ಪ್ರಿನ್ಸ್ ಮಹೇಶ್ ಬಾಬು.. ತಾನಾಯ್ತು, ತನ್ನ ಕೆಲಸ ಆಯ್ತು ಅಂತ ತನ್ನ ಪಾಡಿಗೆ ತಾನಿರೋ ವ್ಯಕ್ತಿ. ಅದ್ರಲ್ಲೂ ವಿವಾದಗಳಿಂದ ಈತ ದೂರ ದೂರ. ಆದ್ರೀಗ ಬೇಡ ಬೇಡ ಅಂದ್ರೂ ಈತನನ್ನ ವಿವಾದವೊಂದು ಹುಡುಕಿಕೊಂಡು ಬಂದಿದೆ. ಕೋಟ್ಯಂತರ ರೂಪಾಯಿ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಸಿಲುಕಿರೋ ಪ್ರಿನ್ಸ್ಗೆ ಬಂಧನದ ಭಯ ಕಾಡ್ತಿದೆ.
ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು.. ಎಲ್ಲರೂ ಪ್ರೀತಿಯಿಂದ ಪ್ರಿನ್ಸ್ ಅಂತ ಕರೆಯಲ್ಪಡುವ ಇವರದ್ದು ಈಗಲೂ ಚಿಗುರು ಮೀಸೆ ಯುವಕರನ್ನ ನಾಚಿಸುವಂತಹ ಚೆಲುವು. ಬಾಲನಟನಾಗಿ ಮಿಂಚು ಹರಿಸಿದ್ದ ಮಹೇಶ್ ಬಾಬು, ತಂದೆ ಸೂಪರ್ ಸ್ಟಾರ್ ಕೃಷ್ಣ ಅವರ ಲೆಗಸಿಯನ್ನ ಮುಂದುವ್ರೆಸಿದ್ದಾರೆ. 49ರ ಹರೆಯ ಆದ್ರೂ ಸಹ ವಿವಾದಗಳಿಂದ ದೂರ.
ಒಳ್ಳೊಳ್ಳೆ ಸಿನಿಮಾಗಳನ್ನ ಮಾಡುವುದು, ಪತ್ನಿ, ಮಗ, ಮಗಳ ಜೊತೆ ಕ್ವಾಲಿಟಿ ಟೈಂ ಸ್ಪೆಂಡ್ ಮಾಡೋದು ಇವ್ರ ರೊಟೀನ್ ಲೈಫ್ ಆಗಿತ್ತು. ಆದ್ರೀಗ ಬೇಡ ಬೇಡ ಅಂದ್ರೂ ವಿವಾದವೊಂದು ಇವ್ರ ಮನೆ ಬಾಗಿಲಿಗೆ ಬಂದು ನಿಂತಿದೆ. ಹೌದು.. ಮನಿ ಲಾಂಡರಿಂಗ್ ಪ್ರಕರಣವೊಂದರಲ್ಲಿ ಮಹೇಶ್ ಬಾಬು ಹೆಸರು ಥಳುಕು ಹಾಕಿಕೊಂಡಿದೆ. ಅಷ್ಟೇ ಅಲ್ಲ, EDಯಿಂದ ಪ್ರಿನ್ಸ್ಗೆ ಸಮನ್ಸ್ ಕೂಡ ನೀಡಲಾಗಿದೆ.
ಹೌದು.. ಸುಮಾರು 5.9 ಕೋಟಿ ರೂಪಾಯಿಯಷ್ಟು ಬೃಹತ್ ಮೊತ್ತವನ್ನು ಕಮರ್ಷಿಯನ್ ಆ್ಯಡ್ ವೊಂದಕ್ಕಾಗಿ ಸಂಭಾವನೆಯಾಗಿ ಪಡೆದಿದ್ದರು ಮಹೇಶ್ ಬಾಬು. ಆ ಆ್ಯಡ್ ಮಾಡಿಸಿದ್ದ ಕಂಪೆನಿಯ ಹೆಸರು ಸಾಯಿ ಸೂರ್ಯ ಡೆವಲಪರ್ಸ್ ಹಾಗೂ ಸುರಾನಾ ಗ್ರೂಪ್ಸ್. ಈ ಎರಡೂ ಕಂಪೆನಿಗಳು ಫೇಕ್ ಪ್ರಾಪರ್ಟಿಸ್ ತೋರಿಸಿ, ಕೋಟ್ಯಂತರ ರೂಪಾಯಿಗಳನ್ನ ವಂಚಿಸಿದ್ದಾರೆ. ಅದರಲ್ಲಿ ವಂಚನೆಗೊಳಗಾದವರ ಪೈಕಿ ಬಹುತೇಕ ಮಂದಿ ಮಹೇಶ್ ಬಾಬು ಫ್ಯಾನ್ಸ್ ಅನ್ನೋದು ದೊಡ್ಡ ವಿಪರ್ಯಾಸ.
ಮಹೇಶ್ ಬಾಬು ಆ್ಯಡ್ ಮಾಡಿರೋದ್ರಿಂದ ಆ ಕಂಪನಿ ಮೇಲೆ ಎಲ್ಲರೂ ಭರವಸೆ ಇಟ್ಟಿದ್ದರು. ಆದ್ರೀಗ ಮಹೇಶ್ ಬಾಬುಗೇ ಗೊತ್ತಿಲ್ಲದಂತೆ ಅದೆಲ್ಲವೂ ಫೇಕ್ ಮಾಡಿದೆ ಕಂಪೆನಿ. ಹಾಗಾಗಿ ಕಂಪೆನಿಗಳ ಜೊತೆಗೆ ಆ್ಯಡ್ ಮಾಡಿದ್ದ ಪ್ರಿನ್ಸ್ಗೂ ಸಮನ್ಸ್ ನೀಡಿದ್ದಾರೆ ED ಅಧಿಕಾರಿಗಳು. ಇದೇ ಏಪ್ರಿಲ್ 27ಕ್ಕೆ ಕೋರ್ಟ್ ವಿಚಾರಣೆಗೆ ಹಾಜರಾಗಬೇಕಿದ್ದು, ಇಲ್ಲವಾದಲ್ಲಿ ನಟ ಮಹೇಶ್ ಬಾಬು ಬಂಧನವಾಗುವ ಸಾಧ್ಯತೆಯಿದೆ.
ಈ ಪ್ರಕರಣದಿಂದ ಕಂಪ್ಲೀಟ್ ಪ್ರಿನ್ಸ್ ಫ್ಯಾಮಿಲಿ, ಹಿತೈಷಿಗಳು ಹಾಗೂ ಫ್ಯಾನ್ಸ್ ಆತಂಕದಲ್ಲಿದ್ದಾರೆ. ಅಲ್ಲದೆ, ಮಹೇಶ್ ಬಾಬು ಜೊತೆ ಹಾಲಿವುಡ್ ಶೈಲಿಯ ಸಿನಿಮಾ ಮಾಡ್ತಿರೋ ರಾಜಮೌಳಿ ಕೂಡ ಟೆನ್ಷನ್ನಲ್ಲಿದ್ದಾರಂತೆ. ಹೌದು.. SSMB29 ಸಿನಿಮಾದ ಶೂಟಿಂಗ್ ಎಲ್ಲಿ ನಿಂತು ಹೋಗುತ್ತೋ ಅನ್ನೋದು ರಾಜಮೌಳಿಯ ಆತಂಕವಾಗಿದೆ. ಆದ್ರೆ ಎತ್ತಿದೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕೋದು ಅಂತಾರಲ್ವಾ ಹಾಗೆ, ಕಂಪೆನಿ ಮಾಡಿದ ತಪ್ಪಿಗೆ ಮಹೇಶ್ ಬಾಬುಗೆ ಸಮನ್ಸ್ ನೀಡಿರೋದ್ರ ಬಗ್ಗೆ ಒಂದಷ್ಟು ಮಂದಿ ಚಕಾರ ಎತ್ತಿದ್ದಾರೆ. ಈ ಪ್ರಕರಣ ಮುಂದಿನ ದಿನಗಳಲ್ಲಿ ಯಾವ ರೂಪ ಪಡೆಯುತ್ತೆ ಅಂತ ಕಾದು ನೋಡಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್