕ ಅಂತ್ಯಕ್ರಿಯೆ ನೆರವೇರಿತು. ಈ ಮೂಲಕ ಪಂಚಭೂತಗಳಲ್ಲಿ ಲೀನರಾದ್ರು ಜಾನಕಮ್ಮ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





