• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, August 11, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಪ್ರೊಡ್ಯೂಸರ್ ಪುಷ್ಕರ್ ಮಲ್ಲಿಕಾರ್ಜುನಯ್ಯ ಹೀರೋ ಆಗಿ ಎಂಟ್ರಿ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 11, 2026 - 3:09 pm
in ಸಿನಿಮಾ
0 0
0
ಕೈಗೊಳ್ಳಲಿರುವ (93)

ಪ್ರೊಡ್ಯೂಸರ್ ಪುಷ್ಕರ್ ಮಲ್ಲಿಕಾರ್ಜುನಯ್ಯ ಈಸ್ ಬ್ಯಾಕ್. ಯೆಸ್.. ಸಾಲು ಸಾಲು ಬ್ಲಾಕ್‌‌ಬಸ್ಟರ್ ಹಿಟ್ ಸಿನಿಮಾಗಳನ್ನ ನೀಡಿದ ಈ ಅನ್ನದಾತ ಇದೀಗ ಬಣ್ಣದಲೋಕದಲ್ಲಿ ಹೊಚ್ಚ ಹೊಸ ಇನ್ನಿಂಗ್ಸ್ ಕಟ್ಟಲು ಮುಂದಾಗಿದ್ದಾರೆ. ವಿಜಯನಗರ ಸಾಮ್ರಾಜ್ಯದ ಗತವೈಭವವನ್ನ ಇಂದಿನ ಪೀಳಿಗೆಗೆ ಸಾರುವ ನಿಟ್ಟಿನಲ್ಲಿ, ತಾವೇ ಹೀರೋ ಆಗಿ ಲಾಂಚ್ ಆಗ್ತಿದ್ದಾರೆ. ಅಡ್ವಾನ್ಸ್ಡ್ ಟೆಕ್ನಾಲಜಿಯನ್ನ ಬಳಸಿ, ಹಂಪಿ ಸಾಮ್ರಾಜ್ಯವನ್ನ ರೀ-ಕ್ರಿಯೇಟ್ ಮಾಡಿ ಬೆಳ್ಳಿತೆರೆಗೆ ತರ್ತಿದ್ದಾರೆ.

ಅನ್ನದಾತ ಪುಷ್ಕರ್ ಮಲ್ಲಿಕಾರ್ಜುನಯ್ಯ ಈಸ್ ಬ್ಯಾಕ್..!

RelatedPosts

‘ಟಾಕ್ಸಿಕ್’ನಲ್ಲಿ ಯಾರಿಗೆ ಎಷ್ಟು ಕೋಟಿ? ನಯನತಾರಾನೇ ಮೀರಿಸಿದ ಕಿಯಾರಾ ಸಂಭಾವನೆ!

ಮತದಾರರ ಪಟ್ಟಿಯಿಂದ ಪ್ರಕಾಶ್ ರಾಜ್ ಹೆಸರು ಡಿಲೀಟ್: ಬೇಸರ ಹೊರಹಾಕಿದ ನಟ

ವನ್ಯಜೀವಿ ವಿಡಿಯೋ ಮಾಡಿ ವಿವಾದಕ್ಕೆ ಸಿಲುಕಿದ ತಮಿಳು ನಟ ವಿಕ್ರಮ್

ನಮ್ರತಾ ಗೌಡ, ಕಿರಣ್ ಶ್ರೀನಿವಾಸ್ ಅವರ ಫಸ್ಟ್ ಲುಕ್ ಅನಾವರಣ ಮಾಡಿದ “ಮಹಾನ್” ಚಿತ್ರತಂಡ

ADVERTISEMENT
ADVERTISEMENT

2 ಯುಗ.. 2 ಕಾಲಘಟ್ಟದಲ್ಲಿ ‘ವಿಜಯನಗರ ಸಾಮ್ರಾಜ್ಯ’

ಅನ್‌‌ರಿಯಲ್ ಇಂಜಿನ್ ಟಚ್.. ವರ್ಚುವಲ್ ಪ್ರೊಡಕ್ಷನ್

ಚಿತ್ರಕ್ಕೆ ದುಬೈ  ಮತ್ತು ಮುಂಬೈ ಮೂಲದ ತಂತ್ರಜ್ಞರ ಕೈಚಳಕ

ಮುತ್ತು, ರತ್ನ, ವಜ್ರ, ವೈಢೂರ್ಯಗಳನ್ನ ರಾಶಿ ರಾಶಿಯಾಗಿ ಮಾರಾಟ ಮಾಡುತ್ತಿದ್ದ ಏಕೈಕ ಸಾಮ್ರಾಜ್ಯ ಅಂದ್ರೆ ಅದು ವಿಜಯನಗರ ಸಾಮ್ರಾಜ್ಯ. ದಕ್ಷಿಣ ಭಾರತದಲ್ಲಿ ಹಿಂದೂ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆಗೆ ಮಹತ್ವದ ಕೊಡುಗೆ ನೀಡಿದ ಸಾಮ್ರಾಜ್ಯವಿದು. ಕ್ರಿಸ್ತಶಕ 1336ರಲ್ಲಿ ಹರಿಹರ & ಬುಕ್ಕ.. ಅಂದ್ರೆ ಹಕ್ಕ-ಬುಕ್ಕ ಸಹೋದರರು ತುಂಗಭದ್ರಾ ನದಿಯ ದಂಡೆಯಲ್ಲಿ ಈ ವಿಜಯನಗರ ಸಾಮ್ರಾಜ್ಯವನ್ನ ಕಟ್ಟಿದ್ರು. ಅದರ ರಾಜಧಾನಿ ಹಂಪಿಯಾಗಿತ್ತು.

ಕೃಷ್ಣದೇವರಾಯನ ಆಳ್ವಿಕೆಯಲ್ಲಿ ಅದೊಂಥರಾ ಸ್ವರ್ಣಯುಗವಾಗಿತ್ತು. ಕಲೆ, ಸಾಹಿತ್ಯ, ವಾಸ್ತುಶಿಲ್ಪ ಹಾಗೂ ಮಂಟಪಗಳ ನಿರ್ಮಾಣಕ್ಕೆ ಹೆಚ್ಚು ಪ್ರಶಾಸ್ತ್ಯ ನೀಡಲಾಗಿತ್ತು. ಹಂಪಿಯ ವಿರೂಪಾಕ್ಷ ಹಾಗೂ ವಿಜಯ ವಿಠಲ ಆಲಯಗಳು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಅಂತ ಗುರ್ತಿಸಿರುವುದಕ್ಕೆ ನಿದರ್ಶನವಾಗಿವೆ. ಅಂದಹಾಗೆ ನಟಸಾರ್ವಭೌಮ ಡಾ. ರಾಜ್‌‌ಕುಮಾರ್ ನಟನೆಯ ಶ್ರೀಕೃಷ್ಣ ದೇವರಾಯ ಸಿನಿಮಾ ವಿಜಯನಗರ ಸಾಮ್ರಾಜ್ಯದ ಗತವೈಭವವನ್ನ ಸಾರಿತ್ತು. 1970ರಲ್ಲಿ ತೆರೆಕಂಡ ಆ ಚಿತ್ರ ಅಣ್ಣಾವ್ರ ಮೊದಲ ಕನ್ನಡ ಸಿನಿಮಾ ಕೂಡ ಆಗಿತ್ತು. ಅದಕ್ಕೂ ಮುನ್ನ ಆರ್ ನಾಗೇಂದ್ರ ರಾವ್ ನಿರ್ದೇಶನದಲ್ಲಿ ಆರ್ ಎನ್ ಸುದರ್ಶನ್ ಹಾಗೂ ಬಿ ಸರೋಜಾದೇವಿ ಲೀಡ್‌‌ನಲ್ಲಿ ವಿಜಯನಗರದ ವೀರಪುತ್ರ ಸಿನಿಮಾ ತಯಾರಾಗಿತ್ತು. ಇದೀಗ ಮೂರನೇ ಮಹತ್ವದ ಪ್ರಯತ್ನ ಅಂದ್ರೆ ಅದು ಪುಷ್ಕರ್ ಮಲ್ಲಿಕಾರ್ಜುನಯ್ಯರದ್ದು.

ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕಿರಿಕ್ ಪಾರ್ಟಿ, ಅವನೇ ಶ್ರೀಮನ್ನಾರಾಯಣ, ಅವತಾರ ಪುರುಷ ಸೇರಿದಂತೆ ಸಾಕಷ್ಟು ಸದಭಿರುಚಿಯ ಸಿನಿಮಾಗಳನ್ನು ನಿರ್ಮಿಸಿರುವ ಪುಷ್ಕರ್ ಮಲ್ಲಿಕಾರ್ಜುನಯ್ಯ, ತಮ್ಮ ಕರಿಯರ್‌‌ನಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಹೀರೋ ಆಗಿ ಲಾಂಚ್ ಆಗ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಅದಕ್ಕೆ ಬೇಕಾದ ಪೂರ್ವ ತಯಾರಿಯಲ್ಲಿ ತೊಡಗಿಸಿಕೊಂಡಿದ್ದ ಅವರು, ಇದೀಗ ಶೇಕಡಾ 50ರಷ್ಟು ಸಿನಿಮಾದ ಶೂಟಿಂಗ್ ಕೂಡ ಕಂಪ್ಲೀಟ್ ಮಾಡಿದ್ದಾರಂತೆ. ಇಂಟರೆಸ್ಟಿಂಗ್ ಅಂದ್ರೆ ವಿಜಯನಗರ ಸಾಮ್ರಾಜ್ಯದ ಈ ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನ ಅವ್ರೇ ಬರೆದು, ಲೀಡ್‌‌ನಲ್ಲಿ ನಟಿಸುವುದರ ಜೊತೆ ನಿರ್ದೇಶನದ ಜವಾಬ್ದಾರಿ ಕೂಡ ನಿರ್ವಹಿಸುತ್ತಿದ್ದಾರೆ. ಫ್ಲೋ…

ಬಣ್ಣ ಹಚ್ಚಿದ ಚೊಚ್ಚಲ ಚಿತ್ರದಲ್ಲೇ ಬೃಹತ್ ವೆಚ್ಚದ, ಕರುನಾಡ ಮಹಿಮೆ ಸಾರುವ ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ತೆರೆಯ ಮೇಲೆ ಕಟ್ಟಿ ಕೊಡಲು ಮುಂದಾಗಿದ್ದಾರೆ ಪುಷ್ಕರ್ ಮಲ್ಲಿಕಾರ್ಜುನಯ್ಯ. ಎರಡು ಯುಗಗಳಲ್ಲಿ ನಡೆಯುವ ಕಥೆ ಇದಾಗಿದ್ದು, ಎರಡು ಕಾಲಘಟ್ಟದ ಅಸ್ಮಿತೆಯನ್ನು ತೆರೆದಿಡುವ ಪ್ರಯತ್ನಕ್ಕೆ ಮುನ್ನುಡಿ ಬರೆದಿದ್ದಾರೆ. ಹಂಪಿಯ ಸುತ್ತಮುತ್ತಲು ಬೃಹತ್ ಸೆಟ್‌ಗಳನ್ನ ನಿರ್ಮಿಸಿ ಚಿತ್ರೀಕರಿಸಲಾಗುತ್ತಿದೆ. ಹೀಗಾಗಿ ಈ ಸಿನಿಮಾಕ್ಕೆ ವಿಜಯನಗರ ಸಾಮ್ರಾಜ್ಯ ಎಂದೇ ಹೆಸರಿಡಲಾಗಿದೆ.

ರಾಜಮೌಳಿ ವಾರಣಾಸಿಗೆ ಬಳಸಿದ ಅಡ್ವಾನ್ಸ್ಡ್ ಟೆಕ್ನಾಲಜಿ

10 ವರ್ಷದ ಸಿನಿರಂಗದ ಅನುಭವಕ್ಕೆ ಇದು ಮುನ್ನುಡಿ..!

ಹಕ್ಕ-ಬುಕ್ಕರು ಕಟ್ಟಿದ ಈ ಸಾಮ್ರಾಜ್ಯ.. 1565ರ ತಾಳಿಕೋಟೆ ಕದನದಲ್ಲಿ ಪಥನವಾಗುವವರೆಗೂ ಸುಮಾರು 250 ವರ್ಷಗಳ ಕಾಲ ನಡೆದ ಕೆಲವು ಮಹತ್ತರ ಘಟನೆಗಳ ಕಥಾನಕ ಹೊಂದಿರಲಿದೆ. ಅಂದಹಾಗೆ ಈ ಚಿತ್ರವನ್ನು ವರ್ಚುವಲ್ ಪ್ರೊಡಕ್ಷನ್ ಮೂಲಕ ಚಿತ್ರಿಸಲಾಗುತ್ತಿದೆ. ಅಂದ್ರೆ ಅನ್‌ರಿಯಲ್ ಇಂಜಿನ್ ತಂತ್ರಜ್ಞಾನ ಬಳಸಿಕೊಂಡು ಸೆರೆಹಿಡಿಯಲಾಗುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಈ ಅಡ್ವಾನ್ಸ್ಡ್ ಟೆಕ್ನಾಲಜಿಯನ್ನ ಬಳಸಿದ ಮೊದಲ ಸಿನಿಮಾ ಅನ್ನೋ ಹೆಗ್ಗಳಿಕೆಗೂ ಇದು ಪಾತ್ರವಾಗ್ತಿದೆ. ದುಬೈ ಹಾಗೂ ಮುಂಬೈ ಮೂಲದ ತಂತ್ರಜ್ಞರ ಕೈಚಳಕ ಚಿತ್ರಕ್ಕಿದ್ದು, ಔಟ್‌‌ಪುಟ್ ಮಾತ್ರ ರಾಜಮೌಳಿಯ ಬಾಹುಬಲಿಯಷ್ಟೇ ವೈಭವೋಪೇತವಾಗಿರಲಿದೆ. ಇಂಟರೆಸ್ಟಿಂಗ್ ಅಂದ್ರೆ ಮೌಳಿ ಸದ್ಯ ತಮ್ಮ ವಾರಣಾಸಿ ಚಿತ್ರಕ್ಕೂ ಇದೇ ಅನ್‌ರಿಯಲ್ ಇಂಜಿನ್ ಟೆಕ್ನಾಲಜಿ ಬಳಸ್ತಿದ್ದಾರೆ.

ಕಲಾವಿದರು, ತಂತ್ರಜ್ಞರು ಯಾರೆಲ್ಲಾ ಕೆಲಸ ಮಾಡ್ತಿದ್ದಾರೆ..? ಎಷ್ಟು ಬಜೆಟ್‌‌ನಲ್ಲಿ ವಿಜಯನಗರ ಸಾಮ್ರಾಜ್ಯ ದೃಶ್ಯರೂಪ ಪಡೆಯುತ್ತಿದೆ..? ಎಷ್ಟು ಭಾಗಗಳಲ್ಲಿ ಸಿನಿಮಾ ಬರ್ತಿದೆ..? ಸಿನಿಮಾಗಾಗಿ ಪುಷ್ಕರ್ ಮಾಡಿದ ಕಸರತ್ತು ಎಂಥದ್ದು..? ಹೀಗೆ ಹತ್ತಾರು ಪ್ರಶ್ನೆಗಳಿಗೆ ಸದ್ಯದಲ್ಲೇ ಜಗಮಗಿಸೋ ಟೀಸರ್ ಲಾಂಚ್ ಇವೆಂಟ್ ಮೂಲಕ ಉತ್ತರ ನೀಡಲಿದ್ದಾರೆ ಪುಷ್ಕರ್. ಫಾರಿನ್‌‌ನಲ್ಲಿ ಓದಿಕೊಂಡು ಒಳ್ಳೆ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಪುಷ್ಕರ್, ಎಲ್ಲಾ ತೊರೆದು ಬಣ್ಣದಲೋಕಕ್ಕೆ ಕಾಲಿಟ್ಟಿದ್ರು. ಗೋಧಿಬಣ್ಣದಿಂದ ಅವ್ರ ಸಿನಿಕರಿಯರ್ ಶುರು ಆಗಿ ದಶಕ ಕಳೆಯುತ್ತಿದೆ. ಆ ಹತ್ತೂ ವರ್ಷದ ಅನುಭವಗಳನ್ನ ಈ ವಿಜಯನಗರ ಚಿತ್ರದ ಮೇಲೆ ಹಾಕಿ, ತನ್ನದೇ ಹೊಸ ಸಾಮ್ರಾಜ್ಯ ಕಟ್ಟುವ ಪ್ರಾಮಾಣಿಕ ಪ್ರಯತ್ನ ಅವರದ್ದಾಗಿದೆ.

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಕೈಗೊಳ್ಳಲಿರುವ (99)

ಬರ ಪರಿಸ್ಥಿತಿ ಪರಿಶೀಲಿಸಿದ ಡಿಸಿಎಂ ಪರಮೇಶ್ವರ್: ಕುಡಿಯುವ ನೀರು, ಅಡಿಕೆ ಬೆಳೆ ಹಾನಿ ಕುರಿತು ಅಧಿಕಾರಿಗಳಿಂದ ಮಾಹಿತಿ

by ದಿಶಾ ಕೆ. ಎಸ್.
August 11, 2026 - 4:04 pm
0

ಕೈಗೊಳ್ಳಲಿರುವ (97)

ಕಾವೇರಿ ವಿಚಾರದಲ್ಲಿ ಮತ್ತೆ ಕರ್ನಾಟಕಕ್ಕೆ ಹಿನ್ನಡೆ: 15 ದಿನ ನೀರು ಹರಿಸಲು CWRC ಆದೇಶ

by ದಿಶಾ ಕೆ. ಎಸ್.
August 11, 2026 - 3:41 pm
0

ಕೈಗೊಳ್ಳಲಿರುವ (95)

‘ಟಾಕ್ಸಿಕ್’ನಲ್ಲಿ ಯಾರಿಗೆ ಎಷ್ಟು ಕೋಟಿ? ನಯನತಾರಾನೇ ಮೀರಿಸಿದ ಕಿಯಾರಾ ಸಂಭಾವನೆ!

by ದಿಶಾ ಕೆ. ಎಸ್.
August 11, 2026 - 3:25 pm
0

ಕೈಗೊಳ್ಳಲಿರುವ (93)

ಪ್ರೊಡ್ಯೂಸರ್ ಪುಷ್ಕರ್ ಮಲ್ಲಿಕಾರ್ಜುನಯ್ಯ ಹೀರೋ ಆಗಿ ಎಂಟ್ರಿ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 11, 2026 - 3:09 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಕೈಗೊಳ್ಳಲಿರುವ (95)
    ‘ಟಾಕ್ಸಿಕ್’ನಲ್ಲಿ ಯಾರಿಗೆ ಎಷ್ಟು ಕೋಟಿ? ನಯನತಾರಾನೇ ಮೀರಿಸಿದ ಕಿಯಾರಾ ಸಂಭಾವನೆ!
    August 11, 2026 | 0
  • ಖರೀದಿಸುವವರಿಗೆ (7)
    ಮತದಾರರ ಪಟ್ಟಿಯಿಂದ ಪ್ರಕಾಶ್ ರಾಜ್ ಹೆಸರು ಡಿಲೀಟ್: ಬೇಸರ ಹೊರಹಾಕಿದ ನಟ
    August 11, 2026 | 0
  • ಖರೀದಿಸುವವರಿಗೆ (5)
    ವನ್ಯಜೀವಿ ವಿಡಿಯೋ ಮಾಡಿ ವಿವಾದಕ್ಕೆ ಸಿಲುಕಿದ ತಮಿಳು ನಟ ವಿಕ್ರಮ್
    August 11, 2026 | 0
  • ಖರೀದಿಸುವವರಿಗೆ (3)
    ನಮ್ರತಾ ಗೌಡ, ಕಿರಣ್ ಶ್ರೀನಿವಾಸ್ ಅವರ ಫಸ್ಟ್ ಲುಕ್ ಅನಾವರಣ ಮಾಡಿದ “ಮಹಾನ್” ಚಿತ್ರತಂಡ
    August 11, 2026 | 0
  • ಬಲಿಷ್ಠ (57)
    ಆ.16ರಿಂದ ‘ಬಿಗ್‌ಬಾಸ್‌ ಅಗ್ನಿಪರೀಕ್ಷೆ’ ಆರಂಭ: ಸಾಮಾನ್ಯ ಜನರ ಕನಸಿಗೆ ಸಿಗುತ್ತಾ ಬಿಗ್‌ಬಾಸ್‌ ಮನೆಯ ಬಾಗಿಲು?
    August 10, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version