ಸ್ವತಃ ಬಾದ್ಷಾ ಕಿಚ್ಚ ಸುದೀಪ್ ಅವ್ರೇ ಸೊಂಟದ ವಿಷ್ಯ.. ಬೇಡವೋ ಶಿಷ್ಯ ಅಂದಿದ್ರು. ಆದ್ರೇ ವೀರ ಮದಕರಿಯಲ್ಲಿ ತುಪ್ಪದ ಹುಡುಗಿ ರಾಗಿಣಿ ಸೆಕ್ಸಿ ಸೊಂಟ ಹಾಗೂ ಹೊಕ್ಕಳೇ ಹೈಲೈಟ್. ಆ ವಿಷ್ಯ ಈಗ ಮುನ್ನೆಲೆಗೆ ಬಂದಿದ್ದು, ಡೈರೆಕ್ಟರ್ ಕಮ್ ಹೀರೋ ಬಗ್ಗೆ ರಾಗಿಣಿ ಮಾಡಿರೋ ಕಮೆಂಟ್ಗೆ ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚತ್ತಿದೆ. ಇಷ್ಟಕ್ಕೂ ಅಂಥದ್ದೇನು ಹೇಳಿದ್ರು ರಾಗಿಣಿ..? ಸುದೀಪ್ ಫ್ಯಾನ್ಸ್ ಗರಂ ಆಗ್ತಿರೋದಾದ್ರೂ ಏಕೆ..? ಇಲ್ಲಿದೆ ಪಕ್ಕಾ ಕ್ಲ್ಯಾರಿಟಿ.
- ರಾಗಿಣಿ ಹೊಕ್ಕಳು ರಹಸ್ಯ ರಿವೀಲ್.. ಸುದೀಪ್ ಫ್ಯಾನ್ಸ್ ಗರಂ..!
- ವೀರ ಮದಕರಿಯಲ್ಲಿ ನಾವೆಲ್ ಆಫೀಸರ್ ಆಗಿದ್ರಾ ಸುದೀಪ್?
- ಮುಖಕ್ಕಿಂತ ಜಾಸ್ತಿ ಹೊಕ್ಕಳೇ ಇದೆ.. ನನ್ನ ಆಯ್ಕೆ ಅದಕ್ಕಾಗಿಯೇ?
- ಸೊಂಟದ ವಿಷ್ಯ ಬೇಡವೋ ಶಿಷ್ಯ ಎಂದಿದ್ದ ಬಾದ್ಷಾ ಸುದೀಪ್
ವೀರ ಮದಕರಿ.. 2009ರ ಮಾರ್ಚ್ 20ರಂದು ತೆರೆಕಂಡ ಸಿನಿಮಾ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟಿಸಿ, ನಿರ್ದೇಶಿಸಿದ್ದ ಈ ಸಿನಿಮಾ ಎಸ್ ಎಸ್ ರಾಜಮೌಳಿಯ ವಿಕ್ರಮಾರ್ಕುಡು ಚಿತ್ರದ ರಿಮೇಕ್ ಕೂಡ ಹೌದು. ಆದ್ರೆ ಈ ಚಿತ್ರ ಕನ್ನಡದಲ್ಲಿ ಬಾಕ್ಸ್ ಆಫೀಸ್ ಹಿಟ್ ಆಗುವುದರ ಜೊತೆಗೆ ಸ್ಯಾಂಡಲ್ವುಡ್ಗೆ ಒಬ್ಬ ನಟಿಮಣಿ ಪಾದಾರ್ಪಣೆ ಮಾಡೋಕೆ ಮುನ್ನುಡಿ ಬರೆದಿತ್ತು. ಆಕೆ ಬೇರಾರೂ ಅಲ್ಲ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ.
ಯೆಸ್.. ಪ್ರಸಾದ್ ಬಿದ್ದಪ್ಪ ಜೊತೆ ಮಾಡೆಲಿಂಗ್ ಜಗತ್ತಿಗೆ ಕಾಲಿಟ್ಟಿದ್ದ ಆರ್ಮಿ ಆಫೀಸರ್ ಮಗಳು ರಾಗಿಣಿಯನ್ನ ಚಿತ್ರರಂಗಕ್ಕೆ ರೆಡ್ ಕಾರ್ಪೆಟ್ ಹಾಸಿ ವೆಲ್ಕಮ್ ಮಾಡಿದ್ದೇ ಕಿಚ್ಚ ಸುದೀಪ್. ರಾಗಿಣಿಯ ಮೊಟ್ಟ ಮೊದಲ ಸಿನಿಮಾನೇ ಈ ವೀರ ಮದಕರಿ. ಅಲ್ಲಿಂದ ಈಚೆಗೆ ರಾಗಿಣಿ ಬಹುಭಾಷಾ ನಟಿಯಾಗಿ ಮಲಯಾಳಂನಿಂದ ಬಾಲಿವುಡ್ವರೆಗೆ ಮಿಂಚಿದ್ದು ಗೊತ್ತೇಯಿದೆ.
ಅಂದಹಾಗೆ ಈ ವಿಷಯವನ್ನ ಈಗ್ಯಾಕೆ ಹೇಳ್ತಿದ್ದೀವಿ ಅಂದ್ರೆ ರಾಗಿಣಿ ಇತ್ತೀಚೆಗೆ ನೀಡಿದ ಖಾಸಗಿ ಸಂದರ್ಶನವೊಂದರಲ್ಲಿ ಒಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹೌದು.. ಆರ್ಜೆ ತುಹಿನ್ ಜೊತೆಗಿನ ಪಾಡ್ಕಾಸ್ಟ್ ಸಂದರ್ಶನದಲ್ಲಿ ಸಂದರ್ಶಕಾರ ವೀರ ಮದಕರಿಯಲ್ಲಿ ಡೈರೆಕ್ಟರ್ ಏನಾದ್ರೂ ನಾವೆಲ್ ಆಫೀಸರ್ ಆಗಿದ್ರಾ ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಉತ್ತರಿಸಿರೋ ರಾಗಿಣಿ.. ನನಗೂ ಈಗ ಹಾಗೇ ಅನಿಸ್ತಿದೆ. ನನ್ನನ್ನ ಆಯ್ಕೆ ಮಾಡಿದ್ದೇ ನನ್ನ ಸೆಕ್ಸಿ ಸೊಂಟ ಮತ್ತು ಹೊಕ್ಕಳು ನೋಡಿ ಅನಿಸ್ತಿದೆ. ಯಾಕಂದ್ರೆ ಸಿನಿಮಾದಲ್ಲಿ ನನ್ನ ಮುಖಕ್ಕಿಂತ ಜಾಸ್ತಿ ಹೊಕ್ಕಳನ್ನೇ ತೋರಿಸಿದ್ದಾರೆ ಎಂದಿದ್ದಾರೆ.
ಅಂದಹಾಗೆ ರಾಗಿಣಿ ಆಗಷ್ಟೇ ಚಿತ್ರರಂಗಕ್ಕೆ ಬಂದಿದ್ರು. ನಟಿಮಣಿ ಅಂದ್ರೆ ಗ್ಲಾಮರ್ಗೆ ಕೇರ್ ಆಫ್ ಅಡ್ರೆಸ್. ಹೀರೋ ಅಷ್ಟೇ ಅಲ್ಲ ಯಾವುದೇ ಗಂಡಿನ ವೀಕ್ನೆಸ್ ಹೆಣ್ಣಿನ ಸೆಕ್ಸಿಯಾಗಿರೋ ಅಂಗಾಂಗಗಳು. ಅದರಲ್ಲೂ ಸೊಂಟ, ಹೊಕ್ಕಳು ಗಂಡಿನ ವೀಕ್ನಸ್ ಆಗಿರುತ್ತೆ. ಆ ಸಿನಿಮಾದ ನಾಯಕನಟನ ವೀಕ್ನೆಸ್ ಕೂಡ ಅದೇ ಆಗಿತ್ತು. ಹಾಗಾಗಿ ಡೈರೆಕ್ಟರ್ ಕೂಡ ಸುದೀಪ್ ಅವರೇ ಆಗಿರೋದ್ರಿಂದ ಆ ಸೀನ್ ಯಥಾವತ್ ತೆಲುಗಿನ ರವಿತೇಜಾ ಚಿತ್ರದ ರೀತಿ ಎಕ್ಸಿಕ್ಯೂಟ್ ಆಗಿದೆ. ಸೋ.. ರಾಗಿಣಿ ಏಕೆ ನಮ್ಮ ನೆಚ್ಚಿನ ನಟನ ಬಗ್ಗೆ ಇಂತಹ ಸ್ಟೇಟ್ಮೆಂಟ್ ಕೊಟ್ಟುಬಿಟ್ರು ಅಂತ ಕಿಚ್ಚನ ಫ್ಯಾನ್ಸ್ ತುಪ್ಪದ ಹುಡುಗಿ ಮೇಲೆ ಅಸಮಾಧಾನ ಹೊರಹಾಕುತ್ತಿದ್ದಾರೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್





